ಆ್ಯಪ್ನಗರ

ಬಿಜೆಪಿ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ ಕಾಂಗ್ರೆಸ್‌

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮುಕ್ತ ಭಾರತದ ಕನಸು ಮಸುಕಾಗಿದೆ. ಬಿಜೆಪಿ ಗೆಲುವಿನ ಓಟಕ್ಕೆ ತಡೆ ಬಿದ್ದಿದೆ. ರಾಜಸ್ಥಾನ. ಛತ್ತೀಸಗಢ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿ ಅಧಿಕಾರವನ್ನು ಕಾಂಗ್ರೆಸ್‌ ಸೆಳೆದುಕೊಂಡಿದೆ.

Vijaya Karnataka Web 12 Dec 2018, 5:00 am
ಕಳೆದ 70 ವರ್ಷಗಳ ದೇಶದ ಚುನಾವಣೆ ರಾಜಕಾರಣದಲ್ಲಿ ಕೆಲವೇ ಕೆಲವು ಘೋಷಣೆಗಳು ಮಾತ್ರ ಭಾರಿ ಸಂಚಲನೆಯನ್ನು ಂಟು ಮಾಡಿವೆ. ಇಂದಿರಾ ಗಾಂಧಿ ಅವರ 'ಗರೀಬಿ ಹಟಾವೋ' ಅಂಥ ಸ್ಲೋಗನ್‌ಗಳ ಪೈಕಿ ಒಂದು. 2014ರಲ್ಲಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಪ್ರಚಾರದಲ್ಲಿ 'ಕಾಂಗ್ರೆಸ್‌ ಮುಕ್ತ್‌ ಭಾರತ್‌' ನಮ್ಮ ಹೆಗ್ಗುರಿ ಎಂದು ಸಾರುವ ಮೂಲಕ ಮತದಾರರಿಗೆ ಮೋಡಿ ಮಾಡಿದರು. ಒಂದು ಶತಮಾನದಷ್ಟು ಇತಿಹಾಸವಿರುವ ಕಾಂಗ್ರೆಸ್‌ ಕೇವಲ 44 ಸ್ಥಾನಗಳನ್ನು ಗಳಿಸುವ ಮೂಲಕ ಭಾರಿ ಪರಾಭವ ಕಂಡಿತು. ಕೈ ಚರಿತ್ರೆಯಲ್ಲೇ ಇಷ್ಟು ಕಡಿಮೆ ಸೀಟುಗಳು ಯಾವತ್ತೂ ಬಂದಿರಲಿಲ್ಲ.
Vijaya Karnataka Web congress break to bjp victory
ಬಿಜೆಪಿ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ ಕಾಂಗ್ರೆಸ್‌


ಲೋಕಸಭೆ ಚುನಾವಣೆ ನಂತರ ನಡೆದ ಹಲವು ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ಅಭಿಯಾನ ಮುಂದುವರೆಯಿತು. ಇದು ಯಾವ ಮಟ್ಟಕ್ಕೆ ಬಂತು ಎಂದರೆ ಕಾಂಗ್ರೆಸ್‌ ಕೇವಲ ಕರ್ನಾಟಕ ಮತ್ತು ಮಿಜೋರಾಂಗಳಿಗೆ ಮಾತ್ರ ಸೀಮಿತವಾಯಿತು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. 6ರಷ್ಟು ಜನರನ್ನು ಮಾತ್ರ ಅದು ಪ್ರತಿನಿಧಿಸುವ ಹಂತ ಮುಟ್ಟಿತು. ಒಂದು ಕಾಲದಲ್ಲಿ ಕೈ ವಶದಲ್ಲಿದ್ದ ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ, ಹಿಮಾಚಲಪ್ರದೇಶ, ಉತ್ತರಾಂಚಲ ಮತ್ತು ಅಸ್ಸಾಂಗಳಲ್ಲಿ ಕಮಲ ಅರಳಿತು. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮುಕ್ತ ಭಾರತದ ಕನಸು ಮಸುಕಾಗಿದೆ. ಬಿಜೆಪಿ ಗೆಲುವಿನ ಓಟಕ್ಕೆ ತಡೆ ಬಿದ್ದಿದೆ. ರಾಜಸ್ಥಾನ. ಛತ್ತೀಸಗಢ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿ ಅಧಿಕಾರವನ್ನು ಕಾಂಗ್ರೆಸ್‌ ಸೆಳೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ