ರಾಯಚೂರು; ಮರ್ಚಟ್ಹಾಳ ಗ್ರಾಮ ಪಂಚಾಯಿತಿಯಲ್ಲಿ ಬಾಪೂಜಿ ಸೇವಾ ಕೇಂದ್ರ ಶೀಘ್ರ ಪ್ರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ ್ಯತನದಿಂದಾಗಿ ಬಾಪೂಜಿ ಸೇವಾ ಕೇಂದ್ರ ಪ್ರಾರಂಭವಾಗುತ್ತಿಲ್ಲ. ಪಂಚಾಯತ್ನಲ್ಲಿ ಜ್ವಲಂತ ಸಮಸ್ಯೆಗಳು ಕಾಡುತ್ತಿದ್ದು, ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ. ಬಾಪೂಜಿ ಸೇವಾ ಕೇಂದ್ರ ಸ್ಥಗಿತಗೊಂಡ ಪರಿಣಾಮ ಪಹಣಿ ಪತ್ರಿಕೆ, ಮಾಸಾಶನ, ಜಾತಿ ಆದಾಯ, ಬೆಳೆವಿಮೆಯಂತಹ ಸೌಲಭ್ಯಗಳ ದಾಖಲಾತಿ ಪಡೆದುಕೊಳ್ಳಲು ಹಣ ಖರ್ಚು ಮಾಡಿ ರಾಯಚೂರು ನಗರಕ್ಕೆ ತೆರಳಬೇಕಿದೆ.
2 ಪಂಚಾಯಿತಿ ಒಬ್ಬರೇ ಪಿಡಿಒ ಜವಾಬ್ದಾರಿ ನಿಭಾಯಿಸುತ್ತಿದ್ದು, ಎರಡೂ ಕಡೆ ಸರಿಯಾಗಿ ಕಾರ್ಯನಿರ್ವಹಿಸದೇ ಯಾವಾಗಲು ಜಿಲ್ಲಾ ಕೇಂದ್ರದಲ್ಲಿ ಇರುತ್ತಾರೆ. ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಯಾವೊಬ್ಬ ಸಿಬ್ಬಂದಿಗಳಿರದೇ ಕೆಲಸ ಸಂಪೂರ್ಣ ಸ್ಥಗಿತಗೊಂಡಿದೆ. ಪಿಡಿಒ ಬಾಪೂಜಿ ಸೇವಾ ಕೇಂದ್ರ ಪ್ರಾರಂಭಿಸಲು ಆಸಕ್ತಿ ವಹಿಸುತ್ತಿಲ್ಲ. ಇದರಿಂದ ರೈತರಿಗೆ ಸಮಸ್ಯೆ ಆಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಬಾಪೂಜಿ ಸೇವಾ ಕೇಂದ್ರ ಪ್ರಾರಂಭಿಸಲು ಆದೇಶಿಸಬೇಕು.
ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ದಿನ್ನಿ, ಪದಾಧಿಕಾರಿಗಳಾದ ಲಕ್ಷ ್ಮಣ ಕುರ್ಡಿ, ಚನ್ನಬಸವ ಯಕ್ಲಾಸಪುರ, ಈರಣ್ಣ, ಆಂಜಿನಯ್ಯ ಸೇರಿದಂತೆ ಇತರರಿದ್ದರು.