-ಸಿರೀಶ ಜಕಾತಿ
ಮನುಷ್ಯ ತನ್ನ ಆಳದ ಮುಗ್ಧತೆಯನ್ನು ಕಳೆದುಕೊಂಡು ವ್ಯವಹಾರಿಕ ಚಾಲಾಕಿತನವನ್ನು ಅಪ್ಪಿಕೊಂಡು ಒಂದು ಬಗೆಯ ಕೃತಕ ವ್ಯಕ್ತಿತ್ವವನ್ನು ನಿಜ ಎಂದು ಭಾವಿಸುವುದು ಆನಂತರ ಮರಳಿ ಸಹಜತೆಯನ್ನು ಗಳಿಸಿಕೊಳ್ಳುವುದು ಲಂಕೇಶ್ ಅವರ ಮುಟ್ಟಿಸಿಕೊಂಡವನು ಕತೆಯ ತಿರುಳು
ಈ ಮಳೆಗೂ ನೆನಪುಗಳಿಗೂ ಏನೋ ಬಿಡಿಸಲಾರದ ನಂಟು. ಮತ್ತೆ ಮಳೆ ಹುಯ್ಯುತ್ತಿದೆ. ಎಲ್ಲ ನೆನಪಾಗುತ್ತಿದೆ ಎಂದು ಅನಂತಮೂರ್ತಿ ತಮ್ಮ ಕವಿತೆಯೊಂದರಲ್ಲಿ ಹೇಳುತ್ತಾರೆ. ಖಂಡಿತ ಇದು ಕವಿ ಸಮಯವಲ್ಲ. ಮಳೆ ಭೋರೆಂದು ಸುರಿಯತ್ತಿರುವಾಗ ಎಲ್ಲೂ ಹೊರಗಡೆ ಹೆಜ್ಜೆ ಹಾಕಲು ಆಗುವುದಿಲ್ಲ ನೋಡಿ. ಆಗ ನೆನಪಿನ ಮಡಿಕೆಗಳನ್ನು ಕೊಡವಿಕೊಳ್ಳುವ ಉಮೇದು ಹುಟ್ಟುತ್ತದೆ. ಇನ್ನೂ ಹೊರಗಡೆ ಇದ್ದಾಗ ಮಳೆ ಬಿದ್ದಾಗ ಮಾತನಾಡುವ ಆವೇಗ ಕೂಡ ಹೇಗೋ ಉಂಟಾಗುತ್ತದೆ. ಇಂಥದ್ದೇ ಒಂದು ಮಳೆ ಸಂಜೆ. ನನ್ನ ಮನದ ಒಳಗೆ ಅವಳ ನೆನಪಿನ ಮಳೆ ಸುರಿಯುತ್ತಾ ಮನದ ನೆಲವನ್ನು ತಂಪುಗೊಳಿಸುತ್ತಿತ್ತು. ಅದರಿಂದ ಹೊಮ್ಮಿದ ಗಂಧ ನೂರೆಂಟು ನೆನಪು ಮನದಾಳದಿಂದ ಹಾಡಾಗಿ ಚಿಮ್ಮಿಸುತ್ತಿತ್ತು. ನನಗೂ, ಈ ಮಳೆಗೂ ಮತ್ತು ಆಕೆಗೂ ಏನೋ ಒಂದು ಅವಿನಾಭಾವ ಸಂಬಂಧ. ನಾವಿಬ್ಬರು ಮೊದಲ ಸಾರಿ ಮತ್ತು ಕೊನೆ ಸಾರಿ ಭೇಟಿಯಾಗಿದ್ದು ಮಳೆ ಎಂಬ ಸ್ನೇಹಿತ ಜೊತೆಗಿದ್ದಾಗಲೇ. ಕೊಂಚ ಕ್ಲೀಷೆಯಾದರೂ ಆ ಕತೆಯನ್ನು ನಿಮಗೆ ಹೇಳಿಕೊಂಡಾಗಲೇ ನನ್ನ ಮನಸ್ಸು ಹಗುರವಾಗುತ್ತದೆ. ನನಗೆ ದಿನವೂ ಕಾಲೇಜ್ ಲೈಬ್ರೆರಿಯಲ್ಲಿ ಬೆಳಿಗ್ಗೆ ದಿನಪತ್ರಿಕೆಗಳನ್ನು ಓದಿ ಅಭ್ಯಾಸ, ಆ ದಿನ ಬೇರೆ ಕೆಲಸದ ನಿಮಿತ್ತ ಓದಿರಲಿಲ್ಲ. ಅದೇ ಸಂಜೆ 5.30 ರ ಹೊತ್ತಿಗೆ ನಾನು ಗ್ರಂಥಾಲಯದಲ್ಲಿದ್ದೆ. ಇನ್ನೇನು ಹೊರಗೆ ಹೊಗಬೇಕು ಅನ್ನುವಷ್ಟರಲ್ಲಿ ಮಳೆರಾಯ ಅವತರಿಸಿದ. ಅಂದು ಕೊಂಚ ಬಿರುಸಾಗಿದ್ದ. ನೆಲಕ್ಕೆ ಲಕ್ಷಾಂತರ ಮಳೆಗಳನ್ನು ಜಡೆಯುವಂತೆ ಆರ್ಭಟಿಸುತ್ತಿದ್ದ. ಮಳೆಯ ದನಿಯನ್ನು ಕೇಳುವುದರ ಜೊತೆಗೆ ಕಣ್ತುಂಬ ನೋಡಿ ಬಹಳ ದಿನಗಳಾಗಿತ್ತು. ಮಳೆರಾಯನ ಆರ್ಭಟವನ್ನು ನೋಡಲು ಹೊರ ಬಂದಾಗ ಕೈ ತುಂಬ ಪುಸ್ತಕಗಳನ್ನು ಹಿಡಿದು ಒಂದು ಹುಡುಗಿ ಮಳೆಗೆ ಶಪಿಸುತ್ತಾ ನಿಂತಂತಿತ್ತು. ಮುಖದಲ್ಲಿ ಕೋಪವಿದ್ದರೂ ಅಂದವಾಗಿ ಕಂಡಳು. ಹಾಲುಗಲ್ಲದ ಹುಡುಗಿ, ದುಂಡನೆಯ ಮುಖ, ನೀಳವಾದ ಜಡೆ, ಆ ಸಂದರ್ಭಕ್ಕೆ ಗಂಟಿಕ್ಕಿದ ಮುಖ. ನಾನು ಹೊರಗೆ ಬರುತ್ತಿದ್ದಂತೆ ನನ್ನ ನೋಡಿ ''ಪ್ಲೀಸ್ ಸ್ವಲ್ಪ ಸಹಾಯ ಮಾಡ್ತೀರಾ?,'' ಎಂದಳು. ಚಂದದ ಹುಡುಗಿ ಹೆಲ್ಪ್ ಮಾಡಿ ಎಂದು ಕೇಳಿದರೆ ಮಾಡದೇ ಇರುವ ಮುಠ್ಠಾಳ ಖಂಡಿತ ನಾನಾಗಿರಲಿಲ್ಲ
ನಾನು ಅವಳೆಡೆಗೆ ಹೋಗುತ್ತಿದ್ದಂತೆಯೇ ಎಂಟೂ ಪುಸ್ತಕಗಳನ್ನು ನನ್ನ ಕೈಗಳ ಮೇಲೆ ಅನಾಮತ್ತಾಗಿ ಇಟ್ಟು ಅರ್ಧದಷ್ಟು ಹೊತ್ತಿಗೆಗಳನ್ನು ತಾನು ಹಿಡಿದು ನಿಂತಳು.
''ಯಾಕಿಷ್ಟು ಪುಸ್ತಕ ಒಮ್ಮೆಲೆ?'' ಅಂದೆ. ಅದಕ್ಕವಳು ''ಇವತ್ತು ಬಿಟ್ಟರೆ ಮುಂದಿನ ವಾರ ಕೊಡ್ತಾರಂತೆ, ನನಗೆ ಬೇಕಾದ ಲೇಖಕರ ಪುಸ್ತಕಗಳು ಇದ್ವು ತೊಗೊಂಡೆ'', ಮತ್ತೆ ಮಾತು ಮುಂದುವರೆಸುತ್ತಾ '' ಈ ಹಾಳಾದ ಮಳೆ ನಿಲ್ಲಲೊಲ್ಲದು'' ಎಂದು ಬೇಸರದಿಂದ ನುಡಿದಳು. ''ಅಷ್ಟು ಚೆನ್ನಾಗಿ ಸುರಿಯೊ ಮಳೆಗೆ ಯಾಕ್ರಿ ಹಾಗಂತೀರಾ?''
''ನಂಗೂ ಮಳೆ ಅಂದ್ರೆ ಇಷ್ಟಾನೆ,ಮನೆ ಮುಟ್ಟಿದ್ಮೇಲೆ ಬಂದಿದ್ರೆ ಚೆನ್ನಾಗಿತ್ತು'' ಅಂದಳು.
ನಿಮಗೆ ಯಾವ ಲೇಖಕ ನಿಮಗೆ ಇಷ್ಟ ಎಂದು ಒಂದು ಪ್ರಶ್ನೆ ಎಸೆದೆ. ಮಾತಿನ ಸರಣಿಯನ್ನು ಮುಂದುವರೆಸಬೇಕಾಗಿತ್ತು ಅದಕ್ಕಾಗಿ ಈ ಪ್ರಶ್ನೆ ಕೇಳಿದೆ.ಲಂಕೇಶ್ ಎಂದಳು. 'ಮುಟ್ಟಿಸಿಕೊಂಡವನು' ಕತೆ ಓದೀದ್ದೀರಾ ಎಂದೆ. ಹೌದು ತುಂಬ ಅದ್ಭುತವಾಗಿದೆ ಎಂದಳು.
ನಾನು ಅದನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದೆ. ''ಮನುಷ್ಯ ತನ್ನ ಆಳದ ಮುಗ್ಧತೆಯನ್ನು ಕಳೆದುಕೊಂಡು ವ್ಯವಹಾರಿಕ ಚಾಲಾಕಿತನವನ್ನು ಅಪ್ಪಿಕೊಂಡು ಒಂದು ಬಗೆಯ ಕೃತಕ ವ್ಯಕ್ತಿತ್ವವನ್ನು ನಿಜ ಎಂದು ಭಾವಿಸುವುದು ಆನಂತರ ಮರಳಿ ಸಹಜತೆಯನ್ನು ಗಳಿಸಿಕೊಳ್ಳುವುದು ಆ ಕತೆಯ ತಿರುಳು ಎಂದೆ. ಆಕೆ ಮಿಕಿಮಿಕಿ ನೋಡಿದಳು. ನನ್ನ ಮಾತಿನಿಂದ ನನ್ನ ಮೂರ್ತಿಯನ್ನು ಬಹು ಎತ್ತರಕ್ಕೆ ಇಟ್ಟಂತೆ ನನಗೆ ಅನ್ನಿಸಿತು. ಓ ನೀವು ವಿಮರ್ಶಕರು ಎಂದು ಮೆಚ್ಚುಗೆ ಸೂಚಿಸಿದಳು. ನನ್ನ ಪಾದಗಳು ನೆಲವ ಬಿಟ್ಟು ಗಾಳಿಯಲ್ಲಿ ತೇಲಾಡುತ್ತಿದ್ದವು. ಸಾಹಿತ್ಯಾಭಿಮಾನಿಗಳ ನಡುವೆ ಏನೋ ಒಂದ್ ಥರ ಅಂಡರ್ಸ್ಟ್ಯಾಡಿಂಗ್ ಬಹುಬೇಗ ಬಂದು ಬಿಡುತ್ತೆ. ಅವಳು ''ನೀವು ಪುಸ್ತಕ ತೊಗೊಂಡ್ರಾ?'' ಅಂದಳು. ಅದಕ್ಕೆ ನಾನು ''ನಾಳೆ ತೊಗೊತೀನಿ, ನಾಳೆ ಕೂಡಾ ಹೀಗೆ ಮಳೆ ಬಂದ್ರೆ ಪುಸ್ತಕಗಳನ್ನು ಹಿಡಿಯಲು ನೀವು ಸಹಾಯ ಮಾಡ್ತೀರಾ?'' ಎಂದೆ. ಆಕೆಯ ಸಿಹಿಯಾಗಿ ನಕ್ಕು
''ಓಹ್ ಶ್ಯೂರ್, ನೀವು ಅಷ್ಟೊತ್ತಿನಿಂದ ಬುಕ್ಸ್ ಹಿಡ್ಕೊಂಡು ನಿಂತಿದಿರಾ ಒಂದ್ ಥ್ಯಾಂಕ್ಸ್ ಕೂಡಾ ಹೇಳಿಲ್ಲ, ಥ್ಯಾಂಕ್ಯು'' ಆ ಮಾತಿನೊಂದಿಗೆ ಅವಳ ಮುಖ ಇನ್ನೂ ಅರಳಿತು. 'ಘ್ಕಿಆy ಠಿhಛಿ ಡಿay ನಾನು ನಿಹಾರಿಕಾ, ನೀವು?'' ಅಂದಳು.
ನನ್ನ ಪರಿಚಯ ಮಾಡಿಕೊಂಡೆ.ಆ ದಿನದಿಂದ ಮೊದಲುಗೊಂಡು ದಿನವೂ ನಮ್ಮ ಭೇಟಿ ಮೊದಲಾಯಿತು. ಕಾಲ ಕಳೆದಂತೆ ಪರಿಚಯ ಸ್ನೇಹವಾಗಿ ತಿರುಗಿತು.
ನಾವು ಸ್ನೇಹದ ಪರಿಧಿಯನ್ನು ಮೀರಲಿಲ್ಲ. ಸ್ವಲ್ಪ ಸಮಯದಲ್ಲೇ ಗೆಳೆತನ ಗಾಢವಾಗಿತ್ತು.
ನೋಡುನೋಡುತ್ತಿದ್ದಂತೆ ಅಂತಿಮ ವರ್ಷ ಬಂದೇ ಬಿಟ್ಟಿತು. ಅವತ್ತಿನ ದಿನ ನಾವು ಕಾಲೇಜಿನಲ್ಲಿ ಭೇಟಿಯಾಗುವ ಕೊನೆಯ ದಿನ,
'' ನಾವು ಮೊದಲು ಭೇಟಿಯಾದ ದಿನವೂ ಮಳೆ ಇತ್ತು, ಇಂದು ಕೊನೆ ದಿನ ಇವತ್ತೂ ಮಳೆ ಬರುತ್ತಿದೆ'' ಎಂದಳು.
ಅವತ್ತು ನಾವಿಬ್ಬರು ಭೇಟಿಯಾಗಬೇಕಿತ್ತು ಅದಕ್ಕೆ ಮಳೆ ಬಂದಿತ್ತೇನೊ, ಆದರೆ ''ಇಂದು ನಾವು ಅಗಲುತ್ತಿರುವುದರಿಂದ ಮೋಡಗಳು ಕೂಡ ಅಳುತ್ತಿವೆ'' ಅಂದೆ.
ಘ್ಕಿ'Whaಠಿ a್ಞ ಛಿಞಟಠಿಜಿಟ್ಞa್ಝ ್ಚಟಞpa್ಟಜಿsಟ್ಞ, ಹೀಗೆಲ್ಲಾ ಮಾತಾಡಿದ್ರೆ ನಂಗೆ ಅಳು ಬರುತ್ತೆ'' ಅಂದಳು. ನಂಗೂ ಸ್ವಲ್ಪ ದುಃಖವಾಗಿದ್ದರೂ ''ಬರೀ ಕಾಲೇಜಷ್ಟೇ ಬಿಟ್ಟು ಹೋಗುತ್ತಿದ್ದೇವೆ ಈ ಭೂಮಿಯನ್ನಲ್ಲ'' ಎಂಬ ನನ್ನ ಮಾತಿಗೆ ಅಳುವುದನ್ನು ಮರೆತು ನಕ್ಕಳು.
ಎಲ್ಲಿದ್ದರೂ ಟಚ್ಚಲ್ಲಿರೋಣ, ಮಿಸ್ ಯು'' ಅಂದು ಹೋದವಳು ಆಮೇಲೆ ಮತ್ತೆ ಸಿಗಲೇ ಇಲ್ಲ. ಫೋನ್ ಕೂಡಾ ಸ್ವಿಚ್ಡ್ ಆಫ್ ಇದೆ. ಆಕೆ ಯಾವ ಪರಿಸ್ಥಿತಿಯಲ್ಲಿದ್ದಾಳೊ ಯಾರು ಬಲ್ಲರು. ಆ ನಿಹಾರಿಕೆಯ ನೆನಪು ಮಳೆ ಯಾವಾಗಲೂ ಹೊತ್ತು ತರುತ್ತದೆ.ಅವಳು ತುಳುಕಿಸಿದ ಕಣ್ಣಂಚಿನ ಹನಿ ಕಾಡುತ್ತದೆ. ಆಕೆ ಎಲ್ಲೇ ಇದ್ದರು ಚೆನ್ನಾಗಿರಲಿ ಎಂಬ ಹಾರೈಕೆ. ಯಾವ ಭವ ಬಂಧನಗಳ ಹಂಗೂ ಇಲ್ಲದೆ ಕೇವಲ ಸದಾಶಯ, ಸದ್ಭಾವಗಳಲ್ಲಿ ಇರುವುದು, ಸಣ್ಣಪುಟ್ಟ ಸಹಾಯಗಳನ್ನು ಮಾಡುವುದರಲ್ಲೂ ಏನೋ ಧನ್ಯತೆ ಇದೆ ಎಂಬುದು ನನಗಂತೂ ಮನವರಿಕೆಯಾಗಿದೆ.