ಆ್ಯಪ್ನಗರ

ಆರ್‌ಬಿಐ ಸ್ವಾಯತ್ತತೆ, ವಿಶ್ವಾಸಾರ್ಹತೆ ಎತ್ತಿ ಹಿಡಿಯುವೆ: ಶಕ್ತಿಕಾಂತ್ ದಾಸ್‌

ಆರ್‌ಬಿಐ ಅನ್ನುವುದು 'ಅತ್ಯುನ್ನತ ಸಂಸ್ಥೆ'ಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸರಕಾರ ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಆರ್‌ಬಿಐ ನೂತನ ಗವರ್ನರ್ ಹೇಳಿದ್ದಾರೆ.

Vijaya Karnataka 12 Dec 2018, 9:52 pm
ಮುಂಬಯಿ : ಭಾರತೀಯ ರಿಸರ್ವ್‌ ಬ್ಯಾಂಕ್‌ನ(ಆರ್‌ಬಿಐ) 25ನೇ ಗವರ್ನರ್‌ ಆಗಿ ಶಕ್ತಿಕಾಂತ ದಾಸ್‌ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಹೊಸ ಗವರ್ನರ್‌ ನೇಮಕದಿಂದಾಗಿ ಡಿ.14ಕ್ಕೆ ಪೂರ್ವ ನಿಗದಿಯಾಗಿದ್ದ ಆರ್‌ಬಿಐ ಮಂಡಳಿ ಸಭೆ ನಡೆಯಲಿದೆ.
Vijaya Karnataka Web will uphold rbi autonomy says shakti kanth das
ಆರ್‌ಬಿಐ ಸ್ವಾಯತ್ತತೆ, ವಿಶ್ವಾಸಾರ್ಹತೆ ಎತ್ತಿ ಹಿಡಿಯುವೆ: ಶಕ್ತಿಕಾಂತ್ ದಾಸ್‌


ಉರ್ಜಿತ್‌ ಪಟೇಲ್‌ ದಿಢೀರ್‌ ರಾಜೀನಾಮೆಯಿಂದ ತೆರವಾಗಿದ್ದ ಹುದ್ದೆಯನ್ನು ದಾಸ್‌ ಸ್ವೀಕರಿಸಿದರು. ''ರಿಸರ್ವ್‌ ಬ್ಯಾಂಕ್‌ನ ವಿಶ್ವಾಸಾರ್ಹತೆ, ಸಮಗ್ರತೆ ಮತ್ತು ಸ್ವಾಯತ್ತತೆಯನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತೇನೆ. ಸರಕಾರ ಹಾಗೂ ಆರ್‌ಬಿಐ ನಡುವೆ ಭವಿಷ್ಯದಲ್ಲಿ ಯಾವುದೇ ಸಂಘರ್ಷ ಆಗದಂತೆಯೂ ನೋಡಿಕೊಳ್ಳುತ್ತೇನೆ. ಎಲ್ಲ ಸಮಸ್ಯೆಗಳನ್ನೂ ಚರ್ಚೆಯ ಮೂಲಕ ಬಗೆಹರಿಸಲು ಸಾಧ್ಯವಿದೆ.'' ಎಂದರು.

''ಆರ್‌ಬಿಐ ಅನ್ನುವುದು 'ಅತ್ಯುನ್ನತ ಸಂಸ್ಥೆ'ಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸರಕಾರ ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ,'' ಎಂದು ಹೇಳಿದ್ದಾರೆ.

15ನೇ ಹಣಕಾಸು ಆಯೋಗದ ಹಾಲಿ ಸದಸ್ಯರು ಮತ್ತು ಆರ್ಥಿಕ ವ್ಯವಹಾರಗಳ ಸಮಿತಿಯ ಮಾಜಿ ಕಾರ್ಯದರ್ಶಿಯೂ ಆಗಿರುವ ದಾಸ್‌, ''ದೇಶದ ಆರ್ಥಿಕತೆಗೆ ಪುಷ್ಟಿ ನೀಡುವ ಎಲ್ಲ ಕ್ರಮಗಳನ್ನೂ ಕಾಲಕಾಲಕ್ಕೆ ಅನುಸರಿಸಲಾಗುವುದು. ಮೊದಲನೆಯದಾಗಿ, ಸಾರ್ವಜನಿಕ ವಲಯದ ಬ್ಯಾಂಕ್‌ ಮುಖ್ಯಸ್ಥರನ್ನು ಭೇಟಿ ಮಾಡುತ್ತೇನೆ'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ