Please enable javascript.ಗಣಿಬಾಧಿತ ಪ್ರದೇಶಗಳಿಗಿಲ್ಲ ಖನಿಜ ನಿಧಿ, ಬ್ಯಾಂಕ್‌ ಖಾತೆಯಲ್ಲೇ ಉಳಿದಿದೆ ಕೋಟ್ಯಂತರ ರೂ.! - there is no mineral fund for the mine affected areas crores of rupees remain in the bank account - Vijay Karnataka

ಗಣಿಬಾಧಿತ ಪ್ರದೇಶಗಳಿಗಿಲ್ಲ ಖನಿಜ ನಿಧಿ, ಬ್ಯಾಂಕ್‌ ಖಾತೆಯಲ್ಲೇ ಉಳಿದಿದೆ ಕೋಟ್ಯಂತರ ರೂ.!

Curated byಎನ್‌. ಸಚ್ಚಿದಾನಂದ | Vijaya Karnataka Web 4 Jul 2023, 8:06 am
Subscribe

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಗಣಿಗಾರಿಕೆಯಿಂದ ಸರಕಾರಕ್ಕೆ ರಾಯಲ್ಟಿ ರೂಪದಲ್ಲಿ 2015ರಿಂದ 23ರವರೆಗೆ 39 ಕೋಟಿ ರೂಪಾಯಿ ಸಂಗ್ರಹವಾಗಿದೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಹಣ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗದೆ, ಬ್ಯಾಂಕ್‌ ಖಾತೆಯಲ್ಲೇ ಉಳಿದುಕೊಂಡಿದೆ. ಗಣಿಗಾರಿಕೆಯಿಂದ ಬರುವ ಈ ಖನಿಜ ನಿಧಿ ಹಣವನ್ನು ಗ್ರಾಮಗಳ ಅಭಿವೃದ್ಧಿಗೆ ಬಳಸಲು ಅವಕಾಶವಿದ್ದರೂ ಬಳಕೆಯಾಗುತ್ತಿಲ್ಲ.

ಹೈಲೈಟ್ಸ್‌:

  • ಗಣಿಬಾಧಿತ ಪ್ರದೇಶಗಳ ಅನುಕೂಲಕ್ಕೆ ಸಿಕ್ಕಿಲ್ಲ ಖನಿಜ ನಿಧಿ
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ 120 ಕಡೆ ಗಣಿಗಾರಿಕೆ
  • ಜಿಲ್ಲೆಯಲ್ಲಿವೆ ಬರೋಬ್ಬರಿ 100 ಗಣಿಬಾಧಿತ ಪ್ರದೇಶಗಳು
  • ಈವರೆಗೆ ಖನಿಜ ನಿಧಿ ರೂಪದಲ್ಲಿ ಸಂಗ್ರಹವಾಗಿವೆ 39 ಕೋಟಿ ರೂ.
Crusher
  • ಹೈದರ್‌ಸಾಬ್‌ ಕುಂದಾಣ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳ ವಿವಿಧೆಡೆ ಗಣಿಗಾರಿಕೆಯಿಂದ ಸರಕಾರಕ್ಕೆ ರಾಯಲ್ಟಿ ರೂಪದಲ್ಲಿ 2015ರಿಂದ 23ರವರೆಗೆ 39 ಕೋಟಿ ರೂ. ಸಂಗ್ರಹವಾಗಿದೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗದೆ, ಬ್ಯಾಂಕ್‌ ಖಾತೆಯಲ್ಲೇ ಉಳಿದಿದೆ.
ಜಿಲ್ಲೆಯಲ್ಲಿ ಒಟ್ಟು 120 ಗಣಿಗಾರಿಕೆ ಪ್ರದೇಶಗಳಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೆಲ ನಿಬಂಧನೆಗಳನ್ನು ಇರಿಸಿ, ಗಣಿಗಾರಿಕೆಗೆ ಮುಕ್ತ ಅವಕಾಶ ನೀಡಿದೆ. ಗಣಿಗಾರಿಕೆಯಿಂದ ಬರುವ ಖನಿಜ ನಿಧಿ ಗ್ರಾಮಗಳ ಅಭಿವೃದ್ಧಿಗೆ ಅವಕಾಶವಿದ್ದರೂ ಬಳಕೆಯಾಗುತ್ತಿಲ್ಲ. ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಧ್ಯೇಯೋದ್ದೇಶ ಹೊಂದಿದ್ದರೂ ಅದು ಸಫಲವಾಗುತ್ತಿಲ್ಲ ಎಂಬ ಆರೋಪ ನಾಗರಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಮನ್ವಯತೆ ಕೊರತೆ ಅಭಿವೃದ್ಧಿಗೆ ಹಿನ್ನಡೆ

ಖನಿಜ ನಿಧಿಯಡಿ ಸುಮಾರು 8 ಸರಕಾರಿ ಇಲಾಖೆಗಳಿಗೆ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ, ಕಾಮಗಾರಿಗಳನ್ನು ಪೂರ್ಣಗೊಳಿಸುವ ಅವಕಾಶವಿದ್ದು, ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯಿಂದಾಗಿ ಖನಿಜ ನಿಧಿ ಹಣ ನಿಗದಿತ ಅವಧಿಯಲ್ಲಿ ಬಳಕೆಯಾಗದೆ ಕಾಮಗಾರಿಗಳು ತೆವಳುತ್ತಾ ಸಾಗುತ್ತಿವೆ. ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವ ಗ್ರಾಮಗಳಲ್ಲಿ ಇಲಾಖಾಧಿಕಾರಿಗಳು ಮತ್ತಷ್ಟು ಗಮನಹರಿಸಬೇಕೆಂಬುದು ಗಣಿಗಾರಿಕೆ ಪ್ರದೇಶಗಳ ಆಸುಪಾಸಿನ ಜನರ ಒತ್ತಾಸೆಯಾಗಿದೆ.

ಖನಿಜ ನಿಧಿ ಮೇಲೆ ಸರಕಾರದ ಕಣ್ಣು
ಖನಿಜನಿಧಿ ಬಳಕೆ ಯಾವುದಕ್ಕೆ?

ಖನಿಜ ನಿಧಿಯನ್ನು ಶೇ. 60ರಷ್ಟು ಕುಡಿಯುವ ನೀರು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲಾಭಿವೃದ್ಧಿಗೆ, ಶೇ. 40ರಷ್ಟು ಮೂಲಸೌಕರ‍್ಯಗಳಾದ ರಸ್ತೆ, ಚರಂಡಿ, ಶೌಚಾಲಯ, ಶಾಲಾ ಕಾಲೇಜು ಅಭಿವೃದ್ಧಿ, ಸ್ಮಶಾನ, ಬೀದಿ ದೀಪ, ಸಮುದಾಯ ಭವನ ಮತ್ತು ನೀರಾವರಿ, ಪರಿಸರ ಗುಣಮಟ್ಟ ಹೆಚ್ಚಳ ಹೀಗೆ ಹಲವಾರು ರೀತಿಯಲ್ಲಿ ಬಳಸಲು ಅವಕಾಶ ಇರುತ್ತದೆ.

ತಾಲೂಕುವಾರು ಗಣಿಗಾರಿಕೆ ನಡೆಯುವ ಗ್ರಾಮಗಳು

ದೇವನಹಳ್ಳಿ: ತೈಲಗೆರೆ, ಮೀಸಗಾನಹಳ್ಳಿ, ಮುದ್ದನಾಯಕನಹಳ್ಳಿ, ಕೊಯಿರ,

ದೊಡ್ಡಬಳ್ಳಾಪುರ: ಮೆಲೆಕೋಟೆ, ಹಾಡೋಹಳ್ಳಿ

ನೆಲಮಂಗಲ: ಮಾಚೇನಹಳ್ಳೀ, ಕೆ.ಜೆ. ಜಾಜೂರು, ಕೆಂಗಲ್‌, ಚಿಕ್ಕನಹಳ್ಳಿ, ಕಲ್ಲನಾಯಕನಹಳ್ಳಿ

ಹೊಸಕೋಟೆ: ಗೂಗುಟ್ಟಹಳ್ಳಿ, ಉಲುವೇನಹಳ್ಳಿ, ಬಂಡ್ರಹಳ್ಳಿ, ಮೊತಕದಹಳ್ಳಿ, ತಿಮ್ಮಸಂದ್ರ, ಚೊಕ್ಕಸಂದ್ರ, ಬೈಲನರಸಪುರ

39 ಕೋಟಿ ರೂ. ರಾಯಲ್ಟಿ ಸಂಗ್ರಹ

ಖನಿಜ ನಿಧಿಯಲ್ಲಿ ಕೋಟ್ಯಂತರ ರೂ. ಹಣ ಬಳಕೆಯಾಗದೇ ಬ್ಯಾಂಕ್‌ ಖಾತೆಗಳಲ್ಲಿ ಉಳಿದುಕೊಂಡಿದೆ. ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ, 2015-16 ರಿಂದ 2022-23ರವರೆಗೆ 39 ಕೋಟಿ ರೂ. ಡಿಎಂಎಫ್‌ ಹಣ ಸಂಗ್ರಹಿಸಲಾಗಿದೆ. ಈ ಪೈಕಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಿದ್ದು ಶೇ. 75ರಷ್ಟು ಮಾತ್ರ. ಈಗಾಗಲೇ ಇಲಾಖೆಯಿಂದ ಸುಮಾರು 36 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಆದರೆ, ಈವರೆಗೆ 20 ಕೋಟಿ ರೂ. ಖನಿಜ ನಿಧಿ ಮಾತ್ರ ಖರ್ಚಾಗಿದೆ. ಕೋವಿಡ್‌ ವೇಳೆ ಸುಮಾರು 2-3 ಕೋಟಿ ರೂ. ಖನಿಜ ನಿಧಿ ಬಳಸಲಾಗಿದೆ ಎಂಬುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮಾಹಿತಿಯಾಗಿದೆ.
ಎನ್‌. ಸಚ್ಚಿದಾನಂದ
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ