ಆ್ಯಪ್ನಗರ

ಹೆರಿಟೇಜ್ ವೈನರಿಯಲ್ಲಿ ವೈನ್‌ಟೂರ್ ಶುರು

ಪಾರಂಪರಿಕ ನಗರಿ ಮೈಸೂರು ನಗರದ ಜನರಿಗೆ ವೈನ್ ಸಂಸ್ಕೃತಿಯನ್ನು ಪರಿಚಯಿಸುವ ಜತೆಗೆ ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಕರ್ನಾಟಕ ವೈನ್ ಮಂಡಳಿ ಆ.27ರಿಂದ ಸೆಪ್ಟೆಂಬರ್ 31ರವರೆಗೆ ಚನ್ನಪಟ್ಟಣದ ಬಳಿ ಇರುವ ಹೆರಿಟೇಜ್ ವೈನರಿಯಲ್ಲಿ ವೈನ್ ಟೂರ್ ಆಯೋಜಿಸಿದೆ.

ವಿಕ ಸುದ್ದಿಲೋಕ 28 Aug 2016, 1:59 pm
* ಚನ್ನಪಟ್ಟಣ ಸಮೀಪದ ಹೆರಿಟೇಜ್ ವೈನರಿಯಲ್ಲಿ ವೈನ್‌ಟೂರ್ ಶುರು
Vijaya Karnataka Web wine tour start at channapatna heritage winery
ಹೆರಿಟೇಜ್ ವೈನರಿಯಲ್ಲಿ ವೈನ್‌ಟೂರ್ ಶುರು


* ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆ ಕಲ್ಪಿಸಲು ಆಯೋಜನೆ

ಮೈಸೂರು: ಪಾರಂಪರಿಕ ನಗರಿ ಮೈಸೂರು ನಗರದ ಜನರಿಗೆ ವೈನ್ ಸಂಸ್ಕೃತಿಯನ್ನು ಪರಿಚಯಿಸುವ ಜತೆಗೆ ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಕರ್ನಾಟಕ ವೈನ್ ಮಂಡಳಿ ಆ.27ರಿಂದ ಸೆಪ್ಟೆಂಬರ್ 31ರವರೆಗೆ ಚನ್ನಪಟ್ಟಣದ ಬಳಿ ಇರುವ ಹೆರಿಟೇಜ್ ವೈನರಿಯಲ್ಲಿ ವೈನ್ ಟೂರ್ ಆಯೋಜಿಸಿದೆ.

‘‘ಮೈಸೂರು ಭಾಗದ ಜನರಿಗೆ ವೈನ್ ಸಂಸ್ಕೃತಿಯನ್ನು ಪರಿಚಯಿಸುವ ವೈನ್ ಟೂರ್ ಆಯೋಜಿಸಲಾಗಿದೆ. ಈ ಪ್ಯಾಕೇಜ್‌ನಂತೆ ವೈನ್ ಟೂರ್‌ಗೆ ತೆರಳುವವರು ಚನ್ನಪಟ್ಟಣದ ವೈನರಿಯಲ್ಲಿ ವೈನ್ ತಯಾರಿಸುವ ಬಗ್ಗೆ ಮಾಹಿತಿ ಪಡೆಯಬಹುದು. ಆರಂಭದಲ್ಲಿ ಅವರಿ ವೈನ್ ತಯಾರಿಕೆಯ ವೀಡಿಯೊ ಚಿತ್ರೀಕರಣ ಪ್ರದರ್ಶಿಸಲಾಗುವುದು. ಬಳಿಕ ಕಾರ್ಖಾನೆಗೆ ಕರೆದುಕೊಂಡು ಹೋಗಿ ದ್ರಾಕ್ಷಿಯನ್ನು ಯಾವ ರೀತಿ ಅರೆಯಲಾಗುತ್ತದೆ ಎಂಬುದನ್ನು ತೋರಿಸಲಾಗುವುದು. ಅಲ್ಲದೆ ಪಕ್ಕದಲ್ಲಿಯೆ ದ್ರಾಕ್ಷಿ ತೋಟವಿದ್ದು ಹಲವು ಬಗೆಯ ದ್ರಾಕ್ಷಿ ಬೆಳೆಗಳನ್ನು ಪರಿಚಯಿಸಲಾಗುತ್ತದೆ. ಇದಾದ ಬಳಿಕ ಭಾಗವಹಿಸಿದವರಿಗೆ ಐದು ಬಗೆಯ ವೈನ್ ಟೇಸ್ಟ್ ಮಾಡಲು ಅವಕಾಶ ನೀಡಲಾಗುವುದು’’ ಎಂದು ಹೆರಿಟೇಜ್ ವೈನರಿ ವ್ಯವಸ್ಥಾಪಕ ನಿರ್ದೇಶಕ ಪಿ.ಎಲ್.ವೆಂಕಟರಾಮರೆಡ್ಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘‘ರಿಯಾಯಿತಿ ದರದಲ್ಲಿ ವೈನ್ ಟೂರ್ ಆಯೋಜಿಸಲಾಗುತ್ತಿದ್ದು, ಮೈಸೂರು ನಿವಾಸಿಗಳು ತಮ್ಮ ಗುರುತಿನ ಪತ್ರ ತೋರಿಸುವ ಮೂಲಕ ಶೇ.50ರಷ್ಟು ರಿಯಾಯಿತಿ ಪಡೆಯಬಹುದು’’ ಎಂದರು.

‘‘ವೈನ್ ಸೇವನೆಯು ಆರೋಗ್ಯಕ್ಕೆ ಮಾರಕವಾದದ್ದಲ್ಲ. ಅತಿಯಾಗಿ ಸೇವನೆ ಮಾಡಿದರೆ ಮಾರಕವಾಗುತ್ತದೆ. ಆದ್ದರಿಂದ ವೈನ್‌ಪ್ರಿಯರು ವೈನ್ ಸವಿಯಬಹುದಾಗಿದೆ’’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವೈನ್ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು, ಪ್ರಧಾನ್ ಇನ್‌ಫ್ರಾಸ್ಟ್ರಕ್ಚರ್‌ನ ಗ್ಲೋಬಲ್ ಪ್ರಭಾಕರ್, ಸುರೇಶ್‌ಚಂದ್ರ, ರಾಜಣ್ಣ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ