ಆ್ಯಪ್ನಗರ

ಎಲ್ಪಿಜಿ ದರ ಸಿಲಿಂಡರ್‌ಗೆ 2 ರೂ., ಎಟಿಎಫ್‌ ಶೇ.7 ಹೆಚ್ಚಳ

ತೈಲ ದರ ಏರಿಕೆಯ ಬಿಸಿ ತಟ್ಟಲಾರಂಭಿಸಿದ್ದು, ಪೆಟ್ರೋಲ್‌-ಡೀಸೆಲ್‌ ದರದಲ್ಲಿ ಕಳೆದ ಮೂರು ದಿನಗಳಲ್ಲಿ ಅಲ್ಪ ಇಳಿಕೆಯಾಗಿದ್ದರೂ, ಅಡುಗೆ ಅನಿಲದ ದರ ಶುಕ್ರವಾರ ಏರಿಕೆಯಾಗಿದೆ.

Vijaya Karnataka Web 1 Jun 2018, 10:11 pm
ಹೊಸದಿಲ್ಲಿ : ತೈಲ ದರ ಏರಿಕೆಯ ಬಿಸಿ ತಟ್ಟಲಾರಂಭಿಸಿದ್ದು, ಪೆಟ್ರೋಲ್‌-ಡೀಸೆಲ್‌ ದರದಲ್ಲಿ ಕಳೆದ ಮೂರು ದಿನಗಳಲ್ಲಿ ಅಲ್ಪ ಇಳಿಕೆಯಾಗಿದ್ದರೂ, ಅಡುಗೆ ಅನಿಲದ ದರ ಶುಕ್ರವಾರ ಏರಿಕೆಯಾಗಿದೆ. ಸಬ್ಸಿಡಿಯುಕ್ತ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್‌ ದರದಲ್ಲಿ 2 ರೂ. ಮತ್ತು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್‌ ದರದ ಬೆಲೆಯಲ್ಲಿ 48 ರೂ. ಹೆಚ್ಚಳವಾಗಿದೆ. ಹಾಗೂ ವೈಮಾನಿಕ ಇಂಧನ ಎಟಿಎಫ್‌ ದರದಲ್ಲಿ ಶೇ.7ರಷ್ಟು ವೃದ್ಧಿಸಿದೆ.
Vijaya Karnataka Web subsidised lpg cylinders get costlier non subsidised rate hiked by nearly rs 50
ಎಲ್ಪಿಜಿ ದರ ಸಿಲಿಂಡರ್‌ಗೆ 2 ರೂ., ಎಟಿಎಫ್‌ ಶೇ.7 ಹೆಚ್ಚಳ


ಅಂತಾರಾಷ್ಟ್ರೀಯ ಮಾರುಕಟ್ಟೆಯ ದರ ಹೆಚ್ಚಳದ ಪರಿಣಾಮ ದಿಲ್ಲಿಯಲ್ಲಿ ವೈಮಾನಿಕ ಇಂಧನ ಎಟಿಎಫ್‌ ದರದಲ್ಲಿ ಪ್ರತಿ ಕಿಲೋ ಲೀಟರ್‌ ದರ 4,688 ರೂ. ವೃದ್ಧಿಸಿದ್ದು, 70,028 ರೂ.ಗೆ ಹೆಚ್ಚಳವಾಗಿದೆ. (ಶೇ.7.17) ಕಳೆದ ಕೆಲವು ತಿಂಗಳಿನಿಂದೀಚೆಗೆ ಎರಡನೇ ಸಲ ಎಟಿಎಫ್‌ ದರ ಏರಿಕೆಯಾಗುತ್ತಿದೆ.

ಸಾರ್ವಜನಿಕ ವಲಯದ ತೈಲ ಕಂಪನಿಗಳು ಸಬ್ಸಿಡಿಯುಕ್ತ ಎಲ್ಪಿಜಿ ಸಿಲಿಂಡರ್‌ ದರವನ್ನು 493.55 ರೂ.ಗೆ ವೃದ್ಧಿಸಿದೆ. ಈ ಹಿಂದೆ 491.21 ರೂ. ಇತ್ತು. ಸಬ್ಸಿಡಿಯುಕ್ತ ಎಲ್ಪಿಜಿ ಸಿಲಿಂಡರ್‌ ದರವು ಕೋಲ್ಕೊತಾದಲ್ಲಿ 496.65 ರೂ. ಹಾಗೂ ಮುಂಬಯಿನಲ್ಲಿ 491.31 ರೂ, ಚೆನ್ನೈನಲ್ಲಿ 481.84 ರೂ. ಇದೆ. ಒಂದು ವರ್ಷಕ್ಕೆ ಒಂದು ಕುಟುಂಬವು 12 ಸಬ್ಸಿಡಿಯುಕ್ತ ಎಲ್ಪಿಜಿ ಸಿಲಿಂಡರ್‌ಗಳನ್ನು (14.2 ಕೆ.ಜಿ) ಪಡೆಯಬಹುದು. ಸಬ್ಸಿಡಿ ರಹಿತ ಅಥವಾ ಮಾರುಕಟ್ಟೆ ದರದ ಎಲ್ಪಿಜಿ ದರದಲ್ಲಿ ಸಿಲಿಂಡರ್‌ಗೆ 48.50 ರೂ. ಏರಿಸಲಾಗಿದ್ದು, 698.50 ರೂ.ಗೆ ಏರಿದೆ. ಸೀಮೆ ಎಣ್ಣೆ ದರದಲ್ಲಿ ಲೀಟರ್‌ಗೆ 26 ಪೈಸೆ ಹೆಚ್ಚಿಸಲಾಗಿದ್ದು, ಮುಂಬಯಿನಲ್ಲಿ 25 ರೂ.ಗೆ ಏರಿದೆ.ಸಾರ್ವಜನಿಕ ವಲಯದ ತೈಲ ಕಂಪನಿಗಳು ಪ್ರತಿ ತಿಂಗಳಿನ 1ನೇ ದಿನಾಂಕ ಎಟಿಎಫ್‌, ಎಲ್ಪಿಜಿ ಮತ್ತು ಸೀಮೆ ಎಣ್ಣೆ ದರವನ್ನು ಪರಿಷ್ಕರಿಸುತ್ತವೆ.

ಪೆಟ್ರೋಲ್‌ ದರ ಕೊಂಚ ಇಳಿಕೆ:

ಮತ್ತೊಂದು ಕಡೆ ಪೆಟ್ರೋಲ್‌ ದರದಲ್ಲಿ ಲೀಟರ್‌ಗೆ 6 ಪೈಸೆ ಹಾಗೂ ಡೀಸೆಲ್‌ಗೆ 5 ಪೈಸೆ ಇಳಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಪೈಸೆಗಳ ಲೆಕ್ಕದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್‌ ದರ ಲೀಟರ್‌ಗೆ 79.61 ರೂ. ಹಾಗೂ ಡೀಸೆಲ್‌ ದರ 70.43 ರೂ.ಗಳಾಗಿತ್ತು.

ಸಬ್ಸಿಡಿ ಹೊರೆ ಹೊರಲು ಒಎನ್‌ಜಿಸಿಗೆ ಸೂಚನೆ:

ಕೇಂದ್ರ ಸರಕಾರ ತೈಲ ದರ ಇಳಿಕೆಗೆ ಪರ್ಯಾಯ ಕ್ರಮಗಳನ್ನು ಪರಿಶೀಲಿಸುತ್ತಿರುವುದರ ನಡುವೆಯೇ, ಒಎನ್‌ಜಿಸಿಗೆ ಸಬ್ಸಿಡಿ ಹೊರೆ ಹೊರುವಂತೆ ಸೂಚಿಸಿದೆ ಎಂದು ವರದಿಯಾಗಿದೆ. ಇದರಿಂದ ಪೆಟ್ರೋಲ್‌-ಡೀಸೆಲ್‌ ದರ ಇಳಿಕೆಗೆ ಸಹಕಾರಿಯಾಗಲಿದೆ. ಸರಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಸಮ್ಮತಿಸಿಲ್ಲ. ಆದರೆ ಪರ್ಯಾಯ ಮಾರ್ಗಗಳಲ್ಲಿ ಒಎನ್‌ಜಿಸಿಗೆ ಸಬ್ಸಿಡಿ ಹೊರೆ ಹೊರಲು ಸೂಚಿಸಿರುವುದೂ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ