ಆ್ಯಪ್ನಗರ

ಕಾರ್ಪೊರೇಟ್‌ ಕೃಷಿ ಪ್ರವೇಶಿಸುವ ಯೋಚನೆ ಇಲ್ಲ: ರಿಲಯನ್ಸ್‌

ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಅದರ ಅಧೀನದಲ್ಲಿರುವ ರಿಲಯನ್ಸ್‌ ರಿಟೇಲ್‌, ರಿಲಯನ್ಸ್‌ ಜಿಯೊ ಅಥವಾ ಯಾವುದೇ ಕಂಪನಿಗಳು ಕಾರ್ಪೊರೇಟ್‌ ಅಥವಾ ಗುತ್ತಿಗೆ ಕೃಷಿಯನ್ನು ನಡೆಸಿಲ್ಲ. ಮುಂದೆಯೂ ನಡೆಸುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.

Vijaya Karnataka Web 4 Jan 2021, 11:35 pm
ಚಂಡೀಗಢ: ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯೊಂದರಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಭಾಗವಾಗಿರುವ ರಿಲಯನ್ಸ್‌ ಜಿಯೊ, ಪಂಜಾಬ್‌, ಹರಿಯಾಣದಲ್ಲಿ ಕಂಪನಿಯ ನೆಟ್‌ವರ್ಕ್ ಸೌಕರ್ಯಗಳ ಮೇಲೆ ನಡೆದಿರುವ ವಿಧ್ವಂಸಕ ಕೃತ್ಯಗಳ ವಿರುದ್ಧ ರಾಜ್ಯ ಸರಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿದೆ.
Vijaya Karnataka Web ರಿಲಯನ್ಸ್‌
ರಿಲಯನ್ಸ್‌


ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯ ದುರ್ಲಾಭ ಪಡೆಯಲು ಕೆಲ ಸ್ಥಾಪಿತ ಹಿತಾಸಕ್ತಿಗಳು, ಪ್ರತಿಭಟನೆಯನ್ನು ರಿಲಯನ್ಸ್‌ ವಿರುದ್ಧ ಪ್ರಚೋದಿಸಲು ಯತ್ನಿಸಿವೆ.

ಆದರೆ ಈ ಹಿಂದೆಯೂ ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಅದರ ಅಧೀನದಲ್ಲಿರುವ ರಿಲಯನ್ಸ್‌ ರಿಟೇಲ್‌, ರಿಲಯನ್ಸ್‌ ಜಿಯೊ ಅಥವಾ ಯಾವುದೇ ಕಂಪನಿಗಳು ಕಾರ್ಪೊರೇಟ್‌ ಅಥವಾ ಗುತ್ತಿಗೆ ಕೃಷಿಯನ್ನು ನಡೆಸಿಲ್ಲ. ಮುಂದೆಯೂ ನಡೆಸುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ