ಆ್ಯಪ್ನಗರ

ಅಂದರ್-ಬಾಹರ್: ಕುಮಾರಸ್ವಾಮಿಗೆ ಉತ್ತರ ದಿಕ್ಕಿನಿಂದ ಯೋಗ!

ಕೆಲಸಕ್ಕೆ ತಡವಾಗಿ ಬರುವುದು ಮನೆಗೆ ಬೇಗ ಹೋಗುವುದು - ಇದು ಸರಕಾರಿ ಅಧಿಕಾರಿಗಳು ಚಾಚೂತಪ್ಪದೆ ಪಾಲಿಸಿಕೊಂಡು ಬಂದಿರುವ ಪಾಲಿಸಿ. ಹೀಗಾಗಿ ಯಾವುದೇ ಕಚೇರಿಗೆ ಹೋದರೂ ‘ಸಾಹೇಬರು ಇಲ್ಲ’ ಎಂಬುದೇ ನಿತ್ಯ ಮಂತ್ರ.

Vijaya Karnataka Web 11 Sep 2016, 4:00 am
ಉತ್ತರ ಕರ್ನಾಟಕದಲ್ಲಿ ತೆನೆ ತುಂಬ ಹಗುರ, ಏಕೆಂದರೆ ಅದರಲ್ಲಿ ಕಾಳುಗಳೇ ಇಲ್ಲ ಎಂಬುದು ಅದನ್ನು ಹೊತ್ತ ಮಹಿಳೆಯ ಅಳಲು. ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಆದರೆ ಎಚ್‌ಡಿ ಕುಮಾರಸ್ವಾಮಿ ಈಗಿನಿಂದಲೇ ಹುಬ್ಬಳ್ಳಿಯಲ್ಲಿ ಮೊಕ್ಕಾಂ ಹೂಡಿ ಪಕ್ಷದ ಬಲವರ್ಧನೆಗೆ ಸ್ಕೆಚ್ ಹಾಕಿದ್ದಾರೆ. ಆದರೆ ಅಸಲಿ ಕತೆಯೆಂದರೆ ‘‘ಉತ್ತರ ದಿಕ್ಕಿನಿಂದ ಯೋಗ’ವಿದೆ. ಇಲ್ಲಿಂದ ಯಾವುದೇ ಕೆಲಸ ಕೈಗೆತ್ತಿಕೊಂಡರೂ ನೀವು ಯಶಸ್ವಿಯಾಗುತ್ತೀರಿ,’’ಎಂದು ಖ್ಯಾತ ಜ್ಯೋತಿಷಿಯೊಬ್ಬರು ಹೇಳಿದ್ದರಿಂದಲೇ ಅವರೀಗ ಅದೃಷ್ಟದ ವಾಸ್ತು ಇರುವ ಮನೆಗಳನ್ನು ಹುಡುಕಾಡುತ್ತಿದ್ದಾರಂತೆ. ಈಗಾಗಲೇ 50 ಮನೆಗಳನ್ನು ನೋಡಿರುವ ಅವರು, ಮೂರು-ನಾಲ್ಕು ಮನೆಗಳ ಪೈಕಿ ಒಂದನ್ನು ಫೈನಲ್ ಮಾಡಲಿದ್ದಾರೆ. ಹುಬ್ಬಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ತಿಂಗಳಲ್ಲಿ 10 ದಿನಗಳ ಕಾಲ ಇಲ್ಲೇ ವಾಸ್ತವ್ಯ ಹೂಡಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡು ‘ಗುರುಬಲ’ವನ್ನು ಹೆಚ್ಚು ಮಾಡಿಕೊಳ್ಳುವುದು ಅವರ ಯೋಜನೆ. ನವೆಂಬರ್‌ನಲ್ಲಿ ಗೃಹ ಪ್ರವೇಶ. ಇದನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಕೇರಳದ ಜ್ಯೋತಿಷಿಯೊಬ್ಬರು ಆಗಮಿಸುತ್ತಾರಂತೆ. ಯಾರು ಏನೇ ಹೇಳಿ, ಚುನಾವಣೆ ಸಮಯದಲ್ಲಿ ಜ್ಯೋತಿಷಿಗಳಿಗಂತೂ ದೊಡ್ಡ ಗುರುಬಲವಿದೆ!
Vijaya Karnataka Web andar bahar
ಅಂದರ್-ಬಾಹರ್: ಕುಮಾರಸ್ವಾಮಿಗೆ ಉತ್ತರ ದಿಕ್ಕಿನಿಂದ ಯೋಗ!


**

ಕೃಷಿ ಸಚಿವರು ಬೀಸಿದ ಚಾಟಿ !


ಕೆಲಸಕ್ಕೆ ತಡವಾಗಿ ಬರುವುದು ಮನೆಗೆ ಬೇಗ ಹೋಗುವುದು - ಇದು ಸರಕಾರಿ ಅಧಿಕಾರಿಗಳು ಚಾಚೂತಪ್ಪದೆ ಪಾಲಿಸಿಕೊಂಡು ಬಂದಿರುವ ಪಾಲಿಸಿ. ಹೀಗಾಗಿ ಯಾವುದೇ ಕಚೇರಿಗೆ ಹೋದರೂ ‘ಸಾಹೇಬರು ಇಲ್ಲ’ ಎಂಬುದೇ ನಿತ್ಯ ಮಂತ್ರ. ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಈ ಚಾಳಿಯನ್ನು ಬಹುಬೇಗ ಕಂಡು ಹಿಡಿದರು. ತಮ್ಮ ಸಚಿವಾಲಯದಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತಂದರೂ ‘ಖಾಲಿ ಕುರ್ಚಿ’ಗಳು ಕಣ್ಣಿಗೆ ರಾಚತೊಡಗಿದವು. ಕೊನೆಗೆ ಒಂದು ಸುತ್ತೋಲೆ ಹೊರಡಿಸಿದರು. ಎಲ್ಲ ಅಧಿಕಾರಿಗಳು ಚಾಚೂ ತಪ್ಪದೆ ಕಚೇರಿ ಸಮಯದಲ್ಲಿ ಹಾಜರಾಗಬೇಕು. ಕ್ಲುಪ್ತ ಸಮಯದಲ್ಲಿ ಕೆಲಸಗಳನ್ನು ಮುಗಿಸಬೇಕು. ಯಾವುದೇ ಕಡತ ಪೆಂಡಿಂಗ್ ಇಡಬಾರದು - ಎಂದು ಆದೇಶಿಸಿದರು. ಇದೆಲ್ಲದಕ್ಕಿಂಥ ಮಿಗಿಲಾಗಿ ಈ ಆದೇಶವನ್ನು ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು. ಇದೀಗ ಕೃಷಿ ಸಚಿವಾಲಯದ ಪರಿಸ್ಥಿತಿ ತುಂಬಾ ಸುಧಾರಿಸಿದೆಯಂತೆ. ಸುತ್ತೋಲೆಯ ಕೊನೆಯ ವಾಕ್ಯ ಸೋಮಾರಿ ‘ಬಾಬು’ಗಳನ್ನು ಬಡಿದೆಬ್ಬಿಸಿದೆಯಂತೆ. ಇನ್ನು ಮುಂದೆ ಎಲ್ಲ ಸಚಿವರು ಇಂಥ ಚಾಟಿ ಹಿಡಿದುಕೊಂಡರೆ ಮಾತ್ರ ಸರಕಾರಿ ಯಂತ್ರ ಗುಡುಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ