ಆ್ಯಪ್ನಗರ

ಸಗಟು ಹಣದುಬ್ಬರ ಮೈನಸ್‌ 3.21ಕ್ಕೆ ಇಳಿಕೆ, ಜೂನ್‌ನಲ್ಲಿ ಏರಿಕೆ ಸಾಧ್ಯತೆ

ಮೇ ತಿಂಗಳಲ್ಲಿ ಆಹಾರ ಪದಾರ್ಥಗಳು ದುಬಾರಿಯಾಗಿದ್ದರೂ, ತೈಲ ಮತ್ತು ವಿದ್ಯುತ್‌ ದರ ಇಳಿಕೆ ಪರಿಣಾಮದಿಂದಾಗಿ ಹಣದುಬ್ಬರ ತೀವ್ರ ಕುಸಿದಿದೆ. ಇದೀಗ ಕಚ್ಚಾ ತೈಲದ ದರ ಏರಿಕೆಯಾಗುತ್ತಿದ್ದು, ಜೂನ್‌ನಲ್ಲಿ ಹಣದುಬ್ಬರವು ಏರಿಕೆಯಾಗುವ ಸಾಧ್ಯತೆ ಇದೆ.

THE ECONOMIC TIMES 15 Jun 2020, 8:20 pm

ಹೊಸದಿಲ್ಲಿ: ಮೇ ತಿಂಗಳಿನಲ್ಲಿ ಸಗಟು ಹಣದುಬ್ಬರ ಮೈನಸ್‌ ಶೇ.3.21ಕ್ಕೆ ಇಳಿಕೆಯಾಗಿದೆ. ಇದು ಕಳೆದ ನಾಲ್ಕೂವರೆ ವರ್ಷಗಳಲ್ಲಿನ ಕನಿಷ್ಠ ಮಟ್ಟ. 2015ರ ನವೆಂಬರ್‌ನಲ್ಲಿ ಮೈನಸ್‌ ಶೇ. 3.7ಕ್ಕೆ ಕುಸಿದಿದ್ದು ಈ ಹಿಂದಿನ ದಾಖಲೆಯಾಗಿತ್ತು.
Vijaya Karnataka Web Inflation


ಕಳೆದ ತಿಂಗಳು ಆಹಾರ ಪದಾರ್ಥಗಳು ದುಬಾರಿಯಾಗಿದ್ದರೂ, ತೈಲ ಮತ್ತು ವಿದ್ಯುತ್‌ ದರ ಇಳಿಕೆ ಪರಿಣಾಮದಿಂದಾಗಿ ಹಣದುಬ್ಬರ ತೀವ್ರ ಕುಸಿದಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಶೇ.2.79ರ ಬೆಳವಣಿಗೆ ದಾಖಲಾಗಿತ್ತು ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.

ಆದಾಗ್ಯೂ, ಮೇನಲ್ಲಿ ಆಹಾರ ಹಣದುಬ್ಬರವು ಶೇ. 1.13ರಷ್ಟಿದೆ. ಏಪ್ರಿಲ್‌ನಲ್ಲಿ ಅದು ಶೇ. 2.55ರಷ್ಟಿತ್ತು. ಇಂಧನ ಮತ್ತು ವಿದ್ಯುತ್‌ ಹಣದುಬ್ಬರ ಇಳಿತವು ಮೇನಲ್ಲಿ ಶೇ. 19.83ರಷ್ಟಿದೆ. ಕಳೆದ ತಿಂಗಳು ಅದು ಶೇ.10.12ರಷ್ಟಿತ್ತು. ಬೇಳೆ ಹಣದುಬ್ಬರವು ಎರಡಂಕಿಯಲ್ಲಿಯೇ ಮುಂದುವರಿದಿದ್ದು ಶೇ. 11.91ರಷ್ಟಿದೆ. ತರಕಾರಿಗಳ ಹಣದುಬ್ಬರ ಶೇ. 12.48ಕ್ಕೆ ಕುಸಿದಿದ್ದರೂ, ಆಲೂಗಡ್ಡೆ ಹಣದುಬ್ಬರವು ಶೇ. 52.25ರಷ್ಟಿದೆ.

ಕೊರೊನಾದಿಂದ ಆರ್ಥಿಕ ಆಘಾತ, ಸಣ್ಣ ವಸ್ತುಗಳ ಖರೀದಿಗೂ ಇಎಂಐ

ಮಾರ್ಚ್‌ 25ರಿಂದ ಲಾಕ್‌ಡೌನ್‌ ಜಾರಿಗೆ ಬಂದಿದ್ದರಿಂದ ಏಪ್ರಿಲ್‌ ತಿಂಗಳ ಸಗಟು ಹಣದುಬ್ಬರದ ವರದಿಯನ್ನು ಸರಕಾರವು ತಡೆ ಹಿಡಿದಿತ್ತು. ಕಚ್ಚಾ ತೈಲದ ದರ ಏರಿಕೆಯಾಗುತ್ತಿದ್ದು, ಜೂನ್‌ನಲ್ಲಿ ಹಣದುಬ್ಬರವು ಏರಿಕೆಯಾಗಲಿದೆ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞರಾದ ಅದಿತಿ ನಾಯರ್‌ ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರ ಶೇ. 9.28

ಕಳೆದ ವಾರ ಚಿಲ್ಲರೆ ಹಣದುಬ್ಬರದ ವರದಿ ಬಿಡುಗಡೆಯಾಗಿದ್ದು, ಮೇನಲ್ಲಿ ಶೇ.9.28ರಷ್ಟಿದೆ.

ಋುಣಾತ್ಮಕ ಹಣದುಬ್ಬರ ಏನನ್ನು ಸೂಚಿಸುತ್ತದೆ?

ಅರ್ಥವ್ಯವಸ್ಥೆಯ ಚಟುವಟಿಕೆಗಳು ಮಂದಗತಿಯಲ್ಲಿರುವುದನ್ನೂ ಇದು ಬಿಂಬಿಸುತ್ತದೆ. ಹಣದುಬ್ಬರ ಋುಣಾತ್ಮಕ ಮಟ್ಟಕ್ಕೆ ಇಳಿದಿದೆ ಎಂದರೆ ಒಂದು ವಸ್ತುವಿನ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ ಎಂದರ್ಥ. ಇದರಿಂದ ಕಂಪನಿಗಳ ಲಾಭಾಂಶದಲ್ಲಿ ಇಳಿಕೆಯಾಗುತ್ತದೆ. ಲಾಭ ಕಡಿಮೆಯಾದರೆ ವೆಚ್ಚ ನಿಯಂತ್ರಣದ ಭಾಗವಾಗಿ ಕಂಪನಿಗಳು ಉತ್ಪಾದನೆಯನ್ನು ತಗ್ಗಿಸಬಹುದು. ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಬಹುದು. ಆದ್ದರಿಂದ ದೇಶಕ್ಕೆ ಋುಣಾತ್ಮಕ ಹಣದುಬ್ಬರ ಸತತವಾಗಿ ಮುಂದುವರಿಯುವುದು ಅಪಾಯಕರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ