ಆ್ಯಪ್ನಗರ

ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ಗೆ ಏ.2ರ ವರೆಗೆ ನ್ಯಾಯಾಂಗ ಬಂಧನ!

ಯೆಸ್‌ ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್‌ ಅವರನ್ನು ಶುಕ್ರವಾರ ಏಪ್ರಿಲ್‌ 2ರ ತನಕ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಯೆಸ್‌ ಬ್ಯಾಂಕ್‌ ಹಗರಣದ ತನಿಖೆಗೆ ಕಪೂರ್‌ ಸಹಕರಿಸುತ್ತಿಲ್ಲಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

THE ECONOMIC TIMES 20 Mar 2020, 7:27 pm
ಹೊಸದಿಲ್ಲಿ: ಯೆಸ್‌ ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್‌ ಅವರನ್ನು ಶುಕ್ರವಾರ ಏಪ್ರಿಲ್‌ 2ರ ತನಕ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
Vijaya Karnataka Web Rana Kapoor


ಜಾರಿ ನಿರ್ದೇಶನಾಲಯವು ಕಪೂರ್‌ ಅವರನ್ನು ಮಾರ್ಚ 8ರಂದು ಕಸ್ಟಡಿಗೆ ತೆಗೆದುಕೊಂಡಿತ್ತು. ಯೆಸ್‌ ಬ್ಯಾಂಕ್‌ ಹಗರಣದ ತನಿಖೆಗೆ ಕಪೂರ್‌ ಸಹಕರಿಸುತ್ತಿಲ್ಲಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ರಿಲಯನ್ಸ್‌ ಗ್ರೂಪ್‌ ಅಧ್ಯಕ್ಷ ಅನಿಲ್‌ ಅಂಬಾನಿ ಅವರನ್ನು ಇ.ಡಿ ಗುರುವಾರ ಸುಮಾರು 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಮಾರ್ಚ್ 30ರಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಅನಿಲ್‌ ಅಂಬಾನಿ ಅವರಿಗೆ ಸೂಚಿಸಲಾಗಿದೆ.

ಯೆಸ್ ಬ್ಯಾಂಕ್ ಪುನಾರಂಭಕ್ಕೆ ಕ್ಷಣಗಣನೆ..! ನೆಮ್ಮದಿಯ ನಿಟ್ಟುಸಿರುಬಿಡ್ತಿದ್ದಾರೆ ಗ್ರಾಹಕರು..

ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಅಕ್ರಮ ಹಣ ವರ್ಗಾವಣೆ ಹಾಗೂ ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಲಾಗಿದೆ. ಈ ಹಿಂದೆ ಪ್ರಿಯಾಂಕಾ ಗಾಂಧಿ ಅವರಿಂದ ಪಡೆದಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪೇಂಟಿಂಗ್‌ನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಯೆಸ್‌ ಬ್ಯಾಂಕ್‌: ಅನಿಲ್‌ ಅಂಬಾನಿ ಬೆನ್ನಲ್ಲೇ ಉದ್ಯಮಿ ಸುಭಾಷ್‌ ಚಂದ್ರಗೆ ‘ಇಡಿ’ ಸಮನ್ಸ್‌

ಪ್ರಖ್ಯಾತ ಕಲಾವಿದ ಎಂಎಫ್ ಹುಸೇನ್ ರಚಿಸಿದ್ದ ರಾಜೀವ್ ಗಾಂಧಿ ಅವರ ಪೇಂಟಿಂಗ್‌ನ್ನು ರಾಣಾ ಕಪೂರ್ ಎರಡು ಕೋಟಿ ರೂ.ಗಳಿಗೆ ಪ್ರಿಯಾಂಕಾ ಗಾಂಧಿ ಅವರಿಂದ ಖರೀದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ