ಆ್ಯಪ್ನಗರ

'ಹೆಲಿಕಾಪ್ಟರ್‌ ಮನಿ' ಎಂದರೆ ಏನು..? ಅರ್ಥಶಾಸ್ತ್ರ ಪರಿಕಲ್ಪನೆ 'ಸತ್ಯಾಂಶ' ಇಲ್ಲಿದೆ..

ಹೆಲಿಕಾಪ್ಟರ್‌ನಲ್ಲಿ ನೋಟುಗಳ ಸುರಿಮಳೆ ಎಂಬ ಗಾಳಿ ಸುದ್ದಿಗೆ, ವದಂತಿಗೆ ಇಲ್ಲಿದೆ ಸ್ಪಷ್ಟನೆ. ಹೆಲಿಕಾಪ್ಟರ್‌ ಮನಿ ಅನ್ನೋದು ಒಂದು ಸಂಕೀರ್ಣ ಅರ್ಥಶಾಸ್ತ್ರೀಯ ಪದ. ಈ ಪದದ ಅರ್ಥ ಆಗಸದಿಂದ ನೋಟಿನ ಸುರಿಮಳೆ ಆಗುತ್ತೆ ಅಂತಾ ಅಲ್ಲ.. ಹಾಗಾದ್ರೆ ಏನು..? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ..

ದಿಲೀಪ್ ಡಿ. ಆರ್. | Vijaya Karnataka Web 16 Apr 2020, 8:14 pm

ಹೈಲೈಟ್ಸ್‌:

  • ಹೆಲಿಕಾಪ್ಟರ್‌ ಮನಿ ಎಂದರೆ ಅರ್ಥ ವ್ಯವಸ್ಥೆಗೆ ಹೊಸ ನೋಟುಗಳ ಪ್ರವೇಶ
  • ಭಾರೀ ಪ್ರಮಾಣದ ನೋಟುಗಳು ಅರ್ಥ ವ್ಯವಸ್ಥೆಗೆ ಪ್ರವೇಶಿಸೋದು
  • ಆರ್ಥಿಕ ಕುಸಿತವಾದಾಗ ಪ್ರಯೋಗಿಸುವ ಮೊದಲ ಅಸ್ತ್ರವಿದು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web helicopter money
'ಹೆಲಿಕಾಪ್ಟರ್‌ ಮನಿ' ಎಂದರೆ ಏನು..? ಅರ್ಥಶಾಸ್ತ್ರ ಪರಿಕಲ್ಪನೆ 'ಸತ್ಯಾಂಶ' ಇಲ್ಲಿದೆ..
ಹೆಲಿಕಾಪ್ಟರ್‌ ಮನಿ..! ಈಗ ಸದ್ಯ ಪ್ರಚಲಿತಕ್ಕೆ ಬಂದಿರುವ ಪದವಿದು..! ಏನಿದು ಹೆಲಿಕಾಪ್ಟರ್ ಮನಿ..? ಆಗಸದಿಂದ ಹೆಲಿಕಾಪ್ಟರ್‌ ಮೂಲಕ ಸರ್ಕಾರ ಹಣ ಸುರಿದುಬಿಡುತ್ತಾ..? ಹಾಗಂತಾ ಭಾವಿಸಿಕೊಂಡಿದ್ದರೆ ಅದು ಖಂಡಿತಾ ತಪ್ಪು..!
ಹೆಲಿಕಾಪ್ಟರ್‌ ಮನಿ ಅನ್ನೋದು ಅರ್ಥಶಾಸ್ತ್ರದ ಒಂದು ಪರಿಕಲ್ಪನೆ. ಒಂದು ಸಂಕೀರ್ಣ ಅರ್ಥಶಾಸ್ತ್ರೀಯ ಪದ. ಆರ್ಥಿಕ ತಜ್ಞರು ವಿಶ್ಲೇಷಣೆ ವೇಳೆ ಬಳಸುವ ಪದವೇ ಹೆಲಿಕಾಪ್ಟರ್‌ ಮನಿ. ಅಮೆರಿಕ ಸರ್ಕಾರದ ಖಜಾನೆ ಮುಖ್ಯಸ್ಥರಾಗಿದ್ದ ಬೆನ್ ಬೆರ್‌ನಾನ್ಕೆ ಎಂಬುವರು ಈ ಪದವನ್ನು ಮೊದಲಿಗೆ ಬಳಸುವ ಮೂಲಕ ಚಾಲ್ತಿಗೆ ತಂದರು ಎಂಬ ವಾದವಿದೆ. ಇದರ ನಡುವಲ್ಲೇ, ಈ ಪದವನ್ನು ಬೆನ್‌ ಹುಟ್ಟಿಹಾಕಲಿಲ್ಲ, 1969ರಲ್ಲೇ ಈ ಪದ ಅರ್ಥಶಾಸ್ತ್ರರ ವಲಯದಲ್ಲಿ ಚಾಲ್ತಿಯಲ್ಲಿ ಇತ್ತು ಅನ್ನೋ ವಾದವೂ ಇದೆ. ಅದೇನೇ ಇರಲಿ, ಅರ್ಥಶಾಸ್ತ್ರದ ಪ್ರಕಾರ, ಈ ಪದದ ಅರ್ಥವೇನು ಅನ್ನೋದು ಈಗಿನ ತುರ್ತು ಅವಶ್ಯಕತೆ..!

‘ಹೆಲಿಕಾಪ್ಟರ್‌ ಮನಿ’ ಅಂದ್ರೆ..

ವಿಕಿ ಪೀಡಿಯಾ ಪ್ರಕಾರ ಹೆಲಿಕಾಪ್ಟರ್‌ ಮನಿ ಎಂದರೆ ‘ಅಸಾಂಪ್ರದಾಯಿಕ ವಿತ್ತೀಯ ನೀತಿ’. ಈ ರೀತಿ ಹೇಳಿದರೆ ಅಷ್ಟು ಸುಲಭವಾಗಿ ಯಾರಿಗೂ ಅರ್ಥ ಆಗೋದಿಲ್ಲ ಅಲ್ಲವೇ?! ಹಾಗಾಗಿ ಅದಕ್ಕೊಂದು ಚೆಂದದ ವಿವರಣೆಯೂ ಉಂಟು..!

ಟೇಬಲ್ ಮೇಲೆ ಹಣ ಯಾವಾಗಿಡುತ್ತೀರಿ?: ಮೋದಿಗೆ ರಾಹುಲ್ ಪ್ರಶ್ನೆ!

ಸಿಂಪಲ್‌ ಆಗಿ ಹೇಳಬೇಕು ಅಂದ್ರೆ, ಹೆಲಿಕಾಪ್ಟರ್‌ ಮನಿ ಎಂದರೆ ಭಾರೀ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಿ ದೇಶಾದ್ಯಂತ ಚಲಾವಣೆಗೆ ಬಿಡೋದು. ವಿಶ್ವದ ಯಾವುದೇ ರಾಷ್ಟ್ರ ಆರ್ಥಿಕ ಕುಸಿತವಾದ ಸಂದರ್ಭದಲ್ಲಿ ಇದೇ ನೀತಿಕ್ಕೆ ಮೊರೆ ಹೋಗುತ್ತೆ. ಆರ್ಥಿಕ ಹಿಂಜರಿತವಾದಾಗ, ಬಡ್ಡಿ ದರ ಭಾರೀ ಪ್ರಮಾಣದಲ್ಲಿ ಕುಸಿತವಾದಾಗ ಜನರಿಗೆ ಚಲಾವಣೆ ಮಾಡಲು ಭಾರೀ ಪ್ರಮಾಣದ ಹಣ ಲಭ್ಯವಾಗುತ್ತೆ. ಈ ರೀತಿ ಜನ ಸಮುದಾಯಕ್ಕೆ ಚಲಾವಣೆ ಮಾಡಲು ಭಾರೀ ಪ್ರಮಾಣದ ನೋಟುಗಳನ್ನು ಬ್ಯಾಂಕ್‌ ಮೂಲಕ ಹರಿಯಬಿಡುವುದನ್ನು ಹೆಲಿಕಾಪ್ಟರ್‌ ಮನಿ ಎನ್ನುತ್ತಾರೆ. ಪ್ರಾಕೃತಿಕ ವಿಕೋಪಗಳಾದಾಗ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಹೆಲಿಕಾಪ್ಟರ್‌ ಮೂಲಕ ಸುರಿಯುತ್ತಾರೆಲ್ಲಾ..! ಅದೇ ರೀತಿ.. ಕಾಡ್ಗಿಚ್ಚಿನ ಸಮಯದಲ್ಲಿ ಹೆಲಿಕಾಪ್ಟರ್‌ನಿಂದ ನೀರು ಸುರಿಯುತ್ತಾರಲ್ಲಾ..! ಅದೇ ಮಾದರಿ..!

ಗ್ರಾಹಕರಿಗೆ ನಿರಾಳ: ಸೋಮವಾರದಿಂದ ಇ-ಕಾಮರ್ಸ್‌ ಪುನರಾರಂಭ, ಕಂಪನಿಗಳ ಸಂಪೂರ್ಣ ಸೇವೆ ಲಭ್ಯ

ಇದೇ ವಿಚಾರವನ್ನು ಕೆಲವು ದಿನಗಳ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್‌ ಅವರೂ ಪ್ರಸ್ತಾಪಿಸಿದ್ದರು. ಆರ್‌ಬಿಐ ಹೆಲಿಕಾಪ್ಟರ್‌ ಮನಿ ಅಸ್ತ್ರ ಪ್ರಯೋಗಿಸಬೇಕು ಎಂದು ಆಗ್ರಹಿಸಿದ್ದರು.

ಆದ್ರೆ, ಕೆಲವು ಮಾಧ್ಯಮಗಳಲ್ಲಿ ಪ್ರಸ್ತಾಪಿಸಿರುವಂತೆ ಹೆಲಿಕಾಪ್ಟರ್‌ ಮೂಲಕ ನೋಟುಗಳ ಮಳೆ ಆಗಿಬಿಡೋದಿಲ್ಲ. ದೇಶದ ಆರ್ಥಿಕ ವ್ಯವಸ್ಥೆಗೆ, ನೋಟು ಚಲಾವಣೆ ಜಾಲಕ್ಕೆ ಭಾರೀ ಪ್ರಮಾಣದ ಹೊಸ ನೋಟುಗಳು ಸೇರ್ಪಡೆ ಆಗುತ್ತವೆ ಅಷ್ಟೇ..

ಚೀನಾದ ಮೌನದಿಂದ ಜಗತ್ತಿಗೆ ಆಪತ್ತು..! ಮಾಹಿತಿ ಮುಚ್ಚಿಟ್ಟ ಜಿನ್‌ಪಿಂಗ್‌ ನಡೆಗೆ ತಜ್ಞರ ಟೀಕೆ
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ