ಆ್ಯಪ್ನಗರ

ಮೋದಿ ಸಂದೇಶದ ಬೆನ್ನಲ್ಲೇ ಚುರುಕಾದ ರಾಜ್ಯಗಳು: 'ಲ್ಯಾಂಡ್ ಬ್ಯಾಂಕ್' ಸ್ಥಾಪಿಸಿದ ಯೋಗಿ ಸರ್ಕಾರ

ಹೊಸ ಕೈಗಾರಿಕೆಗಳಿಗೆ ಭೂಮಿ ಲಭ್ಯವಾಗುವಂತೆ ವಿಶೇಷ 'ಲ್ಯಾಂಡ್ ಬ್ಯಾಂಕ್' ಸ್ಥಾಪಿಸುವಂತೆ ​​ರಾಜ್ಯದ ಕೈಗಾರಿಕಾ ಅಭಿವೃದ್ಧಿ ಇಲಾಖೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂದೇಶ ರವಾನಿಸಿದ್ದಾರೆ.

Vijaya Karnataka Web 13 May 2020, 6:20 pm
ಲಕ್ನೋ: ಚೀನಾದಿಂದ ಕಾಲ್ಕಿಳುವ ಕಪನಿಗಳನ್ನು ಸ್ವಾಗತಿಸಲು ಸಜ್ಜಾಗಿ ಎಂಬ ಪ್ರಧಾನಿ ಮೋದಿ ಅವರ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.
Vijaya Karnataka Web YOGI ADITYANATH
ಸಂಗ್ರಹ ಚಿತ್ರ


ಪ್ರಧಾನಿ ಮೋದಿ ಸಂದೇಶಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯ ಸರ್ಕಾರ, ಈಗಾಗಲೇ ವಿಶೇಷ ಹೂಡಿಕೆ ಪ್ರಚಾರ ಕಾರ್ಯಪಡೆ ರಚಿಸಿ ವಿದೇಶಿ ಹೂಡಿಕೆಯನ್ನು ಆಕರ್ಷಿಲಸು ಸಜ್ಜಾಗಿ ಕುಳಿತಿದೆ.

ಅತ್ತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ವಿದೇಶಿ ಹೂಡಿಕೆದಾರರನ್ನು ತನ್ನ ರಾಜ್ಯಕ್ಕೆ ಸೆಳೆಯಲು ವಿಶೇಷ ಕಾರ್ಯತಂತ್ರ ಅನುಸರಿಸಲು ಮುಂದಾಗಿದೆ.

ಕೊರೊನಾ ವೈರಸ್ ಹಾವಳಿಯಿಂದ ಎದುರಾಗಿರುವ ಆರ್ಥಿಕ ಹಿಂಜರಿಕೆಯ ಸವಾಲನ್ನು ಸ್ವೀಕರಿಸುವಂತೆ ಅಧಿಕಾರಿಗಳಿಗೆ ತಿಳಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಆದೇಶಿಸಿದ್ದಾರೆ.

ಕೆಂಪು ಚೀನಾ ಬಿಟ್ಟ ಕಂಪನಿಗಳಿಗೆ ಕರ್ನಾಟಕದಲ್ಲಿ ಕೆಂಪು ಹಾಸಿನ ಸ್ವಾಗತ: ಹೀಗಿದೆ ಪ್ಲ್ಯಾನ್!

ಪ್ರಮುಖವಾಗಿ ಹೊಸ ಕೈಗಾರಿಕೆಗಳಿಗೆ ಭೂಮಿ ಲಭ್ಯವಾಗುವಂತೆ ವಿಶೇಷ 'ಲ್ಯಾಂಡ್ ಬ್ಯಾಂಕ್' ಸ್ಥಾಪಿಸುವಂತೆ ರಾಜ್ಯದ ಕೈಗಾರಿಕಾ ಅಭಿವೃದ್ಧಿ ಇಲಾಖೆಗೆ ಯೋಗಿ ಆದಿತ್ಯನಾಥ್ ಸಂದೇಶ ರವಾನಿಸಿದ್ದಾರೆ.


ಲ್ಯಾಂಡ್ ಬ್ಯಾಂಕ್ ಸ್ಥಾಪಿಸುವ ಮೂಲಕ ಹೊಸ ಕೈಗಾರಿಕೆಗಳಿಗೆ ಭೂಮಿಯ ಲಭ್ಯತೆ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಯೋಗಿ ಸರ್ಕಾರದ ಯೋಜನೆಯಾಗಿದೆ.

ಇದೇ ವೇಳೆ ಬೇರೆ ಬೇರೆ ರಾಜ್ಯಗಳಿಂದ ತವರಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ರಾಜ್ಯದಲ್ಲೇ ಉದ್ಯೋಗ ಸೃಷ್ಟಿಸುವಂತೆ ಯೋಜನೆ ರೂಪಿಸಲು ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಹೊಸ ಕೈಗಾರಿಕೆಗಳು ಸ್ಥಾಪನೆಯಾದಂತೆ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸಲು ಅನುಕೂಲವಾಗುವುದು ಎಂಬುದು ಉತ್ತರಪ್ರದೇಶ ಸರ್ಕಾರದ ನಿಲುವಾಗಿದೆ.

ಚೀನಾದಿಂದ ಕಂಪನಿಗಳು ಕಾಲ್ಕಿತ್ತುತ್ತಿವೆ ಸಿದ್ಧರಾಗಿ: ಸಿಎಂಗಳಿಗೆ ಪ್ರಧಾನಿ ಮೋದಿ ಸೂಚನೆ

ಒಟ್ಟಿನಲ್ಲಿ ದೇಶದ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರದೊಂದಿಗೆ ಎಲ್ಲಾ ರಾಜ್ಯ ಸರ್ಕಾರಗಳೂ ಕೈ ಜೋಡಿಸಿದ್ದು, ಎಲ್ಲ ರಾಜ್ಯಗಳೂ ತಮ್ಮ ತಮ್ಮ ಯೋಜನೆಯೊಂದಿಗೆ ಕಾರ್ಯೋನ್ಮುಖವಾಗಿರುವುದು ಉತ್ತಮ ಬೆಳವಣಿಗೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ