ಆ್ಯಪ್ನಗರ

ಕೊರೊನಾ ಕಡಿವಾಣಕ್ಕೆ ಎರಡು ದಿನದ ಸಂಬಳ ನೀಡಿದ 2.5 ಲಕ್ಷ ಎಸ್‌ಬಿಐ ನೌಕರರು!

ಕೊರೊನಾ ವೈರಸ್‌ ಕಡಿವಾಣಕ್ಕೆ ದೇಶದ ಅತಿದೊಡ್ಡ ಬ್ಯಾಂಕಾದ 'ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ' (ಎಸ್‌ಬಿಐ) ನೌಕರರು ಕೂಡ ಕೈಜೋಡಿಸಿದ್ದಾರೆ. 2,56,000 ನೌಕರರು ತಮ್ಮ ಎರಡು ದಿನಗಳ ಸಂಬಳವನ್ನು ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದ್ದಾರೆ.

Vijaya Karnataka Web 31 Mar 2020, 5:04 pm
ಹೊಸದಿಲ್ಲಿ: ಕೊರೊನಾ ವೈರಸ್‌ ( ಕೋವಿಡ್-19) ವಿರುದ್ಧದ ಹೋರಾಟಕ್ಕೆ ಇದೀಗ ದೇಶದ ಅತಿದೊಡ್ಡ ಬ್ಯಾಂಕಾದ 'ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ' (ಎಸ್‌ಬಿಐ) ನೌಕರರು ಕೂಡ ಕೈಜೋಡಿಸಿದ್ದಾರೆ.
Vijaya Karnataka Web sbi




ಎಸ್‌ಬಿಐನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2,56,000 ನೌಕರರು ಕೊರೊನಾ ವಿರುದ್ಧದ ಹೋರಾಟಕ್ಕಾಗಿ ತಮ್ಮ ಎರಡು ದಿನಗಳ ಸಂಬಳವನ್ನು ಪ್ರಧಾನ ಮಂತ್ರಿಯ ರಾಷ್ಟ್ರೀಯ ಪರಿಹಾರ ನಿಧಿಗೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಎಸ್‌ಬಿಐ ನೌಕರರ ಈ ಒಂದು ದಿಟ್ಟ ನಿರ್ಧಾರದಿಂದ ಪಿಎಂ ಕೇರ್ಸ್‌ ಫಂಡ್‌ಗೆ 100 ಕೋಟಿ ರೂಪಾಯಿ ಜಮೆಯಾಗಲಿದೆ.


ಈಗಾಗಲೇ ಕರ್ನಾಟಕ ರಾಜ್ಯದ ಕೈಗಾರಿಕೋದ್ಯಮಿಗಳು ಸಹ ಕೈ ಜೋಡಿಸಿದ್ದು "ಕೋವಿಡ್- 19 ಮುಖ್ಯಮಂತ್ರಿಗಳ ಪರಿಹಾರ ನಿಧಿ"ಗೆ ಕಾರ್ಪೋರೇಟ್‌ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ವತಿಯಿಂದ ಭರಪೂರ ದೇಣಿಗೆ ಘೊಷಿಸಿವೆ. ಹಲವಾರು ಖಾಸಗಿ ಕಂಪನಿಗಳು ಕೊರೊನಾ ವಿರುದ್ಧದ ಹೋರಾಟಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡಿವೆ.

ಕೈಗಾರಿಕೋದ್ಯಮಿಗಳಿಂದ 'ಕೋವಿಡ್‌-19 ಸಿಎಂ ಪರಿಹಾರ ನಿಧಿಗೆ' ಭರಪೂರ ದೇಣಿಗೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ