ಮಾರಣಾಂತಿಕ ರೋಗಗಳ ಭಯ
ಶ್ರೀ ಶ್ರೀ ರವಿಶಂಕರ್
ಸುದರ್ಶನ ಕ್ರಿಯೆಯ ಅಭ್ಯಾಸದಿಂದ ಅಥವಾ ಆಳವಾದ ಧ್ಯಾನದ ಅಭ್ಯಾಸದಿಂದ ಅನಾರೋಗ್ಯದ ತೊಂದರೆಗಳಿಂದ ಹೊರಬಂದಿರುವ ಅನೇಕ ಜನರನ್ನು ನಾವು ಕಂಡಿದ್ದೇವೆ. ಲಾಸ್ಏಂಜಿಲೀಸ್ನ ಒಬ್ಬ ವೈದ್ಯರು, ಆಮ್ಲಜನಕದ ಸರಬರಾಜಿನಿಂದ ನಮ್ಮ ವ್ಯವಸ್ಥೆಯಲ್ಲಿರುವ ವೈರಸ್ಗಳು ನಾಶವಾಗುತ್ತವೆ ಎಂದು ಹೇಳಿದರು. ನಾವು ಸಾಮಾನ್ಯವಾಗಿ ನಮ್ಮ ಶ್ವಾಸಕೋಶವನ್ನು ಕೇವಲ 30%ರಷ್ಟು ಮಾತ್ರವೇ ಬಳಸುತ್ತೇವೆ. ಪ್ರಾಣಾಯಾಮದ ಅಭ್ಯಾಸಗಳು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಸುದರ್ಶನ ಕ್ರಿಯೆಯ ಅಭ್ಯಾಸದಿಂದ ನಮ್ಮ ವ್ಯವಸ್ಥೆಯು ಆಮ್ಲಜನಕದಿಂದ ತುಂಬಿಹೋಗುತ್ತದೆ. ವ್ಯವಸ್ಥೆಯಲ್ಲಿರುವ ತೊಂಬತ್ತರಷ್ಟು ಕಲ್ಮಶಗಳು ಉಸಿರಿನ ಮೂಲಕ ಹೊರಗೆ ಹೋಗುತ್ತವೆ. ಆದ್ದರಿಂದ, ಹೆಚ್ಚಾಗಿ ಮಾಡುವುದರಿಂದ ಆಳವಾದ ಉಸಿರಾಟವನ್ನು ವ್ಯವಸ್ಥೆಯಲ್ಲಿರುವ ಕಲ್ಮಶಗಳನ್ನು ಕುಗ್ಗಿಸುತ್ತದೆ. ಈ ಎಲ್ಲಾ ಅಭ್ಯಾಸಗಳಿಂದ ಮತ್ತು ಭಗವಂತನ ಕೃಪೆಯಿಂದ ರೋಗದ ಮೂಲ ಕಾರಣವನ್ನು ನಿವಾರಿಸಬಹುದು.
ಮಾರಕ ರೋಗಗಳಾದ ಹೆಚ್ಐವಿ ಅಥವಾ ಕ್ಯಾನ್ಸರ್ನಂತಹ ತೊಂದರೆಗಳನ್ನು ಇನ್ನೊಂದು ರೀತಿಯಲ್ಲೂ ಕಾಣಬಹುದು. ಅವರಿಗೆ ಮಾರಕ ರೋಗವಿದೆ ಎಂದು ಯಾರಿಗಾದರೂ ಹೇಳಿದರೆ ಅವರ ಜೀವಾವಧಿಯ ಕಡಿಮೆಯಾಗಿರುತ್ತದೆ ಎಂದು ಅವರು ನಂಬುತ್ತಾರೆ. ಭಯದಿಂದ ಹೊರಬರುವುದು ಬಹಳ ಮುಖ್ಯವಾದ ಪ್ರಕ್ರಿಯೆ. ಇದೇ ಮುಖ್ಯವಾದ ವಿಷಯ. ವ್ಯವಸ್ಥೆಯನ್ನು ಬಲಿಷ್ಠವಾಗಿ ಮಾಡುವ ಬದಲು ಈ ಭಯವು ಇಡೀ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸಿಬಿಡುತ್ತದೆ, ಹಿಂದುಳಿದ ರಾಷ್ಟ್ರಗಳಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ, ಅನೇಕ ಜನರು, ಅವರೆಲ್ಲರೂ ಯಾವಾಗಲಾದರೂ ಸಾಯಬಹುದು ಎನ್ನುವ ಸ್ಥಳಗಳಲ್ಲಿ ವಾಸಿಸುತ್ತಿರುತ್ತಾರೆ. ಮುಂದಿನ ವಾರ ಒಂದು ಪ್ರವಾಹ ಬರಬಹುದು ಮತ್ತು ಅವರ ಇಡೀ ಕುಟುಂಬ, ಅವರ ಇಡೀ ವ್ಯವಸ್ಥೆಯೇ ನಾಶವಾಗಿ ಬಿಡಬಹುದು. ನೀವು ಎಲ್ಲೇ ವಾಸಿಸಿದರೂ ಸಹ, ಜೀವನದಲ್ಲಿ ಒಂದಂತೂ ಖಂಡಿತ, ಎಲ್ಲರೂ ಸಾಯುತ್ತಾರೆ. ಸಾಯದೆ ಇರುವವರು ಯಾರಾದರೂ ಇದ್ದಾರೆಯೆ?
ಎಚ್ಐವಿಯಿಂದ ಪೀಡಿತರಾದ ಜನರಿಗೆ ತಾವೇನು ಹೇಳಬೇಕೆಂದು ಕೆಲವು ಜನರು ನಮ್ಮನ್ನು ಕೇಳುತ್ತಿದ್ದರು. ಅವರಿಗೆ ಅನುಕಂಪ ತೋರಿಸುವ ಯಾವ ಅವಶ್ಯಕತೆಯೂ ಇಲ್ಲವೆಂದು ನಾವು ಹೇಳಿದೆವು. ಅವರಿಗೆ ಅನುಕಂಪ ಬೇಕಾಗಿಲ್ಲ. ಹೆಚ್ಐವಿ ಅಥವಾ ಏಡ್ಸ್ ಹೊಂದಿರುವವರಿಗೆ ಅನುಕಂಪ ಬೇಕಾಗುತ್ತದೆ ಮತ್ತು ಅದಕ್ಕಾಗಿ ನಾವು ಪಶ್ಚಾತ್ತಾಪವನ್ನು ವ್ಯಕ್ತಪಡಿಸಬೇಕೆಂದು ಜನರು ಅಂದುಕೊಳ್ಳುತ್ತಾರೆ. ನಾವು, ''ಪಶ್ಚಾತ್ತಾಪ ಪಡಬೇಡಿ. ಎಲ್ಲರೂ ಸಾಯುವವರೇ ಎಂದು ಹೇಳಿದೆವು. ನಾವು ಹೇಳಬಹುದಾದದ್ದೆಂದರೆ, ''ಸರಿ ನನಗಾಗಿಯೂ ಸಹ ಒಂದು ಸೀಟನ್ನು ಕಾದರಿಸು. ನಾನು ಸ್ವಲ್ಪ ತಡವಾಗಿ ಬರುತ್ತೇನೆ. ಹೇಗಿದ್ದರೂ ನೀವೂ ಸಾಯುತ್ತೀರಿ. ನಾನೂ ಸಾಯುತ್ತೇನೆ, ಎಲ್ಲರೂ ಸಾಯುತ್ತಾರೆ. ವೈದ್ಯರು ಸಾಯುತ್ತಾರೆ ಮತ್ತು ರೋಗಿಗಳೂ ಸಾಯುತ್ತಾರೆ. ಎಲ್ಲರೂ ಸಾಯುವಂತಹ ಸ್ಥಳ ಇದು. ಸಾವು ಎನ್ನುವಂತದ್ದು ಖಂಡಿತ, ಎಲ್ಲರಿಗೂ ಖಚಿತವಾದದ್ದು''.
ನೀವು ಹೇಗೆ ಸಾಯುತ್ತೀರಿ ಎನ್ನುವುದು ಬಹಳ ಮುಖ್ಯ-ನಿಮ್ಮ ಮುಖದ ಮೇಲೆ ಒಂದು ಮುಗುಳ್ನಗೆಯನ್ನು ಇಟ್ಟುಕೊಂಡು ಸಾಯುತ್ತೀರೆ ಅಥವಾ ಗೊಣಗುತ್ತಲೇ ಇದ್ದು, ದುಃಖವನ್ನು ಅನುಭವಿಸುತ್ತಲೇ ಇರುತ್ತೀರೆ? ತಾವು ಯಾವಾಗ ಸಾಯುತ್ತೇವೆಂದು ಯಾರಿಗೂ ತಿಳಿದಿಲ್ಲ. ನೀವು ಒಂದು ಅಪಘಾತದಲ್ಲಿ ಅಥವಾ ಭೂಕಂಪದಲ್ಲಿ ಸಿಲುಕಿ ಬೀಳಬಹುದು. ಕೇವಲ ಅನಾರೋಗ್ಯ ಪೀಡಿತರು ಮಾತ್ರ ಸಾಯುವುದಿಲ್ಲ, ಆರೋಗ್ಯವಂತರೂ ಸಾಯುತ್ತಾರೆ. ಸಾವಿಗೂ, ಅನಾರೋಗ್ಯಕ್ಕೂ ಯಾವ ಸಂಬಂಧವೂ ಇಲ್ಲ. ಅನೇಕ ಸಲ ಅನಾರೋಗ್ಯ ಪೀಡಿತರು ತಮ್ಮ ಜೀವಾವಧಿಯನ್ನು ದೀರ್ಘಕಾಲದವರೆಗೆ ಹೆಚ್ಚಿಸಿಕೊಳ್ಳುತ್ತಾರೆ. ಅನೇಕ ಸಲ ಆರೋಗ್ಯವಂತರು ಬಹು ಬೇಗ ಸಾಯುತ್ತಾರೆ.
ಭಯದ ಮೂಲ ಕಾರಣವನ್ನು ಕೇವಲ ಅರ್ಥಮಾಡಿಕೊಳ್ಳುವುದರಿಂದ ಮತ್ತು ಗಮನಿಸುವುದರಿಂದ ನಿರ್ಮೂಲನ ಮಾಡಬಹುದು. ಮನಸ್ಸಿನ ಮೂಲ ಕಾರಣದ ಮೇಲೆ, ಚೇತನದ ಮೇಲೆ ಗಮನವನ್ನು ಇರಿಸಿದಾಗ ಆರೋಗ್ಯವನ್ನು ಮತ್ತೆ ಪಡೆದುಕೊಳ್ಳಬಹುದು, ಏಕೆಂದರೆ ಶುದ್ಧ ಚೇತನವು ಶುದ್ಧ ಪ್ರೇಮವೇ ಆಗಿದೆ ಮತ್ತು ಈ ಭೂಮಿಯ ಮೇಲಿರುವ ಅತೀ ದೊಡ್ಡ ವ್ಯಾಧಿನಿವಾರಕ, ಅತ್ಯುನ್ನತ ಶಕ್ತಿಯೆಂದರೆ ಪ್ರೇಮ.