ಆ್ಯಪ್ನಗರ

ಡಿ.ಕೆ ಶಿವಕುಮಾರ್ ಐಟಿ ವಿಚಾರಣೆ ಮುಕ್ತಾಯ

ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಐಟಿ ವಿಚಾರಣೆ ಮುಕ್ತಾಯಗೊಂಡಿದೆ. ಮುಂದಿನ ದಿನಗಳಲ್ಲಿ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ಹೇಳಿದರು.

ವಿಕ ಸುದ್ದಿಲೋಕ 7 Aug 2017, 4:10 pm
ಬೆಂಗಳೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಐಟಿ ವಿಚಾರಣೆ ಮುಕ್ತಾಯಗೊಂಡಿದೆ. ಕಚೇರಿಯಿಂದ ಹೊರಟ ಸಚಿವರು,'ತನಿಖೆಗೆ ಸಹಕರಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ವಿಚಾರಣೆಗೆ ಕರೆದರೆ ಬರುತ್ತೇನೆ,'ಎಂದು ಹೇಳಿದರು.
Vijaya Karnataka Web dk shivakumar enquiry by it
ಡಿ.ಕೆ ಶಿವಕುಮಾರ್ ಐಟಿ ವಿಚಾರಣೆ ಮುಕ್ತಾಯ


'ಐಟಿಯವರು ಇಂದು ಬನ್ನಿ ಅಂತ ಹೇಳಿದ್ದರು, ಬಂದಿದ್ದೇನೆ. ಈ ಹಿಂದೆಯೂ ಅನೇಕ ಬಾರಿ ಬಂದಿದ್ದೆ. ಅವರು ಕೇಳಿದ್ದಕ್ಕೆಲ್ಲ ಉತ್ತರಕೊಟ್ಟಿದ್ದೇನೆ. ಐಟಿಯವರು ಚೆನ್ನಾಗಿ ನೋಡಿಕೊಂಡಿದ್ದಾರೆ. ಪಂಚನಾಮೆಗೆ ಸಂಬಂಧಿಸಿದಂತೆ ಆಡಿಟರ್ಸ್ ಅರ್ಜಿ ಹಾಕಿ ಮುಂದಿನ ಪ್ರೊಸೀಜರ್ ಮಾಡುತ್ತಾರೆ,' ಎಂದು ಹೇಳಿದರು.

'ಸದ್ಯ ಇವತ್ತು ವಿಚಾರಣೆ ಮುಗಿದಿದೆ. ನಾಳೆ ಬನ್ನಿ ಅಂತ ಹೇಳಿಲ್ಲ. ಕರೆದಾಗ ಬಂದು ಹೋಗುತ್ತೇನೆ ಅಂತ ಹೇಳಿದ್ದೇನೆ. ಐಟಿಯವರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದೆನೆ. ಮುಂದೆ ನನ್ನನ್ನು ಕರೆಸುವ ಸಾಧ್ಯತೆ ಕಮ್ಮಿ ಇದೆ. ಅವರ ಕರ್ತವ್ಯಕ್ಕೆ ಸಹಕಾರ ನೀಡಿದ್ದೇವೆ. ಡಿಕೆ ಶಿವಕುಮಾರ್ ಪರಿಚಯದ ಬಗ್ಗೆ ನನ್ನ ಹತ್ರ ಕೇಳ್ಬೇಡಿ . ನಾನು ಅದಕ್ಕೆಲ್ಲ ಉತ್ತರ ನೀಡುವುದಿಲ್ಲ. ಐಟಿ ಅಧಿಕಾರಿಗಳು ಮತ್ತೆ ಕರೆದರೆ ಬರುತ್ತೇನೆ,'ಎಂದು ಜ್ಯೋತಿಷಿ ದ್ವಾರಕನಾಥ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ