ಆ್ಯಪ್ನಗರ

ಎಸ್‌ಬಿಐನಲ್ಲಿ ತಿಮ್ಮಪ್ಪನಿಗೆ ಸೇರಿದ 2,780 ಕೆ.ಜಿ ಬಂಗಾರ ಠೇವಣಿ

ಕಲಿಯುಗ ವೈಕುಂಠ ಎಂದು ಕರೆಸಿಕೊಂಡಿರುವ ತಿರುಮಲ ತಿರುಪತಿಗೆ ದೇಶವಿದೇಶಗಳಿಂದ ಅಶೇಷ ಭಕ್ತಗಣ ಆಗಮಿಸುತ್ತಿರುತ್ತದೆ. ತಿಮ್ಮಪ್ಪನ ದರ್ಶನಭಾಗ್ಯ ಪಡೆದ ಭಕ್ತರು ನಗದು, ವಸ್ತುಗಳ ರೂಪದಲ್ಲಿ ಕಾಣಿಕೆ ಸಲ್ಲಿಸುತ್ತಾರೆ. ಶ್ರೀನಿವಾಸನಿಗೆ ಭಕ್ತರು ಸಮರ್ಪಿಸಿದ ಬಂಗಾರವನ್ನು ದೀರ್ಘಕಾಲದ ಗೋಲ್ಡ್ ಡಿಪಾಸಿಟ್ ಯೋಜನೆಯಡಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಟ್ಟಿರುವುದಾಗಿ ತಿರುಮಲ ತಿರುಪತಿ ದೇವಸ್ಥಾನ ತಿಳಿಸಿದೆ.

ET Online 30 Aug 2017, 10:45 pm
ತಿರುಪತಿ: ಕಲಿಯುಗ ವೈಕುಂಠ ಎಂದು ಕರೆಸಿಕೊಂಡಿರುವ ತಿರುಮಲ ತಿರುಪತಿಗೆ ದೇಶವಿದೇಶಗಳಿಂದ ಅಶೇಷ ಭಕ್ತಗಣ ಆಗಮಿಸುತ್ತಿರುತ್ತದೆ. ತಿಮ್ಮಪ್ಪನ ದರ್ಶನಭಾಗ್ಯ ಪಡೆದ ಭಕ್ತರು ನಗದು, ವಸ್ತುಗಳ ರೂಪದಲ್ಲಿ ಕಾಣಿಕೆ ಸಲ್ಲಿಸುತ್ತಾರೆ. ಶ್ರೀನಿವಾಸನಿಗೆ ಭಕ್ತರು ಸಮರ್ಪಿಸಿದ ಬಂಗಾರವನ್ನು ದೀರ್ಘಕಾಲದ ಗೋಲ್ಡ್ ಡಿಪಾಸಿಟ್ ಯೋಜನೆಯಡಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಟ್ಟಿರುವುದಾಗಿ ತಿರುಮಲ ತಿರುಪತಿ ದೇವಸ್ಥಾನ ತಿಳಿಸಿದೆ.
Vijaya Karnataka Web tirumala tirupati devasthanams deposits 2780 kg gold with sbi
ಎಸ್‌ಬಿಐನಲ್ಲಿ ತಿಮ್ಮಪ್ಪನಿಗೆ ಸೇರಿದ 2,780 ಕೆ.ಜಿ ಬಂಗಾರ ಠೇವಣಿ


ಜಗತ್ತಿನಲ್ಲೇ ಅತ್ಯಧಿಕ ಆದಾಯ ಗಳಿಸುವ ಹಿಂದೂ ದೇವಾಲಯ ಎನ್ನಿಸಿಕೊಂಡಿರುವ ತಿಮ್ಮಪ್ಪನಿಗೆ ಕಾಣಿಕೆ ರೂಪದಲ್ಲಿ ಬಂದಂತಹ ಬಂಗಾರದಲ್ಲಿನ 2,780 ಕೆ.ಜಿಗಳನ್ನು ಎಸ್‍ಬಿಐನಲ್ಲಿ ಠೇವಣಿ ಇಡಲಾಗಿದೆ. ಈ ಮೊತ್ತದಲ್ಲಿ 2,075 ಕೆ.ಜಿಗಳನ್ನು 12 ವರ್ಷಗಳ ಕಾಲಮಿತಿಯಲ್ಲಿ ಶೇ.2.5ರಷ್ಟು ವಾರ್ಷಿಕ ಬಡ್ಡಿಯಂತೆ ಚಿನ್ನದ ಹಣ ಗಳಿಕೆಯ (ಗೋಲ್ಡ್ ಮಾನಿಟೈಸೇಷನ್) ಯೋಜನೆಯಡಿ ಬಂಡವಾಳವಾಗಿ ಹೂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಪಂಜಾನ್ ನ್ಯಾಶನಲ್ ಬ್ಯಾಂಕ್‌ನಲ್ಲಿ ತಿಮ್ಮಪ್ಪನಿಗೆ ಸೇರಿದ 1,311 ಕೆ.ಜಿ ಬಂಗಾರವನು ಟಿಟಿಡಿ ಡಿಪಾಸಿಟ್ ಮಾಡಿತ್ತು. ಉಳಿದ ಬಂಗಾರವನ್ನು ಕರಗಿಸಿ, ತಿಮ್ಮಪ್ಪನ ನಾಣ್ಯಗಳನ್ನು ತಯಾರಿಸಿ ಭಕ್ತರಿಗೆ ಮಾರಾಟ ಮಾಡುವುದಾಗಿ ತಿಳಿಸಿದೆ ಟಿಟಿಡಿ.

2017-18ನೇ ಆರ್ಥಿಕ ವರ್ಷದಲ್ಲಿ ಭಕ್ತರಿಂದ ಕಾಣಿಕೆ ರೂಪದಲ್ಲಿ ರೂ. 1,110 ಆದಾಯ ಹರಿದು ಬರಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಈ ಹಿಂದೆ ಮಾಡಿರುವ ಠೇವಣಿ ಮೇಲೆ ರೂ.807 ಕೋಟಿ ಬಡ್ಡಿ ಬಂದಿದೆ. ಇತರೆ ಮಾರ್ಗಗಳಾದ ರೂ.300 ವಿಶೇಷ ದರ್ಶನ ಯೋಜನೆಯಿಂದ ರೂ.256 ಕೋಟಿ, ಕೊಠಡಿಗಳ ಬಾಡಿಗೆ ರೂಪದಲ್ಲಿ ರೂ.124 ಕೋಟಿ, ಸೇವಾ ಟಿಕೆಟ್‌ಗಳ ಮಾರಾಟದಿಂದ ರೂ.55 ಕೋಟಿ ಟಿಟಿಡಿಗೆ ಲಭಿಸಿದೆ.

Tirumala Tirupati Devasthanams deposits 2780 kg gold with SBI

Tirumala Tirupati Devasthanams which governs the famous hill shrine of Lord Venkateswara today deposited 2,780 kg of gold with State Bank of India under long term deposit scheme.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ