- ಶ್ರೀ ಶ್ರೀ ರವಿಶಂಕರ್
ವಾಸ್ತವ ಹೇಗಿದೆಯೊ ಹಾಗೆಯೆ ಅದನ್ನು ಕಾಣಲು ನಿಮಗೇಕೆ ಸಾಧ್ಯವಿಲ್ಲ? ನಿಮ್ಮನ್ನು ತಡೆಯುತ್ತಿರುವುದು ಯಾವುದು? ಪ್ರತಿ ಕ್ಷ ಣವೂ ನೀವು ಗೋರಿಯತ್ತ ಸಾಗುತ್ತಿರುವಿರಿ! ಪ್ರತಿ ಕ್ಷ ಣವೂ ನಿಮ್ಮನ್ನು ಬೂದಿಯಾಗಿ ಮಾಡಲಾಗುತ್ತಿದೆ! ಆದರೂ ನಿಮಗೆ ಇದು ಕಾಣುತ್ತಿಲ್ಲ. ಅಷ್ಟೊಂದು ಸ್ಪಷ್ಟವಾಗಿರುವ ವಾಸ್ತವ ನಿಮಗೇಕೆ ಕಾಣುವುದಿಲ್ಲ? ಏಕೆಂದರೆ ನೀವು ಸುಖಕ್ಕಾಗಿ ಹಂಬಲಿಸುವುದರಿಂದ ಮತ್ತು ದುಃಖಕ್ಕೆ ಹೆದರುವುದರಿಂದ. ಎಲ್ಲದಕ್ಕೂ ತರ್ಕವಿರಬೇಕು, ಆದರೆ ವಿಶ್ವಾಸವು ವಿಚಾರವನ್ನು ಮೀರುತ್ತದೆ. ನೀವು ಬಯಕೆಯ ಜ್ವರದಿಂದ ಪೀಡಿತರಾಗಿರುವಿರಿ ಮತ್ತು ಯಾವುದೋ ಸಾಧನೆಯನ್ನು ಮಾಡುವ ಲೋಭದಲ್ಲಿದ್ದೀರಿ.
ಸುಖ, ದುಃಖ, ತರ್ಕ ಮತ್ತು ಜ್ವರತೆ- ಈ ನಾಲ್ಕು ಪಾಶುಗಳು ನಿಮ್ಮನ್ನು ಹಿಂದಕ್ಕೆ ಎಳೆಯುತ್ತವೆ. ಸುಖಗಳ ಬಗ್ಗೆ ಕನಸು ಕಾಣುತ್ತೀರಿ. ಇದು ಎಷ್ಟು ಆಶ್ಚರ್ಯಕರ! ವಿವಿಧ ಸುಖಗಳನ್ನು ಅನುಭವಿಸಿದ ನಂತರವೂ ಮಾನವನು ಸುಖವು ಬೇರೆಲ್ಲೊ ಇದೆ ಅಂದುಕೊಳ್ಳುತ್ತಾನೆ. ಪ್ರತಿ ಸುಖವೂ ಕ್ಷ ಣಿಕವಾಗಿತ್ತು. ಇದರಿಂದ ನೀವು ಖಾಲಿಯಾಗಿ, ಕ್ಷ ಯವಾಗಿ, ಬಾಡಿದಿರಿ. ಆದರೂ ಇನ್ನೂ ಹೆಚ್ಚಿನ ಸುಖಕ್ಕಾಗಿ, ಅಗೋಚರವಾದ ಸುಖಕ್ಕಾಗಿ ಹಂಬಲಿಸುತ್ತೀರಿ.
ದುಃಖ ಎಂದರೆ ಭಯ. ನೀವು ಭಯಪಡುವ ಆ ದುಃಖ ಯಾವುದು? ನಿಮಗೇನಾಗಲಿದೆ? ಅನೇಕ ಸಮಸ್ಯೆಗಳನ್ನು ಎದುರಿಸಿದ್ದೀರಿ. ಒಂದು ಆಟಿಕೆ ಮುರಿದು ಹೋದಾಗ, ಮಗುವಾಗಿದ್ದ ಕಾಲದಲ್ಲಿ ಎಷ್ಟೋ ಸಲ ಅತ್ತಿದ್ದೀರಿ. ಅದನ್ನು ದಾಟಿ ಮುಂದೆ ಬಂದಿರಿ. ಅಸಾಧ್ಯ ಎನ್ನುವಂತಹ ಅನೇಕ ಜೀವನದ ಅಡಚಣೆಗಳನ್ನು ದಾಟಿ ಬಂದಿರಿ. ಆದರೂ ಇವು ಯಾವುದೂ ನಿಮ್ಮನ್ನು ಸ್ಪರ್ಶಿಸಲಿಲ್ಲ. ಯಾವುದೂ ನಿಮ್ಮನ್ನು ಅಲುಗಾಡಿಸಲಿಲ್ಲ. ಆ ಕ್ಷ ಣದಲ್ಲಿ ನೀವು ಅಲುಗಾಡಿದಂತೆ ಕಂಡರೂ, ಹಿಂದೆ ಇದ್ದಂತೆಯೆ ಇರುವಿರಿ ಎಂದು ನಂತರ ಕಂಡುಕೊಂಡಿರಿ. ದುಃಖ, ಭಯ ನಿಮ್ಮನ್ನು ಹಿಂದಕ್ಕೆ ಸೆಳೆಯುತ್ತದೆ.
ನಂತರ ಇನ್ನೂ ಬೇಕು, ಹೆಚ್ಚು ಬೇಕು, ಮತ್ತಷ್ಟು ಬೇಕು ಎನ್ನುವ ಬಯಕೆಯಿದೆ. ಬಯಕೆಯಿಂದ ಸುಟ್ಟು ಹೋಗುತ್ತದೆ. ಬಯಕೆಯಲ್ಲಿ ಸುಡುತ್ತಿರುವುದರಿಂದ ನಿಮ್ಮ ಅಸ್ತಿತ್ವದಲ್ಲಿ ನೀವು ಶಾಂತವಾಗಿ ನೆಲೆಸುವುದು ಅಸಾಧ್ಯವಾದ ವಿಷಯವಾಗುತ್ತದೆ. ಬಯಕೆಗಳನ್ನು ಬಿಡದ ತನಕ ನಿಮಗೆ ಶಾಂತಿ ಸಿಗಲು ಸಾಧ್ಯವೇ ಇಲ್ಲ. ದೈವಪ್ರೇಮದಲ್ಲಿ ವಿಶ್ರಮಿಸಲು ಸಾಧ್ಯವೇ ಇಲ್ಲ. ಪ್ರೇಮವೆಂದರೆ ಲಯವಾಗುವ ಪ್ರಕ್ರಿಯೆ, ಕೊಡುವ, ಅರ್ಪಿಸುವ, ಸೇವೆ ಮಾಡುವ ಪ್ರಕ್ರಿಯೆ. ಸ್ವಲ್ಪ ಪುಣ್ಯ ಬರಲಿ ಎಂದು ಸೇವೆ ಮಾಡಿದರೆ, ಅದು ಸೇವೆಯೇ ಅಲ್ಲ. ಅನೇಕ ಜನರು ಸೇವೆ ಮಾಡುತ್ತಾರೆ ಮತ್ತು ಹೆಸರನ್ನು ಗಳಿಸುವ ಸಲುವಾಗಿ ಅವರ ಹೆಸರನ್ನು ಹಾಕಬೇಕೆಂದು ಒತ್ತಾಯಿಸುತ್ತಾರೆ. ಜಾಹೀರಾತಿನ ಕಂಪನಿಗೆ ಹಣ ನೀಡಿದಂತೆ!
ಅನೇಕ ಸಲ ಜನ ‘‘ಈ ಸೇವೆ ಮಾಡಿದರೆ ನನಗೇನು ಸಿಗುತ್ತದೆ?’’ ಎಂದು ಕೇಳುತ್ತಾರೆ. ಅವರಿಗೆ, ‘‘ಏನೂ ಸಿಗುವುದಿಲ್ಲ’’ ಎನ್ನಿ! ಪಡೆಯಬೇಕೆಂಬ ಬಯಕೆ ನಿಮ್ಮನ್ನು ಹಿಂದಕ್ಕೆ ಸೆಳೆಯುತ್ತದೆ. ನಿಮ್ಮನ್ನು ತಡೆದು ನಿಲ್ಲಿಸುತ್ತದೆ. ನಿಮ್ಮ ಭಕ್ತಿ ಮತ್ತು ಪ್ರೇಮ ಅರಳುವುದೇ ಇಲ್ಲ. ನಿಮ್ಮನ್ನು ಹಿಂದಕ್ಕೆ ಹಿಡಿದಿಟ್ಟುಕೊಂಡಿರುವ ಪಾಶಗಳನ್ನು ತ್ಯಜಿಸಿ. ಅವುಗಳನ್ನು ಬಿಟ್ಟುಬಿಡಿ! ಹೇಗಿದ್ದರೂ ನೀವು ಭಗವಂತನ ಪ್ರೀತಿಪಾತ್ರರಾದ ಮಗ ಅಥವಾ ಮಗಳು. ನೀವು ದೈವಕ್ಕೆ ಸೇರಿದ್ದೀರಿ. ಭಗವಂತ ನಿಮ್ಮ ಸುಖಗಳನ್ನು ನೋಡಿಕೊಳ್ಳುವುದಿಲ್ಲ ಎಂದುಕೊಂಡಿರೇನು?
ವಾಸ್ತವ ಹೇಗಿದೆಯೊ ಹಾಗೆಯೆ ಅದನ್ನು ಕಾಣಲು ನಿಮಗೇಕೆ ಸಾಧ್ಯವಿಲ್ಲ? ನಿಮ್ಮನ್ನು ತಡೆಯುತ್ತಿರುವುದು ಯಾವುದು? ಪ್ರತಿ ಕ್ಷ ಣವೂ ನೀವು ಗೋರಿಯತ್ತ ಸಾಗುತ್ತಿರುವಿರಿ! ಪ್ರತಿ ಕ್ಷ ಣವೂ ನಿಮ್ಮನ್ನು ಬೂದಿಯಾಗಿ ಮಾಡಲಾಗುತ್ತಿದೆ! ಆದರೂ ನಿಮಗೆ ಇದು ಕಾಣುತ್ತಿಲ್ಲ. ಅಷ್ಟೊಂದು ಸ್ಪಷ್ಟವಾಗಿರುವ ವಾಸ್ತವ ನಿಮಗೇಕೆ ಕಾಣುವುದಿಲ್ಲ? ಏಕೆಂದರೆ ನೀವು ಸುಖಕ್ಕಾಗಿ ಹಂಬಲಿಸುವುದರಿಂದ ಮತ್ತು ದುಃಖಕ್ಕೆ ಹೆದರುವುದರಿಂದ. ಎಲ್ಲದಕ್ಕೂ ತರ್ಕವಿರಬೇಕು, ಆದರೆ ವಿಶ್ವಾಸವು ವಿಚಾರವನ್ನು ಮೀರುತ್ತದೆ. ನೀವು ಬಯಕೆಯ ಜ್ವರದಿಂದ ಪೀಡಿತರಾಗಿರುವಿರಿ ಮತ್ತು ಯಾವುದೋ ಸಾಧನೆಯನ್ನು ಮಾಡುವ ಲೋಭದಲ್ಲಿದ್ದೀರಿ.
ಸುಖ, ದುಃಖ, ತರ್ಕ ಮತ್ತು ಜ್ವರತೆ- ಈ ನಾಲ್ಕು ಪಾಶುಗಳು ನಿಮ್ಮನ್ನು ಹಿಂದಕ್ಕೆ ಎಳೆಯುತ್ತವೆ. ಸುಖಗಳ ಬಗ್ಗೆ ಕನಸು ಕಾಣುತ್ತೀರಿ. ಇದು ಎಷ್ಟು ಆಶ್ಚರ್ಯಕರ! ವಿವಿಧ ಸುಖಗಳನ್ನು ಅನುಭವಿಸಿದ ನಂತರವೂ ಮಾನವನು ಸುಖವು ಬೇರೆಲ್ಲೊ ಇದೆ ಅಂದುಕೊಳ್ಳುತ್ತಾನೆ. ಪ್ರತಿ ಸುಖವೂ ಕ್ಷ ಣಿಕವಾಗಿತ್ತು. ಇದರಿಂದ ನೀವು ಖಾಲಿಯಾಗಿ, ಕ್ಷ ಯವಾಗಿ, ಬಾಡಿದಿರಿ. ಆದರೂ ಇನ್ನೂ ಹೆಚ್ಚಿನ ಸುಖಕ್ಕಾಗಿ, ಅಗೋಚರವಾದ ಸುಖಕ್ಕಾಗಿ ಹಂಬಲಿಸುತ್ತೀರಿ.
ದುಃಖ ಎಂದರೆ ಭಯ. ನೀವು ಭಯಪಡುವ ಆ ದುಃಖ ಯಾವುದು? ನಿಮಗೇನಾಗಲಿದೆ? ಅನೇಕ ಸಮಸ್ಯೆಗಳನ್ನು ಎದುರಿಸಿದ್ದೀರಿ. ಒಂದು ಆಟಿಕೆ ಮುರಿದು ಹೋದಾಗ, ಮಗುವಾಗಿದ್ದ ಕಾಲದಲ್ಲಿ ಎಷ್ಟೋ ಸಲ ಅತ್ತಿದ್ದೀರಿ. ಅದನ್ನು ದಾಟಿ ಮುಂದೆ ಬಂದಿರಿ. ಅಸಾಧ್ಯ ಎನ್ನುವಂತಹ ಅನೇಕ ಜೀವನದ ಅಡಚಣೆಗಳನ್ನು ದಾಟಿ ಬಂದಿರಿ. ಆದರೂ ಇವು ಯಾವುದೂ ನಿಮ್ಮನ್ನು ಸ್ಪರ್ಶಿಸಲಿಲ್ಲ. ಯಾವುದೂ ನಿಮ್ಮನ್ನು ಅಲುಗಾಡಿಸಲಿಲ್ಲ. ಆ ಕ್ಷ ಣದಲ್ಲಿ ನೀವು ಅಲುಗಾಡಿದಂತೆ ಕಂಡರೂ, ಹಿಂದೆ ಇದ್ದಂತೆಯೆ ಇರುವಿರಿ ಎಂದು ನಂತರ ಕಂಡುಕೊಂಡಿರಿ. ದುಃಖ, ಭಯ ನಿಮ್ಮನ್ನು ಹಿಂದಕ್ಕೆ ಸೆಳೆಯುತ್ತದೆ.
ನಂತರ ಇನ್ನೂ ಬೇಕು, ಹೆಚ್ಚು ಬೇಕು, ಮತ್ತಷ್ಟು ಬೇಕು ಎನ್ನುವ ಬಯಕೆಯಿದೆ. ಬಯಕೆಯಿಂದ ಸುಟ್ಟು ಹೋಗುತ್ತದೆ. ಬಯಕೆಯಲ್ಲಿ ಸುಡುತ್ತಿರುವುದರಿಂದ ನಿಮ್ಮ ಅಸ್ತಿತ್ವದಲ್ಲಿ ನೀವು ಶಾಂತವಾಗಿ ನೆಲೆಸುವುದು ಅಸಾಧ್ಯವಾದ ವಿಷಯವಾಗುತ್ತದೆ. ಬಯಕೆಗಳನ್ನು ಬಿಡದ ತನಕ ನಿಮಗೆ ಶಾಂತಿ ಸಿಗಲು ಸಾಧ್ಯವೇ ಇಲ್ಲ. ದೈವಪ್ರೇಮದಲ್ಲಿ ವಿಶ್ರಮಿಸಲು ಸಾಧ್ಯವೇ ಇಲ್ಲ. ಪ್ರೇಮವೆಂದರೆ ಲಯವಾಗುವ ಪ್ರಕ್ರಿಯೆ, ಕೊಡುವ, ಅರ್ಪಿಸುವ, ಸೇವೆ ಮಾಡುವ ಪ್ರಕ್ರಿಯೆ. ಸ್ವಲ್ಪ ಪುಣ್ಯ ಬರಲಿ ಎಂದು ಸೇವೆ ಮಾಡಿದರೆ, ಅದು ಸೇವೆಯೇ ಅಲ್ಲ. ಅನೇಕ ಜನರು ಸೇವೆ ಮಾಡುತ್ತಾರೆ ಮತ್ತು ಹೆಸರನ್ನು ಗಳಿಸುವ ಸಲುವಾಗಿ ಅವರ ಹೆಸರನ್ನು ಹಾಕಬೇಕೆಂದು ಒತ್ತಾಯಿಸುತ್ತಾರೆ. ಜಾಹೀರಾತಿನ ಕಂಪನಿಗೆ ಹಣ ನೀಡಿದಂತೆ!
ಅನೇಕ ಸಲ ಜನ ‘‘ಈ ಸೇವೆ ಮಾಡಿದರೆ ನನಗೇನು ಸಿಗುತ್ತದೆ?’’ ಎಂದು ಕೇಳುತ್ತಾರೆ. ಅವರಿಗೆ, ‘‘ಏನೂ ಸಿಗುವುದಿಲ್ಲ’’ ಎನ್ನಿ! ಪಡೆಯಬೇಕೆಂಬ ಬಯಕೆ ನಿಮ್ಮನ್ನು ಹಿಂದಕ್ಕೆ ಸೆಳೆಯುತ್ತದೆ. ನಿಮ್ಮನ್ನು ತಡೆದು ನಿಲ್ಲಿಸುತ್ತದೆ. ನಿಮ್ಮ ಭಕ್ತಿ ಮತ್ತು ಪ್ರೇಮ ಅರಳುವುದೇ ಇಲ್ಲ. ನಿಮ್ಮನ್ನು ಹಿಂದಕ್ಕೆ ಹಿಡಿದಿಟ್ಟುಕೊಂಡಿರುವ ಪಾಶಗಳನ್ನು ತ್ಯಜಿಸಿ. ಅವುಗಳನ್ನು ಬಿಟ್ಟುಬಿಡಿ! ಹೇಗಿದ್ದರೂ ನೀವು ಭಗವಂತನ ಪ್ರೀತಿಪಾತ್ರರಾದ ಮಗ ಅಥವಾ ಮಗಳು. ನೀವು ದೈವಕ್ಕೆ ಸೇರಿದ್ದೀರಿ. ಭಗವಂತ ನಿಮ್ಮ ಸುಖಗಳನ್ನು ನೋಡಿಕೊಳ್ಳುವುದಿಲ್ಲ ಎಂದುಕೊಂಡಿರೇನು?