ಆ್ಯಪ್ನಗರ

ಅನಿಲ್‌ ಅಂಬಾನಿಗೆ ಶುಭ ಶುಕ್ರವಾರ

ಸಾಲಗ್ರಸ್ತ ರಿಲಯನ್ಸ್‌ ಎಡಿಎ ಗ್ರೂಪ್‌ನ ಅಧ್ಯಕ್ಷ ಅನಿಲ್‌ ಅಂಬಾನಿಯವರಿಗೆ ಶುಕ್ರವಾರ ಶುಭದಾಯಕವಾಗಿತ್ತು. ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಅವರು ಸುಪ್ರೀಂಕೋರ್ಟ್‌ನಿಂದ ದೊಡ್ಡ ರಿಲೀಫ್‌ ಪಡೆದರು.

Vijaya Karnataka Web 15 Dec 2018, 5:00 am
ಹೊಸದಿಲ್ಲಿ : ಸಾಲಗ್ರಸ್ತ ರಿಲಯನ್ಸ್‌ ಎಡಿಎ ಗ್ರೂಪ್‌ನ ಅಧ್ಯಕ್ಷ ಅನಿಲ್‌ ಅಂಬಾನಿಯವರಿಗೆ ಶುಕ್ರವಾರ ಶುಭದಾಯಕವಾಗಿತ್ತು. ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಅವರು ಸುಪ್ರೀಂಕೋರ್ಟ್‌ನಿಂದ ದೊಡ್ಡ ರಿಲೀಫ್‌ ಪಡೆದರು. ರಫೆಲ್‌ ಯುದ್ಧ ವಿಮಾನ ಖರೀದಿ ವ್ಯವಹಾರದ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ವಜಾ ಮಾಡಿತ್ತು. ಹೀಗಾಗಿ ರಫೆಲ್‌ ಡೀಲ್‌ನಲ್ಲಿ ಪಾಲುದಾರಿಕೆ ಹೊಂದಿದ್ದ ಅವರ ಕಂಪನಿ ರಿಲಯನ್ಸ್‌ ಡಿಫೆನ್ಸ್‌ಗೂ ಅಡ್ಡಿ ನಿವಾರಣೆಯಾಗಿದೆ.
Vijaya Karnataka Web thank god its friday a day of hope for anil ambani
ಅನಿಲ್‌ ಅಂಬಾನಿಗೆ ಶುಭ ಶುಕ್ರವಾರ


ಅನಿಲ್‌ ಅಂಬಾನಿಯವರ ಆರ್‌ಕಾಮ್‌ ಟೆಲಿಕಾಂ ಕಂಪನಿಗೆ ಸಂಬಂಧಿಸಿದ ಮತ್ತೊಂದು ಕೋರ್ಟ್‌ ಕೇಸ್‌ ನಲ್ಲಿ ಕೂಡ ಅವರಿಗೆ ನಿರಾಳವಾಗಿದೆ. ಆರ್‌ಕಾಮ್‌ನ ಸ್ಪೆಕ್ಟ್ರಮ್‌ಗಳನ್ನು ಮಾರಾಟ ಮಾಡಲು ತನ್ನ ಅನುಮತಿ ನೀಡಿರುವುದಾಗಿ ದೂರಸಂಪರ್ಕ ಇಲಾಖೆಯು ಸುಪ್ರೀಂಕೋರ್ಟ್‌ಗೆ ಶುಕ್ರವಾರ ತಿಳಿಸಿತ್ತು. ಹೀಗಾಗಿ ಆರ್‌ಕಾಮ್‌ನ ಸ್ಪೆಕ್ಟ್ರಮ್‌ ಅನ್ನು ಮಾರಾಟದಿಂದ ಸಿಗುವ ಹಣವನ್ನು, ಸಾಲ ಮರು ಪಾವತಿಸಲು ಬಳಸಿಕೊಳ್ಳಬಹುದು.

ಸ್ಪೆಕ್ಟ್ರಮ್‌ ಖರೀದಿಗೆ ಸಂಬಂಧಿಸಿ ಆರ್‌ಕಾಮ್‌ ಪಾವತಿಸಿದ್ದ ಕಾರ್ಪೊರೇಟ್‌ ಗ್ಯಾರಂಟಿ ಮೊತ್ತ 1,400 ಕೋಟಿ ರೂ. ಹಾಗೂ 2,947 ಕೋಟಿ ರೂ. ಮೌಲ್ಯದ ಭೂಮಿ ಇತ್ಯಾದಿಗಳ ಇತ್ಯರ್ಥಕ್ಕೆ ಪರಿಶೀಲನೆ ನಡೆಸುತ್ತಿರುವುದಾಗಿ ಟೆಲಿಕಾಂ ಇಲಾಖೆ ತಿಳಿಸಿದೆ. ಬಾಕಿ ಪಾವತಿಗೆ ಸಂಬಂಧಿಸಿ ಕಂಪನಿ ಹಾಗೂ ಟೆಲಿಕಾಂ ಇಲಾಖೆ ನಡುವೆ ವಿವಾದ ಉಂಟಾಗಿತ್ತು. ಒಟ್ಟು 46,000 ಕೋಟಿ ರೂ. ಸಾಲದ ಹೊರೆಯಲ್ಲಿರುವ ಆರ್‌ ಕಾಮ್‌, ಸ್ಪೆಕ್ಟ್ರಮ್‌ ಮಾರಾಟಕ್ಕೆ ಕಾಯುತ್ತಿತ್ತು. ಇದೀಗ ಹಾದಿ ಸುಗಮವಾದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ