- ಜಿಡ್ಡು ಕೃಷ್ಣಮೂರ್ತಿ
ಆ ನದಿಯ ದಡದಲ್ಲೊಂದು ಮರ ನಿಂತಿದೆ. ಹಲವು ವಾರಗಳಿಂದ ದಿನಾಲೂ ಮುಂಜಾನೆ ಸೂರ್ಯೋದಯದ ವೇಳೆ ಆ ಮರವನ್ನು ನೋಡುತ್ತಿದ್ದೇನೆ. ಹೊತ್ತು ನಿಧಾನವಾಗಿ ಮೇಲೇರುತ್ತಿದ್ದಂತೆ ಆ ಮರ ಒಮ್ಮೆಲೇ ಹೊಂಬಣ್ಣ ತಾಳುತ್ತದೆ. ಎಲೆಗಳು ಜೀವಂತಿಕೆಯಿಂದ ತುಂಬಿ ತುಳುಕುತ್ತವೆ. ನೋಡನೋಡುತ್ತಿದ್ದಂತೆ ಆ ಮರದ ಅಪೂರ್ವ ಸೌಂದರ್ಯ ಸುತ್ತಮುತ್ತಲಿನ ಪ್ರದೇಶದ ಮೇಲೆಲ್ಲ ಹಬ್ಬಿಕೊಳ್ಳುತ್ತದೆ. ಹೊತ್ತು ಇನ್ನೂ ಮೇಲೆಕ್ಕೇರಿದಾಗ ಮರದ ಎಲೆಗಳು ಗಾಳಿಗೆ ಶಬ್ದ ಮಾಡುತ್ತ ಕುಣಿಯಲು ಆರಂಭಿಸುತ್ತವೆ. ಪ್ರತಿಕ್ಷ ಣವೂ ಆ ಮರ ಹೊಸ ಹೊಸ ರೂಪ ತಾಳುತ್ತದೆ. ಸೂರ್ಯೋದಯದ ಮೊದಲು ಆ ಮರ ಕಪ್ಪು ರಾಶಿಯ ವೈಭವದಂತೆ, ಸ್ತಬ್ಧವಾಗಿ ಮಂಕು ಕವಿದಂತೆ ನಮ್ಮಿಂದೆಲ್ಲ ದೂರ ಒಂಟಿಯಾಗಿ ನಿಂತಂತೆ ಕಂಡರೆ, ಬೆಳಕು ಹರಿದಂತೆ ಎಲೆಗಳು, ಬೆಳಕಿನ ಜತೆ ಆಡುತ್ತ ಸಂಪೂರ್ಣ ಹೊಸ ಅನುಭವ ಕೊಡುತ್ತವೆ. ಹೊತ್ತು ನೆತ್ತಿಗೇರಿದಂತೆ ಆ ಮರದ ನೆರಳು ದಟ್ಟವಾಗಿ, ಅದರಡಿಯಲ್ಲಿ ಕೂತು ನೀನು ಉರಿಬಿಸಿಲಿನ ಝಳದಿಂದ ರಕ್ಷ ಣೆ ಪಡೆಯುತ್ತೀಯ. ಆ ಮರದ ಸಂಗಾತಿಯಾದರೆ ನೀನು ಏಕಾಕಿತನದ ನೋವನ್ನು ಅನುಭವಿಸುವುದಿಲ್ಲ. ಅದರ ಜೊತೆ ಬೆಳೆದ ಸಂಬಂಧವು ಗಾಢವಾಗಿ ನಿನ್ನನ್ನು ಆವರಿಸಿಕೊಳ್ಳುತ್ತ ನಿನಗೆ ಭದ್ರತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುತ್ತದೆ.
ಒಂದು ಮರದ ಸಂಪೂರ್ಣ ಗುಣ ಸೌಂದರ್ಯವನ್ನು ಮನಸ್ಸಿನೊಳಗೆ ನಡೆಯುತ್ತಿರುವ ನಿರಂತರ ಹರಟೆ, ಹೋಲಿಕೆಗಳಿಲ್ಲದೆ ಗಮನಿಸುತ್ತಿದ್ದೇವೆಯೇ ನಾವು? ಮರದ ಅಖಂಡತೆ, ಅಪಾರತೆ, ಘನತೆಯನ್ನು ಒರಟಾದ ತೊಗಟೆಯ ಅಪೂರ್ವ ಸೌಂದರ್ಯವನ್ನು ಗ್ರಹಿಸಿದ್ದೇವೆಯೇ? ಗಾಳಿ-ಎಲೆಗಳ ಆಟದ ಸದ್ದಿಲ್ಲದೆ ಮರದ ಒಡಲಿನ ಧ್ವನಿಯನ್ನು, ತೂಗುವ ಗೆಲ್ಲುಗಳ ನಾದವನ್ನು, ಬೇರು ಕಾಂಡಗಳ ಆಳದ ಮೌನ ಕಂಪನವನ್ನು ಆಲಿಸಿದ್ದೇವೆಯೇ? ಈ ಧ್ವನಿ ಆಲಿಸಲು ನಿಮಗೆ ಸೂಕ್ಷ ್ಮ ಸಂವೇದನೆ ಬೇಕಾಗುತ್ತದೆ. ಇದು ಆಧುನಿಕ ಜಗತ್ತಿನ ಗೌಜು ಗದ್ದಲವಲ್ಲ. ಮನಸ್ಸಿನೊಳಗೆ ನಡೆಯುವ ಹರಟೆಯ ಸಪ್ಪಳವಲ್ಲ. ಮನುಷ್ಯರೊಳಗಿನ ಕೋಳಿ ಜಗಳದ ಗಲಾಟೆಯಲ್ಲ ಅಥವಾ ಯುದ್ಧದ ಕ್ಷ ುದ್ರ ಕರ್ಕಶ ಸದ್ದಲ್ಲ. ಇದು ವಿಶ್ವದ ಅಂತರಾಳದ ಧ್ವನಿ ತರಂಗ.
ಸಿಮೆಂಟಿನ ಬಿರುಕಿನಲ್ಲಿ ತನ್ನನ್ನೇ ತಾನು ನೂಕಿಕೊಂಡು ಚಿಗುರುವ ಗರಿಕೆ, ಮೋಡಗಳಿಂದ ಆವರಿಸಿ, ಮರೆಯಾಗಿರುವ ಬೆಟ್ಟದ ಸಾಲುಗಳು, ಈ ಸೂರ್ಯ, ಈ ನೀರು, ಈ ಗಾಳಿ ನಮ್ಮ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತವೆ. ಇದೊಂದು ಭಾವಾವೇಶದ ಅಥವಾ ರಂಜನೆಯ ಕಲ್ಪನೆಯಲ್ಲ. ಭೂಮಿಯ ಮೇಲೆ ಚಲಿಸುವ ಅಥವಾ ಜೀವಂತಿಕೆಯಿಂದ ತುಂಬಿರುವ ಎಲ್ಲ ಸಂಗತಿಗೊಳಿಂದಿಗೆ ಸಹಜ ಸಂಬಂಧ ಏರ್ಪಟ್ಟಾಗ ಒದಗುವ ಸತ್ಯ. ನಾನು ಮೌನದಲ್ಲಿ ನಡೆಯುತ್ತ ಹೋಗುತ್ತಿರುವಾಗ ಚಳಿಯಲ್ಲಿ ಉದುರಿದ ಕೆಂಪು ಒತ್ತಿದ ಅರಸಿನ ಬಣ್ಣದ ಒಂದು ಸತ್ತ ದಪ್ಪ ಎಲೆ ನೋಡಿದೆ. ಅದು ಬಾಡಿರಲಿಲ್ಲ. ಸಾವಿನಲ್ಲೂ ಆ ಎಲೆಯಲ್ಲಿ ಸರಳತೆ ತುಂಬಿತ್ತು. ಸುಂದರವಾಗಿತ್ತು. ಆ ಎಲೆಯಲ್ಲಿ ಇಡೀ ಮರದ ಸತ್ವ ಅಡಗಿತ್ತು. ಮರದ ಸೌಂದರ್ಯ ಮತ್ತು ಜೀವಂತಿಕೆಯನ್ನು ಅದು ಸಾರುತ್ತಿತ್ತು. ಆ ಎಲೆಯನ್ನು ಗಮನಿಸಿದೆ. ಅದರ ನರನಾಡಿಗಳೆಲ್ಲವೂ ಸ್ಪಷ್ಟವಾಗಿ ಕಾಣುತ್ತಿದ್ದು ಆ ಎಲೆಯೇ ಮರದಂತಿತ್ತು. ಮನುಷ್ಯ ಏಕೆ ಸಹಜವಾಗಿ ಸುಂದರವಾಗಿ ಸಾಯುವುದಿಲ್ಲ?
ಆ ನದಿಯ ದಡದಲ್ಲೊಂದು ಮರ ನಿಂತಿದೆ. ಹಲವು ವಾರಗಳಿಂದ ದಿನಾಲೂ ಮುಂಜಾನೆ ಸೂರ್ಯೋದಯದ ವೇಳೆ ಆ ಮರವನ್ನು ನೋಡುತ್ತಿದ್ದೇನೆ. ಹೊತ್ತು ನಿಧಾನವಾಗಿ ಮೇಲೇರುತ್ತಿದ್ದಂತೆ ಆ ಮರ ಒಮ್ಮೆಲೇ ಹೊಂಬಣ್ಣ ತಾಳುತ್ತದೆ. ಎಲೆಗಳು ಜೀವಂತಿಕೆಯಿಂದ ತುಂಬಿ ತುಳುಕುತ್ತವೆ. ನೋಡನೋಡುತ್ತಿದ್ದಂತೆ ಆ ಮರದ ಅಪೂರ್ವ ಸೌಂದರ್ಯ ಸುತ್ತಮುತ್ತಲಿನ ಪ್ರದೇಶದ ಮೇಲೆಲ್ಲ ಹಬ್ಬಿಕೊಳ್ಳುತ್ತದೆ. ಹೊತ್ತು ಇನ್ನೂ ಮೇಲೆಕ್ಕೇರಿದಾಗ ಮರದ ಎಲೆಗಳು ಗಾಳಿಗೆ ಶಬ್ದ ಮಾಡುತ್ತ ಕುಣಿಯಲು ಆರಂಭಿಸುತ್ತವೆ. ಪ್ರತಿಕ್ಷ ಣವೂ ಆ ಮರ ಹೊಸ ಹೊಸ ರೂಪ ತಾಳುತ್ತದೆ. ಸೂರ್ಯೋದಯದ ಮೊದಲು ಆ ಮರ ಕಪ್ಪು ರಾಶಿಯ ವೈಭವದಂತೆ, ಸ್ತಬ್ಧವಾಗಿ ಮಂಕು ಕವಿದಂತೆ ನಮ್ಮಿಂದೆಲ್ಲ ದೂರ ಒಂಟಿಯಾಗಿ ನಿಂತಂತೆ ಕಂಡರೆ, ಬೆಳಕು ಹರಿದಂತೆ ಎಲೆಗಳು, ಬೆಳಕಿನ ಜತೆ ಆಡುತ್ತ ಸಂಪೂರ್ಣ ಹೊಸ ಅನುಭವ ಕೊಡುತ್ತವೆ. ಹೊತ್ತು ನೆತ್ತಿಗೇರಿದಂತೆ ಆ ಮರದ ನೆರಳು ದಟ್ಟವಾಗಿ, ಅದರಡಿಯಲ್ಲಿ ಕೂತು ನೀನು ಉರಿಬಿಸಿಲಿನ ಝಳದಿಂದ ರಕ್ಷ ಣೆ ಪಡೆಯುತ್ತೀಯ. ಆ ಮರದ ಸಂಗಾತಿಯಾದರೆ ನೀನು ಏಕಾಕಿತನದ ನೋವನ್ನು ಅನುಭವಿಸುವುದಿಲ್ಲ. ಅದರ ಜೊತೆ ಬೆಳೆದ ಸಂಬಂಧವು ಗಾಢವಾಗಿ ನಿನ್ನನ್ನು ಆವರಿಸಿಕೊಳ್ಳುತ್ತ ನಿನಗೆ ಭದ್ರತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುತ್ತದೆ.
ಒಂದು ಮರದ ಸಂಪೂರ್ಣ ಗುಣ ಸೌಂದರ್ಯವನ್ನು ಮನಸ್ಸಿನೊಳಗೆ ನಡೆಯುತ್ತಿರುವ ನಿರಂತರ ಹರಟೆ, ಹೋಲಿಕೆಗಳಿಲ್ಲದೆ ಗಮನಿಸುತ್ತಿದ್ದೇವೆಯೇ ನಾವು? ಮರದ ಅಖಂಡತೆ, ಅಪಾರತೆ, ಘನತೆಯನ್ನು ಒರಟಾದ ತೊಗಟೆಯ ಅಪೂರ್ವ ಸೌಂದರ್ಯವನ್ನು ಗ್ರಹಿಸಿದ್ದೇವೆಯೇ? ಗಾಳಿ-ಎಲೆಗಳ ಆಟದ ಸದ್ದಿಲ್ಲದೆ ಮರದ ಒಡಲಿನ ಧ್ವನಿಯನ್ನು, ತೂಗುವ ಗೆಲ್ಲುಗಳ ನಾದವನ್ನು, ಬೇರು ಕಾಂಡಗಳ ಆಳದ ಮೌನ ಕಂಪನವನ್ನು ಆಲಿಸಿದ್ದೇವೆಯೇ? ಈ ಧ್ವನಿ ಆಲಿಸಲು ನಿಮಗೆ ಸೂಕ್ಷ ್ಮ ಸಂವೇದನೆ ಬೇಕಾಗುತ್ತದೆ. ಇದು ಆಧುನಿಕ ಜಗತ್ತಿನ ಗೌಜು ಗದ್ದಲವಲ್ಲ. ಮನಸ್ಸಿನೊಳಗೆ ನಡೆಯುವ ಹರಟೆಯ ಸಪ್ಪಳವಲ್ಲ. ಮನುಷ್ಯರೊಳಗಿನ ಕೋಳಿ ಜಗಳದ ಗಲಾಟೆಯಲ್ಲ ಅಥವಾ ಯುದ್ಧದ ಕ್ಷ ುದ್ರ ಕರ್ಕಶ ಸದ್ದಲ್ಲ. ಇದು ವಿಶ್ವದ ಅಂತರಾಳದ ಧ್ವನಿ ತರಂಗ.
ಸಿಮೆಂಟಿನ ಬಿರುಕಿನಲ್ಲಿ ತನ್ನನ್ನೇ ತಾನು ನೂಕಿಕೊಂಡು ಚಿಗುರುವ ಗರಿಕೆ, ಮೋಡಗಳಿಂದ ಆವರಿಸಿ, ಮರೆಯಾಗಿರುವ ಬೆಟ್ಟದ ಸಾಲುಗಳು, ಈ ಸೂರ್ಯ, ಈ ನೀರು, ಈ ಗಾಳಿ ನಮ್ಮ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತವೆ. ಇದೊಂದು ಭಾವಾವೇಶದ ಅಥವಾ ರಂಜನೆಯ ಕಲ್ಪನೆಯಲ್ಲ. ಭೂಮಿಯ ಮೇಲೆ ಚಲಿಸುವ ಅಥವಾ ಜೀವಂತಿಕೆಯಿಂದ ತುಂಬಿರುವ ಎಲ್ಲ ಸಂಗತಿಗೊಳಿಂದಿಗೆ ಸಹಜ ಸಂಬಂಧ ಏರ್ಪಟ್ಟಾಗ ಒದಗುವ ಸತ್ಯ. ನಾನು ಮೌನದಲ್ಲಿ ನಡೆಯುತ್ತ ಹೋಗುತ್ತಿರುವಾಗ ಚಳಿಯಲ್ಲಿ ಉದುರಿದ ಕೆಂಪು ಒತ್ತಿದ ಅರಸಿನ ಬಣ್ಣದ ಒಂದು ಸತ್ತ ದಪ್ಪ ಎಲೆ ನೋಡಿದೆ. ಅದು ಬಾಡಿರಲಿಲ್ಲ. ಸಾವಿನಲ್ಲೂ ಆ ಎಲೆಯಲ್ಲಿ ಸರಳತೆ ತುಂಬಿತ್ತು. ಸುಂದರವಾಗಿತ್ತು. ಆ ಎಲೆಯಲ್ಲಿ ಇಡೀ ಮರದ ಸತ್ವ ಅಡಗಿತ್ತು. ಮರದ ಸೌಂದರ್ಯ ಮತ್ತು ಜೀವಂತಿಕೆಯನ್ನು ಅದು ಸಾರುತ್ತಿತ್ತು. ಆ ಎಲೆಯನ್ನು ಗಮನಿಸಿದೆ. ಅದರ ನರನಾಡಿಗಳೆಲ್ಲವೂ ಸ್ಪಷ್ಟವಾಗಿ ಕಾಣುತ್ತಿದ್ದು ಆ ಎಲೆಯೇ ಮರದಂತಿತ್ತು. ಮನುಷ್ಯ ಏಕೆ ಸಹಜವಾಗಿ ಸುಂದರವಾಗಿ ಸಾಯುವುದಿಲ್ಲ?