ಆ್ಯಪ್ನಗರ

ವಜ್ರದ ವ್ಯಾಪಾರಿಯಿಂದ ಉದ್ಯೋಗಿಗಳಿಗೆ ಮರ್ಸಿಡಿಸ್‌ ಉಡುಗೊರೆ

ಹರೇ ಕೃಷ್ಣ ಎಕ್ಸ್‌ಪೋರ್ಟರ್‌ ಮಾಲೀಕರಾದ ಧೋಲಾಕಿಯಾ, ಒಂದು ಕೋಟಿ ರೂ. ಮೌಲ್ಯದ ಮರ್ಸಿಡಿಸ್‌-ಬೆನ್ಜ್‌ ಜಿಎಲ್‌ಎಸ್‌ ಎಸ್‌ಯುವಿಗಳನ್ನು ಮೂವರು ಹಿರಿಯ ಉದ್ಯೋಗಿಗಳಿಗೆ ಕೊಡುಗೆಯಾಗಿ ನೀಡಿದ್ದಾರೆ.

Vijaya Karnataka Web 29 Sep 2018, 4:55 pm
ಸೂರತ್‌: ಉದ್ಯೋಗಿಗಳಿಗೆ ಫ್ಲಾಟ್‌ಗಳು, ಕಾರ್‌ಗಳನ್ನು ಉದಾರವಾಗಿ ಕೊಟ್ಟು ಗಮನ ಸೆಳೆದಿದ್ದ ಸೂರತ್‌ ಮೂಲದ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ, ಈ ಸಲ ಮತ್ತೆ ಅಂಥದ್ದೇ ಕೆಲಸದ ಮೂಲಕ ಸುದ್ದಿಯಾಗಿದ್ದಾರೆ.
Vijaya Karnataka Web Mercids benz


ಹರೇ ಕೃಷ್ಣ ಎಕ್ಸ್‌ಪೋರ್ಟರ್‌ ಮಾಲೀಕರಾದ ಧೋಲಾಕಿಯಾ, ಒಂದು ಕೋಟಿ ರೂ. ಮೌಲ್ಯದ ಮರ್ಸಿಡಿಸ್‌-ಬೆನ್ಜ್‌ ಜಿಎಲ್‌ಎಸ್‌ ಎಸ್‌ಯುವಿಗಳನ್ನು ಮೂವರು ಹಿರಿಯ ಉದ್ಯೋಗಿಗಳಿಗೆ ಕೊಡುಗೆಯಾಗಿ ನೀಡಿದ್ದಾರೆ. ತಮ್ಮ ಕಂಪನಿಯಲ್ಲಿ 25 ವರ್ಷ ಸೇವೆಯನ್ನು ಪೂರ್ಣಗೊಳಿಸಿದ ಉದ್ಯೋಗಿಗಳಿಗೆ ಉಡುಗೊರೆ ಸಿಕ್ಕಿದೆ.

ತಮ್ಮ ತಾರುಣ್ಯದ ದಿನಗಳಲ್ಲಿ ಕಂಪನಿ ಪ್ರವೇಶಿಸಿ, ಈಗ 40ರ ಆಜೂಬಾಜಿನಲ್ಲಿರುವ ಮೂವರು ಉದ್ಯೋಗಿಗಳು ಈಗ ಕಂಪನಿಯ ಆಯಕಟ್ಟಿನ ಜಾಗಗಳಲ್ಲಿ ಇದ್ದಾರೆ. ಕಾರ್‌ಗಳ 'ಕೀ'ಗಳನ್ನು ಈ ಸಿಬ್ಬಂದಿಗೆ ಮಧ್ಯಪ್ರದೇಶದ ಗವರ್ನರ್‌ ಮತ್ತು ಗುಜರಾತ್‌ನ ಮಾಜಿ ಸಿಎಂ ಆನಂದಿಬೆನ್‌ ಪಟೇಲ್‌ ವಿತರಣೆ ಮಾಡಿದರು.

2016ರಲ್ಲಿ ದೀಪಾವಳಿ ಸಮಯದಲ್ಲಿ ಧೋಲಾಕಿಯಾ ಅವರು ತಮ್ಮ ಉದ್ಯೋಗಿಗಳಿಗೆ 400 ಫ್ಲಾಟ್‌ಗಳು, 1,260 ಕಾರ್‌ಗಳ ಭರ್ಜರಿ ಉಡುಗೊರೆ ನೀಡಿದ್ದರು. 2011ರಿಂದ ವರ್ಷಕ್ಕೊಮ್ಮೆ ಆಕರ್ಷಕ ಉಡುಗೊರೆಗಳನ್ನು ನೀಡುವ ಪರಿಪಾಠವನ್ನು ಕಂಪನಿ ಅನುಸರಿಸಿಕೊಂಡು ಬಂದಿದೆ.

ಹನ್ನೆರಡೂವರೆ ರೂಪಾಯಿ!

ಹನ್ನೆರಡೂವರೆ ರೂಪಾಯಿಯನ್ನು(ಬಸ್‌ ಚಾರ್ಜ್‌ಗಾಗಿ) ಜೇಬಲ್ಲಿಟ್ಟುಕೊಂಡು ಅಮ್ರೆಲಿ ಜಿಲ್ಲೆಯ ದುಧಾಲಾ ಗ್ರಾಮವನ್ನು ಧೋಲಾಕಿಯಾ 1977ರಲ್ಲಿ ತೊರೆದಿದ್ದರು. ಅಂದು ಸೂರತ್‌ಗೆ ಬಸ್‌ ಹತ್ತಿದ ಅವರು, ನಂತರ ವಜ್ರ ವ್ಯಾಪಾರದ ಮೂಲಕ ದೊಡ್ಡ ಉದ್ಯಮವನ್ನೇ ಕಟ್ಟಿದರು. ಪ್ರಸ್ತುತ 5500 ಜನರು ಕಂಪನಿಯಲ್ಲಿದ್ದು, 6,000 ಕೋಟಿ ರೂ. ವಾರ್ಷಿಕ ವಹಿವಾಟನ್ನು ಹೊಂದಿದೆ. ನಾನು ಹಣವನ್ನು ಏಕಾಏಕಿ ಗಳಿಸಿಲ್ಲ. ಅದರ ಹಿಂದೆ ದೊಡ್ಡ ಶ್ರಮವಿದೆ ಎಂದು ಸಾವ್ಜಿ ಹಿಂದೊಮ್ಮೆ ಹೇಳಿದ್ದರು.

ಹಣದ ಬೆಲೆಯನ್ನು ತಮ್ಮ ಮಗ ದ್ರವ್ಯನಿಗೆ ಅರ್ಥ ಮಾಡಿಸಲು ಸಾವ್ಜಿ ಈ ಹಿಂದೆ ಪ್ರಯತ್ನಿಸಿದ್ದರು. ಮೂರು ಜತೆ ಬಟ್ಟೆ ಮತ್ತು ತುರ್ತು ಹಣವಾಗಿ 7,000 ರೂ.ಗಳನ್ನಷ್ಟೇ ನೀಡಿ ಮನೆಯಿಂದ ಮಗನನ್ನು ಆಚೆ ಕಳುಹಿಸಿದ್ದರು. ತನ್ನ ಕಾಲ ಮೇಲೆ ತಾನು ನಿಲ್ಲುವ ಶಕ್ತಿ ಬರಲೆಂದು ಹಾಗೆ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ