ಹೊಸದಿಲ್ಲಿ: ಆಕಾಶ್ ಕ್ಷಿಪಣಿ ವ್ಯವಸ್ಥೆಯ ಮಾರಾಟಕ್ಕೆ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದರ ಮಾರಾಟದೊಂದಿಗೆ 5 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಉಪಕರಣಗಳ ಮಾರಾಟದ ಗುರಿ ತಲುಪುವ ನಿರೀಕ್ಷೆ ಹೊಂದಲಾಗಿದೆ.
ಅಲ್ಲದೆ ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳ ಜೊತೆ ಸಂಬಂಧ ಸುಧಾರಣೆಗೂ ಇದು ನೆರವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಆಕಾಶ್, ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯಾಗಿದ್ದು ಶೇ.96ರಷ್ಟು ಸ್ವದೇಶಿ ತಂತ್ರಜ್ಞಾನದಿಂದಲೇ ಅಭಿವೃದ್ಧಿಪಡಿಸಲಾಗಿದೆ. 25 ಕಿಲೋ ಮೀಟರ್ಗಳ ವ್ಯಾಪ್ತಿಯನ್ನು ಇದು ಹೊಂದಿದ್ದು, 2014ರಲ್ಲಿ ವಾಯುಸೇನೆ ಹಾಗೂ 2015ರಲ್ಲಿ ಭೂಸೇನೆ ಬತ್ತಳಿಕೆಗೆ ಸೇರಿದೆ. ಈ ಕ್ಷಿಪಣಿಯನ್ನು ಬೇರೆ ದೇಶಗಳಿಗೆ ಮಾರಾಟ ಮಾಡಲು ಇದೀಗ ಪ್ರಧಾನಿ ನೇತೃತ್ವದ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ರೀತಿಯ ವ್ಯವಸ್ಥೆಗಳನ್ನು ವೇಗವಾಗಿ ರಫ್ತು ಮಾಡಲೆಂದು ವಿಶೇಷ ಸಮಿತಿಯನ್ನೂ ರಚಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಆತ್ಮನಿರ್ಭರ್ ಭಾರತ್ ಅಭಿಯಾನದಡಿಯಲ್ಲಿ ವಿವಿಧ ಮಾದರಿಯ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ವೃದ್ಧಿಸುತ್ತಿದೆ. ಇಲ್ಲಿಯವರೆಗೆ ಭಾರತದ ರಕ್ಷಣಾ ಉತ್ಪನ್ನಗಳ ರಫ್ತು ಬಿಡಿಭಾಗಗಳಿಗೆ ಸೀಮಿತವಾಗಿತ್ತು. ದೊಡ್ಡ ದೊಡ್ಡ ವ್ಯವಸ್ಥೆಗಳ ರಫ್ತು ತೀರಾ ಕಡಿಮೆ ಇತ್ತು. ಇದೀಗ ಸಂಪುಟದ ನಿರ್ಧಾರದಿಂದ ರಕ್ಷಣಾ ಉತ್ಪನ್ನಗಳ ಸುಧಾರಣೆ ಸಾಧ್ಯವಾಗಲಿದ್ದು, ವಿದೇಶಿ ಮಾದರಿಗಳ ಜೊತೆ ಪೈಪೋಟಿ ನಡೆಸುವುದೂ ಸಾಧ್ಯವಾಗಲಿದೆ ಎಂದು ರಾಜನಾಥ್ ಸಿಂಗ್ ವಿವರಿಸಿದ್ದಾರೆ.
ಆಕಾಶ್ ಜೊತೆಗೆ ಕರಾವಳಿ ಕಣ್ಗಾವಲು ವ್ಯವಸ್ಥೆ, ರಡಾರ್ ಮತ್ತು ಏರ್ ಪ್ಲಾಟ್ಫಾರ್ಮ್ಗಳಿಗೂ ಬೇಡಿಕೆ ಬಂದಿದೆ ಎಂದಯ ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ. ಇಂಥಹ ಉತ್ಪನ್ನಗಳ ತ್ವರಿತ ರಫ್ತಿಗೆ ಅವಕಾಶ ನೀಡಲು ರಕ್ಷಣಾ ಸಚಿವರು, ವಿದೇಶಾಂಗ ಸಚವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ರಕ್ಷಣಾ ಉತ್ಪನ್ನಗಳ ರಫ್ತಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.
ಅಲ್ಲದೆ ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳ ಜೊತೆ ಸಂಬಂಧ ಸುಧಾರಣೆಗೂ ಇದು ನೆರವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಆಕಾಶ್, ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯಾಗಿದ್ದು ಶೇ.96ರಷ್ಟು ಸ್ವದೇಶಿ ತಂತ್ರಜ್ಞಾನದಿಂದಲೇ ಅಭಿವೃದ್ಧಿಪಡಿಸಲಾಗಿದೆ. 25 ಕಿಲೋ ಮೀಟರ್ಗಳ ವ್ಯಾಪ್ತಿಯನ್ನು ಇದು ಹೊಂದಿದ್ದು, 2014ರಲ್ಲಿ ವಾಯುಸೇನೆ ಹಾಗೂ 2015ರಲ್ಲಿ ಭೂಸೇನೆ ಬತ್ತಳಿಕೆಗೆ ಸೇರಿದೆ. ಈ ಕ್ಷಿಪಣಿಯನ್ನು ಬೇರೆ ದೇಶಗಳಿಗೆ ಮಾರಾಟ ಮಾಡಲು ಇದೀಗ ಪ್ರಧಾನಿ ನೇತೃತ್ವದ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ರೀತಿಯ ವ್ಯವಸ್ಥೆಗಳನ್ನು ವೇಗವಾಗಿ ರಫ್ತು ಮಾಡಲೆಂದು ವಿಶೇಷ ಸಮಿತಿಯನ್ನೂ ರಚಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಆತ್ಮನಿರ್ಭರ್ ಭಾರತ್ ಅಭಿಯಾನದಡಿಯಲ್ಲಿ ವಿವಿಧ ಮಾದರಿಯ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ವೃದ್ಧಿಸುತ್ತಿದೆ. ಇಲ್ಲಿಯವರೆಗೆ ಭಾರತದ ರಕ್ಷಣಾ ಉತ್ಪನ್ನಗಳ ರಫ್ತು ಬಿಡಿಭಾಗಗಳಿಗೆ ಸೀಮಿತವಾಗಿತ್ತು. ದೊಡ್ಡ ದೊಡ್ಡ ವ್ಯವಸ್ಥೆಗಳ ರಫ್ತು ತೀರಾ ಕಡಿಮೆ ಇತ್ತು. ಇದೀಗ ಸಂಪುಟದ ನಿರ್ಧಾರದಿಂದ ರಕ್ಷಣಾ ಉತ್ಪನ್ನಗಳ ಸುಧಾರಣೆ ಸಾಧ್ಯವಾಗಲಿದ್ದು, ವಿದೇಶಿ ಮಾದರಿಗಳ ಜೊತೆ ಪೈಪೋಟಿ ನಡೆಸುವುದೂ ಸಾಧ್ಯವಾಗಲಿದೆ ಎಂದು ರಾಜನಾಥ್ ಸಿಂಗ್ ವಿವರಿಸಿದ್ದಾರೆ.
ಆಕಾಶ್ ಜೊತೆಗೆ ಕರಾವಳಿ ಕಣ್ಗಾವಲು ವ್ಯವಸ್ಥೆ, ರಡಾರ್ ಮತ್ತು ಏರ್ ಪ್ಲಾಟ್ಫಾರ್ಮ್ಗಳಿಗೂ ಬೇಡಿಕೆ ಬಂದಿದೆ ಎಂದಯ ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ. ಇಂಥಹ ಉತ್ಪನ್ನಗಳ ತ್ವರಿತ ರಫ್ತಿಗೆ ಅವಕಾಶ ನೀಡಲು ರಕ್ಷಣಾ ಸಚಿವರು, ವಿದೇಶಾಂಗ ಸಚವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ರಕ್ಷಣಾ ಉತ್ಪನ್ನಗಳ ರಫ್ತಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.