ಆ್ಯಪ್ನಗರ

ಶೇ 72 ಮೀಸಲು ಹೇಗೆ ಲೆಕ್ಕ ಹಾಕುತ್ತಾರೆ: ಈಶ್ವರಪ್ಪ ಪ್ರಶ್ನೆ

ಸಿಎಂ ಸಿದ್ದ ರಾಮಯ್ಯ ಅವರು ದಲಿತ, ಹಿಂದುಳಿದವರಿಗೆ ಶೇ.72ರಷ್ಟು ಮೀಸಲನ್ನು ಯಾವ ಲೆಕ್ಕದಲ್ಲಿ ಇಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ವಿಕ ಸುದ್ದಿಲೋಕ 30 Mar 2017, 1:09 pm
ಮೈಸೂರು: ಸಿಎಂ ಸಿದ್ದ ರಾಮಯ್ಯ ಅವರು ದಲಿತ, ಹಿಂದುಳಿದವರಿಗೆ ಶೇ.72ರಷ್ಟು ಮೀಸಲನ್ನು ಯಾವ ಲೆಕ್ಕದಲ್ಲಿ ಇಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
Vijaya Karnataka Web cm how can calculate reservation
ಶೇ 72 ಮೀಸಲು ಹೇಗೆ ಲೆಕ್ಕ ಹಾಕುತ್ತಾರೆ: ಈಶ್ವರಪ್ಪ ಪ್ರಶ್ನೆ


ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಪ್ರಕಾರ ಶೇ.50ಕ್ಕಿಂತ ಹೆಚ್ಚು ಮೀಸಲು ನೀಡಲು ಬರುವುದಿಲ್ಲ. ಹಿಂದುಳಿದವರು ಮತ್ತು ದಲಿತರ ಮೂಗಿಗೆ ತುಪ್ಪ ಬಳಿಯುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಈ ಕೂಡಲೇ ಸಿಎಂ ಈ ಮೀಸಲನ್ನು ಯಾವಾಗ ಜಾರಿ ಮಾಡುತ್ತಾರೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಿ ಎಂದು ಆಗ್ರಹಿಸಿದರು.

2016-17ನೇ ಸಾಲಿನಲ್ಲಿ ಪರಿಶಿಷ್ಟರಿಗೆ ಮೀಸಲು ಇಟ್ಟ 19500 ಕೋಟಿ ರೂ.ಗಳಲ್ಲಿ ಖರ್ಚಾಗಿರರುವುದು 9500 ಕೋಟಿ ರೂ. ಮಾತ್ರ. ಈ ಬಾರಿಯ ಬಜೆಟ್‌ನಲ್ಲಿ 27702 ಕೋಟಿ ರೂ. ಮೀಸಲು ಇಡಲಾಗಿದೆ. ಈ ಹಿಂದಿನ ಬಾಕಿ ಇರುವ 10 ಸಾವಿರ ಕೋಟಿ ರೂ. ಸೇರಿದಂತೆ ಈ ಸಾಲಿನಲ್ಲಿ ಮೀಸಲು ಇಟ್ಟಿರುವ ಹಣವನ್ನು ಖರ್ಚು ಮಾಡಲು ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಅಲ್ಪಸಂಖ್ಯಾತರ ರಕ್ಷಣೆ ಸಂಬಂಧ ವಕ್ಫ್ ವರದಿ, ಜಾತಿ ಗಣತಿಯ ವರದಿಯನ್ನು ಸಿಎಂ ಯಾವಾಗ ಬಿಡುಗಡೆ ಮಾಡುತ್ತಾರೆ ಎಂದು ಹೇಳಿಕೆ ನೀಡಲಿ ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ