ಆ್ಯಪ್ನಗರ

ಬೋಧಿವೃಕ್ಷ: ಕೊಡುವ ಅಧಿಕಾರ

ಸಮಾಜವಾದವೆನ್ನುವುದರ ಗುರಿಯು ಬಂಡವಾಳವಾದವನ್ನು ಸುಮ್ಮನೆ ಕೆಳಗೆ ತರುವುದೇ ಆಗಿದೆ. ಆಷ್ಟರವರೆಗೆ ಅದು ವೇದಾಂತದ ಗುರಿಯೇ ಆಗಿದೆ.

Vijaya Karnataka Web 27 Mar 2017, 10:02 am

ಮೊಟ್ಟ ಮೊದಲು ' ಸೋಷಿಯಾಲಿಸಂ ಎಂಬ ಹೆಸರಿನ ವಿಷಯದಲ್ಲಿ ರಾಮನು ಅದನ್ನು ಇಂಡಿವಿಡ್ಯುಲಿಸಂ- ವ್ಯಕ್ತಿ ಸ್ವಾತಂತ್ರ್ಯವಾದದೆಂದು ಕರೆಯಲು ಹೆಚ್ಚು ಇಷ್ಟಪಡುತ್ತಾನೆ. ಸೋಷಿಯಾಲಿಸಂ ಎಂಬ ಶಬ್ದವು ಸಮಾಜದ ಆಳ್ವಿಕೆಯ ಪ್ರಭುತ್ವದ ಭಾವನೆಗೆ ಪ್ರಾಧಾನ್ಯ ಕೊಡುತ್ತದೆ. ಅದು ವ್ಯಕ್ತಿ ಸ್ವಾತಂತ್ರ್ಯವು ಸಮಾಜದ ಹಿತಕ್ಕೆ ಸಂಪೂರ್ಣವಾಗಿ ಅಧೀನವಾಗಿರಬೇಕೆಂಬ ವಾದ; ಮತ್ತು ಆ ವಾದದಿಂದ ಬಂದ ಸಿದ್ಧಾಂತಗಳು, ಉತ್ಪತ್ತಿ ಸಾಧನಗಳು, ಬಂಡವಾಳ, ಭೂಮಿ, ಆಸ್ತಿ ಮೊದಲಾದವುಗಳನ್ನು ಒಟ್ಟು ಸಮಾಜವಾಗಲಿ ಅದರ ಪರವಾಗಿ ಸರಕಾರವಾಗಲಿ ವಹಿಸಿಕೊಂಡು ಅದು ಅವನ್ನು ಸಮಾಜದ ಎಲ್ಲರ ಹಿತಾರ್ಥವಾಗಿ ಹಂಚಿ ನಿರ್ವಹಿಸಬೇಕು ಎಂಬ ವಾದ. ಸ್ಪರ್ಧೆಗೆ ಬದಲು ಸಹಕಾರ ಪದ್ಧತಿ, ಭೂಮಿ ಬಂಡವಾಳಗಳಲ್ಲಿ ರಾಷ್ಟ್ರಸ್ವಾಮ್ಯ, ಉತ್ಪನ್ನಗಳನ್ನು ರಾಷ್ಟ್ರವೇ ಹಂಚುವುದು , ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ಉಚಿತ ಊಟ, ಪಿತ್ರಾರ್ಜಿತವಾದ ಹಕ್ಕನ್ನು ರದ್ದುಗೊಳಿಸುವುದು ಇವೇ ಮೊದಲಾದವು ಸಮಾಜವಾದದ ಕಾರ್ಯ ನೀತಿಗಳು. ಆದರೆ ರಾಮನು ಹೇಳುವುದೇನೆಂದರೆ, ಇಡೀ ಜಗತ್ತಿನ ಸಮಸ್ತ ವಿಶ್ವದ ಎದುರಾಗಿ ವ್ಯಕ್ತಿಯ ಪರಮಾಧಿಕಾರವನ್ನು- ಪಾರಮ್ಯವನ್ನು ಸಾಧಿಸುವುದೇ, ಒತ್ತಾಯಪಡಿಸುವುದೇ, ಸತ್ಯದ ಸರಿಯಾದ ಮನೋಭಾವ. ನಿಜವಾದ ಚೈತನ್ಯ. ಇದರಿಂದ ಏನೂ ಚಿಂತೆಯಿಲ್ಲ. ಇದನ್ನೇ ರಾಮನು ವ್ಯಕ್ತಿ ( ಸ್ವಾತಂತ್ರ್ಯ) ವಾದ ಎನ್ನುವುದು. ಇದನ್ನೇ ಸೋಷಿಯಾಲಿಸಂ- ಸಮಾಜವಾದ ಎಂದು ಕರೆದುಕೊಳ್ಳಲಿ ವ್ಯಕ್ತಿಯ ನಿಲುಮೆಯಿಂದ ಇದನ್ನೇ ವೇದಾಂತವು ಉಪದೇಶಿಸುತ್ತದೆ.

ಸಮಾಜವಾದವೆನ್ನುವುದರ ಗುರಿಯು ಬಂಡವಾಳವಾದವನ್ನು ಸುಮ್ಮನೆ ಕೆಳಗೆ ತರುವುದೇ ಆಗಿದೆ. ಆಷ್ಟರವರೆಗೆ ಅದು ವೇದಾಂತದ ಗುರಿಯೇ ಆಗಿದೆ. ಅದು ಸುಮ್ಮನೆ ನಿಮ್ಮ ಎಲ್ಲಾ ಸ್ವಾಮಿತ್ವದ ಭಾವನೆಯನ್ನೂ ನಿಮ್ಮಿಂದ ಕಳಚುವುದೇ, ಸುಲಿಯುವುದೇ ಆಗಿದೆ. ಅದು ನಿಮ್ಮ ಎಲ್ಲಾ ಆಸ್ತಿಪಾಸ್ತಿಗಳ ಸಂಗ್ರಹಗಳ ಸ್ವಾರ್ಥಪರವಾದ ಸಂಪತ್ತಿನ ಭಾವನೆಯನ್ನೂ ಗಾಳಿಗೆ ತೂರಿ ನಿಮ್ಮನ್ನು ನಿಸ್ವಾರ್ಥಿಗಳನ್ನಾಗಿ ಮಾಡುವುದಾಗಿದೆ. ಇದೇ ವೇದಾಂತ, ಇದೇ ಸಮಾಜವಾದ. ಎರಡರ ಗುರಿಗಳೂ ಒಂದೆ.

ವೇದಾಂತವೂ ಸಮತೆಯನ್ನೂ, ಸಮಾನತೆಯನ್ನು ಉಪದೇಶಿಸುತ್ತವೆ. ನಿಜವಾದ ಸಮಾಜವಾದದ ಗುರಿಯೂ ಇದೇ ಇರಬೇಕು. ಅದರಲ್ಲಿ ಹೊರಗಿನ ಯಾವ ಆಸ್ತಿಗೂ ಸ್ವತ್ತಿಗೂ ಸ್ವಾಮ್ಯಕ್ಕೂ ಗೌರವವಾಗಲೀ, ಗಣನೆಯಾಗಲೀ ಇರಬಾರದು. ಆದರೆ ಒಬ್ಬ ಮನುಷ್ಯನು ಸ್ವತ್ತು, ಸಂಪತ್ತು, ಸ್ವಾಮಿತ್ವ, ಒಡೆತನ ಆಸ್ತಿ, ಸ್ವಾರ್ಥ ಸಂಗ್ರಹಣೆ ಮೊದಲಾದ ಎಲ್ಲಾ ಭಾವನೆಗಳನ್ನು ಅವುಗಳಲ್ಲಿ ಆಂಟಿಕೊಂಡಿರುವುದನ್ನೂ ಅಸಕ್ತಿಯನ್ನೂ ಹೊರತು ಆವನು ಭೂಮಿಯ ಮೇಲೆ ಎಂದೂ ಸುಖವನ್ನು ಕಾಣುವುದು ಸಾಧ್ಯವಲ್ಲ. ಮನುಷ್ಯನು ಇದನ್ನೆಲ್ಲಾ ಸುಮ್ಮನೆ ಬಿಟ್ಟುಬಿಡಬೇಕೆಂದು ಸಮಾಜವಾದವು ಹೇಳುತ್ತದೆ. ಆದರೆ ಹೀಗೆ ಮಾಡುವುದಕ್ಕೆ ಕಾರಣವೇನು? ಅಗತ್ಯವೇನು? ಪ್ರಯೋಜನವೇನು? ಎನ್ನುವುದನ್ನು ವೇದಾಂತವು ಮಹತ್ತಾದ ವಿಚಾರ ಪೂರ್ವಕವಾಗಿ ಭೋದಿಸುತ್ತದೆ. ಸಮಾಜವಾದವೆನ್ನುವುದು ಪ್ರಪಂಚ- ವಸ್ತು- ವಿದ್ಯಮಾನ- ವ್ಯವಹಾರಗಳ ಕೇವಲ ಮೇಲ್ಮೈಯ ವ್ಯಾಸಂಗವಾಗಿದೆ. ಇದರಿಂದ ಮಾನವ ಜನಾಂಗವು ಪರಸ್ಪರ ಸಮಾನ ಭಾವ( Tಛ್ಟಿಞs O್ಛ ಛಿಟ್ಠಿa್ಝಜಿಠಿy) ಸಹೋದರಭಾವ ( ಊ್ಟaಠಿಛ್ಟ್ಞಿಜಿಠಿy) ಮತ್ತು ಪ್ರೇಮಭಾವ ( ಔಟvಛಿ) ಇವುಗಳಿಂದ ಜೀವಿಸಬೇಕು. ಎಂಬ ಸಿದ್ಧಾಂತಕ್ಕೆ ಬರುತ್ತದೆ. ವೇದಾಂತವು ಪ್ರಪಂಚ ವಿಲಾಸವನ್ನು ಸ್ವಾಭಾವಿಕವೂ ಸ್ಥಳೀಯವೂ ಆದ ದೃಷ್ಟಿಯಿಂದ ಪರಿಶೀಲಿಸುತ್ತದೆ. ವೇದಾಂತದ ಪ್ರಕಾರ ಯಾವ ವೈಯಕ್ತಿಕ ಆಸ್ತಿಯ ಒಡೆತನವಾದರೂ ಅಂತರಾತ್ಮನ ವಿರುದ್ಧವಾಗಿ ನಡೆಸಬಹುದಾದಂಥ ಅತ್ಯಂತ ದೈವದ್ರೋಹಕವಾದ ಭ್ರಷ್ಟಾಚಾರವೇ ಆಗಿದೆ. ವೇದಾಂತದ ದೃಷ್ಟಿಯಿಂದ ಮನುಷ್ಯನಿಗಿರುವ ಒಂದೇ ಅಧಿಕಾರವೆಂದರೆ ಕೊಡುವುದು, ಕೊಡುತ್ತಿರುವುದು, ಕೇಳುವ ಅಧಿಕಾರ ಅವನಿಗಿಲ್ಲ. ಕೊಡುವುದಕ್ಕೆ ನಿಮ್ಮಲ್ಲಿ ಏನೂ ಇಲ್ಲವಾದರೆ, ಕ್ರಿಮಿ ಕೀಟಗಳು ತಿನ್ನುವುದಕ್ಕೆ ನಿಮ್ಮ ದೇಹವನ್ನಾದರೂ ಕೊಡಿ. ನೀವು ಕೊಡುವ ವಸ್ತುವಿಗೆ ಬೆಲೆಯಿಲ್ಲ.

Vijaya Karnataka Web bodhivruksha swami ramateertha thoughts
ಬೋಧಿವೃಕ್ಷ: ಕೊಡುವ ಅಧಿಕಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ