ಆ್ಯಪ್ನಗರ

ರೆಡ್ಡಿ ಸೈಲೆಂಟಾಗಿದ್ದಾರೆ, ಕೆಣಕಬೇಡಿ!

ಸೈಲೆಂಟಾಗಿರುವ ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ವೈಲೆಂಟ್‌ ಮಾಡಬೇಡಿ ಎಂದು ಜಿ. ಸೋಮಶೇಖರೆಡ್ಡಿ ತಾಕೀತು ಮಾಡಿದ್ದಾರೆ.

Vijaya Karnataka Web 26 Mar 2017, 10:16 am
ಬಳ್ಳಾರಿ: ಜನಾರ್ದನರೆಡ್ಡಿ ಮತ್ತು ಬಿಜೆಪಿಯ ನಡುವೆ ಮುಂಬರುವ ವಿಧಾನಸಭೆ ಚುನಾವಣೆಯ ವೆಚ್ಚಕ್ಕಾಗಿ ಐನೂರು ಕೋಟಿ ರೂ. ಹಣ ಕೊಡುವ ಬಗ್ಗೆ ಒಪ್ಪಂದವಾಗಿದೆ ಎಂಬುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಕೆಎಂಎಫ್‌ ಮಾಜಿ ಅಧ್ಯಕ್ಷ ಜಿ. ಸೋಮಶೇಖರ್ ರೆಡ್ಡಿ, ‘‘ಸೈಲೆಂಟಾಗಿರುವ ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ವೈಲೆಂಟ್‌ ಮಾಡಬೇಡಿ,’’ ಎಂದು ತಾಕೀತು ಮಾಡಿದ್ದಾರೆ.
Vijaya Karnataka Web dont tickle janardhana reddy somashekhar reddy
ರೆಡ್ಡಿ ಸೈಲೆಂಟಾಗಿದ್ದಾರೆ, ಕೆಣಕಬೇಡಿ!


ಶನಿವಾರ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಕುಮಾರಸ್ವಾಮಿ ಆರೋಪದಲ್ಲಿ ಹುರುಳಿಲ್ಲ. ಮಾಜಿ ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮನಬಂದಂತೆ ಮಾತನಾಡುವುದು ಅವರ ಘನತೆಗೆ ತಕ್ಕದಲ್ಲ. ರೆಡ್ಡಿ ತಮ್ಮ ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ಹೈಕಮಾಂಡ್‌ಗೆ 500 ಕೋಟಿ ರೂ. ನೀಡಲಿದ್ದಾರೆಂದು ಹೇಳಿರುವುದು ಸರಿಯಲ್ಲ,’’ ಎಂದರು.

‘‘ರೆಡ್ಡಿ ಕೇಸ್‌ಗಳ ಕುರಿತು ಅವರಿಗೇನು ಗೊತ್ತು? ಈ ರೀತಿಯ ಸಣ್ಣತನದ ಹೇಳಿಕೆ ನೀಡಿ ತಮ್ಮ ಘನತೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಹಣ ನೀಡುವ ಪ್ರಶ್ನೆಯೇ ಇಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. ಜನಾರ್ದನ ರೆಡ್ಡಿ ರಾಜಕೀಯಕ್ಕೆ ಬರುವ ವಿಚಾರ ಅವರಿಗೇ ಬಿಟ್ಟದ್ದು. ಆದರೆ, ಅವರ ಬಗ್ಗೆ ಬೇರೆಯವರು ಎಚ್ಚರಿಕೆಯಿಂದ ಮಾತನಾಡಬೇಕು,’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ