ಆ್ಯಪ್ನಗರ

ಚೀನಾ- ಅಮೆರಿಕ ಬಿಕ್ಕಟ್ಟು ಭಾರತಕ್ಕೆ ಅನುಕೂಲವಾಗಲಿದೆ: ರಘುರಾಮ್‌ ರಾಜನ್‌!

ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬ ಗಾದೆಯಂತೆ ಚೀನಾ-ಅಮೆರಿಕ ನಡುವಿನ ಕಿತ್ತಾಟವು ಭಾರತಕ್ಕೆ ಲಾಭವೇ ಆಗಲಿದೆ. ಈ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್‌ ರಾಜನ್‌ ಅವರೂ ಹೇಳಿದ್ದಾರೆ.

Vijaya Karnataka Web 24 Jul 2020, 4:28 pm
ನ್ಯೂಯಾರ್ಕ್‌: ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬ ಗಾದೆಯಂತೆ ಚೀನಾ-ಅಮೆರಿಕ ನಡುವಿನ ಕಿತ್ತಾಟವು ಭಾರತಕ್ಕೆ ಲಾಭವೇ ಆಗಲಿದೆ. ಈ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್‌ ರಾಜನ್‌ ಅವರೂ ಹೇಳಿದ್ದಾರೆ.
Vijaya Karnataka Web Raghuram Rajan new


ಅಮೆರಿಕದ ಪಾನ್‌ ಐಐಟಿ ಗುರುವಾರ ಆಯೋಜಿಸಿದ್ದ ವರ್ಚುವಲ್‌ ಕಾನ್ಫರೆನ್ಸ್‌ನಲ್ಲಿ 'ಕೊರೊನೋತ್ತರ ಕಾಲದಲ್ಲಿ ಜಾಗತಿಕ ಆರ್ಥಿಕತೆ' ಕುರಿತು ಮಾತನಾಡಿದರು.

ಅಮೆರಿಕದ ಅಧ್ಯಕ್ಷೀಯ ಚಿನಾವಣೆಗಳು ಹತ್ತಿರ ಬರುತ್ತಿವೆ. ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟು ದಿನೇದಿನೆ ಬಿಗಾಡಾಯಿಸುತ್ತಲೇ ಇದೆ. ಇದರಿಂದ ಜಾಗತಿಕ ಮಾರುಕಟ್ಟೆಯೇ ದುರ್ಬಲಗೊಳ್ಳುತ್ತಿದೆ. ಆದರೆ, ಇದರಿಂದ ಭಾರತ ಮತ್ತು ಬ್ರೆಜಿಲ್‌ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನುಕೂಲವಾಗಲಿದೆ ಎಂದು ರಘುರಾಮ್‌ ರಾಜನ್ ಹೇಳಿದ್ದಾರೆ.

ಉಚಿತ ಯೋಜನೆಗಳು ಬೇಡ: ಕೇಂದ್ರ ಸರಕಾರಕ್ಕೆ ರಘುರಾಮ್‌ ರಾಜನ್‌ ಸಲಹೆ!

ಅಲ್ಲದೆ, ಭಾರತದ ಆರ್ಥಿಕತೆಯಲ್ಲಿ ಗಂಭೀರವಾಗಿ ನಷ್ಟ ಅನುಭವಿಸಿರುವ ಕಂಪನಿಗಳೂ ಇವೆ. ಕೊರೊನೋತ್ತರ ಸಂದರ್ಭದಲ್ಲಿ ಇಂತಹ ಕಂಪನಿಗಳ ರಿಪೇರಿ ಕೆಲಸ ಆಗಬೇಕಿದೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಹಲವಾರು ಕಂಪನಿಗಳು ಮುಂಬರುವ ದಿನಗಳಲ್ಲಿ ದಿವಾಳಿಯಾಗುವ ಸಾಧ್ಯತೆಗಳಿವೆ. ಇದು ಯೂರೋಪ್‌ ನಲ್ಲೂ ಸಂಭವಿಸಬಹು. ಈ ನಿಟ್ಟಿನಲ್ಲಿ ಆರ್ಥಿಕತೆಯನ್ನು ಬಲಪಡಿಸಲು ರಿಪೇರಿ ಕಾರ್ಯ ಮಾಡಬೇಕಿದೆ. ಸಂಪನ್ಮೂಲಗಳ ಹಂಚಿಕೆ ಮಾಡಬೇಕಿದೆ. ಬಂಡವಾಳದ ಸ್ವರೂಪವನ್ನೇ ಬದಲಿಸಬೇಕಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ