ಆ್ಯಪ್ನಗರ

ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮಂಡ್ಯಕ್ಕೆ ಅಂಬಿ ಮೊದಲ ಭೇಟಿ

ಸಚಿವ ಸ್ಥಾನ ಕಳೆದುಕೊಂಡ ಬಳಿಕ ಅಂಬರೀಶ್‌ ಅವರು ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿ ಕಾರ್ಯಕರ್ತರನ್ನು ಭೇಟಿ ಮಾಡಿದರು.

ವಿಕ ಸುದ್ದಿಲೋಕ 18 Nov 2016, 6:40 pm
ಮಂಡ್ಯ: ಸಚಿವ ಸ್ಥಾನ ಕಳೆದುಕೊಂಡ ಬಳಿಕ ಅಂಬರೀಶ್‌ ಅವರು ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿ ಕಾರ್ಯಕರ್ತರನ್ನು ಭೇಟಿ ಮಾಡಿದರು.
Vijaya Karnataka Web ambareesh visit mandya
ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮಂಡ್ಯಕ್ಕೆ ಅಂಬಿ ಮೊದಲ ಭೇಟಿ


ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಸಭೆಗೆ ಆಗಮಿಸಿದ ಅಂಬರೀಶ್‌ ಆಪ್ತ ಅಮರಾವತಿ ಚಂದ್ರಶೇಖರ್ ಮನೆಯ ಬಳಿ ನಡೆಯುತ್ತಿರುವ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.

'ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಬಂದಿದ್ದೇನೆ. ನನ್ನ ಮೇಲೆ ಆರೋಪ ಮಾಡುವವರಿಗೆಲ್ಲ ಉತ್ತರ ಕೊಡುವುದಿಲ್ಲ. ನಾನೇನು ಕೆಲಸ ಮಾಡಿದ್ದೀನಿ ಅಂತಾ ನನ್ನ ಆಫೀಸ್‌ಗೆ ಹೋದರೆ ಗೊತ್ತಾಗುತ್ತದೆ. ಸುಮ್ಮನೆ ರೋಡಲ್ಲಿ ನಿಂತುಕೊಂಡು ನನ್ನ ಬಗ್ಗೆ ಮಾತನಾಡುವುದಲ್ಲ, ಒಂದು ಪ್ರಶ್ನೆಗೆ ಉತ್ತರ ಕೊಟ್ಟರೆ ಮತ್ತೊಂದು ಪ್ರಶ್ನೆ ಕೇಳುತ್ತಾರೆ. ಅವರಿಗೆಲ್ಲ ಉತ್ತರ ನೀಡುವುದಕ್ಕೆ ಆಗುವುದಿಲ್ಲ,' ಎಂದರು.

ನೋಟು ನಿಷೇಧಕ್ಕೆ ಮೆಚ್ಚುಗೆ
ಕೇಂದ್ರದ ನೋಟು ನಿಷೇಧ ಕ್ರಮಕ್ಕೆ ಅಂಬಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನೋಟು ರದ್ದು ಮಾಡುವ ವಿಷಯ ಬಗ್ಗೆ ಬಿಜೆಪಿ ಪಕ್ಷದ ಮುಖಂಡರಿಗೆ ಗೊತ್ತಿತ್ತು ಎನ್ನುವ ಆರೋಪದಲ್ಲಿ ಹುರುಳಿಲ್ಲ. ನೋಟು ರದ್ದಿನಿಂದ ನನಗೇನು ಸಮಸ್ಯೆ ಆಗ್ತಿಲ್ಲ. ಜನ ಸಾಮಾನ್ಯರಿಗೆ ಸಮಸ್ಯೆ ಆಗಿದೆ. ನೋಟು ಬದಲಾವಣೆ ಮಾಡುವ ಮುನ್ನಾ ಸಾಕಷ್ಟು ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದರು.

'ರಮ್ಯಾ ಕೇಳಿದ್ರೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡಲು ಸಿದ್ದ.ಚಿಕ್ಕವರು ಬೆಳೆಯಲಿ ಎಂಬುದೆ ನನ್ನ ಆಸೆ. ನಾನು ಬೆಳಗಾವಿ ಅಧಿವೇಶದಲ್ಲಿ ಭಾಗವಹಿಸುವುದಿಲ್ಲ ಅಲ್ಲಿ ಇಲ್ಲದ ಚರ್ಚೆಗಳೇ ನಡೆಯುತ್ತವೆ. ಮಂಡ್ಯದ ಸಮಸ್ಯೆಗಳ ವಿಚಾರವಾಗಿ ಈಗಾಗಲೇ ಪತ್ರದ‌ ಮೂಲಕ ತಿಳಿಸಿದ್ದೇನೆ. ಜೆಡಿಎಸ್ ಸೇರುವ ವಿಚಾರದಲ್ಲಿ ನಾನು ಹೇಳುವುದಿಲ್ಲ.ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ.ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ,' ಎಂದು ಹೇಳಿದರು.

'ಎಲ್ಲ ಟೈಮಲ್ಲೂ ಕೆಲಸ ಮಾಡಿದ್ದೇನೆ. ನನಗೆ ಸಚಿವ ಸ್ಥಾನ ಬೇಕು ಅಂತೇನಿಲ್ಲ. ಇಲ್ಲಿ ಯಾರೇ ಸಚಿವರಾಗಿ ಬಂದರೂ ನನ್ನ ಸಲಹೆ ಪಡೆಯುತ್ತಾರೆ. ಇನ್ಮುಂದೆ ಮಂಡ್ಯದಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳಲ್ಲಿ ನಾನಿರುತ್ತೆನೆ. ಬಾಕಿ ಇರುವ ಕಾಮಗಾರಿ ಕಾರ್ಯಗಳನ್ನ ಶೀಘ್ರದಲ್ಲೆ ಮುಗಿಸುತ್ತೇನೆ. ಹಣ, ಅಧಿಕಾರ ಮುಖ್ಯವಲ್ಲ, ಜನರ ಪ್ರೀತಿ ಮುಖ್ಯ. ನನ್ನದಲ್ಲದ ಕ್ಷೇತ್ರಗಳಿಗೆ ಅನುದಾನ ಕೊಟ್ಟಿದ್ದೇನೆ. ಕೆಆರ್‌ಎಸ್‌ ಪಕ್ಕದಲ್ಲಿ ಇದ್ದರೂ ಕುಡಿಯುವ ನೀರಿನ ಅಭಾವ ಇತ್ತು. ನೀರಾವರಿ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಕೊಟ್ಟಿದ್ದೇನೆ. ಕರ್ನಾಟಕಕ್ಕೆ 5 ಮೆಡಿಕಲ್ ಕಾಲೇಜು ಕೊಟ್ಟಿದ್ದೇನೆ,' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ