ಆ್ಯಪ್ನಗರ

ವರ್ಜೀನಿಯ ಟೆಕ್‌ನಲ್ಲಿ ಅರ್ಧ ಗಂಟೆಯಲ್ಲಿ ಉರುಳಿ ಬಿದ್ದಿತ್ತು 32 ಹೆಣ, ಕಾರಣ ಇಂದಿಗೂ ನಿಗೂಢ; ಅಮೆರಿಕ ಅನುಭವ ಕಥನ - 34

ಅರ್ಧ ಘಂಟೆಯ ಅವಧಿಯಲ್ಲಿ 5 ಪ್ರೊಫೆಸರ್‌ಗಳು, 27 ವಿದ್ಯಾರ್ಥಿಗಳು ಅಸುನೀಗಿದ್ದರು. ದೊಡ್ಡ ಸೋಜಿಗ ಎಂದರೆ, ಯಾವ 23 ವರುಷದ ವಿದ್ಯಾರ್ಥಿ ಇವರೆಲ್ಲರನ್ನೂ ಯಮಪುರಿಗೆ ಅಟ್ಟಿದನೋ ಕೊನೆಯಲ್ಲಿ ಅವನೇ ಆತ್ಮಹತ್ಯೆ ಮಾಡಿಕೊಂಡ. ಅವನು ಸತ್ತಿದ್ದೇ ಅಲ್ಲದೆ, ಅವನು ಯಾವ ಉದ್ದೇಶದಿಂದ ಎಲ್ಲರನ್ನೂ ಆಹುತಿ ತೆಗೆದುಕೊಂಡ ಎಂಬ ಕಾರಣವನ್ನೂ ಕೊಂದಿದ್ದ!

Authored byಶ್ರೀನಾಥ್ ಭಲ್ಲೆ | Vijaya Karnataka Web 26 Nov 2021, 7:00 am
ಜೋರಾದ ಮಾತು, ನಡುವೆ ಗಲಿಬಿಲಿಯ ನಗು ಕೂಡಾ ನಡೆದಿತ್ತು. ಥಟ್ಟನೆ ನೆನಪಾಯ್ತು, ವಾಲ್ಟರ್‌ಗೆ ಅತೀ ಟೆನ್ಷನ್ ಆದಾಗ ಗಲಿಬಿಲಿ ನಗು ಹೆಚ್ಚುತ್ತದೆ ಅಂತ. ಏನೆಂದು ಕೇಳಿಯೇ ಬಿಡಬೇಕು ಎಂದು ಎದ್ದೇಳುವುದಕ್ಕೂ, ನಮ್ಮ ಮ್ಯಾನೇಜರ್ ಇವನ ಕ್ಯೂಬಿಗೆ ಬರುವುದಕ್ಕೂ ಸರಿಹೋಯ್ತು. ವಿಷಯದ ಅರಿವಾಯ್ತು.
Vijaya Karnataka Web Virginia tech 02


ಅಂದು ಏಪ್ರಿಲ್ 16, 2007. ರಾಜ್ಯದ ಪ್ರತಿಷ್ಠಿತ ಟೆಕ್ನಾಲಜಿ ಕಾಲೇಜುಗಳಲ್ಲಿ ಒಂದಾದ ವರ್ಜೀನಿಯ ಟೆಕ್‌ನಲ್ಲೂ ಶುಭವಾಗಿಯೇ ತರಗತಿಗಳು ಆರಂಭವಾಗಿತ್ತು. ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಗಳಲ್ಲಿ ಕಲಿಕೆ ನಡೆಸಿದ್ದರು. ಇವೆಲ್ಲವೂ ಬೆಳಗಿನ ಒಂಬತ್ತು ಘಂಟೆಯ ಸಮಯದಲ್ಲಿ ನಡೆದಿತ್ತು. ಇದಕ್ಕೂ ಮುನ್ನ ಇದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಯೊಬ್ಬ ಯಾವುದೋ ಡಿಪಾರ್ಟ್ಮೆಂಟ್‌ನ ಅಸಿಸ್ಟೆಂಟ್ ಮತ್ತು ಒಬ್ಬ ವಿದ್ಯಾರ್ಥಿನಿಯ ಮೇಲೆ ಗುಂಡು ಹೊಡೆದು ಕೊಂದು ಹೊರಟು ಹೋಗಿದ್ದ. ಬಹುಶಃ ಆ ವಿದ್ಯಾರ್ಥಿನಿಯ ಬಾಯ್ ಫ್ರೆಂಡ್ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನದ ಮೇಲೆ ಆತನ ಹುಡುಕಾಟವೇನೋ ನಡೆದಿತ್ತು. ನಂತರ ನಡೆದದ್ದೇ ಬೇರೆ !

ಅಮ್ಮನೆಂಬ ಅಮೂಲ್ಯ ಆಸ್ತಿಯನ್ನೇ ಕಳೆದುಕೊಂಡ ಆ ಕ್ಷಣಗಳು.. ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 33

ಒಂಬತ್ತು ಘಂಟೆಯ ಸಮಯದಲ್ಲಿ ತನ್ನ ಬ್ಯಾಕ್‌ಪ್ಯಾಕ್‌ ಏರಿಸಿಕೊಂಡು ಮತ್ತೆ ಬಂದವನ ಚೀಲದಲ್ಲಿ ಬಾಗಿಲನ್ನು ಬಿಗಿದು ಹಿಡಿವ ಚೈನ್‌ಗಳು, ರಾಶಿ ಬುಲೆಟ್‌ಗಳು, ಒಂದೆರಡು ಬಗೆಯ ಬಂದೂಕುಗಳು ಇದ್ದವು. ಎರಡನೆಯ ಮಹಡಿಯ ರೂಮುಗಳಲ್ಲಿ ಓಡಾಡುತ್ತಾ ಕ್ಲಾಸ್ ರೂಮಿನೊಳಗೆ ಬಗ್ಗಿ ನೋಡುತ್ತಾ ಮುಂದೆ ಸಾಗಿದ್ದ. ಏಪ್ರಿಲ್ ತಿಂಗಳ ಸಮಯದಲ್ಲಿ ತಮ್ಮ ತರಗತಿ ಯಾವುದು ಎಂದು ಹುಡುಕುತ್ತಾ ಸಾಗುವುದು ಸೋಜಿಗವೇ ಸರಿ. ವಿದ್ಯಾರ್ಥಿಗಳಿಗೆ ಅಚ್ಚರಿಯಾದರೂ ತಲೆ ಕೆಡಿಸಿಕೊಳ್ಳಲಿಲ್ಲ. ಮುಂದೆ ನಡೆದದ್ದು ಕರಾಳ ಇತಿಹಾಸ.

ರಿಚ್ಮಂಡ್ ಕನ್ನಡ ಸಂಘದ 'ಸಂಗೀತ ಸಂಜೆ' ಯಶೋಗಾಥೆ: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 32
ಒಂದು ರೂಮಿನಲ್ಲಿ ಹೀಗೆ ಬಗ್ಗಿ ನೋಡಲು ಅಲ್ಲಿದ್ದವರು ಹದಿಮೂರು ವಿದ್ಯಾರ್ಥಿಗಳು ಮಾತ್ರ. ಘನವಾದ ಒಂದು ಸಬ್ಜೆಕ್ಟ್‌ನ ಪಾಠವನ್ನು ಮಾಡುತ್ತಿದ್ದ ಶ್ರೀಲಂಕಾದ ಲೋಗನಾಥನ್ ಅವರ ಮೇಲೆ ಗುಂಡಿನ ಮಳೆಗರೆದ. ಆ ನಂತರ ವಿದ್ಯಾರ್ಥಿಗಳ ಮೇಲೆ. ಕೆಲವರು ಸ್ಥಳದಲ್ಲೇ ಸತ್ತರೆ ಕೆಲವರಿಗೆ ತೀವ್ರವಾದ ಗಾಯ. ಇಷ್ಟು ಹೊತ್ತಿಗೆ ಕಾಲೇಜಿನಲ್ಲಿ ಅಲ್ಲೋಲ ಕಲ್ಲೋವಾಗಿದೆ. ಕೆಲವರು ಎದ್ದೆನೊ ಬಿದ್ದೆನೋ ಎಂದು ಓಡುವಾಗ ಇವನ ಬಂದೂಕಿಗೆ ಆಹುತಿಯಾಗಿದ್ದಾರೆ. ಕೆಲವು ಪ್ರೊಫೆಸರ್‌ಗಳು ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ಪ್ರಾಣ ತೆತ್ತರು. ಕೆಲವು ವಿದ್ಯಾರ್ಥಿಗಳು ಎರಡನೆಯ ಮಹಡಿಯ ಮೇಲಿನಿಂದ ಹಾರುವಾಗ ಸತ್ತರೆ, ಮತ್ತೆ ಕೆಲವರು ಗಾಯಗೊಂಡರು.

ಸಪ್ತಸಾಗರದಾಚೆಯೂ ದೀಪಾವಳಿ ಸಂಭ್ರಮ: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 31
ಬಹುಶಃ ಅರ್ಧ ಘಂಟೆಯ ಸಮಯದಲ್ಲಿ, ಐದು ಮಂದಿ ಪ್ರೊಫೆಸರ್‌ಗಳು ಮತ್ತು 27 ಮಂದಿ ವಿದ್ಯಾರ್ಥಿಗಳು ಅಸುನೀಗಿದ್ದರು. ಕಲಿಕೆಗೆಂದು ಬಂದವರು ಕಾಲವಾಗಿದ್ದರು. ಕಲಿಸಲೆಂದು ಬಂದವರು ಕಾಲವಾಗಿದ್ದರು. ಇದೆಲ್ಲಕ್ಕಿಂತಾ ದೊಡ್ಡ ಸೋಜಿಗ ಎಂದರೆ, ಯಾವ 23 ವರುಷದ ವಿದ್ಯಾರ್ಥಿ ಇವರೆಲ್ಲರನ್ನೂ ಯಮಪುರಿಗೆ ಅಟ್ಟಿದನೋ ಕೊನೆಯಲ್ಲಿ ಅವನೇ ಆತ್ಮಹತ್ಯೆ ಮಾಡಿಕೊಂಡ. ಅವನು ಸತ್ತಿದ್ದೇ ಅಲ್ಲದೆ, ಅವನು ಯಾವ ಉದ್ದೇಶದಿಂದ ಎಲ್ಲರನ್ನೂ ಆಹುತಿ ತೆಗೆದುಕೊಂಡ ಎಂಬ ಕಾರಣವನ್ನೂ ಕೊಂದಿದ್ದ. ಈವರೆಗೂ ಗೊತ್ತಿಲ್ಲ ಮಾರಣಹೋಮದ ಹಿಂದಿನ ಉದ್ದೇಶ.

ವಾಲ್ಟರ್‌ ಮಗ ಆ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಮುಂದೆ?
ಲೇಖಕರ ಬಗ್ಗೆ
ಶ್ರೀನಾಥ್ ಭಲ್ಲೆ
ಅಮೆರಿಕದ ರಿಚ್ಮಂಡ್ ನಿವಾಸಿಯಾಗಿರುವ ಶ್ರೀನಾಥ್ ಭಲ್ಲೆ ಅವರು ಬೆಂಗಳೂರಿನ ಚಾಮರಾಜಪೇಟೆಯವರು. ಜೀವನದ ಅನುಭವವನ್ನು ಎರಕಹೊಯ್ದು ಹಾಸ್ಯರಸ ಹೊಮ್ಮಿಸುವ ಲೇಖನಗಳನ್ನು ಬರೆಯುವುದರಲ್ಲಿ ನಿಸ್ಸೀಮರಾಗಿರುವ ಶ್ರೀನಾಥ್ ಭಲ್ಲೆ ಅವರು ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ ಕನ್ನಡದಲ್ಲಿ ಬರೆಯಬಲ್ಲರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ