ಶ್ರೀನಿವಾಸ ಅರ್ಕ
ನೀವು ಏನನ್ನು ಯೋಚಿಸುತ್ತೀರೋ ಅದೇ ನೀವು ಎನ್ನುವುದರೊಂದಿಗೆ, ನೀವು ಏನನ್ನು ತಿನ್ನುತ್ತೀರೋ ಅದೇ ನೀವು ಎಂದು ಹೇಳಬಹುದು. ಆಹಾರ ತೆಗೆದುಕೊಳ್ಳುವ ಮುನ್ನ ಆ ಹೊತ್ತಿನ ಊಟಕ್ಕಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಆ ಆಹಾರ ಸಿಗಲು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣವಾದ ಎಲ್ಲರನ್ನೂ ಸ್ಮರಿಸಿಕೊಳ್ಳಬೇಕು. ಈ ಕೃತಜ್ಞತೆಯಿಂದ ನಾವು ಹೆಚ್ಚು ಹೆಚ್ಚು ಮಾನವೀಯರಾಗುತ್ತೇವೆ. ಆಹಾರ ಕೇವಲ ಪೌಷ್ಟಿಕಾಂಶಗಳನ್ನು ಮಾತ್ರವಲ್ಲದೆ, ಸೂಕ್ಷ್ಮಾಣು ಜೀವಿಗಳನ್ನೂ ಒಳಗೊಂಡಿರುತ್ತದೆ. ನಾವು ತಿನ್ನುವಂತಹ ಆಹಾರ ಮತ್ತು ಅದನ್ನು ಸೇವಿಸುವಾಗ ನಿಮ್ಮ ಆಲೋಚನೆಗಳು ನಿಮ್ಮ ಚಟುವಟಿಕೆಗಳ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ.
ಊಟ ಮಾಡುವಾಗ ನಾವು ಎಷ್ಟೋ ಸೂಕ್ಷ್ಮ ವಿಷಯಗಳನ್ನು ಗಮನಿಸಿರುವುದಿಲ್ಲ. ಊಟದ ಪ್ರತಿಯೊಂದು ತುತ್ತನ್ನೂ ಸವಿಯುವುದರಿಂದ ಅದರಲ್ಲಿರುವ ಅಗತ್ಯ ಪೋಷಕಾಂಶಗಳನ್ನು ದೇಹವು ಉತ್ತಮ ರೀತಿಯಲ್ಲಿ ಹೀರಿಕೊಳ್ಳಲು ನೆರವಾಗುತ್ತದೆ. ಊಟ ಮಾಡುವಾಗ ಅದರತ್ತ ಗಮನ ಕೇಂದ್ರೀಕರಿಸುವುದರಿಂದ, ಜೀರ್ಣಾಂಗ ವ್ಯವಸ್ಥೆಯ ವಿವಿಧ ಅವಯವಗಳು ಮತ್ತು ಮುಖ್ಯ ನರವ್ಯವಸ್ಥೆಯ ನಡುವೆ ಉತ್ತಮ ಸಹಕಾರ ಏರ್ಪಡುತ್ತದೆ. ಹೆಚ್ಚು ಮಾತನಾಡುವುದರಿಂದ ನೀವು ಗಮನ ಕೇಂದ್ರೀಕರಿಸಲು ಅಡಚಣೆಯಾಗುತ್ತದೆ. ಆಹಾರ ಸೇವನೆಯ ಸಂತೋಷವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ ಅಥವಾ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆಹಾರ ಸೇವನೆ ವೇಳೆ ಮಾತನಾಡುವುದು ತೀರಾ ಕೆಟ್ಟದ್ದೇನೂ ಅಲ್ಲ. ವಾಸ್ತವವಾಗಿ ಹೇಳುವುದಾದರೆ, ನಿಮ್ಮೊಂದಿಗೆ ಊಟಕ್ಕೆ ಕುಳಿತಿರುವ ಇತರೆ ಯಾರಿಗೂ ನೋವು ಉಂಟು ಮಾಡದ ರೀತಿಯಲ್ಲಿ ಸಕಾರಾತ್ಮಕ ಮತ್ತು ತಮಾಷೆಯಾಗಿ ಮಾತನಾಡುವುದರಿಂದ ನಿಮಗೆ ಹೆಚ್ಚಿನ ಸಂತೃಪ್ತಿ ಮತ್ತು ಸಕಾರಾತ್ಮಕ ಶಕ್ತಿ ದೊರೆಯುತ್ತದೆ. ಆದರೆ ತಿನ್ನುವಾಗ ನಕಾರಾತ್ಮಕ ಆಲೋಚನೆಗಳು ಮತ್ತು ವಿಷಯಗಳತ್ತ ಗಮನ ಹರಿಸಬೇಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಎರಡು ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳೋಣ. ಸನ್ನಿವೇಶ ಒಂದು: ಟಿವಿ ಕಾರ್ಯಕ್ರಮ ನೋಡುವಾಗ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ತಿನ್ನಿ. ಏನಾಗುತ್ತದೆ ಎಂಬುದನ್ನು ಗಮನಿಸಿಕೊಳ್ಳಿ. ನೀವು ತಿನ್ನುತ್ತಿರುವ ಆಹಾರ ಸರಿಯಾಗಿ ರುಚಿಸುತ್ತಿಲ್ಲ ಎಂಬುದನ್ನು ಗಮನಿಸುತ್ತೀರಿ. ನೀವು ಸಾಮಾನ್ಯವಾಗಿ ತಿನ್ನುವುದಕ್ಕಿಂತಲೂ ಸ್ವಲ್ಪ ಜಾಸ್ತಿ ತಿಂದಿರುತ್ತೀರಿ ಆದರೂ ತೃಪ್ತಿಯಿರುವುದಿಲ್ಲ. ನಿಮಗೆ ಸಾಕಷ್ಟು ಶಕ್ತಿ ಬಂದಂತೆ ಅನಿಸುವುದಿಲ್ಲ. ನಿಮ್ಮ ನಿದ್ರೆಯಲ್ಲೂ ಅಡಚಣೆಯಾಗುವ ಸಾಧ್ಯತೆಯಿದೆ. ಸನ್ನಿವೇಶ ಎರಡು: ಈಗ ಯಾವುದೇ ಅಡಚಣೆ ಇಲ್ಲದೆ, ಪ್ರಜ್ಞಾಪೂರ್ವಕವಾಗಿ ತಲ್ಲೀನರಾಗಿ ತಿನ್ನಲು ಯತ್ನಿಸಿ. ಆಗ ನಿಮಗೆ ಆಹಾರ ಉತ್ತಮವಾಗಿ ರುಚಿಸುತ್ತದೆ. ನೀವು ಸಂತೃಪ್ತರಾಗುತ್ತೀರಿ ಮತ್ತು ಆಹಾರವನ್ನು ಹೆಚ್ಚು ಸಂತೋಷದಿಂದ ಅನುಭವಿಸುತ್ತೀರಿ. ಹೆಚ್ಚು ಶಕ್ತಿ ತುಂಬಿದ ಭಾವನೆ ಉಂಟಾಗುತ್ತದೆ. ನೀವು ಉತ್ತಮ ನಿದ್ರೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನಾವು ತಿನ್ನುವ ಆಹಾರ ನಮ್ಮ ವರ್ತನೆ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬುದನ್ನು ಮರೆಯಬಾರದು. ಸಾತ್ವಿಕ ಆಹಾರ ಸಾತ್ವಿಕ ಶಕ್ತಿಯನ್ನು ಉದ್ದೀಪಿಸುತ್ತದೆ. ನಮ್ಮ ಹಬ್ಬ ಹರಿದಿನಗಳಲ್ಲಿ ದೇವತಾರಾಧನೆ ಜತೆಗೆ ನಿರ್ದಿಷ್ಟ ತಿಂಡಿಗಳು ಬೆಸೆದುಕೊಂಡಿರುವುದನ್ನು ಗಮನಿಸಿದರೆ ಈ ಮಾತಿನ ತಿರುಳು ನಿಮಗೆ ಅರಿವಾಗುತ್ತದೆ. ನೆನಪಿರಲಿ, ನಿಮ್ಮ ದೇಹ ಯಂತ್ರವಲ್ಲ; ಅದರಲ್ಲಿ ಒಂದು ಜೀವವಿದೆ. ಪ್ರಜ್ಞಾಪೂರ್ವಕ ತಿನ್ನುವಿಕೆಯು ಆರೋಗ್ಯದ ಮೇಲೆ ಹೆಚ್ಚುವರಿ ಲಾಭವನ್ನು ತಂದುಕೊಡುತ್ತದೆ.
ನೀವು ಏನನ್ನು ಯೋಚಿಸುತ್ತೀರೋ ಅದೇ ನೀವು ಎನ್ನುವುದರೊಂದಿಗೆ, ನೀವು ಏನನ್ನು ತಿನ್ನುತ್ತೀರೋ ಅದೇ ನೀವು ಎಂದು ಹೇಳಬಹುದು. ಆಹಾರ ತೆಗೆದುಕೊಳ್ಳುವ ಮುನ್ನ ಆ ಹೊತ್ತಿನ ಊಟಕ್ಕಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಆ ಆಹಾರ ಸಿಗಲು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣವಾದ ಎಲ್ಲರನ್ನೂ ಸ್ಮರಿಸಿಕೊಳ್ಳಬೇಕು. ಈ ಕೃತಜ್ಞತೆಯಿಂದ ನಾವು ಹೆಚ್ಚು ಹೆಚ್ಚು ಮಾನವೀಯರಾಗುತ್ತೇವೆ. ಆಹಾರ ಕೇವಲ ಪೌಷ್ಟಿಕಾಂಶಗಳನ್ನು ಮಾತ್ರವಲ್ಲದೆ, ಸೂಕ್ಷ್ಮಾಣು ಜೀವಿಗಳನ್ನೂ ಒಳಗೊಂಡಿರುತ್ತದೆ. ನಾವು ತಿನ್ನುವಂತಹ ಆಹಾರ ಮತ್ತು ಅದನ್ನು ಸೇವಿಸುವಾಗ ನಿಮ್ಮ ಆಲೋಚನೆಗಳು ನಿಮ್ಮ ಚಟುವಟಿಕೆಗಳ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ.
ಊಟ ಮಾಡುವಾಗ ನಾವು ಎಷ್ಟೋ ಸೂಕ್ಷ್ಮ ವಿಷಯಗಳನ್ನು ಗಮನಿಸಿರುವುದಿಲ್ಲ. ಊಟದ ಪ್ರತಿಯೊಂದು ತುತ್ತನ್ನೂ ಸವಿಯುವುದರಿಂದ ಅದರಲ್ಲಿರುವ ಅಗತ್ಯ ಪೋಷಕಾಂಶಗಳನ್ನು ದೇಹವು ಉತ್ತಮ ರೀತಿಯಲ್ಲಿ ಹೀರಿಕೊಳ್ಳಲು ನೆರವಾಗುತ್ತದೆ. ಊಟ ಮಾಡುವಾಗ ಅದರತ್ತ ಗಮನ ಕೇಂದ್ರೀಕರಿಸುವುದರಿಂದ, ಜೀರ್ಣಾಂಗ ವ್ಯವಸ್ಥೆಯ ವಿವಿಧ ಅವಯವಗಳು ಮತ್ತು ಮುಖ್ಯ ನರವ್ಯವಸ್ಥೆಯ ನಡುವೆ ಉತ್ತಮ ಸಹಕಾರ ಏರ್ಪಡುತ್ತದೆ. ಹೆಚ್ಚು ಮಾತನಾಡುವುದರಿಂದ ನೀವು ಗಮನ ಕೇಂದ್ರೀಕರಿಸಲು ಅಡಚಣೆಯಾಗುತ್ತದೆ. ಆಹಾರ ಸೇವನೆಯ ಸಂತೋಷವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ ಅಥವಾ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆಹಾರ ಸೇವನೆ ವೇಳೆ ಮಾತನಾಡುವುದು ತೀರಾ ಕೆಟ್ಟದ್ದೇನೂ ಅಲ್ಲ. ವಾಸ್ತವವಾಗಿ ಹೇಳುವುದಾದರೆ, ನಿಮ್ಮೊಂದಿಗೆ ಊಟಕ್ಕೆ ಕುಳಿತಿರುವ ಇತರೆ ಯಾರಿಗೂ ನೋವು ಉಂಟು ಮಾಡದ ರೀತಿಯಲ್ಲಿ ಸಕಾರಾತ್ಮಕ ಮತ್ತು ತಮಾಷೆಯಾಗಿ ಮಾತನಾಡುವುದರಿಂದ ನಿಮಗೆ ಹೆಚ್ಚಿನ ಸಂತೃಪ್ತಿ ಮತ್ತು ಸಕಾರಾತ್ಮಕ ಶಕ್ತಿ ದೊರೆಯುತ್ತದೆ. ಆದರೆ ತಿನ್ನುವಾಗ ನಕಾರಾತ್ಮಕ ಆಲೋಚನೆಗಳು ಮತ್ತು ವಿಷಯಗಳತ್ತ ಗಮನ ಹರಿಸಬೇಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಎರಡು ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳೋಣ. ಸನ್ನಿವೇಶ ಒಂದು: ಟಿವಿ ಕಾರ್ಯಕ್ರಮ ನೋಡುವಾಗ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ತಿನ್ನಿ. ಏನಾಗುತ್ತದೆ ಎಂಬುದನ್ನು ಗಮನಿಸಿಕೊಳ್ಳಿ. ನೀವು ತಿನ್ನುತ್ತಿರುವ ಆಹಾರ ಸರಿಯಾಗಿ ರುಚಿಸುತ್ತಿಲ್ಲ ಎಂಬುದನ್ನು ಗಮನಿಸುತ್ತೀರಿ. ನೀವು ಸಾಮಾನ್ಯವಾಗಿ ತಿನ್ನುವುದಕ್ಕಿಂತಲೂ ಸ್ವಲ್ಪ ಜಾಸ್ತಿ ತಿಂದಿರುತ್ತೀರಿ ಆದರೂ ತೃಪ್ತಿಯಿರುವುದಿಲ್ಲ. ನಿಮಗೆ ಸಾಕಷ್ಟು ಶಕ್ತಿ ಬಂದಂತೆ ಅನಿಸುವುದಿಲ್ಲ. ನಿಮ್ಮ ನಿದ್ರೆಯಲ್ಲೂ ಅಡಚಣೆಯಾಗುವ ಸಾಧ್ಯತೆಯಿದೆ. ಸನ್ನಿವೇಶ ಎರಡು: ಈಗ ಯಾವುದೇ ಅಡಚಣೆ ಇಲ್ಲದೆ, ಪ್ರಜ್ಞಾಪೂರ್ವಕವಾಗಿ ತಲ್ಲೀನರಾಗಿ ತಿನ್ನಲು ಯತ್ನಿಸಿ. ಆಗ ನಿಮಗೆ ಆಹಾರ ಉತ್ತಮವಾಗಿ ರುಚಿಸುತ್ತದೆ. ನೀವು ಸಂತೃಪ್ತರಾಗುತ್ತೀರಿ ಮತ್ತು ಆಹಾರವನ್ನು ಹೆಚ್ಚು ಸಂತೋಷದಿಂದ ಅನುಭವಿಸುತ್ತೀರಿ. ಹೆಚ್ಚು ಶಕ್ತಿ ತುಂಬಿದ ಭಾವನೆ ಉಂಟಾಗುತ್ತದೆ. ನೀವು ಉತ್ತಮ ನಿದ್ರೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನಾವು ತಿನ್ನುವ ಆಹಾರ ನಮ್ಮ ವರ್ತನೆ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬುದನ್ನು ಮರೆಯಬಾರದು. ಸಾತ್ವಿಕ ಆಹಾರ ಸಾತ್ವಿಕ ಶಕ್ತಿಯನ್ನು ಉದ್ದೀಪಿಸುತ್ತದೆ. ನಮ್ಮ ಹಬ್ಬ ಹರಿದಿನಗಳಲ್ಲಿ ದೇವತಾರಾಧನೆ ಜತೆಗೆ ನಿರ್ದಿಷ್ಟ ತಿಂಡಿಗಳು ಬೆಸೆದುಕೊಂಡಿರುವುದನ್ನು ಗಮನಿಸಿದರೆ ಈ ಮಾತಿನ ತಿರುಳು ನಿಮಗೆ ಅರಿವಾಗುತ್ತದೆ. ನೆನಪಿರಲಿ, ನಿಮ್ಮ ದೇಹ ಯಂತ್ರವಲ್ಲ; ಅದರಲ್ಲಿ ಒಂದು ಜೀವವಿದೆ. ಪ್ರಜ್ಞಾಪೂರ್ವಕ ತಿನ್ನುವಿಕೆಯು ಆರೋಗ್ಯದ ಮೇಲೆ ಹೆಚ್ಚುವರಿ ಲಾಭವನ್ನು ತಂದುಕೊಡುತ್ತದೆ.