ನಾಳೆ, ನಾಡಿದ್ದು ಬ್ಯಾಂಕ್ ಮುಷ್ಕರ
ಎಸ್ಬಿಐ ವಿಲೀನ ಹಾಗೂ ಐಡಿಬಿಐ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಜುಲೈ 12 ಮತ್ತು 13ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದ್ದು, ಬ್ಯಾಂಕ್ ವ್ಯವಹಾರಗಳು ಅಸ್ತವ್ಯಸ್ಥಗೊಳ್ಳಲಿವೆ.
ಏಜೆನ್ಸೀಸ್ 11 Jul 2016, 4:13 am
ಹೊಸದಿಲ್ಲಿ : ಎಸ್ಬಿಐ ವಿಲೀನ ಹಾಗೂ ಐಡಿಬಿಐ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಜುಲೈ 12 ಮತ್ತು 13ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದ್ದು, ಬ್ಯಾಂಕ್ ವ್ಯವಹಾರಗಳು ಅಸ್ತವ್ಯಸ್ಥಗೊಳ್ಳಲಿವೆ.
ಜುಲೈ 12ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಜೈಪುರ ಸೇರಿದಂತೆ ಎಸ್ಬಿಐನ ಐದು ಸಹವರ್ತಿ ಬ್ಯಾಂಕ್ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಮರುದಿನ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ ಮತ್ತು ರಾಜ್ಯ ವಲಯದ ಉದ್ಯೋಗಿಗಳ ಸಂಘಟನೆಯೂ ಮುಷ್ಕರದಲ್ಲಿ ಭಾಗವಹಿಸಲಿವೆ.
ಮುಷ್ಕರದಿಂದಾಗಿ ಈ ಎರಡೂ ದಿನಗಳು ಬ್ಯಾಂಕ್ ವ್ಯವಹಾರಕ್ಕೆ ತೊಡಕಾಗಲಿವೆ ಎಂದು ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಈಗಾಗಲೇ ಸೂಚನೆ ನೀಡಿವೆ. ಮುಷ್ಕರದಿಂದ ಚೆಕ್ ಕ್ಲಿಯರೆನ್ಸ್, ನಗದು ಠೇವಣಿ, ಹಣ ವಾಪಸ್ ಸೇರಿದಂತೆ ನಾನಾ ಸೇವೆಗಳಿಗೆ ಅಡ್ಡಿಯಾಗುವ ಸಾಧ್ಯತೆಗಳಿವೆ.
ಜುಲೈ 12ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಜೈಪುರ ಸೇರಿದಂತೆ ಎಸ್ಬಿಐನ ಐದು ಸಹವರ್ತಿ ಬ್ಯಾಂಕ್ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಮರುದಿನ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ ಮತ್ತು ರಾಜ್ಯ ವಲಯದ ಉದ್ಯೋಗಿಗಳ ಸಂಘಟನೆಯೂ ಮುಷ್ಕರದಲ್ಲಿ ಭಾಗವಹಿಸಲಿವೆ.
ಮುಷ್ಕರದಿಂದಾಗಿ ಈ ಎರಡೂ ದಿನಗಳು ಬ್ಯಾಂಕ್ ವ್ಯವಹಾರಕ್ಕೆ ತೊಡಕಾಗಲಿವೆ ಎಂದು ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಈಗಾಗಲೇ ಸೂಚನೆ ನೀಡಿವೆ. ಮುಷ್ಕರದಿಂದ ಚೆಕ್ ಕ್ಲಿಯರೆನ್ಸ್, ನಗದು ಠೇವಣಿ, ಹಣ ವಾಪಸ್ ಸೇರಿದಂತೆ ನಾನಾ ಸೇವೆಗಳಿಗೆ ಅಡ್ಡಿಯಾಗುವ ಸಾಧ್ಯತೆಗಳಿವೆ.