Please enable javascript.ಏ.17 ರಂದು ಸಾಹಿತ್ಯ ಸಂಚಾರ - sahitya sanchara - Vijay Karnataka

ಏ.17 ರಂದು ಸಾಹಿತ್ಯ ಸಂಚಾರ

ವಿಕ ಸುದ್ದಿಲೋಕ 16 Apr 2016, 9:00 am
Subscribe

ಕುಷ್ಟಗಿ ಪಟ್ಟದ ಮಾತೋಶ್ರೀ ಹೊಳೆಯಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಮಾಸಿಕ ಸಾಹಿತ್ಯ ಸಂಚಾರ ಕಾರ್ಯಕ್ರಮದಡಿ, ನಿಂಗಪ್ಪ ಸಜ್ಜನರ ಶೋಧನೆ ಮತ್ತು ಆರಾಧನೆ ಪುಸ್ತಕದ ಪರಿಚಯ ಹಾಗೂ ವಿಮರ್ಶೆ ಕಾರ್ಯಕ್ರಮ ಏ.17 ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ.

sahitya sanchara
ಏ.17 ರಂದು ಸಾಹಿತ್ಯ ಸಂಚಾರ

ಕೊಪ್ಪಳ; ಕುಷ್ಟಗಿ ಪಟ್ಟದ ಮಾತೋಶ್ರೀ ಹೊಳೆಯಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಮಾಸಿಕ ಸಾಹಿತ್ಯ ಸಂಚಾರ ಕಾರ್ಯಕ್ರಮದಡಿ, ನಿಂಗಪ್ಪ ಸಜ್ಜನರ ಶೋಧನೆ ಮತ್ತು ಆರಾಧನೆ ಪುಸ್ತಕದ ಪರಿಚಯ ಹಾಗೂ ವಿಮರ್ಶೆ ಕಾರ್ಯಕ್ರಮ ಏ.17 ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ತಾಲೂಕು ಅಧ್ಯಕ್ಷ ಚಂದಪ್ಪ ಹಕ್ಕಿ ಅವರು ಶೋಧನೆ ಮತ್ತು ಆರಾಧನೆ ಪುಸ್ತಕ ಪರಿಚಯ ಮಾಡಲಿದ್ದಾರೆ. ಕುಷ್ಟಗಿಯ ಲೆಂಕೆಪ್ಪ ಬಿ. ವಾಲಿಕಾರ ಅವರ ಮನದ ಮಾತು ಕವನ ಸಂಕಲನ ಬಿಡುಗಡೆಯಾಗಲಿದೆ. ಸಂಗೊಳ್ಳಿ ರಾಯಣ್ಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಚೌಡಕಿ ಅವರು ಪುಸ್ತಕ ಬಿಡುಗಡೆಗೊಳಿಸುವರು. ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್‌.ಎಸ್‌. ಪಾಟೀಲ್‌, ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಉಪಾಧ್ಯಕ್ಷ ಬಸವರಾಜ ಆಕಳವಾಡಿ, ಸಂಘದ ನಿರ್ದೇಶಕರಾದ ಡಾ. ಹನುಮಾಕ್ಷಿ ಗೋಗಿ, ಡಾ. ಶರಣಬಸಪ್ಪ ಕೋಲ್ಕಾರ, ಡಾ. ಕೆ. ಬಿ. ಬ್ಯಾಳಿ, ಮುನಿಯಪ್ಪ ಹುಬ್ಬಳ್ಳಿ, ತಾಲೂಕು ಕಸಾಪ ಅಧ್ಯಕ್ಷ ನಟರಾಜ ಸೋನಾರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಶಿವರಾಜ ಶಾಸ್ತ್ರಿ ತಾವರಗೇರಿ, ವರ್ತಕರ ಸಂಘದ ಅಧ್ಯಕ್ಷ ಮೆಹಬೂಬಸಾಬ್‌ ನದಾಫ್‌ ಭಾಗವಹಿಸಲಿದ್ದಾರೆ.

ಸಾಹಿತ್ಯ ಸಂಚಾರ ಕಾರ್ಯಕ್ರಮದ ನಂತರ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಮಾಸಿಕ ಕಾರ್ಯಕಾರಿ ಮಂಡಳಿ ಸಭೆ ಜರುಗಲಿದೆ. ಕಾರ್ಯದರ್ಶಿ ವೈ.ಬಿ.ಜೂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ