ಸೋಲಿನಿಂದ ಸಿದ್ದು ನಾಯಕತ್ವಕ್ಕೆ ಗುದ್ದು
ಉಪ ಚುನಾವಣೆಯ ಹೀನಾಯ ಸೋಲಿನೊಂದಿಗೆ ಅಂತಃಕಲಹಕ್ಕೆ ಕಾಂಗ್ರೆಸ್ ಬೆಲೆ ತೆತ್ತಿದೆ...
Vijaya Karnataka Web 10 Dec 2019, 5:00 am
ಕೆಂಚೇಗೌಡ
ಬೆಂಗಳೂರು: ಉಪ ಚುನಾವಣೆಯ ಹೀನಾಯ ಸೋಲಿನೊಂದಿಗೆ ಅಂತಃಕಲಕ್ಕೆ ಕಾಂಗ್ರೆಸ್ ಬೆಲೆ ತೆತ್ತಿದೆ. ಸಮೂಹ ಆಕರ್ಷಿಸುವ ಸಮರ್ಥ ನಾಯಕತ್ವ ಎಂಬ ಎಐಸಿಸಿ ಒತ್ತಾಸೆಯಂತೆ ಏಕಾಂಗಿ ಹೋರಾಟದ ಉಮೇದಿಯಲ್ಲಿದ್ದ ಸಿದ್ದರಾಮಯ್ಯ ಮುಗ್ಗರಿಸಿ ಬಿದ್ದಿದ್ದರೆ, ಸಾಮೂಹಿಕ ನಾಯಕತ್ವದ ಬೇಡಿಕೆಗೆ ಬೆಲೆ ಸಿಗದೆ ನಿರ್ಲಿಪ್ತರಾಗಿದ್ದ ಹಿರಿಯ ಮತ್ತು ಮೂಲಕಾಂಗ್ರೆಸ್ಸಿಗರು ಸೋತೂ ಗೆದ್ದವರಂತೆ ತೆರೆಮರೆಯಲ್ಲಿನಗುತ್ತಿದ್ದಾರೆ. ವಲಸಿಗ ಮತ್ತು ಮೂಲಕಾಂಗ್ರೆಸ್ಸಿಗರ ನಡುವೆ ಬೆಸುಗೆ ಹಾಕಿ ಸಾಮೂಹಿಕ ನಾಯಕತ್ವದಲ್ಲಿಪಕ್ಷ ಸಂಘಟಿಸುವ ಅನಿವಾರ್ಯತೆಯ ಸಂದೇಶ ಎಐಸಿಸಿಗೆ ರವಾನೆಯಾಗಿದೆ.
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಳಿಕ ರಾಜ್ಯದಲ್ಲೂಬದಲಾವಣೆ ನಿರೀಕ್ಷಿಸಿ, 'ಅನರ್ಹ'ರಿಗೆ ಪಾಠ ಕಲಿಸುವ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿದೆ. ಕಳೆದ ಚುನಾವಣೆಯಲ್ಲಿಗೆದ್ದಿದ್ದ ಕ್ಷೇತ್ರಗಳನ್ನು ಮರುಗಳಿಸಿಕೊಳ್ಳುವುದರಲ್ಲಿವೈಫಲ್ಯವೇ ಕಾಂಗ್ರೆಸ್ಗೆ ಮರ್ಮಾಘಾತ. 'ಸಿದ್ದರಾಮಯ್ಯ ವರ್ಸಸ್ ಹಿರಿಯ ಕಾಂಗ್ರೆಸ್ಸಿಗ' ಆಂತರಿಕ ಕದನದೊಂದಿಗೆ ಆರಂಭವಾದ ಉಪಸಮರ ತಯಾರಿಯು ಸೋಲಿನೊಂದಿಗೆ ಮತ್ತದೇ ಸುಳಿಗೆ ಬಂದು ನಿಂತಿದೆ. ರಾಜ್ಯ ಕಾಂಗ್ರೆಸ್ಗೆ 'ಸರ್ಜರಿ'ಯ ಅಗತ್ಯವಂತೂ ಸ್ಪಷ್ಟವಾಗಿದೆ.
ಸಿದ್ದು ಆಶಾಭಂಗ
ಅಭ್ಯರ್ಥಿಗಳ ಆಯ್ಕೆ, ಚುನಾವಣೆ ತಂತ್ರಗಾರಿಕೆ ಹಾಗೂ ಪ್ರಚಾರ ಎಲ್ಲವಿಚಾರಗಳಲ್ಲೂ ತನ್ನ ನಿರ್ಧಾರವೇ ಅಂತಿಮವೆಂಬಂತೆ ಹೆಜ್ಜೆ ಇಟ್ಟಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಶಾಭಂಗವಾಗಿದೆ. ಹಿರಿಯ ನಾಯಕರ ಅಸಹಕಾರದ ಮಧ್ಯೆಯೂ ಗೆದ್ದುಬಂದು ವರಿಷ್ಠರ ಎದುರು ಸಾಮರ್ಥ್ಯ ಸಾಬೀತುಪಡಿಸುವ ಅವರ ಕನಸಿಗೆ ಪೆಟ್ಟು ಬಿದ್ದಿದ್ದು, ಎಲ್ಲರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ. 'ಹೌದು ಹುಲಿಯಾ' ಎಂಬಂತೆ ಪ್ರಚಾರದ ಅಖಾಡದಲ್ಲಿವಿಜೃಂಭಿಸಿದ್ದ ಸಿದ್ದರಾಮಯ್ಯ ಫಲಿತಾಂಶದಿಂದ ಭ್ರಮನಿರಸನಗೊಂಡಿದ್ದಾರೆ. ಹೈಕಮಾಂಡ್ ನಿರೀಕ್ಷೆ ಉಳಿಸಿಕೊಳ್ಳಲಾಗದ ಅವರು ಸಿಎಲ್ಪಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಂಗೀಕಾರವಾದರೆ ಪಟ್ಟುಹಿಡಿದು ಪಡೆದ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕುತ್ತು ಬೀಳಲಿದೆ.
ಸಿದ್ದರಾಮಯ್ಯ ಮೂಗಿನ ನೇರಕ್ಕೆ ಕೆಪಿಸಿಸಿ ತಾಳ ಹಾಕುತ್ತಿದೆ ಎಂಬ ಹಿರಿಯ ನಾಯಕರ ತೆಗಳಿಕೆಗೂ ತಲೆಕೆಡಿಸಿಕೊಳ್ಳದ ದಿನೇಶ್ ಗುಂಡೂರಾವ್ಗೂ ಉಪಚುನಾವಣೆ ಸೋಲು ಮುಖಭಂಗ ತಂದಿಟ್ಟಿದೆ. ಪಕ್ಷದ ಸಹೋದ್ಯೋಗಿಗಳು ಕಾಲೆಳೆಯುವ ಪ್ರಯತ್ನಿಸುವ ಮುನ್ನವೇ ದಿನೇಶ್ ಅವರೂ ಸಿದ್ದರಾಮಯ್ಯ ಹಾದಿಯನ್ನೇ ತುಳಿದು ಕೆಪಿಸಿಸಿ ಅಧ್ಯಕ್ಷಗಾದಿ ತೊರೆದಿದ್ದಾರೆ. ಈ ಬೆಳವಣಿಗೆಯಿಂದಾಗಿ ಪಕ್ಷ ನಿಷ್ಠ ಪ್ರತಿಪಾದನೆಯ ಹಿರಿಯ ಕಾಂಗ್ರೆಸ್ಸಿಗರ 'ಸಾಮೂಹಿಕ ನಾಯಕತ್ವ'ದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಕದಡಿದ ವಿಶ್ವಾಸ
ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದವರಿಗೆ ಸೋಲಿನ ಪಾಠ ಕಲಿಸುವ ಜತೆಗೆ, ಮತ್ತೆ ಗೆದ್ದು ಪಕ್ಷದ ನೆಲೆ ಉಳಿಸಿಕೊಳ್ಳುವ ಕಾಂಗ್ರೆಸ್ಸಿಗರ ಉತ್ಸಾಹಕ್ಕೆ ಬ್ರೇಕ್ ಬಿದ್ದಿದ್ದು, ನಿರೀಕ್ಷೆಗೆ ಮೀರಿದ ಸೋಲು 'ಕೈ' ಪಾಳೇಯದ ಆತ್ಮಸ್ಥೈರ್ಯವನ್ನೇ ಕದಡಿದೆ. ಎದುರಾಳಿ ವಿರುದ್ಧ ಸಂಘಟಿತ ಹೋರಾಟದ ಗುರಿ ಮರೆತು, ಪರಸ್ಪರ ಕಾಲೆಳೆದಾಟದಲ್ಲಿನಾಯಕರು ತೊಡಗಿದ್ದು ತನ್ನದೇ ಕ್ಷೇತ್ರಗಳಲ್ಲಿಕಾಂಗ್ರೆಸ್ನ ಹೀನಾಯ ಸೋಲಿಗೆ ಕಾರಣವಾಯಿತು ಎಂಬ ಪಕ್ಷದ ಕಾರ್ಯಕರ್ತರನ್ನು ನಿರುತ್ಸಾಹದ ಪರಿಸ್ಥಿತಿಗೆ ದೂಡಿದೆ. ಸೋಲಿನ ವಿಶ್ಲೇಷಣೆ ನಾಯಕರ ಮಧ್ಯೆ ಮತ್ತಷ್ಟು ವಾಗ್ವಾದ ಮತ್ತು ಕಾಲೆಳೆದಾಟಕ್ಕೆ ಕಾರಣವಾಗುವ ಸಾಧ್ಯತೆಗಳು 'ಕೈ' ಪಾಳೇಯದಲ್ಲಿಭವಿಷ್ಯದ ಬಗೆಗಿನ ಆತಂಕ ಹೆಚ್ಚಿಸಿದೆ.
ಬೆಸುಗೆಗೆ ವಿಕೇಂದ್ರೀಕರಣದ ಮದ್ದು
ಸಾಮೂಹಿಕ ನಾಯಕತ್ವ ಬೇಡಿಕೆಗೆ ಮತ್ತೆ ಪುಷ್ಟಿ ಸಿಕ್ಕಿದೆ. ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಅವರು ಪಕ್ಷದಲ್ಲಿಮತ್ತೆ 'ಪಟ್ಟ'ಕ್ಕೆ ಸಿದ್ಧವಾಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ನಾಯಕತ್ವ ನಂಬಿ ಕೂರುವ ಸ್ಥಿತಿಯಲ್ಲಿಎಐಸಿಸಿ ಉಳಿದಿಲ್ಲ. ಸಿದ್ದರಾಮಯ್ಯ ಹುದ್ದೆಯನ್ನು ವಿಭಜಿಸುವುದು, ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಉಳಿಸಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ನಾಯಕರಾಗಿ ಡಾ.ಜಿ.ಪರಮೇಶ್ವರ್ ಅವರನ್ನು ಆಯ್ಕೆ ಮಾಡುವುದು, ಕೆಪಿಸಿಸಿ ಸಾರಥ್ಯವನ್ನು ಡಿ.ಕೆ.ಶಿವಕುಮಾರ್ಗೆ ನೀಡಿ, ಸಿಡಬ್ಲ್ಯೂಸಿಯಲ್ಲಿಎಚ್.ಕೆ.ಪಾಟೀಲ್ಗೆ ಅವಕಾಶ ಕಲ್ಪಿಸುವುದು. ಸಾಮೂಹಿಕ ನಾಯಕತ್ವದ ಈ ಸೂತ್ರ ಸಿದ್ಧವಾಗುತ್ತಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬದಲಾವಣೆಯೂ ನಿರೀಕ್ಷಿತವಾಗಿದ್ದು, ರಾಜ್ಯ ಕಾಂಗ್ರೆಸ್ನಲ್ಲಿನಾಯಕತ್ವ ಮತ್ತು ಸಾಮರ್ಥ್ಯಕ್ಕೆ ಕೊರತೆ ಇರಲಿಲ್ಲವಾದರೂ ಎಲ್ಲರನ್ನೂ ಒಟ್ಟುಗೂಡಿಸಿ ಕರೆದೊಯ್ಯಲು ಕೆಸಿವಿ ವಿಫಲರಾದರು. ಕೇರಳ ವಿಧಾನಸಭೆ ಚುನಾವಣೆ ತಯಾರಿಯತ್ತ ಆಸಕ್ತಿ ತೋರಿ ಕರ್ನಾಟಕದ ಜವಾಬ್ದಾರಿಯಿಂದ ಬಿಡುಗಡೆ ಬಯಸಿರುವ ವೇಣುಗೋಪಾಲ್ ಜಾಗಕ್ಕೆ ಸದ್ಯದಲ್ಲೇ ಹೊಸದಾಗಿ ಬೇರೊಬ್ಬ ಎಐಸಿಸಿ ಪ್ರಧಾನ ಕಾರ್ಯದರ್ಶಿ ನೇಮಕಗೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರು: ಉಪ ಚುನಾವಣೆಯ ಹೀನಾಯ ಸೋಲಿನೊಂದಿಗೆ ಅಂತಃಕಲಕ್ಕೆ ಕಾಂಗ್ರೆಸ್ ಬೆಲೆ ತೆತ್ತಿದೆ. ಸಮೂಹ ಆಕರ್ಷಿಸುವ ಸಮರ್ಥ ನಾಯಕತ್ವ ಎಂಬ ಎಐಸಿಸಿ ಒತ್ತಾಸೆಯಂತೆ ಏಕಾಂಗಿ ಹೋರಾಟದ ಉಮೇದಿಯಲ್ಲಿದ್ದ ಸಿದ್ದರಾಮಯ್ಯ ಮುಗ್ಗರಿಸಿ ಬಿದ್ದಿದ್ದರೆ, ಸಾಮೂಹಿಕ ನಾಯಕತ್ವದ ಬೇಡಿಕೆಗೆ ಬೆಲೆ ಸಿಗದೆ ನಿರ್ಲಿಪ್ತರಾಗಿದ್ದ ಹಿರಿಯ ಮತ್ತು ಮೂಲಕಾಂಗ್ರೆಸ್ಸಿಗರು ಸೋತೂ ಗೆದ್ದವರಂತೆ ತೆರೆಮರೆಯಲ್ಲಿನಗುತ್ತಿದ್ದಾರೆ. ವಲಸಿಗ ಮತ್ತು ಮೂಲಕಾಂಗ್ರೆಸ್ಸಿಗರ ನಡುವೆ ಬೆಸುಗೆ ಹಾಕಿ ಸಾಮೂಹಿಕ ನಾಯಕತ್ವದಲ್ಲಿಪಕ್ಷ ಸಂಘಟಿಸುವ ಅನಿವಾರ್ಯತೆಯ ಸಂದೇಶ ಎಐಸಿಸಿಗೆ ರವಾನೆಯಾಗಿದೆ.
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಳಿಕ ರಾಜ್ಯದಲ್ಲೂಬದಲಾವಣೆ ನಿರೀಕ್ಷಿಸಿ, 'ಅನರ್ಹ'ರಿಗೆ ಪಾಠ ಕಲಿಸುವ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿದೆ. ಕಳೆದ ಚುನಾವಣೆಯಲ್ಲಿಗೆದ್ದಿದ್ದ ಕ್ಷೇತ್ರಗಳನ್ನು ಮರುಗಳಿಸಿಕೊಳ್ಳುವುದರಲ್ಲಿವೈಫಲ್ಯವೇ ಕಾಂಗ್ರೆಸ್ಗೆ ಮರ್ಮಾಘಾತ. 'ಸಿದ್ದರಾಮಯ್ಯ ವರ್ಸಸ್ ಹಿರಿಯ ಕಾಂಗ್ರೆಸ್ಸಿಗ' ಆಂತರಿಕ ಕದನದೊಂದಿಗೆ ಆರಂಭವಾದ ಉಪಸಮರ ತಯಾರಿಯು ಸೋಲಿನೊಂದಿಗೆ ಮತ್ತದೇ ಸುಳಿಗೆ ಬಂದು ನಿಂತಿದೆ. ರಾಜ್ಯ ಕಾಂಗ್ರೆಸ್ಗೆ 'ಸರ್ಜರಿ'ಯ ಅಗತ್ಯವಂತೂ ಸ್ಪಷ್ಟವಾಗಿದೆ.
ಸಿದ್ದು ಆಶಾಭಂಗ
ಅಭ್ಯರ್ಥಿಗಳ ಆಯ್ಕೆ, ಚುನಾವಣೆ ತಂತ್ರಗಾರಿಕೆ ಹಾಗೂ ಪ್ರಚಾರ ಎಲ್ಲವಿಚಾರಗಳಲ್ಲೂ ತನ್ನ ನಿರ್ಧಾರವೇ ಅಂತಿಮವೆಂಬಂತೆ ಹೆಜ್ಜೆ ಇಟ್ಟಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಶಾಭಂಗವಾಗಿದೆ. ಹಿರಿಯ ನಾಯಕರ ಅಸಹಕಾರದ ಮಧ್ಯೆಯೂ ಗೆದ್ದುಬಂದು ವರಿಷ್ಠರ ಎದುರು ಸಾಮರ್ಥ್ಯ ಸಾಬೀತುಪಡಿಸುವ ಅವರ ಕನಸಿಗೆ ಪೆಟ್ಟು ಬಿದ್ದಿದ್ದು, ಎಲ್ಲರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ. 'ಹೌದು ಹುಲಿಯಾ' ಎಂಬಂತೆ ಪ್ರಚಾರದ ಅಖಾಡದಲ್ಲಿವಿಜೃಂಭಿಸಿದ್ದ ಸಿದ್ದರಾಮಯ್ಯ ಫಲಿತಾಂಶದಿಂದ ಭ್ರಮನಿರಸನಗೊಂಡಿದ್ದಾರೆ. ಹೈಕಮಾಂಡ್ ನಿರೀಕ್ಷೆ ಉಳಿಸಿಕೊಳ್ಳಲಾಗದ ಅವರು ಸಿಎಲ್ಪಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಂಗೀಕಾರವಾದರೆ ಪಟ್ಟುಹಿಡಿದು ಪಡೆದ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕುತ್ತು ಬೀಳಲಿದೆ.
ಸಿದ್ದರಾಮಯ್ಯ ಮೂಗಿನ ನೇರಕ್ಕೆ ಕೆಪಿಸಿಸಿ ತಾಳ ಹಾಕುತ್ತಿದೆ ಎಂಬ ಹಿರಿಯ ನಾಯಕರ ತೆಗಳಿಕೆಗೂ ತಲೆಕೆಡಿಸಿಕೊಳ್ಳದ ದಿನೇಶ್ ಗುಂಡೂರಾವ್ಗೂ ಉಪಚುನಾವಣೆ ಸೋಲು ಮುಖಭಂಗ ತಂದಿಟ್ಟಿದೆ. ಪಕ್ಷದ ಸಹೋದ್ಯೋಗಿಗಳು ಕಾಲೆಳೆಯುವ ಪ್ರಯತ್ನಿಸುವ ಮುನ್ನವೇ ದಿನೇಶ್ ಅವರೂ ಸಿದ್ದರಾಮಯ್ಯ ಹಾದಿಯನ್ನೇ ತುಳಿದು ಕೆಪಿಸಿಸಿ ಅಧ್ಯಕ್ಷಗಾದಿ ತೊರೆದಿದ್ದಾರೆ. ಈ ಬೆಳವಣಿಗೆಯಿಂದಾಗಿ ಪಕ್ಷ ನಿಷ್ಠ ಪ್ರತಿಪಾದನೆಯ ಹಿರಿಯ ಕಾಂಗ್ರೆಸ್ಸಿಗರ 'ಸಾಮೂಹಿಕ ನಾಯಕತ್ವ'ದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಕದಡಿದ ವಿಶ್ವಾಸ
ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದವರಿಗೆ ಸೋಲಿನ ಪಾಠ ಕಲಿಸುವ ಜತೆಗೆ, ಮತ್ತೆ ಗೆದ್ದು ಪಕ್ಷದ ನೆಲೆ ಉಳಿಸಿಕೊಳ್ಳುವ ಕಾಂಗ್ರೆಸ್ಸಿಗರ ಉತ್ಸಾಹಕ್ಕೆ ಬ್ರೇಕ್ ಬಿದ್ದಿದ್ದು, ನಿರೀಕ್ಷೆಗೆ ಮೀರಿದ ಸೋಲು 'ಕೈ' ಪಾಳೇಯದ ಆತ್ಮಸ್ಥೈರ್ಯವನ್ನೇ ಕದಡಿದೆ. ಎದುರಾಳಿ ವಿರುದ್ಧ ಸಂಘಟಿತ ಹೋರಾಟದ ಗುರಿ ಮರೆತು, ಪರಸ್ಪರ ಕಾಲೆಳೆದಾಟದಲ್ಲಿನಾಯಕರು ತೊಡಗಿದ್ದು ತನ್ನದೇ ಕ್ಷೇತ್ರಗಳಲ್ಲಿಕಾಂಗ್ರೆಸ್ನ ಹೀನಾಯ ಸೋಲಿಗೆ ಕಾರಣವಾಯಿತು ಎಂಬ ಪಕ್ಷದ ಕಾರ್ಯಕರ್ತರನ್ನು ನಿರುತ್ಸಾಹದ ಪರಿಸ್ಥಿತಿಗೆ ದೂಡಿದೆ. ಸೋಲಿನ ವಿಶ್ಲೇಷಣೆ ನಾಯಕರ ಮಧ್ಯೆ ಮತ್ತಷ್ಟು ವಾಗ್ವಾದ ಮತ್ತು ಕಾಲೆಳೆದಾಟಕ್ಕೆ ಕಾರಣವಾಗುವ ಸಾಧ್ಯತೆಗಳು 'ಕೈ' ಪಾಳೇಯದಲ್ಲಿಭವಿಷ್ಯದ ಬಗೆಗಿನ ಆತಂಕ ಹೆಚ್ಚಿಸಿದೆ.
ಬೆಸುಗೆಗೆ ವಿಕೇಂದ್ರೀಕರಣದ ಮದ್ದು
ಸಾಮೂಹಿಕ ನಾಯಕತ್ವ ಬೇಡಿಕೆಗೆ ಮತ್ತೆ ಪುಷ್ಟಿ ಸಿಕ್ಕಿದೆ. ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಅವರು ಪಕ್ಷದಲ್ಲಿಮತ್ತೆ 'ಪಟ್ಟ'ಕ್ಕೆ ಸಿದ್ಧವಾಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ನಾಯಕತ್ವ ನಂಬಿ ಕೂರುವ ಸ್ಥಿತಿಯಲ್ಲಿಎಐಸಿಸಿ ಉಳಿದಿಲ್ಲ. ಸಿದ್ದರಾಮಯ್ಯ ಹುದ್ದೆಯನ್ನು ವಿಭಜಿಸುವುದು, ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಉಳಿಸಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ನಾಯಕರಾಗಿ ಡಾ.ಜಿ.ಪರಮೇಶ್ವರ್ ಅವರನ್ನು ಆಯ್ಕೆ ಮಾಡುವುದು, ಕೆಪಿಸಿಸಿ ಸಾರಥ್ಯವನ್ನು ಡಿ.ಕೆ.ಶಿವಕುಮಾರ್ಗೆ ನೀಡಿ, ಸಿಡಬ್ಲ್ಯೂಸಿಯಲ್ಲಿಎಚ್.ಕೆ.ಪಾಟೀಲ್ಗೆ ಅವಕಾಶ ಕಲ್ಪಿಸುವುದು. ಸಾಮೂಹಿಕ ನಾಯಕತ್ವದ ಈ ಸೂತ್ರ ಸಿದ್ಧವಾಗುತ್ತಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬದಲಾವಣೆಯೂ ನಿರೀಕ್ಷಿತವಾಗಿದ್ದು, ರಾಜ್ಯ ಕಾಂಗ್ರೆಸ್ನಲ್ಲಿನಾಯಕತ್ವ ಮತ್ತು ಸಾಮರ್ಥ್ಯಕ್ಕೆ ಕೊರತೆ ಇರಲಿಲ್ಲವಾದರೂ ಎಲ್ಲರನ್ನೂ ಒಟ್ಟುಗೂಡಿಸಿ ಕರೆದೊಯ್ಯಲು ಕೆಸಿವಿ ವಿಫಲರಾದರು. ಕೇರಳ ವಿಧಾನಸಭೆ ಚುನಾವಣೆ ತಯಾರಿಯತ್ತ ಆಸಕ್ತಿ ತೋರಿ ಕರ್ನಾಟಕದ ಜವಾಬ್ದಾರಿಯಿಂದ ಬಿಡುಗಡೆ ಬಯಸಿರುವ ವೇಣುಗೋಪಾಲ್ ಜಾಗಕ್ಕೆ ಸದ್ಯದಲ್ಲೇ ಹೊಸದಾಗಿ ಬೇರೊಬ್ಬ ಎಐಸಿಸಿ ಪ್ರಧಾನ ಕಾರ್ಯದರ್ಶಿ ನೇಮಕಗೊಳ್ಳುವ ನಿರೀಕ್ಷೆಯಿದೆ.