ಆ್ಯಪ್ನಗರ

ಬಿಜೆಪಿ ನಾಯಕರಿಗೆ ಡಿಕೆಶಿ ರಣವೀಳ್ಯ

ಇಂಧನ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರಿಗೆ ಚರ್ಚೆ ಬರುವಂತೆ ರಣವೀಳ್ಯ ಕೊಡುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ವಿಕ ಸುದ್ದಿಲೋಕ 6 Mar 2017, 1:13 pm
ಬೆಂಗಳೂರು: ಇಂಧನ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರಿಗೆ ಚರ್ಚೆ ಬರುವಂತೆ ರಣವೀಳ್ಯ ಕೊಡುತ್ತಿದ್ದೇನೆ, ಮುಖಾಮುಖಿ ಚರ್ಚೆಗೆ ಬರಲಿ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ.
Vijaya Karnataka Web dk shivakumar spat with bjp leaders
ಬಿಜೆಪಿ ನಾಯಕರಿಗೆ ಡಿಕೆಶಿ ರಣವೀಳ್ಯ


'ಆರೋಪ ಮಾಡಿರುವ ಬಿಜೆಪಿ ಮುಖಂಡರು ಚರ್ಚೆಗೆ ಬರಲಿ. ಸದನದಲ್ಲಿ ಅಥವಾ ಸಾರ್ವಜನಿಕ ಚರ್ಚೆಗೆ ಸಿದ್ಧ. ಈ ಸವಾಲನ್ನು ಬಿಜೆಪಿಯವರು ನಮ್ರತೆಯಿಂದ ಸ್ವೀಕರಿಸಲಿ. ಹಿಟ್ ಆಂಡ್ ರನ್ ಮಾಡುವುದು ಸರಿಯಲ್ಲ. ನನ್ನ ಸವಾಲಿಗೆ ಅವರು ಸಿದ್ಧರೇ, ಬೇರೆಯವರನ್ನು ಸಿಕ್ಕಿಸಿದಂತೆ ನನ್ನ ವಿಚಾರಕ್ಕೂ ಬರಬೇಡಿ,'ಎಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್‌ ಎಚ್ಚರಿಸಿದ್ದಾರೆ.

'ನನ್ನ ಅವಧಿಯಲ್ಲಿ ಒಂದೇ ಒಂದು ಸಣ್ಣ ತಪ್ಪು ಮಾಡಿಲ್ಲ. ನಮ್ಮ ಪಕ್ಷಕ್ಕೆ ನೋವು ತರುವವನಲ್ಲ. ನಾನು ಹಳ್ಳಿಯಿಂದ ಬಂದವನು. ವಿಧಾನಸೌಧದ ಒಂದೊಂದು ಚಪ್ಪಡಿಯನ್ನೂ ಸವೆಸಿದ್ದೇನೆ. ಈ ರೀತಿ ಸವೆಸಿಯೇ ಮೂರನೇ ಮಹಡಿಗೆ ಬಂದಿದ್ದೇನೆ,'ಎಂದು ಹೇಳಿದ್ದಾರೆ.

'ಕೆಲ ಮಾಧ್ಯಮಗಳೂ ನನ್ನ ಕಾಲೆಳೆಯುವ ಪ್ರಯತ್ನ ಮಾಡಿವೆ. ರಾಜಕಾರಣಿಗಳೂ ನನ್ನನ್ನು ಸಿಕ್ಕಿಸಲು ಪ್ರಯತ್ನಿಸಿದ್ದಾರೆ. ಇದೆಲ್ಲವೂ ನನಗೆ ಚೆನ್ನಾಗಿ ಗೊತ್ತಗಿದೆ. ದ್ವೇಷ ರಾಜಕಾರಣ ನನಗೆ ಗೊತ್ತಿಲ್ಲ,'ಎಂದಿದ್ದಾರೆ.

'1989ರಿಂದ ಜನರ ಆಶೀರ್ವಾದದೊಂದಿಗೆ ರಾಜಕಾರಣದಲ್ಲಿದ್ದೇನೆ. ತಪ್ಪಾದಾಗ ಮಾಧ್ಯಮದವರು ತಿದ್ದಿದ್ದಾರೆ. ಅನೇಕ ಆರೋಪಗಳ ವಿಚಾರವಾಗಿಯೂ ಸುದ್ದಿಯಾಗಿದ್ದೇನೆ. ಯಾರೂ ಪರಿಪೂರ್ಣರಲ್ಲ. ಕಲಿಕೆ ನಿರಂತರ. ನನ್ನೊಂದಿಗೆ ಇದ್ದ, ಇರುವ ಅಧಿಕಾರಿಗಳು ಕಾನೂನು ಚೌಕಟ್ಟು ಮೀರದಂತೆ ಮಾರ್ಗದರ್ಶನ ನೀಡಿದ್ದಾರೆ,' ಎಂದು ಸ್ಪಷ್ಟನೆ ನೀಡಿದ್ದಾರೆ.

'ಬಿಜೆಪಿ ಸುರೇಶ್ ಕುಮಾರ್ ಮತ್ತು ಸಿ ಟಿ ರವಿ ಸುದ್ದಿಗೋಷ್ಠಿ ಮಾಡಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಸುರೇಶ್ ಕುಮಾರ್ ಬಗ್ಗ ನನಗೆ ಗೌರವ ಇದೆ. ಬಿಜೆಪಿಯಲ್ಲಿ ಯಾರಾದರೂ ಆದರ್ಶನೀಯ ಅಂದರೆ ಅದು ಸುರೇಶ್ ಕುಮಾರ್ ಅಂತ ನಂಬಿದ್ದೆ. ಅವರು ಮಾಡಿರುವ ಆರೋಪಗಳ ಬಗ್ಗೆ ಮುಖಾಮುಖಿ ಚರ್ಚೆಗೆ ಸಿದ್ಧ,'ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ