ಆ್ಯಪ್ನಗರ

ವಿವಾದಿತ ಪ್ರೈವಸಿ ಪಾಲಿಸಿ ಹಿಂಪಡೆಯುವಂತೆ ವಾಟ್ಸಾಪ್‌ಗೆ ಸರಕಾರದ ಸೂಚನೆ

ಭಾರತದಲ್ಲಿ ಕಟ್ಟುನಿಟ್ಟಿನ ನೀತಿಯನ್ನು ಜಾರಿಗೊಳಿಸಿ ಯುರೋಪಿಗೆ ಮಾತ್ರ ಮೃದುವಾದ ನೀತಿಯನ್ನು ಹೊಂದಿರುವುದು ಭಾರತೀಯ ಬಳಕೆದಾರರಿಗೆ ಎಸಗಿದ ತಾರತಮ್ಯ ಎಂದು ಸರಕಾರವು ತನ್ನ ಪತ್ರದಲ್ಲಿ ಆಕ್ಷೇಪಿಸಿದೆ.

Agencies 19 Jan 2021, 5:23 pm
ಹೊಸದಿಲ್ಲಿ: ವಿವಾದಿತ ಪ್ರೈವಸಿ ಪಾಲಿಸಿ ಅಪ್ಡೇಟ್‌ನ್ನು ಹಿಂಪಡೆಯುವಂತೆ ವಾಟ್ಸಾಪ್‌ಗೆ ಸರಕಾರ ಸೂಚಿಸಿದೆ. ಭಾರತೀಯ ಬಳಕೆದಾರರ ಮಾಹಿತಿಯ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯನ್ನು ಕಾಪಾಡುವಂತೆ ಸರಕಾರ ಹೇಳಿದೆ.
Vijaya Karnataka Web WhatsApp


ವಿವಾದಿತ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರ ಸುದೀರ್ಘ ಪ್ರಶ್ನೆಗಳ ಪಟ್ಟಿಯನ್ನು ಕಂಪನಿಗೆ ಕಳುಹಿಸಿದ್ದು, ಭಾರತದಲ್ಲಿ ಕಟ್ಟುನಿಟ್ಟಾಗಿರುವ ನೀತಿಯನ್ನು ಇಟ್ಟುಕೊಂಡು, ಯುರೋಪಿಗೆ ಮಾತ್ರ ಮೃದುವಾದ ನೀತಿಯನ್ನು ಹೊಂದಿರುವುದು ಭಾರತೀಯ ಬಳಕೆದಾರರಿಗೆ ಎಸಗಿದ ತಾರತಮ್ಯ ಎಂದು ಆಕ್ಷೇಪಿಸಿದೆ.

ಈ ನೀತಿಯನ್ನು ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ಅನಾವರಣಗೊಳಿಸಿದ ಬಗ್ಗೆ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ. ಈ ವಿಷಯದ ಬಗ್ಗೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಂಪನಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ವಾಟ್ಸಾಪ್‌ ಸಿಇಒ ವಿಲ್‌ ಕ್ಯಾಥ್‌ಕಾರ್ಟ್‌ಗೆ ಪತ್ರ ಬರೆಯಲಾಗಿದೆ. ಅಪ್ಡೇಟ್‌ ಮತ್ತು ಫೇಸ್‌ಬುಕ್‌ನೊಂದಿಗಿನ ಡೇಟಾ-ಹಂಚಿಕೆ ಭಾರತೀಯ ಬಳಕೆದಾರರನ್ನು ಹೆಚ್ಚಿನ ಭದ್ರತಾ ಅಪಾಯಗಳು ಮತ್ತು ದೋಷಗಳಿಗೆ ಒಡ್ಡುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇದರ ಜತೆಗೆ, 'ಒಂದೋ ನೀತಿಯನ್ನು ಒಪ್ಪಿಕೊಳ್ಳಿ, ಇಲ್ಲವೇ ವಾಟ್ಸಾಪ್‌ನ್ನು ತೊರೆಯಿರಿ' ಎಂಬ ಕಂಪನಿಯ ಹಠಮಾರಿ ಧೋರಣೆಯ ಬಗ್ಗೆಯೂ ಸರಕಾರ ಅಸಮಧಾನ ವ್ಯಕ್ತಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ