ಆ್ಯಪ್ನಗರ

ಇನ್ಫಿಯಲ್ಲಿ ನಿಲೇಕಣಿ ಒಂದೆಜ್ಜೆ ಹಿಂದಕ್ಕೆ

ಇನ್ಫೋಸಿಸ್‌ ಕಂಪನಿ ಸಹ-ಸಂಸ್ಥಾಪಕ ಮತ್ತು ಕಾರ್ಯ ನಿರ್ವಾಹಕೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರು, ಈಗ ಕಂಪನಿಯ ಕಾರ್ಯ ಚಟುವಟಿಕೆಗಳಿಂದ ಒಂದೆಜ್ಜೆ ಹಿಂದಕ್ಕೆ ಸಾಗಿದ್ದಾರೆ...

Vijaya Karnataka 10 Apr 2018, 9:16 am
ಬೆಂಗಳೂರು: ಇನ್ಫೋಸಿಸ್‌ ಕಂಪನಿ ಸಹ-ಸಂಸ್ಥಾಪಕ ಮತ್ತು ಕಾರ್ಯ ನಿರ್ವಾಹಕೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರು, ಈಗ ಕಂಪನಿಯ ಕಾರ್ಯ ಚಟುವಟಿಕೆಗಳಿಂದ ಒಂದೆಜ್ಜೆ ಹಿಂದಕ್ಕೆ ಸಾಗಿದ್ದಾರೆ. ಹೊಸ ಸಿಇಒ ಸಲೀಲ್‌ ಪರೇಖ್‌ ಅವರ ಕಾರ್ಯ ನಿರ್ವಹಣೆಗೆ ಪೂರಕವಾಗಿ ಈ ನಡೆ ಅನುಸರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
Vijaya Karnataka Web nilekani


ನಾರಾಯಣಮೂರ್ತಿ ಸೇರಿದಂತೆ ಕಂಪನಿಯ ಸಂಸ್ಥಾಪಕರು ಮತ್ತು ಹಿಂದಿನ ಸಿಇಒ ವಿಶಾಲ್‌ ಸಿಕ್ಕಾ ನಡುವೆ ಸಂಘರ್ಷ ತಲೆದೋರಿ, ಕೊನೆಗೆ ಸಿಕ್ಕಾ ನಿರ್ಗಮಿಸಿದ್ದರು. ತೀವ್ರ ಬಿಕ್ಕಟ್ಟಿನ ಸಮಯದಲ್ಲಿ ಆಗಸ್ಟ್‌ 24ರಂದು ಇನ್ಫಿಯನ್ನು ಮರು ಪ್ರವೇಶಿಸಿದ್ದ ನಿಲೇಕಣಿ ತೊಡಕುಗಳನ್ನು ನಿವಾರಿಸಿದ್ದರು. 'ಸೂಪರ್‌ ಸಿಇಒ' ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

ದೇಶದ ಎರಡನೇ ದೊಡ್ಡ ಐಟಿ ಹೊರಗುತ್ತಿಗೆ ಕಂಪನಿಯಾದ ಇನ್ಫೋಸಿಸ್‌ಗೆ ಹೊಸ ಸಿಇಒ ಆಗಿ ಪರೇಖ್‌ ಜ.2ರಂದು ಅಧಿಕಾರ ಸ್ವೀಕರಿಸಿದ್ದರು. ಕಂಪನಿಯಲ್ಲಿ ಮತ್ತೆ ವಿಶ್ವಾಸದ ವಾತಾವರಣ ತರುತ್ತಿರುವ ಪರೇಖ್‌ಗೆ ತಮ್ಮ ಎಲ್ಲ ಜವಾಬ್ದಾರಿಗಳನ್ನು ನಿಲೇಕಣಿ ಹಸ್ತಾಂತರಿಸಿದ್ದಾರೆ. ಹೊಸ ಸಿಇಒಗೆ ಅವರ ಕರ್ತವ್ಯ ನಿರ್ವಹಣೆಗೆ ಪೂರಕವಾಗಿ ಸ್ವಾತಂತ್ರ್ಯ ಒದಗಿಸುವ ನಿಟ್ಟಿನಲ್ಲಿ ನಿಲೇಕಣಿ ಅವರು, ಕಚೇರಿಗೂ ಅಷ್ಟಾಗಿ ಭೇಟಿ ನೀಡುತ್ತಿಲ್ಲ.

ಡಿಸೆಂಬರ್‌ವರೆಗೆ ನಿಲೇಕಣಿ ಅವರು ಬೆಂಗಳೂರಿನಲ್ಲಿರುವ ಇನ್ಫೋಸಿಸ್‌ನ ಮುಖ್ಯ ಕಚೇರಿಯಲ್ಲಿ ವಾರಕ್ಕೆ ಕನಿಷ್ಠ ಎರಡು ಅಥವಾ ಮೂರು ದಿನಗಳ ಕಾಲ ಕೆಲಸ ಮಾಡುತ್ತಿದ್ದರು. ಬಿಸಿನೆಸ್‌ ಹೆಡ್‌ಗಳ ಕಾರ್ಯಕ್ಷಮತೆಯನ್ನು ಪರಾಮರ್ಶಿಸುತ್ತಿದ್ದರು. ಕಂಪನಿಯ ದೊಡ್ಡ ಗ್ರಾಹಕರ ಸಭೆಗಳನ್ನು ಆಗಾಗ ಕರೆಯುತ್ತಿದ್ದರು. ಜ.2ರಂದು ಪರೇಖ್‌ ಪ್ರವೇಶದ ನಂತರ, ನಿಲೇಕಣಿ ಅವರು ಕಚೇರಿಗೆ ಬರುವುದು ಕಡಿಮೆಯಾಗಿದೆ. ಹದಿನೈದು ದಿನಕ್ಕೆ ಒಮ್ಮೆ ಅಥವಾ ಎರಡು ಸಲವಷ್ಟೇ ಬಂದು ಹೋಗುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ