ಆ್ಯಪ್ನಗರ

ಸಿಹಿ ಸುದ್ದಿ: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ!

2019-20ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್(ಐಟಿಆರ್) ಸಲ್ಲಿಸುವ ಅವಧಿಯನ್ನು ಇದೇ ನವೆಂಬರ್ 30ರವರೆಗೆ ವಿಸ್ತರಿಸಿ ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಹಾವಳಿಯ ಕಾರಣಕ್ಕೆ ಐಟಿಆರ್ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.

Vijaya Karnataka Web 29 Jul 2020, 12:12 pm
ನವದೆಹಲಿ: 2019-20ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್(ಐಟಿಆರ್) ಸಲ್ಲಿಸುವ ಅವಧಿಯನ್ನು ಇದೇ ನವೆಂಬರ್ 30ರವರೆಗೆ ವಿಸ್ತರಿಸಿ ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.
Vijaya Karnataka Web What is an ITR?
ಸಾಂದರ್ಭಿಕ ಚಿತ್ರ


ಸಾಮಾನ್ಯವಾಗಿ ಐಟಿಆರ್ ಸಲ್ಲಿಕೆಗೆ ಕೊನೆ ದಿನಾಂಕ ಜುಲೈ 31 ಎಂದು ನಿಗದಿಪಡಿಸಲಾಗಿರುತ್ತದೆ. ಆದರೆ ಈ ಬಾರಿ ಕೊರೊನಾ ವೈರಸ್ ಹಾವಳಿಯ ಕಾರಣಕ್ಕೆ ಐಟಿಆರ್ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.

ಐಟಿಆರ್ ಸಲ್ಲಿಕೆಗೆ ಯಾರೆಲ್ಲ ಅರ್ಹರು? ತಿಳಿಯಲೇಬೇಕಾದ ಮಾಹಿತಿ ಇದು!

ಇದೀಗ ಐಟಿಆರ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ನವೆಂಬರ್ 30 ಎಂದು ಘೋಷಿಸಲಾಗಿದ್ದು, ತೆರರಿಗೆದಾರರಲ್ಲಿ ಸಂತಸ ಮೂಡಿಸಿದೆ.

ಇಷ್ಟೇ ಅಲ್ಲದೇ ಸರ್ಕಾರದ ಜೂನ್ 24, 2020 ರ ಅಧಿಸೂಚನೆಯ ಪ್ರಕಾರ, ಉದ್ಯೋಗಿಗಳಿಗೆ ಉದ್ಯೋಗದಾತರಿಂದ ಫಾರ್ಮ್ 16 ಎ (ಬಡ್ಡಿಗೆ ಟಿಡಿಎಸ್ ಪ್ರಮಾಣಪತ್ರಗಳು) ಮತ್ತು ಫಾರ್ಮ್ 16 (ಸಂಬಳಕ್ಕಾಗಿ ಟಿಡಿಎಸ್ ಪ್ರಮಾಣಪತ್ರ) ನೀಡುವ ದಿನಾಂಕವನ್ನು ಆಗಸ್ಟ್ 15 ರವರೆಗೆ ವಿಸ್ತರಿಸಿದೆ.

ತೆರಿಗೆದಾರನ ನೆರವಿಗೆ ಮೋದಿ ಸರ್ಕಾರ: ಐಟಿ ರಿಟರ್ನ್ಸ್ ಗಡುವು ಮತ್ತೆ ವಿಸ್ತರಣೆ!

ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಐಟಿಆರ್ ಗಡುವು ವಿಸ್ರರಿಸುವ ಯೋಜನೆಯೂ ಇತ್ತು. ಅದರಂತೆ ತೆರಿಗೆಗೆ ಸಂಬಂಧಿಸಿದ ಇತರ ನೇರ ಪರಿಹಾರ ಕ್ರಮಗಳನ್ನು ಸಹ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಸಂಬಳ ರಹಿತ ಪಾವತಿಗಳಿಗೆ ಅನ್ವಯವಾಗುವ ಟಿಡಿಎಸ್ ದರವನ್ನೂ ಸರ್ಕಾರ ಕಡಿಮೆ ಮಾಡಿದೆ. ಐಟಿ ಕಾಯ್ದೆಯಡಿ ತೆರಿಗೆ ಕಡಿತಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗೆ ವಿಧಿಸಲಾಗಿದ್ದ ಕಾಲಮಿತಿಯನ್ನು ಜು.31 ವರೆಗೆ ವಿಸ್ತರಿಸಲಾಗಿದೆ.

ಐಟಿ ರಿಟರ್ನ್‌ ಸಲ್ಲಿಸಲು ಗೊಂದಲವೇ? ಈಗ ನೇರವಾಗಿ ಇಲಾಖೆಗೇ ಪ್ರಶ್ನೆ ಕೇಳಬಹುದು!

ಅದರಂತೆ 2019-20 ರ ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಈಗಾಗಲೇ 2020 ರ ನವೆಂಬರ್ 30 ವರೆಗೆ ವಿಸ್ತರಿಸಿ ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ