Please enable javascript.ಮಹಿಳೆ ವಿಶ್ರಮಿಸದೆ ಗುರಿಮುಟ್ಟಬೇಕು - ಮಹಿಳೆ ವಿಶ್ರಮಿಸದೆ ಗುರಿಮುಟ್ಟಬೇಕು - Vijay Karnataka

ಮಹಿಳೆ ವಿಶ್ರಮಿಸದೆ ಗುರಿಮುಟ್ಟಬೇಕು

ವಿಕ ಸುದ್ದಿಲೋಕ 11 Mar 2017, 9:00 am
Subscribe

ಮಹಿಳೆಯರು ಸಬಲರಾಗುವುದರೊಂದಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ವಿಶ್ರಮಿಸದೆ ತಮ್ಮ ಮುಂದಿರುವ ಗುರಿಯನ್ನು ತಲುಪಲು ತೊಡಗಿಸಿಕೊಂಡಲ್ಲಿ ಪ್ರಗತಿ ಸಾಧ್ಯ ಎಂದು ಡಾ.ಸುಲೋಚನ ನಾರಾಯಣ್‌ ಹೇಳಿದರು.

ಮಹಿಳೆ ವಿಶ್ರಮಿಸದೆ ಗುರಿಮುಟ್ಟಬೇಕು

ವಿರಾಜಪೇಟೆ: ಮಹಿಳೆಯರು ಸಬಲರಾಗುವುದರೊಂದಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ವಿಶ್ರಮಿಸದೆ ತಮ್ಮ ಮುಂದಿರುವ ಗುರಿಯನ್ನು ತಲುಪಲು ತೊಡಗಿಸಿಕೊಂಡಲ್ಲಿ ಪ್ರಗತಿ ಸಾಧ್ಯ ಎಂದು ಡಾ.ಸುಲೋಚನ ನಾರಾಯಣ್‌ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

''ಯಾವುದೇ ಕಷ್ಟಗಳು ಬಂದರೂ ಅವುಗಳನ್ನು ಹಿಮ್ಮೆಟ್ಟುತ್ತಾ ಮುಂದೆ ಸಾಗಿದಲ್ಲಿ ಜೀವನ ಸಾರ್ಥಕತೆ ಸಾಧ್ಯ. ಆದರಿಂದ ಮಹಿಳೆಯರು ಇಂದು ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಬದುಕು ನಡೆಸಲು ಅನೇಕ ಸೌಲತ್ತುಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ಆ ಮೂಲಕ ಮಹಿಳೆಯರು ಉತ್ತಮ ಬದಕನ್ನು ರೂಪಿಸಿ ಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಬರಬೇಕು'' ಎಂದು ಹೇಳಿದರು.

''ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮ ಹೆಸರು ಗಳಿಸುತ್ತಿದ್ದಾರೆ. ನಮ್ಮಲ್ಲಿನ ಹೆಣ್ಣು ಮಕ್ಕಳಿಗೆ ದೇಶದಲ್ಲಿ ಉತ್ತಮ ಸಾಧನೆಗಳನ್ನು ಮಾಡಿರುವ ಮಹಿಳೆಯರು ಮಾದರಿಯಾಗಿರಲಿ. ವಿದ್ಯಾಭ್ಯಾಸದಲ್ಲಿ ತೊಡಗಿರುವ ಹೆಣ್ಣು ಮಕ್ಕಳು ಮುಂದಿನ ಉತ್ತಮ ಭವಿಷ್ಯದ ಗುರಿ ಹೊಂದಿಮುನ್ನಡೆಯುವಂತೆ'' ತಿಳಿ ಹೇಳಿದರು.

ಉಪನ್ಯಾಸಕಿ ಪ್ರೊ. ಉಷಾಲತಾ ಅಧ್ಯಕ್ಷ ತೆ ವಹಿಸಿ ಮಾತನಾಡಿ, ''ಮಹಿಳೆಯರಿಗೆ ಏನೇ ತೊಂದರೆಗಳಾದಗ ಮಹಿಳೆಯರು ನೈತಿಕ ಬೆಂಬಲ ನೀಡಬೇಕು. ಪೋಷಕರು ಹೆಣ್ಣು ಮಕ್ಕಳಿಗೆ ಶಿಕ್ಷ ಣ ನೀಡಬೇಕು. ಅವರಿಗೆ ಉತ್ತಮ ಶಿಕ್ಷ ಣ ನೀಡುವ ಮೂಲಕ ತಮ್ಮದæೕ ಆದ ಬದುಕನ್ನು ಕಟ್ಟಿಕೊಳ್ಳುವಂತಾಗಬೇಕು. ಸಿಗುತ್ತಿರುವ ಸೌಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ'' ಸಲಹೆ ನೀಡಿದರು.

ಡಾ.ಸುಲೋಚನ ಮತ್ತು ಕಾಲೇಜಿನ ಗ್ರಂಥಪಾಲಕಿ ಡಾ.ಮುತ್ತಮ್ಮ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಹಿಳಾ ಘಟಕದ ಸಂಚಾಲಕಿ ಕೆ.ಟಿ. ಸೀತಮ್ಮ ಮತ್ತು ಸದಸ್ಯರಾದ ಎಂ. ಪಿ ಕಾವೇರಿ ಹಾಗೂ ಎ. ಆರ್‌ ಕಾವೇರಿ ಉಪಸ್ಥಿತರಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ