ನಾಪೋಕ್ಲು: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರುಸ್ಗೆ ಶುಕ್ರವಾರ ಮಧ್ಯಾಹ್ನ ಚಾಲನೆ ನೀಡಲಾಯಿತು.
ಮಸೀದಿಯಲ್ಲಿ ನಮಾಜಿನ ನಂತರ ಸೂಫಿ ಶಯ್ಯದ್ ದರ್ಗಾ ಶರೀಫ್ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಹಳ್ರಮಿ ತಂಙಳ್ ದರ್ಗಾದಲ್ಲೂ ಪ್ರಾರ್ಥನೆ ಸಲ್ಲಿಸಿ ಧ್ವಜರೋಹಣದೊಂದಿಗೆ ಬಹು: ಬಲಿಯತ್ಕಾರಂಡ ಉಸ್ಮಾನ್ ಹಾಜಿ ಉರುಸ್ಗೆ ಚಾಲನೆ ನೀಡಿದರು.
ಹುಸೈನ್ ಸಖಾಫಿ, ಬಹು: ಝಿಯಾಉಲ್ ಮುಸ್ತಫ, ಸಯ್ಯಿದ್ ಹಾಮಿದ್ ಕೋಯಮ್ಮ ತಂಙಳ್ ಮಾಟೂರ್, ಮಹಮ್ಮದ್ ಸಯ್ಯಿದ್ ಸಾಲಿಂ ಸಖಾಫಿ ಅಲ್ ಬಿಖಾರಿ, ಹಾಫಿಳ್ ಇಸ್ಮಾಯಿಲ್ ಲತ್ತೀಫಿ, ಸಯ್ಯದ್ ಕೊಯ್ಯಮ್ಮ ತಂಙಳ್, ಸಯ್ಯದ್ ಪಕೋಯ ತಂಙಳ್, ಕಾಳೇರ ಅಬ್ದುಲ್ ಕಾದರ್ ಹಾಜಿ, ಬಿ.ಎಂ.ಆಲಿ ಹಾಜಿ, ಉಮ್ಮರ್ ಮುಸ್ಲಿಯಾರ್, ಚೆಂಬಾರಂಡ ಸಾದಲಿ ಹಾಜಿ, ಮೂಸ ಹಾಜಿ, ಚಕ್ಕೇರ ಮೂಸ, ಹಂಸ ಮುಸ್ಲಿಯಾರ್, ಚೆಂಬಾರಂಡ ಹಸೈನಾರ್ ಹಾಜಿ, ವಕ್ಸ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರಹೀಮಾನ್, ಮತ್ತಿತರ ಗಣ್ಯರು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು, ನಾಗರೀಕರು ಇದ್ದರು. ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.