ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ನಿರ್ಮಲಾ ಸೀತಾರಾಮನ್ ಟಾನಿಕ್
ದೇಶದ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ ಎಂಬ ವದಂತಿಗಳ ಬೆನ್ನಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
Vijaya Karnataka Web 23 Aug 2019, 7:12 pm
ಹೊಸದಿಲ್ಲಿ: ದೇಶದ ಆರ್ಥಿಕತೆ ಒತ್ತಡಕ್ಕೆ ಸಿಲುಕಿದೆ ಎಂಬ ನೀತಿ ಆಯೋಗದ ಅಧ್ಯಕ್ಷ ರಾಜೀವ್ ಕುಮಾರ್ ಹೇಳಿಕೆ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸದಿಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಹತ್ವದ ಘೋಷಣೆಗಳು ಮಾಡಿದರು.
ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ, ಬ್ಯಾಂಕ್ ಬಡ್ಡಿ ದರ ಪರಿಷ್ಕರಣೆ ಸೇರಿದಂತೆ ಹಣಕಾಸು ಇಲಾಖೆ ಕೈಗೊಂಡಿರುವ ಹತ್ತು ಹಲವು ಆರ್ಥಿಕ ಸುಧಾರಣಾ ಕ್ರಮಗಳನ್ನು ವಿವರಿಸಿದರು.
ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಇಂತಿವೆ....
- ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಶೀಘ್ರದಲ್ಲೇ ಕಡಿತ
- ಗೃಹ, ವಾಹನ, ಕೈಸಾಲಗಳ ಬಡ್ಡಿದರ ಇಳಿಕೆ
- ಎಲೆಕ್ಟ್ರಿಕ್, ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ನೋಂದಣಿ ಪ್ರಕ್ರಿಯೆ ಮುಂದುವರಿಕೆ
- ಬಿಎಸ್-೪ ವಾಹನಗಳ ಖರೀದಿ ಬಳಿಕ ಮಾರ್ಚ್ 2020ರವರೆಗೂ ನೋಂದಣಿಗೆ ಅವಕಾಶ
- 30 ದಿನಗಳ ಒಳಗೆ ಜಿಎಸ್ ಟಿ ರೀಫಂಡ್ ಪ್ರಕ್ರಿಯೆ ಪೂರ್ಣ
- ಫಾರಿನ್ ಪೋರ್ಟ್ಫೋಲಿಯೊ ಇನ್ವೆಸ್ಟರ್ಸ್ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶುಲ್ಕ ರದ್ದು
- ಕಾರ್ಪೊರೇಟ್ ಸಾಮಾಜಿಕ ಬದ್ಧತೆ ಉಲ್ಲಂಘನೆ ಕ್ರಿಮಿನಲ್ ಅಪರಾಧ ಅಲ್ಲ: ಕಾರ್ಪೊರೇಟ್ ವಲಯದ ಆತಂಕಗಳಿಗೆ ಸಮಾಧಾನ
- ಈಕ್ವಿಟಿ ಶೇರುಗಳ ವರ್ಗಾವಣೆ ಮೇಲೆ ವಿಧಿಸಲಾಗುತ್ತಿದ್ದ ಸರ್ ಚಾರ್ಜ್ ಹಿಂದಕ್ಕೆ
- ನೋಂದಾಯಿತ ಸ್ಟಾರ್ಟ್ ಅಪ್ ಗಳಿಗೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ತೆರಿಗೆ ಹಿಂದಕ್ಕೆ
ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ, ಬ್ಯಾಂಕ್ ಬಡ್ಡಿ ದರ ಪರಿಷ್ಕರಣೆ ಸೇರಿದಂತೆ ಹಣಕಾಸು ಇಲಾಖೆ ಕೈಗೊಂಡಿರುವ ಹತ್ತು ಹಲವು ಆರ್ಥಿಕ ಸುಧಾರಣಾ ಕ್ರಮಗಳನ್ನು ವಿವರಿಸಿದರು.
ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಇಂತಿವೆ....
- ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಶೀಘ್ರದಲ್ಲೇ ಕಡಿತ
- ಗೃಹ, ವಾಹನ, ಕೈಸಾಲಗಳ ಬಡ್ಡಿದರ ಇಳಿಕೆ
- ಎಲೆಕ್ಟ್ರಿಕ್, ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ನೋಂದಣಿ ಪ್ರಕ್ರಿಯೆ ಮುಂದುವರಿಕೆ
- ಬಿಎಸ್-೪ ವಾಹನಗಳ ಖರೀದಿ ಬಳಿಕ ಮಾರ್ಚ್ 2020ರವರೆಗೂ ನೋಂದಣಿಗೆ ಅವಕಾಶ
- 30 ದಿನಗಳ ಒಳಗೆ ಜಿಎಸ್ ಟಿ ರೀಫಂಡ್ ಪ್ರಕ್ರಿಯೆ ಪೂರ್ಣ
- ಫಾರಿನ್ ಪೋರ್ಟ್ಫೋಲಿಯೊ ಇನ್ವೆಸ್ಟರ್ಸ್ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶುಲ್ಕ ರದ್ದು
- ಕಾರ್ಪೊರೇಟ್ ಸಾಮಾಜಿಕ ಬದ್ಧತೆ ಉಲ್ಲಂಘನೆ ಕ್ರಿಮಿನಲ್ ಅಪರಾಧ ಅಲ್ಲ: ಕಾರ್ಪೊರೇಟ್ ವಲಯದ ಆತಂಕಗಳಿಗೆ ಸಮಾಧಾನ
- ಈಕ್ವಿಟಿ ಶೇರುಗಳ ವರ್ಗಾವಣೆ ಮೇಲೆ ವಿಧಿಸಲಾಗುತ್ತಿದ್ದ ಸರ್ ಚಾರ್ಜ್ ಹಿಂದಕ್ಕೆ
- ನೋಂದಾಯಿತ ಸ್ಟಾರ್ಟ್ ಅಪ್ ಗಳಿಗೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ತೆರಿಗೆ ಹಿಂದಕ್ಕೆ