Please enable javascript.3500ರೂ.ದರ ನಿಗದಿಗೆ ಒತ್ತಾಯ - 3500ರೂ.ದರ ನಿಗದಿಗೆ ಒತ್ತಾಯ - Vijay Karnataka

3500ರೂ.ದರ ನಿಗದಿಗೆ ಒತ್ತಾಯ

ವಿಕ ಸುದ್ದಿಲೋಕ 24 Aug 2014, 5:12 am
Subscribe

ಪ್ರತಿ ಟನ್ ಕಬ್ಬಿಗೆ ಕನಿಷ್ಠ 2500ರೂ. ಮುಂಗಡ ನೀಡುವುದು ಹಾಗೂ 3000ರಿಂದ 3500ರೂ. ಅಂತಿಮ ದರ ನಿಗದಿ ಪಡಿಸಬೇಕೆಂಬ ರೈತರ ಬೇಡಿಕೆಯು ನಗರದಲ್ಲಿ ಶನಿವಾರ ನಡೆದ ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್) 2011-12ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿತು

3500
3500ರೂ.ದರ ನಿಗದಿಗೆ ಒತ್ತಾಯ
ಮಂಡ್ಯ: ಪ್ರತಿ ಟನ್ ಕಬ್ಬಿಗೆ ಕನಿಷ್ಠ 2500ರೂ. ಮುಂಗಡ ನೀಡುವುದು ಹಾಗೂ 3000ರಿಂದ 3500ರೂ. ಅಂತಿಮ ದರ ನಿಗದಿ ಪಡಿಸಬೇಕೆಂಬ ರೈತರ ಬೇಡಿಕೆಯು ನಗರದಲ್ಲಿ ಶನಿವಾರ ನಡೆದ ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್) 2011-12ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿತು.

ಕಾರ್ಖಾನೆಯ ಆವರಣದಲ್ಲಿ ಮೈಷುಗರ್ ಅಧ್ಯಕ್ಷರೂ ಆದ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹ ದೇವ ಪ್ರಸಾದ್ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆ ರೈತರು ಕಬ್ಬು ಬೆಲೆ ನಿಗದಿಪಡಿಸುವಂತೆ ಒಕ್ಕೊರಲಿನಿಂದ ಒತ್ತಾಯಿ ಸಿದರು. ಕೃಷಿ ಖರ್ಚು, ರಸಗೊಬ್ಬರ, ಕೀಟ ನಾಶಕಗಳ ಬೆಲೆ ದುಬಾರಿಯಾಗುತ್ತಿದೆ. ಹೀಗಿ ರುವಾಗ ಕಬ್ಬಿನ ದರವನ್ನೂ ವೈಜ್ಞಾನಿಕವಾಗಿ ನಿಗದಿಪಡಿಸಬೇಕೆಂದು ಆಗ್ರಹಿಸಿದರು.

ಕಳೆದ ವರ್ಷ 2500 ರೂ. ಕಬ್ಬಿನ ದರದ ಜತೆಗೆ 150ರೂ.ಗಳನ್ನು ಪ್ರೋತ್ಸಾಹ ಧನವಾಗಿ ಸರಕಾರ ನೀಡಿದೆ. ಅದೇ ದರವನ್ನು ಈ ವರ್ಷ ಮುಂಗಡವಾಗಿ ನಿಗದಿಪಡಿಸಿ, ಅಂತಿಮ ದರವನ್ನು ಉಪ ಉತ್ಪನ್ನಗಳ ಆಧಾರದ ಮೇಲೆ ಮೂರು ಸಾವಿರ ರೂ.ಗೆ ಕಡಿಮೆ ಇಲ್ಲದಂತೆ ನೀಡಬೇಕು. ನಿಯಮದಂತೆ ಕಬ್ಬು ಪೂರೈಸಿದ 15 ದಿನಗಳೊಂದಿಗೆ ಪೂರ್ಣ ಹಣ ಪಾವತಿಗೆ ಕ್ರಮ ವಹಿಸಬೇಕೆಂದು ಹಕ್ಕೊತ್ತಾಯ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಹದೇವ ಪ್ರಸಾದ್, 2013ರವರೆಗೆ ಕಬ್ಬು ಬೆಲೆ ನಿಗದಿಗೆ ಯಾವುದೇ ಕಾಯಿದೆ, ನೀತಿ- ನಿರೂಪಣೆಗಳಿ ರಲಿಲ್ಲ. ಆದರೆ, ಹಿಂದಿನ ಸರಕಾರದಲ್ಲಿ ಕಾಯಿದೆ ನಿಗದಿಯಾಗಿದ್ದು, ಅದರ ಪ್ರಕಾರ ಸಮಿತಿಯೊಂದನ್ನು ರಚಿಸಲಾಗಿದೆ. ಸಾಮಾನ್ಯ ವಾಗಿ ಮೈಷುಗರ್‌ನಲ್ಲಿ ನಿಗದಿಯಾಗುತ್ತಿದ್ದ ದರವನ್ನು ಆಧರಿಸಿ ಇತರ ಕಾರ್ಖಾನೆಗಳು ಕಬ್ಬಿಗೆ ಬೆಲೆ ನೀಡುತ್ತಿದ್ದವು. ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರಕಾರ ನಿಗದಿಪಡಿಸಿರುವ ಎಫ್‌ಆರ್‌ಪಿ(ಫಿಕ್ಸಿಂಗ್ ರಿಲವೇಷನ್ ಪ್ರೈಸ್).

ದರದಂತೆ ಪ್ರತಿ ಟನ್ ಕಬ್ಬಿಗೆ 2200ರೂ. ಮುಂಗಡ ದರ ನಿಗದಿಪಡಿಸಲಾಗಿದೆ. 2500 ರೂ.ಗಿಂತ ಕಡಿಮೆ ಇಲ್ಲದಂತೆ ದರ ನಿಗದಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮದು ಎಂದು ಭರವಸೆ ನೀಡಿದರು.

14 ಅಂಶಗಳ ಪಟ್ಟಿಯೊಂದಿಗೆ ಅಧ್ಯಕ್ಷೀಯ ಭಾಷಣದ ಪ್ರತಿಗಳನ್ನು ರೈತರಿಗೆ ವಿತರಿಸಿದ ಸಚಿವ ಮಹದೇವ ಪ್ರಸಾದ್, ರೈತರ ಹತ್ತು ಹಲವು ಪ್ರಶ್ನೆಗಳಿಗೆ ಅಧ್ಯಕ್ಷೀಯ ಭಾಷಣದಲ್ಲೇ ಉತ್ತರ ನೀಡಿದರು. ಇದರ ಹೊರತಾದ ಪ್ರಶ್ನೆಗಳಿಗೆ ರೈತರೊಂದಿಗಿನ ಸಂವಾದದ ವೇಳೆ ಉತ್ತರಿಸಿ, ರೈತರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

ಕಾರ್ಖಾನೆಯ ‘ಎ’ಮಿಲ್, ಸಹ ವಿದ್ಯುತ್ ಘಟಕ ಹಾಗೂ ಡಿಸ್ಟಲರಿ ಆರಂಭದಿಂದ ಹೆಚ್ಚಿನ ಆದಾಯ ಸಿಗುವ ಸಾಧ್ಯತೆಯಿದೆ. ಅದನ್ನಾಧರಿಸಿ ಪ್ರತಿ ಟನ್ ಕಬ್ಬಿಗೆ ಎಷ್ಟು ದರ ನಿಗದಿಪಡಿಸಬೇಕೆಂಬ ಬಗ್ಗೆ ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ರೈತರು ಸರಬರಾಜು ಮಾಡುವ ಕಬ್ಬಿಗೆ ಸಕಾಲದಲ್ಲಿ ಮುಂಗಡ ಪಾವತಿಸಲು ಅನುಕೂಲವಾಗುವಂತೆ 10 ಕೋಟಿ ರೂ.ಗಳನ್ನು ಸರಕಾರ ಮುಂಗಡವಾಗಿ ಮಂಜೂರು ಮಾಡಿದೆ. ಈ ಹಣಕ್ಕೆ ಕಾರ್ಖಾನೆ ಯಾವುದೇ ಬಡ್ಡಿ ಪಾವತಿಸ ಬೇಕಿಲ್ಲ. ಬದಲಿಗೆ ನಾವು ಉತ್ಪಾದಿಸುವ ಸಕ್ಕರೆಯನ್ನು ಸರಬರಾಜು ಮಾಡುವ ಒಪ್ಪಂದವಾಗಿದೆ ಎಂದು ತಿಳಿಸಿದರು.

ನವೆಂಬರ್‌ನಲ್ಲಿ ‘ಎ’ಮಿಲ್ ಮತ್ತು ಕೋಜನ್ ಕಾರ‌್ಯಾರಂಭ:
ನವೆಂಬರ್ 1ರ ವೇಳೆಗೆ ‘ಎ’ ಮಿಲ್ ದುರಸ್ತಿ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಗುತ್ತಿಗೆದಾರ ಸಂಸ್ಥೆಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಕಾಮಗಾರಿ ಮುಗಿಯುವ ಭರವಸೆ ಯಿದ್ದು, ನವೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ‘ಎ’ ಮಿಲ್ ಮೂಲಕ ಕಬ್ಬು ಅರೆಯವಿಕೆ ಆರಂಭಿಸಲಾಗುವುದು. ಇದೇ ವೇಳೆ ಸಹ ವಿದ್ಯುತ್ ಘಟಕವನ್ನು(ಕೋಜನ್) ಕಾರ‌್ಯಾರಂಭ ಮಾಡಲಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

‘ಎ’ ಮಿಲ್‌ನೊಂದಿಗೆ ಪ್ರಸಕ್ತ ಹಂಗಾಮಿನಲ್ಲಿ 8 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಇದ ರಿಂದ ಒಪ್ಪಿಯಾಗದಿರುವ ಶ್ರೀರಂಗ ಪಟ್ಟಣ ಮತ್ತು ಇತರ ಭಾಗದ ರೈತರು ಬೆಳೆದಿರುವ ಸುಮಾರು 2 ಲಕ್ಷ ಟನ್ ಕಬ್ಬುನ್ನು ಹೆಚ್ಚುವರಿಯಾಗಿ ಅರೆಯಲು ಸಾಧ್ಯವಾಗುತ್ತದೆ. ಸಾಮನ್ಯವಾಗಿ ಎಕರೆಗೆ 40-50 ಟನ್ ಕಬ್ಬಿನಂತೆ ರೈತರಿಂದ ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಅದಕ್ಕಿಂತಲೂ ಅಧಿಕ ಇಳುವರಿಯೊಂದಿಗೆ ಉತ್ಪಾದನೆಯಗುವ ಹೆಚ್ಚುವರಿ ಕಬ್ಬನ್ನು ಯಾವುದೇ ಆಕ್ಷೇಪವಿಲ್ಲದೆ ಅರೆಯಲು ಕ್ರಮ ವಹಿಸಲಾಗುವುದು ಎಂದು ರೈತರನ್ನು ಸಮಾಧಾನಪಡಿಸಿದರು.

ಇತಿಹಾಸ ಮರುಕಳಿಸಲಿದೆ: ಮೈಷು ಗರ್‌ನ ಇತಿಹಾಸ ಮರುಕಳಿಸುವಂತೆ ಮಾಡುವುದು ತಮ್ಮ ಉದ್ದೇಶ. ಈ ಪ್ರಯತ್ನಕ್ಕೆ ಚಾಲನೆ ನೀಡಲಾಗಿದ್ದು, ಹಂತಹಂತವಾಗಿ ಹೊಸ ಯೋಜನೆಗ ಳನ್ನು ಅನುಷ್ಠಾನಗೊಳಿಸಲಾಗುವುದು. ಸಾಲಮುಕ್ತ ಹಾಗೂ ರೋಗಗ್ರಸ್ತ ಕಾರ್ಖಾನೆಯೆಂಬ ಹಣೆಪಟ್ಟಿಯನ್ನು ಕಿತ್ತೊಗೆಯಲಾಗುವುದು. ಇದಕ್ಕೆ ರೈತರು, ಕಾರ್ಮಿಕರು ಸಹಕರಿಸಬೇಕೆಂದು ಕೋರಿದರು. ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಆರ್.ಮಹಾ ದೇವ್, ನಿರ್ದೇಶಕರಾದ ತುಷಾರ್ ಗಿರಿನಾಥ್, ಎಸ್.ಎಸ್.ಪಟ್ಟಣಶೆಟ್ಟಿ, ಸಿಎಒ ಪ್ರಕಾಶ್, ಕಬ್ಬು ಅಭಿವೃದ್ಧಿ ಅಧಿಕಾರಿ ಚಿಕ್ಕಲಿಂಗಯ್ಯ ಹಾಜರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ