Please enable javascript.ಗ್ರಾಮೀಣ ಕಲೆ ಜನಪದ ಜೀವಾಳ - ಗ್ರಾಮೀಣ ಕಲೆ ಜನಪದ ಜೀವಾಳ - Vijay Karnataka

ಗ್ರಾಮೀಣ ಕಲೆ ಜನಪದ ಜೀವಾಳ

ವಿಕ ಸುದ್ದಿಲೋಕ 28 Feb 2016, 5:58 am
Subscribe

ಗ್ರಾಮೀಣ ಕಲೆಗಳೇ ಜನಪದದ ಜೀವಾಳ ಎಂದು ಶಾಸಕ ಸಿ.ಎನ್.ಬಾಲಕಷ್ಣ ಹೇಳಿದರು.

ಗ್ರಾಮೀಣ ಕಲೆ ಜನಪದ ಜೀವಾಳ
ಚನ್ನರಾಯಪಟ್ಟಣ: ಗ್ರಾಮೀಣ ಕಲೆಗಳೇ ಜನಪದದ ಜೀವಾಳ ಎಂದು ಶಾಸಕ ಸಿ.ಎನ್.ಬಾಲಕಷ್ಣ ಹೇಳಿದರು.
ಸ್ನೇಹಬಳಗ, ಭೂಮಿ ಉಳಿಸಿ ಆಂದೋಲನ ಸಮಿತಿ ಹಾಗೂ ಪುರಸಭೆ ವತಿಯಿಂದ 83ನೇ ಚಂದ್ರಮೌಳೇಶ್ವರ ಸ್ವಾಮಿಯ ದನಗಳ ಜಾತ್ರೆ ಅಂಗವಾಗಿ ನಡೆದ ನಮ್ಮೂರ ಹಬ್ಬದಲ್ಲಿ ಜನಪದ ಜಾತ್ರೆ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘‘ನಾಡಿನ ಸಂಸ್ಕೃತಿ, ಕಲೆಗಳನ್ನು ಮರೆತರೆ ನಮ್ಮನ್ನು ನಾವೇ ಮರೆತಂತೆ. ನಮ್ಮ ಜೀವನಶೈಲಿಯನ್ನು ಉತ್ತಮ ರೀತಿಯಲ್ಲಿ ಕಂಡುಕೊಳ್ಳ ಬಹುದಾಗಿದ್ದರೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದ್ದರೆ ಕಲೆಗಳನ್ನು ಆಸ್ವಾದಿಸುವ ಮನೋಭಾವ ಹೊಂದಿರ ಬೇಕು. ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳ ಜನರಲ್ಲಿ ಶ್ರಮದ ಬದುಕು ದೂರವಾಗುತ್ತಿರುವ ಪರಿಣಾಮ ಹೆಚ್ಚು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಜಾನುವಾರುಗಳ ಸಾಕಣೆಗೆ ಸರಕಾರವೂ ಹೆಚ್ಚು ಪ್ರೋತ್ಸಾಹ ನೀಡಬೇಕು. ಮಾಧ್ಯಮಿಕ ಶಾಲಾ ಆವರಣದಲ್ಲಿ 20 ದಿನದೊಳಗೆ ಬಯಲು ರಂಗಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಎಪಿಎಂಸಿ ಆವರಣದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವದ್ಧಿ ಕಾಮಗಾರಿಗಳು ಚಾಲನೆಯಲ್ಲಿವೆ’’ ಎಂದರು.
ಆಕರ್ಷಕ ನತ್ಯಗಳು: ಜನಪದಜಾತ್ರೆಯ ಅಂಗವಾಗಿ ಶ್ರವಣೇರಿ ನಿಂಗಪ್ಪ ತಂಡದವರಿಂದ ನಡೆದ ರಂಗಕುಣಿತದಲ್ಲಿ ಶಾಸಕ ಸಿ.ಎನ್.ಬಾಲಿಕಷ್ಣ ಕೂಡ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಪ್ರತಿಮಾಟ್ರಸ್ಟ್‌ನ ಕಲಾವಿದರಿಂದ ಹಾಗೂ ಜ್ಞಾನದರ್ಶನಶಾಲೆ ಮತ್ತು ಜ್ಞಾನಸಾಗರ ಶಾಲೆಯ ಮಕ್ಕಳಿಂದ ಕಂಸಾಳೆ ನತ್ಯಪ್ರದರ್ಶನ ಆಕರ್ಷಕವಾಗಿತ್ತು. ಕುಂದೂರುಮಠ ಸರಕಾರಿ ಶಾಲೆಯ ಮಕ್ಕಳು ವೀರಭದ್ರನಕುಣಿತ ಪ್ರದರ್ಶಿಸಿದರು. ನಾಗರನವಿಲೆಯ ಮಲ್ಲೇಶ್ ತಂಡದಿಂದ ಜನಪದ ಗಾಯನ ಹಾಗೂ ರೇಣುಕಾ ಭಜನಾಮಂಡಳಿಯಿಂದ ಕೋಲಾಟದ ಜತೆಗೆ ವಿವಿಧ ಶಾಲೆಗಳ ಮಕ್ಕಳೂ ಹಲವು ನತ್ಯ ಪ್ರದರ್ಶನ ಮಾಡಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ