ಆ್ಯಪ್ನಗರ

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್ ದರದಲ್ಲಿ ಸ್ಥಿರತೆ; ನಿಮ್ಮ ನಗರದ ಬೆಲೆ ವಿವರ ತಿಳಿಯಿರಿ

Today Petrol Diesel Price: ಕಳೆದ ಕೆಲ ಸಮಯದಿಂದ ದೇಶದಲ್ಲಿ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಬಂದಿದೆ. ಈಗಾಗಲೇ ಪೆಟ್ರೋಲ್​ ಶತಕದ ಗಡಿ ದಾಟಿದ್ದು, ಡೀಸೆಲ್​ ಬೆಲೆ ಶತಕದ ಅಂಚಿನಲ್ಲಿದೆ. ದಿನನಿತ್ಯ ಬೆಲೆ ಏರಿಕೆಯ ನೋವು ಅನುಭವಿಸ್ತಿರೋ ಗ್ರಾಹಕರು ‘ಹಿಂಗಾದ್ರೆ ಜೀವ್ನ ಹೆಂಗೆ ಗುರೂ’ ಅಂತಾನೆ ಸರ್ಕಾರಕ್ಕೆ ಉಗಿಯುತ್ತಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ​​ಬೆಲೆ ಪರಿಷ್ಕರಣೆಗೊಂಡ ಬಳಿಕ ಇಂದು ಪೆಟ್ರೋಲ್​, ಡೀಸೆಲ್​ ದರದ ವಿವರ ಇಲ್ಲಿ ಕೊಡಲಾಗಿದೆ.

Vijaya Karnataka Web 13 Oct 2021, 12:02 pm
ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ದರ ಪ್ರತಿನಿತ್ಯ ಏರಿಕೆ ಆಗ್ತಿರೋದನ್ನು ಕಂಡು ಜನ ಸಾಮಾನ್ಯರು ನಿಗಿ ನಿಗಿ ಕೆಂಡವಾಗುತ್ತಿರುವಾಗಲೇ ದೇಶದಲ್ಲಿ ನವರಾತ್ರಿ ಸಮಯದಲ್ಲಿ ಇಂಧನ ದರ ಸ್ಥಿರತೆ ಕಂಡುಕೊಂಡಿದೆ. ಕಳೆದ ಅನೇಕ ತಿಂಗಳುಗಳಿಂದ ದಿನ ನಿತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಾಣುತ್ತಿದ್ದು, ಆದರೆ ಇಂದು ಮಾತ್ರ ಗ್ರಾಹಕರಿಗೆ ತುಸು ರಿಲೀಫ್‌ ಸಿಕ್ಕಿದ್ದು, ದೇಶದ ಪ್ರಮುಖ ನಗರಗಳಲ್ಲಿ ಹಳೆಯ ಬೆಲೆಯೇ ಸ್ಥಿರರೂಪದಲ್ಲಿದೆ. ಅಕ್ಟೋಬರ್‌ 13ನೆಯ ದಿನವಾದ ಇಂದು (ಬುಧವಾರ) ಬೆಂಗಳೂರು ಸೇರಿದಂತೆ ಅನೇಕ ಕಡೆ ಬೆಲೆ ಇಂದು ಏರಿಕೆಯಾಗಿಲ್ಲ.
Vijaya Karnataka Web Petrol, diesel prices remain unchanged on Wednesday


ಜನರ ಅತ್ಯವಶ್ಯಕ ವಸ್ತುವಾಗಿರುವ ಇಂಧನದ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್‌, ಡೀಸೆಲ್‌ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ. ಇನ್ನು ಈಗಾಗಲೇ ಪೆಟ್ರೋಲ್ ದರ ಶತಕದ ಗಡಿ ದಾಟಿದ್ದು, ಡೀಸೆಲ್ ಬೆಲೆ ಶತಕದ ಅಂಚಿನಲ್ಲಿದೆ. ಇದರ ಪರಿಣಾಮ ವಾಹನ ಸವಾರರು ಅಂತೂ ಅತ್ತ ಉಗಿಯಲೂ ಆಗದೆ ಇತ್ತ ನುಂಗಲೂ ಆಗದಂತಹ ಪರಿಸ್ಥಿತಿಯಲ್ಲಿದ್ದಾರೆ.
ನಿಮ್ಮ ಪ್ರೀತಿ ಪಾತ್ರರಿಗೆ ಚಿನ್ನ ಖರೀದಿಸುವ ಮುನ್ನ ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ ತಿಳಿಯಿರಿ
ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಪ್ರಮುಖ ಮಹಾ ನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.
ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: ₹108.08, ಡೀಸೆಲ್: ₹98.89

ಕಡಲನಗರಿ ಮಂಗಳೂರು
ಪೆಟ್ರೋಲ್: ₹107.58, ಡೀಸೆಲ್: ₹98.40

ಅರಮನೆ ನಗರಿ ಮೈಸೂರು
ಪೆಟ್ರೋಲ್: ₹107.67, ಡೀಸೆಲ್: ₹98.50

ರಾಷ್ಟ್ರ ರಾಜಧಾನಿ ಹೊಸದಿಲ್ಲಿ
ಪೆಟ್ರೋಲ್: ₹104.44, ಡೀಸೆಲ್: ₹93.17

ಪಶ್ಚಿಮ ಬಂಗಾಳದ ಕೋಲ್ಕೊತ್ತಾ
ಪೆಟ್ರೋಲ್ : ₹105.09, ಡೀಸೆಲ್ : ₹96.28

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್ : ₹110.41, ಡೀಸೆಲ್ : ₹101.03

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್ : ₹101.89, ಡೀಸೆಲ್ : ₹97.69

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ