ಆ್ಯಪ್ನಗರ

ಆರ್ಥಿಕ ಹಿಂಜರಿತಕ್ಕೆ ಸುಪ್ರೀಂ ಕೋರ್ಟ್‌ ಕಾರಣ: ಹರೀಶ್‌ ಸಾಳ್ವೆ

ಆರ್ಥಿಕ ಹಿಂಜರಿತಕ್ಕೆ ಸುಪ್ರೀಂ ಕೋರ್ಟ್‌ ಅನ್ನು ದೂರಬಹುದು. 2012ರಲ್ಲಿ2ಜಿ ತರಂಗಗುಚ್ಛ ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಿಂದ ಈ ಆರ್ಥಿಕ ಕುಸಿತ ಆರಂಭವಾಯಿತು ಎಂದು ಹಿರಿಯ ವಕೀಲ ಹರೀಶ್‌ ಸಾಳ್ವೆ ಹೇಳಿದ್ದಾರೆ.

Vijaya Karnataka Web 18 Sep 2019, 5:00 am
ಹೊಸದಿಲ್ಲಿ: ಆರ್ಥಿಕ ಹಿಂಜರಿತಕ್ಕೆ ಸುಪ್ರೀಂ ಕೋರ್ಟ್‌ ಅನ್ನು ದೂರಬಹುದು. 2012ರಲ್ಲಿ2ಜಿ ತರಂಗಗುಚ್ಛ ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಿಂದ ಈ ಆರ್ಥಿಕ ಕುಸಿತ ಆರಂಭವಾಯಿತು ಎಂದು ಹಿರಿಯ ವಕೀಲ ಹರೀಶ್‌ ಸಾಳ್ವೆ ಹೇಳಿದ್ದಾರೆ.
Vijaya Karnataka Web supreme court responsible for current slowdown in india senior lawyer harish salve
ಆರ್ಥಿಕ ಹಿಂಜರಿತಕ್ಕೆ ಸುಪ್ರೀಂ ಕೋರ್ಟ್‌ ಕಾರಣ: ಹರೀಶ್‌ ಸಾಳ್ವೆ


ಎಕನಾಮಿಕ್‌ ಟೈಮ್ಸ್‌ಗೆ ಸಂದರ್ಶನ ನೀಡಿರುವ ಅವರು, ''2ಜಿ ಮತ್ತು ಕೋಲ್‌ಗೇಟ್‌ ಹಗರಣಕ್ಕೆ ಸಂಬಂಧಿಸಿದ ತೀರ್ಪಿನ ಮೂಲಕ ಸಾವಿರಾರು ಕೋಟಿಗಳ ವಿದೇಶಿ ಹೂಡಿಕೆಯನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿತು. 2012ರಲ್ಲಿ8 ಕಂಪನಿಗಳಿಗೆ ನೀಡಿದ್ದ 122 ತರಂಗಗುಚ್ಛಗಳ ಪರವಾನಿಗೆಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತು. ಇದೇ ರೀತಿ 2014ರಲ್ಲಿ1993ರಿಂದ 2011ರವರೆಗೆ ಹಂಚಿಕೆ ಮಾಡಲಾಗಿದ್ದ 218 ಕಲ್ಲಿದ್ದಲು ಘಟಕಗಳ ಹಂಚಿಕೆಯನ್ನು ರದ್ದುಗೊಳಿಸಿತು. ಇದು ವಿದೇಶಿ ಹೂಡಿಕೆದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು,'' ಎಂಬುದಾಗಿ ವಿಶ್ಲೇಷಿಸಿದ್ದಾರೆ.

''ತಪ್ಪಾಗಿ 2ಜಿ ತರಂಗಗುಚ್ಛ ಹಂಚಿಕೆ ಮಾಡಲಾದವರು ಇದಕ್ಕೆಲ್ಲಜವಾಬ್ದಾರಿ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ವಿದೇಶಿಯರು ಹೂಡಿಕೆ ಮಾಡಿದ್ದ ಪರವಾನಿಗೆಗಳನ್ನು ಒಟ್ಟಾಗಿ ರದ್ದುಗೊಳಿಸಲಾಯಿತು. ವಿದೇಶಿಯರು ಹೂಡಿಕೆ ಮಾಡಿದಾಗ ಅದಕ್ಕೆ ದೇಶಿಯ ಪಾಲುದಾರರು ಇರಬೇಕು ಎಂಬುದು ನಿಮ್ಮದೇ ನಿಯಮವಾಗಿತ್ತು,'' ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

''ಭಾರತೀಯ ಪಾಲುದಾರರು ಹೇಗೆ ಲೈಸನ್ಸ್‌ ಪಡೆದಿದ್ದಾರೆ ಎಂಬುದು ವಿದೇಶಿ ಹೂಡಿಕೆದಾರರಿಗೆ ತಿಳಿದಿರಲಿಲ್ಲ. ವಿದೇಶಿಯರು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ತೀರ್ಪಿನ ಮೂಲಕ ಒಂದೇ ಹೊಡೆತಕ್ಕೆ ಸುಪ್ರೀಂ ಕೋರ್ಟ್‌ ಇದನ್ನೆಲ್ಲಾರದ್ದುಗೊಳಿಸಿತು. ಇಲ್ಲಿಂದಲೇ ನಿಜವಾದ ಆರ್ಥಿಕ ಹಿನ್ನಡೆ ಆರಂಭವಾಗಿತ್ತು,'' ಎಂದು ಸಾಳ್ವೆ ವಿವರಿಸಿದ್ದಾರೆ. ಕಲ್ಲಿದ್ದಲು ಘಟಕಗಳ ಹಂಚಿಕೆಯನ್ನು ರದ್ದು ಮಾಡಿದ್ದರಿಂದ ವಾರ್ಷಿಕವಾಗಿ ಶೇಕಡಾ 1ಕ್ಕಿಂತ ಹೆಚ್ಚು ಜಿಡಿಪಿ ನಷ್ಟವಾಗುತ್ತಿದೆ ಎಂದು ಅವರು ಅಂದಾಜಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ