ಆ್ಯಪ್ನಗರ

1.5 ಲಕ್ಷ ಅಂಚೆ ಕಚೇರಿಗಳ ಆಧುನೀಕರಣಕ್ಕೆ ಟಿಸಿಎಸ್‌ ತಂತ್ರಜ್ಞಾನ

1.5 ಲಕ್ಷ ಅಂಚೆ ಕಚೇರಿಗಳ ನೆಟ್‌ವರ್ಕ್‌ ಅನ್ನು ಅಧುನೀಕರಣಗೊಳಿಸಲು ಸಮಗ್ರ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿರುವುದಾಗಿ ಭಾರತದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಟಿಸಿಎಸ್‌ ತಿಳಿಸಿದೆ.

Vijaya Karnataka Web 22 Apr 2019, 5:00 am
ಹೊಸದಿಲ್ಲಿ : ದೇಶದ 1.5 ಲಕ್ಷ ಅಂಚೆ ಕಚೇರಿಗಳ ನೆಟ್‌ವರ್ಕ್‌ ಅನ್ನು ಅಧುನೀಕರಣಗೊಳಿಸಲು ಸಮಗ್ರ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿರುವುದಾಗಿ ಭಾರತದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಟಿಸಿಎಸ್‌ ತಿಳಿಸಿದೆ.
Vijaya Karnataka Web tcs modernises 1 5 lakh post offices under multi year deal with india post
1.5 ಲಕ್ಷ ಅಂಚೆ ಕಚೇರಿಗಳ ಆಧುನೀಕರಣಕ್ಕೆ ಟಿಸಿಎಸ್‌ ತಂತ್ರಜ್ಞಾನ


ಈ ಸಂಬಂಧ 2013ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸ್‌ (ಟಿಸಿಎಸ್‌) 1,100 ಕೋಟಿ ರೂ.ಗಳ ಅಂಚೆ ಇಲಾಖೆಯ ಜತೆ ಒಪ್ಪಂದವನ್ನು ಘೋಷಿಸಿತ್ತು.

'' ಅಂಚೆ ಇಲಾಖೆಯ ಆಧುನೀಕರಣ ಮತ್ತು ಡಿಜಿಟಲೀಕರಣಕ್ಕೆ ಟಿಸಿಎಸ್‌ ತನ್ನ ತಂತ್ರಜ್ಞಾನ ನೆರವನ್ನು ನೀಡಿದೆ. ಇದರಿಂದಾಗಿ ಇಲಾಖೆಗೆ ಪರಿಣಾಮಕಾರಿಯಾಗಿ ನಾನಾ ಸೇವೆಗಳನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗಲಿದೆ. ಅಂಚೆ ಇಲಾಖೆಯ ಕೋರ್‌ ಸಿಸ್ಟಮ್‌ ಇಂಟಿಗ್ರೇಶನ್‌ (ಸಿಎಸ್‌ಐ) ವ್ಯವಸ್ಥೆಯನ್ನು ಟಿಸಿಎಸ್‌ ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಿದೆ. ಇದು ಸಮಗ್ರ ಇಆರ್‌ಪಿ ಸಲ್ಯೂಷನ್‌ ಅನ್ನು ಒಳಗೊಂಡಿದ್ದು, ಪತ್ರಗಳ ವಿಲೇವಾರಿ, ಹಣಕಸು, ಅಕೌಂಟಿಂಗ್‌ಗೆ ಸಹಕಾರಿಯಾಗಲಿದೆ. ಹಾಗೂ 1.5 ಲಕ್ಷ ಅಂಚೆ ಕಚೇರಿಗಳನ್ನು ಸಂಪರ್ಕಿಸಲಿದೆ'' ಎಂದು ಟಿಸಿಎಸ್‌ ವಿವರಿಸಿದೆ.

ಈ ವ್ಯವಸ್ಥೆಯು ದಿನಕ್ಕೆ ಸರಾಸರಿ 30 ಲಕ್ಷ ಅಂಚೆ ವರ್ಗಾವಣೆಗಳ ಸಂಸ್ಕರಣೆ, 5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ತಂತ್ರಜ್ಞಾನ ನೆರವು ಅನ್ನು ಒಳಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಎಸ್‌ಎಪಿ ತಂತ್ರಜ್ಞಾನ ವ್ಯವಸ್ಥೆ ಎನ್ನಿಸಿದೆ ಎಂದು ಟಿಸಿಎಸ್‌ ತಿಳಿಸಿದೆ.

ದೇಶವ್ಯಾಪಿ ಹಿಂದುಳಿದ ಪ್ರದೇಶಗಳಲ್ಲೂ ನಾನಾ ಹಣಕಾಸು ಸೇವೆಗಳನ್ನು, ಅಂಚೆ ಬ್ಯಾಂಕಿಂಗ್‌ ವ್ಯವಸ್ಥೆಗೆ ಜನತೆಯನ್ನು ಒಳಗೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಲಕ್ಷಾಂತರ ಗ್ರಾಮೀಣ ಅಂಚೆ ಸೇವಕರಿಗೆ ದರ್ಪಣ್‌ 1 ಎಂಬ ಸಾಧನವನ್ನು ಬಳಸಲು ಅನುಕೂಲವಾಗಲಿದೆ. ಇದರ ಮೂಲಕ ಅಂಚೆ, ಬ್ಯಾಂಕಿಂಗ್‌, ವಿಮೆ, ನಗದು ನಿರ್ವಹಣೆ ಸೇವೆಯನ್ನು ದೂರದ ಹಳ್ಳಿಗಳಿಗೂ ತಲುಪಿಸಬಹುದು. ನೆಟ್‌ವರ್ಕ್‌ ಸಂಪರ್ಕ ಇಲ್ಲದ ಗ್ರಾಮಗಳಲ್ಲೂ ಈ ಸೇವೆಗಳನ್ನು ಜಾರಿಗೊಳಿಸಬಹುದು ಎಂದು ಟಿಸಿಎಸ್‌ ವಿವರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ