ಅದು ಮುಂಬಯಿ-ನಾಗಪುರ ಹೆದ್ದಾರಿ. ನಾಗಪುರದಿಂದ 155 ಕಿ.ಮೀ. ದೂರದಲ್ಲಿದೆ ಅಮರಾವತಿ. ಅಲ್ಲಿತ್ತು ಒಂದು ಸುಂದರ ಕಿತ್ತಳೆ ತೋಟ. ವಿನೀತ್ ಆಗ್ರ್ಯಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ನಡೆಸುತ್ತಿದ್ದ ವಿಶಾಲ ಗಾರ್ಡನ್ ಅದು. ಅದು 1995ರ ಕಾಲ.
ಅಲ್ಲೊಂದು ಅನಾಹುತಕಾರಿ ಅಡ್ಡ ದಂಧೆಯೊಂದು ನಡೆಯುತ್ತಿದೆ ಎಂಬ ಮಾಹಿತಿ ಬಂದಾಗ ಮುಂಬಯಿಯ ಕಂದಾಯ ಗುಪ್ತಚರ ನಿರ್ದೇಶನಾಲಯವೇ ಹುಬ್ಬೇರಿಸಿತ್ತು.
ಅದೊಂದು ದಿನ ಕೇಂದ್ರ ಅಬಕಾರಿ ದಳವನ್ನೂ ಸೇರಿಕೊಂಡು ಅಮರಾವತಿಯ ಆ ಕಿತ್ತಳೆ ತೋಟವನ್ನು ಪ್ರವೇಶಿಸಿಯೇ ಬಿಟ್ಟಿತು. ಅಲ್ಲಿಅವರನ್ನು ಎದುರುಗೊಂಡದ್ದು ಮ್ಯಾನೇಜರ್ ಶರ್ಮ. ಕಂಪನಿಯ ನಿರ್ದೇಶಕರಾಗಿರುವ ಪ್ರಶಾಂತ್ ರಾಥಿ ಅವರು ಕೆಲಸದ ನಿಮಿತ್ತ ಮುಂಬಯಿಗೆ ಹೋಗಿದ್ದಾರೆ, ಬರುವುದು ಒಂದೆರಡು ದಿನ ತಡವಾದೀತು ಎಂದು ಮ್ಯಾನೇಜರ್ ಶರ್ಮ ಅಧಿಕಾರಿಗಳನ್ನು ಸಾಗ ಹಾಕಲು ಯತ್ನಿಸಿದ.
ಅಧಿಕಾರಿಗಳು ತಮಗಿದ್ದ ಸಂಶಯವನ್ನು ಮುಂದಿಟ್ಟಾಗ ಶರ್ಮ ಖಡಾಖಡಿಯಾಗಿ ಇಲ್ಲವೇ ಇಲ್ಲಎಂದ. ಆದರೆ, ತೀವ್ರವಾಗಿ ಪ್ರಶ್ನಿಸಿದಾಗ, ನಾವಿಲ್ಲಿಮ್ಯಾಂಡ್ರೆಕ್ಸ್ ಮಾತ್ರೆಯೇನೂ ತಯಾರು ಮಾಡುತ್ತಿಲ್ಲಎಂದ! ಹಾಗಿದ್ದರೆ ಇಲ್ಲಿತಯಾರಾಗೋ ಮಾತ್ರೆ ಯಾವುದು ಎಂದು ಕೇಳಿದಾಗ ಅವನು ಬಾಯ್ಬಿಟ್ಟ ಹೆಸರು: ಮೆಥಾಕ್ವಲೋನ್!
ಮೆಥಾಕ್ವಲೋನ್ ಎನ್ನುವುದು ಸೈಕೊಟ್ರೋಪಿಕ್ ಡ್ರಗ್. ಅತ್ಯಂತ ವೇಗದಲ್ಲಿಮತ್ತೇರಿಸುವ ಮಾದಕ ದ್ರವ್ಯ!
ಕೂಡಲೇ ಅಧಿಕಾರಿಗಳು ತೋಟದ ನಡುವೆ ಇದ್ದ ಆ ಘಟಕವನ್ನು ಜಾಲಾಡಿದರು. ಆಗ ಅವರಿಗೆ ಸಿಕ್ಕಿದ್ದು 1215.9 ಕೆಜಿ ಮೆಥಾಕ್ವಲೋನ್ ಹರಳು. ಆಗಿನ ಕಾಲಕ್ಕೇ ಅದರ ಮೌಲ್ಯ 1,21,51,000 ರೂ.! 1.45 ಕೋಟಿ ರೂ. ಮೌಲ್ಯ 1500 ಲೀಟರ್ ಮೆಥಾಕ್ವಲೋನ್ ದ್ರಾವಣ! ಜತೆಗೆ ಹಲವಾರು ಕಚ್ಚಾ ವಸ್ತು, ಸಲಕರಣೆಗಳು. ಅದರೊಂದಿಗೆ 4.42 ಲಕ್ಷ ರೂ. ಕರೆನ್ಸಿ!
ಆದರೆ, ಅಲ್ಲಿಮೆಥಾಕ್ವಲೋನ್ ಮಾತ್ರೆಗಳನ್ನು ತಯಾರಿಸುತ್ತಿರಲಿಲ್ಲ. ಇನ್ನಷ್ಟು ವಿಚಾರಣೆ ವೇಳೆ ಮ್ಯಾನೇಜರ್ ಶರ್ಮ ಇನ್ನೊಂದು ಘಟಕದ ಹೆಸರು ಬಾಯಿಬಿಟ್ಟ. ಅದುವೇ ಅಮರಾವತಿಯಿಂದ 100 ಕಿ.ಮೀ. ದೂರದ ಅಕೋಲಾ! ಅಮರಾವತಿಯಿಂದ ಮೆಥಾಕ್ವಲೋನ್ ಪೌಡರನ್ನು ಅಕೋಲಾದ ಪ್ರಭಾ ಪೈಫ್ಸ್ಗೆ ರವಾನೆ ಮಾಡಲಾಗುತ್ತದೆ ಎಂದು ಹೇಳಿದ. ಅದರ ಮಾಲೀಕ ರಮೇಶ್ ಕಾಲಿಯಾ. ಆವತ್ತೇ ರಾತ್ರಿ ಅಧಿಕಾರಿಗಳು ಪ್ರಭಾ ಪೈಫ್ಸ್ಗೆ ದಾಳಿ ನಡೆಸಿದರು. ಆದರೆ, ಅಲ್ಲಿಏನೂ ಸಿಗಲಿಲ್ಲ!
ಇನ್ನೊಂದು ಕಿತ್ತಳೆ ಗಾರ್ಡನ್!
ಪ್ರಭಾ ಪೈಫ್ಸ್ನಲ್ಲಿಏನೂ ಸಿಗಲಿಲ್ಲಎಂದು ಅಧಿಕಾರಿಗಳು ಸುಮ್ಮನಿರಲಿಲ್ಲ. ಹುಡುಕಾಟ ಮುಂದುವರಿಸಿದಾಗ ಅವರ ಕಣ್ಣಿಗೆ ಇನ್ನೊಂದು ಕಿತ್ತಳೆ ತೋಟ ಬಿತ್ತು. ಅದುವೇ ಅಕೋಲಾ ಜಿಲ್ಲೆಯ ಕುಂಬಾರಿ ಗ್ರಾಮದಲ್ಲಿರುವ ಮನೀಷ್ ಗಾರ್ಡನ್! ರಮೇಶ್ ಕಾಲಿಯಾನಿಗೆ ಸೇರಿದ ಈ ತೋಟಕ್ಕೆ ದಾಳಿ ಮಾಡಿದಾಗ 1932 ಕೆಜಿ ಮ್ಯಾಂಡ್ರೆಕ್ಸ್ (1.93 ಕೋಟಿ ರೂ. ಮೌಲ್ಯ) ಮಾತ್ರೆಗಳು ಸಿಕ್ಕಿದವು. ಜತೆಗೆ 506 ಕೆಜಿ ಮೆಥಾಕ್ವಲೋನ್, 57 ಕೆಜಿ ಮ್ಯಾಗ್ನೀಷಿಯಂ ಸ್ಟೀರಾಯ್ಡ… ಮತ್ತು ಮಾತ್ರೆ ತಯಾರಿಸುವ ಯಂತ್ರ.
ಅಧಿಕಾರಿಗಳು ದಾಳಿ ಮಾಡಿದಾಗ ಅಲ್ಲಿಯಂತ್ರದ ಮೂಲಕ ಮಾತ್ರೆಯನ್ನು ತಯಾರಿಸಲಾಗುತ್ತಿತ್ತು. ಅಧಿಕಾರಿಗಳು ಕೈಯಲ್ಲಿಹಿಡಿದು ನೋಡಿದರು. ಕಂದು ಬಣ್ಣದ ಮಾತ್ರೆಯದು. ಮಾತ್ರೆಯ ಒಂದು ಬದಿಯಲ್ಲಿಇಂಗ್ಲಿಷ್ನಲ್ಲಿ 'ಎಂ' ಎಂದು ಬರೆಯಲಾಗಿತ್ತು. ಇನ್ನೊಂದು ಬದಿಯಲ್ಲಿಯಾವುದೋ ಚಿತ್ರ. ಪರೀಕ್ಷೆಗೆ ಒಳಪಡಿಸಿ ಅದು ಮೆಥಾಕ್ವಲೋನ್ ಎನ್ನುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು. ಅಧಿಕಾರಿಗಳು ಕಾಲಿಯಾನ ಮನೆಗೂ ದಾಳಿ ನಡೆಸಿದಾಗ ಹಲವು ದಾಖಲೆಗಳು ದೊರೆತವು.
ಸಿಕ್ಕಿಬಿದ್ದ ಪ್ರಶಾಂತ್ ರಾಥಿ
1995ರ ನವೆಂಬರ್ 23ರಂದು ಪ್ರಶಾಂತ್ ರಾಥಿ ಮತ್ತು ಕಾಂತಿಲಾಲ್ ದುರ್ಗಾದಾಸ್ ಜೋಗಾನಿ ಅವರು ಮುಂಬಯಿಯಿಂದ ಹೊರಡುವ ಇಂಡಿಯನ್ ಏರ್ಲೈನ್ಸ್ ವಿಮಾನದಲ್ಲಿ ಅಮರಾವತಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿತ್ತು. ಅಧಿಕಾರಿಗಳು ಪ್ರಶಾಂತ್ನನ್ನು ಸಾಂತಾಕ್ರೂಜ್ ವಿಮಾನ ನಿಲ್ದಾಣದಲ್ಲೇ ಸೆರೆ ಹಿಡಿದರೆ ಕಾಂತಿಲಾಲ್ನನ್ನು ಅದೇ ದಿನ ಮುಂಬಯಿಯ ಮನೆಯಲ್ಲಿ ಹಿಡಿದು ಹಾಕಿದರು.
ಮಾವ ಕೊಟ್ಟ ಐಡಿಯಾ!
ತಾನೇಕೆ ಈ ಡ್ರಗ್ಸ್ ವ್ಯವಹಾರಕ್ಕೆ ಬಂದೆ ಎನ್ನುವುದನ್ನು ಎನ್ಡಿಪಿಎಸ್ ಕಾಯಿದೆಯಡಿ ದಾಖಲಿಸಿಕೊಂಡ ಹೇಳಿಕೆಯಲ್ಲಿಸ್ಪಷ್ಟಪಡಿಸಿದ್ದಾನೆ. ''ನಾನು ಅಮರಾವತಿಯಲ್ಲಿರುವ ವಿನೀತ್ ಆಗ್ರ್ಯಾನಿಕ್ಸ್ ಕಂಪನಿಯ ಆಡಳಿತ ನಿರ್ದೇಶಕ. 1986ರಲ್ಲಿಅಸಿಟೋಕ್ಸಿ-ಆಕ್ಸಿ-ಫೆನ್ ಬುಟಜೋನ್ ಎಂಬ ರಾಸಾಯನಿಕ ಉತ್ಪಾದನೆಗೆ ಲೈಸೆನ್ಸ್ ಪಡೆದಿದ್ದೆ. ಆದರೆ, ಅದು ಅಷ್ಟೊಂದು ಯಶಸ್ವಿಯಾಗಲಿಲ್ಲ. ಏನಾದರೂ ಹೆಚ್ಚುವರಿ ಆದಾಯದ ದಾರಿ ಬೇಕೆಂದು ಮಾವ ಕಮಲ್ ಕಿಶೋರ್ ರಾಥಿ ಅವರನ್ನು ವಿಚಾರಿಸಿದೆ. ಮುಂಬಯಿ ನಿವಾಸಿಯಾಗಿರುವ ಕಮಲ್ ಕಿಶೋರ್ ರಾಯಗಢ ಜಿಲ್ಲೆಯ ತಲೋಜಾದಲ್ಲಿಪ್ರಗತಿ ಕೆಮಿಕಲ್ಸ್ ಎಂಬ ಕಂಪನಿ ನಡೆಸುತ್ತಿದ್ದಾರೆ. ಅವರು ಕಾಲಿಯಾನಿಂದ ಕಚ್ಚಾ ವಸ್ತುಗಳನ್ನು ಪಡೆದು ಮೆಥಾಕ್ವಲೋನ್ ಪೌಡರ್ ತಯಾರಿಸುವಂತೆ ಸೂಚಿಸಿದರು,'' ಎಂದು ವಿವರಿಸಿದ.
ಕಾಲಿಯಾ ಫುಡ್ ಇನ್ಸ್ಪೆಕ್ಟರ್!
ಅಂದಹಾಗೆ ಇವರೆಲ್ಲರೂ ಕೈ ಎತ್ತಿ ತೋರಿಸುತ್ತಿರುವ ರಮೇಶ್ ಕುಮಾರ್ ಅಗರ್ವಾಲ್ ಅಲಿಯಾಸ್ ಕಾಲಿಯಾ ಯಾರು ಗೊತ್ತಾ? ಅವನೊಬ್ಬ ಮಾಜಿ ಆಹಾರ ಮತ್ತು ಔಷಧ ಪರಿವೀಕ್ಷಕ, ಫುಡ್ ಎಂಡ್ ಡ್ರಗ್ಸ್ ಇನ್ ಸ್ಪೆಕ್ಟರ್. ಔಷಧ ಕಲಬೆರಕೆಗಳನ್ನು ಪತ್ತೆ ಹಚ್ಚಬೇಕಾಗಿದ್ದ ಆತನೇ ಮಾದಕ ದ್ರವ್ಯ ಸಾಗಾಟ ಮತ್ತು ಮಾಂಡ್ರೆಕ್ಸ್ ಮಾತ್ರೆ ತಯಾರಿಕೆಯಲ್ಲಿತೊಡಗಿಕೊಂಡಿದ್ದ.
ಅವನಿಗೆ ಮ್ಯಾಂಡ್ರೆಕ್ಸ್ ಮಾತ್ರೆ ತಯಾರಿಕೆ ಮತ್ತು ಮೆಥಾಕ್ವಲೋನ್ ಪೌಡರ್ ತಯಾರಿಸುವ ತಾಂತ್ರಿಕ ಪರಿಣತಿಯನ್ನು ಕೊಟ್ಟಿದ್ದು ರಾಸಾಯನಿಕ ತಜ್ಞನಾಗಿರುವ ಕಮಲ್ ಕಿಶೋರ್!
ಅಂತಿಮವಾಗಿ ಪ್ರಶಾಂತ್ ರಾಥಿ, ಕಮಲ್ ಕಿಶೋರ್ ರಾಥಿ, ಕಾಂತಿಲಾಲ್ ಜೋಗಾನಿ, ರಮೇಶ್ ಕುಮಾರ್ ಕಾಲಿಯಾನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದರು. ಮುಂದೆ ವಿಚಾರಣೆ ನಡೆದು ಪ್ರಶಾಂತ್ ರಾಥಿ, ಕಮಲ್ ಕಿಶೋರ್ ರಾಥಿ, ಕಾಂತಿಲಾಲ್ ಜೋಗಾನಿ, ರಮೇಶ್ ಕುಮಾರ್ ಕಾಲಿಯಾಗೆ ಶಿಕ್ಷೆ ಆಯಿತು. ಉಳಿದವರನ್ನು ಬಿಡುಗಡೆ ಮಾಡಲಾಯಿತು. ಶಿಕ್ಷೆಯ ವಿರುದ್ಧ ಮಾಡಿದ ಮೇಲ್ಮನವಿಗಳೆಲ್ಲಬಿದ್ದು ಹೋದವು.
ಈ ಪ್ರಕರಣ ಒಂದು ಹೈಪೊ›ಫೈಲ್ ಕೇಸ್ ಎಂದು ದಾಖಲಾಯಿತು. ಇದಕ್ಕೆ ಕಾರಣ, ಸಾಮಾನ್ಯವಾಗಿ ಅವಿದ್ಯಾವಂತರು, ಉದ್ಯೋಗ ಸಿಗದವರು ಡ್ರಗ್ಸ್ ದಂಧೆ ಸೇರುತ್ತಾರೆ ಎಂಬ ನಂಬಿಕೆ. ಆ ನಂಬಿಕೆಯನ್ನು ಈ ಪ್ರಕರಣ ಬುಡಮೇಲು ಮಾಡಿತ್ತು. ಮೊದಲೇ ಹೇಳಿದಂತೆ ಕಮಲ್ ಕಿಶೋರ್ ರಾಥಿ ಒಬ್ಬ ಕೆಮಿಕಲ್ ಎಕ್ಸ್ಪರ್ಟ್. ರಮೇಶ್ ಕಾಲಿಯಾ ಸರಕಾರಿ ಫುಡ್ ಕಂಟ್ರೋಲರ್ ಆಗಿದ್ದು ಡ್ರಗ್ ಟ್ರಾಫಿಕಿಂಗ್ ಕೇಸ್ನಲ್ಲಿಸಿಕ್ಕಿಬಿದ್ದು ಅಮಾನತು ಆದವನು.
ಬೆಂಗಳೂರಿನಲ್ಲಿಎಂಜಿನಿಯರಿಂಗ್
ಇನ್ನೊಬ್ಬ ಪ್ರಶಾಂತ್ ರಾಥಿ ಅಗರ್ಭ ಶ್ರೀಮಂತರ ಮನೆಯ ಹುಡುಗ. ಬೆಂಗಳೂರಿನ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ನಲ್ಲಿಎಂಜಿನಿಯರಿಂಗ್ ಪದವಿ ಪಡೆದವನು. ಅವನ ತಂದೆ ಅಮರಾವತಿಯಲ್ಲಿಜನಪ್ರಿಯ ವೈದ್ಯ. ಡಾಕ್ಟರ್ ಠಾಕೂರ್ ದಾಸ್ ರಾಥಿ. ಅಮರಾವತಿ ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿಅವರು ನಂಬರ್ ಒನ್ ಮಕ್ಕಳ ತಜ್ಞರಾಗಿದ್ದರು. ಪ್ರಶಾಂತ್ ರಾಥಿಯ ಅಣ್ಣ ಮತ್ತು ಅತ್ತಿಗೆ ಇಬ್ಬರೂ ಪ್ರಖ್ಯಾತ ವೈದ್ಯರು. ಅಕ್ಕನನ್ನು ಮದುವೆ ಮಾಡಿಕೊಟ್ಟಿದ್ದು ಹೈಕೋರ್ಟ್ ನ್ಯಾಯಾಧೀಶರೊಬ್ಬರ ಪುತ್ರನಿಗೆ. ಸ್ವತಃ ಪ್ರಶಾಂತ್ ರಾಥಿ ಮದುವೆಯಾಗಿದ್ದು ಕೂಡಾ ಅಹಮದ್ ನಗರದ ಒಬ್ಬ ಪ್ರಖ್ಯಾತ ಜವಳಿ ವ್ಯಾಪಾರಿಯ ಮಗಳನ್ನು.
ಡಾ. ಠಾಕೂರ್ ದಾಸ್ ರಾಥಿ ಅವರು 1986ರಲ್ಲಿಮಗನಿಗೆ 10 ಲಕ್ಷ ರೂ. ಕೊಟ್ಟು ವಿನೀತ್ ಆಗ್ರ್ಯಾನಿಕ್ಸ್ ಸ್ಥಾಪಿಸಲು ವ್ಯವಸ್ಥೆ ಮಾಡಿದ್ದರು. ಜತೆಗೆ ವಿಸ್ತಾರವಾದ ಕಿತ್ತಳೆ ತೋಟ. ಆದರೆ, ಮಾವನಿಂದ ದಿಕ್ಕು ತಪ್ಪಿದ ಪ್ರಶಾಂತ್ ರಾಥಿ ಮನೆಯ ಮರ್ಯಾದೆಯನ್ನೂ ಕಳೆದುಹಾಕಿದ!
ನಿರೂಪಣೆ: ಎ.ಕೃಷ್ಣಭಟ್
ಅಲ್ಲೊಂದು ಅನಾಹುತಕಾರಿ ಅಡ್ಡ ದಂಧೆಯೊಂದು ನಡೆಯುತ್ತಿದೆ ಎಂಬ ಮಾಹಿತಿ ಬಂದಾಗ ಮುಂಬಯಿಯ ಕಂದಾಯ ಗುಪ್ತಚರ ನಿರ್ದೇಶನಾಲಯವೇ ಹುಬ್ಬೇರಿಸಿತ್ತು.
ಅದೊಂದು ದಿನ ಕೇಂದ್ರ ಅಬಕಾರಿ ದಳವನ್ನೂ ಸೇರಿಕೊಂಡು ಅಮರಾವತಿಯ ಆ ಕಿತ್ತಳೆ ತೋಟವನ್ನು ಪ್ರವೇಶಿಸಿಯೇ ಬಿಟ್ಟಿತು. ಅಲ್ಲಿಅವರನ್ನು ಎದುರುಗೊಂಡದ್ದು ಮ್ಯಾನೇಜರ್ ಶರ್ಮ. ಕಂಪನಿಯ ನಿರ್ದೇಶಕರಾಗಿರುವ ಪ್ರಶಾಂತ್ ರಾಥಿ ಅವರು ಕೆಲಸದ ನಿಮಿತ್ತ ಮುಂಬಯಿಗೆ ಹೋಗಿದ್ದಾರೆ, ಬರುವುದು ಒಂದೆರಡು ದಿನ ತಡವಾದೀತು ಎಂದು ಮ್ಯಾನೇಜರ್ ಶರ್ಮ ಅಧಿಕಾರಿಗಳನ್ನು ಸಾಗ ಹಾಕಲು ಯತ್ನಿಸಿದ.
ಅಧಿಕಾರಿಗಳು ತಮಗಿದ್ದ ಸಂಶಯವನ್ನು ಮುಂದಿಟ್ಟಾಗ ಶರ್ಮ ಖಡಾಖಡಿಯಾಗಿ ಇಲ್ಲವೇ ಇಲ್ಲಎಂದ. ಆದರೆ, ತೀವ್ರವಾಗಿ ಪ್ರಶ್ನಿಸಿದಾಗ, ನಾವಿಲ್ಲಿಮ್ಯಾಂಡ್ರೆಕ್ಸ್ ಮಾತ್ರೆಯೇನೂ ತಯಾರು ಮಾಡುತ್ತಿಲ್ಲಎಂದ! ಹಾಗಿದ್ದರೆ ಇಲ್ಲಿತಯಾರಾಗೋ ಮಾತ್ರೆ ಯಾವುದು ಎಂದು ಕೇಳಿದಾಗ ಅವನು ಬಾಯ್ಬಿಟ್ಟ ಹೆಸರು: ಮೆಥಾಕ್ವಲೋನ್!
ಮೆಥಾಕ್ವಲೋನ್ ಎನ್ನುವುದು ಸೈಕೊಟ್ರೋಪಿಕ್ ಡ್ರಗ್. ಅತ್ಯಂತ ವೇಗದಲ್ಲಿಮತ್ತೇರಿಸುವ ಮಾದಕ ದ್ರವ್ಯ!
ಕೂಡಲೇ ಅಧಿಕಾರಿಗಳು ತೋಟದ ನಡುವೆ ಇದ್ದ ಆ ಘಟಕವನ್ನು ಜಾಲಾಡಿದರು. ಆಗ ಅವರಿಗೆ ಸಿಕ್ಕಿದ್ದು 1215.9 ಕೆಜಿ ಮೆಥಾಕ್ವಲೋನ್ ಹರಳು. ಆಗಿನ ಕಾಲಕ್ಕೇ ಅದರ ಮೌಲ್ಯ 1,21,51,000 ರೂ.! 1.45 ಕೋಟಿ ರೂ. ಮೌಲ್ಯ 1500 ಲೀಟರ್ ಮೆಥಾಕ್ವಲೋನ್ ದ್ರಾವಣ! ಜತೆಗೆ ಹಲವಾರು ಕಚ್ಚಾ ವಸ್ತು, ಸಲಕರಣೆಗಳು. ಅದರೊಂದಿಗೆ 4.42 ಲಕ್ಷ ರೂ. ಕರೆನ್ಸಿ!
ಆದರೆ, ಅಲ್ಲಿಮೆಥಾಕ್ವಲೋನ್ ಮಾತ್ರೆಗಳನ್ನು ತಯಾರಿಸುತ್ತಿರಲಿಲ್ಲ. ಇನ್ನಷ್ಟು ವಿಚಾರಣೆ ವೇಳೆ ಮ್ಯಾನೇಜರ್ ಶರ್ಮ ಇನ್ನೊಂದು ಘಟಕದ ಹೆಸರು ಬಾಯಿಬಿಟ್ಟ. ಅದುವೇ ಅಮರಾವತಿಯಿಂದ 100 ಕಿ.ಮೀ. ದೂರದ ಅಕೋಲಾ! ಅಮರಾವತಿಯಿಂದ ಮೆಥಾಕ್ವಲೋನ್ ಪೌಡರನ್ನು ಅಕೋಲಾದ ಪ್ರಭಾ ಪೈಫ್ಸ್ಗೆ ರವಾನೆ ಮಾಡಲಾಗುತ್ತದೆ ಎಂದು ಹೇಳಿದ. ಅದರ ಮಾಲೀಕ ರಮೇಶ್ ಕಾಲಿಯಾ. ಆವತ್ತೇ ರಾತ್ರಿ ಅಧಿಕಾರಿಗಳು ಪ್ರಭಾ ಪೈಫ್ಸ್ಗೆ ದಾಳಿ ನಡೆಸಿದರು. ಆದರೆ, ಅಲ್ಲಿಏನೂ ಸಿಗಲಿಲ್ಲ!
ಇನ್ನೊಂದು ಕಿತ್ತಳೆ ಗಾರ್ಡನ್!
ಪ್ರಭಾ ಪೈಫ್ಸ್ನಲ್ಲಿಏನೂ ಸಿಗಲಿಲ್ಲಎಂದು ಅಧಿಕಾರಿಗಳು ಸುಮ್ಮನಿರಲಿಲ್ಲ. ಹುಡುಕಾಟ ಮುಂದುವರಿಸಿದಾಗ ಅವರ ಕಣ್ಣಿಗೆ ಇನ್ನೊಂದು ಕಿತ್ತಳೆ ತೋಟ ಬಿತ್ತು. ಅದುವೇ ಅಕೋಲಾ ಜಿಲ್ಲೆಯ ಕುಂಬಾರಿ ಗ್ರಾಮದಲ್ಲಿರುವ ಮನೀಷ್ ಗಾರ್ಡನ್! ರಮೇಶ್ ಕಾಲಿಯಾನಿಗೆ ಸೇರಿದ ಈ ತೋಟಕ್ಕೆ ದಾಳಿ ಮಾಡಿದಾಗ 1932 ಕೆಜಿ ಮ್ಯಾಂಡ್ರೆಕ್ಸ್ (1.93 ಕೋಟಿ ರೂ. ಮೌಲ್ಯ) ಮಾತ್ರೆಗಳು ಸಿಕ್ಕಿದವು. ಜತೆಗೆ 506 ಕೆಜಿ ಮೆಥಾಕ್ವಲೋನ್, 57 ಕೆಜಿ ಮ್ಯಾಗ್ನೀಷಿಯಂ ಸ್ಟೀರಾಯ್ಡ… ಮತ್ತು ಮಾತ್ರೆ ತಯಾರಿಸುವ ಯಂತ್ರ.
ಅಧಿಕಾರಿಗಳು ದಾಳಿ ಮಾಡಿದಾಗ ಅಲ್ಲಿಯಂತ್ರದ ಮೂಲಕ ಮಾತ್ರೆಯನ್ನು ತಯಾರಿಸಲಾಗುತ್ತಿತ್ತು. ಅಧಿಕಾರಿಗಳು ಕೈಯಲ್ಲಿಹಿಡಿದು ನೋಡಿದರು. ಕಂದು ಬಣ್ಣದ ಮಾತ್ರೆಯದು. ಮಾತ್ರೆಯ ಒಂದು ಬದಿಯಲ್ಲಿಇಂಗ್ಲಿಷ್ನಲ್ಲಿ 'ಎಂ' ಎಂದು ಬರೆಯಲಾಗಿತ್ತು. ಇನ್ನೊಂದು ಬದಿಯಲ್ಲಿಯಾವುದೋ ಚಿತ್ರ. ಪರೀಕ್ಷೆಗೆ ಒಳಪಡಿಸಿ ಅದು ಮೆಥಾಕ್ವಲೋನ್ ಎನ್ನುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು. ಅಧಿಕಾರಿಗಳು ಕಾಲಿಯಾನ ಮನೆಗೂ ದಾಳಿ ನಡೆಸಿದಾಗ ಹಲವು ದಾಖಲೆಗಳು ದೊರೆತವು.
ಸಿಕ್ಕಿಬಿದ್ದ ಪ್ರಶಾಂತ್ ರಾಥಿ
1995ರ ನವೆಂಬರ್ 23ರಂದು ಪ್ರಶಾಂತ್ ರಾಥಿ ಮತ್ತು ಕಾಂತಿಲಾಲ್ ದುರ್ಗಾದಾಸ್ ಜೋಗಾನಿ ಅವರು ಮುಂಬಯಿಯಿಂದ ಹೊರಡುವ ಇಂಡಿಯನ್ ಏರ್ಲೈನ್ಸ್ ವಿಮಾನದಲ್ಲಿ ಅಮರಾವತಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿತ್ತು. ಅಧಿಕಾರಿಗಳು ಪ್ರಶಾಂತ್ನನ್ನು ಸಾಂತಾಕ್ರೂಜ್ ವಿಮಾನ ನಿಲ್ದಾಣದಲ್ಲೇ ಸೆರೆ ಹಿಡಿದರೆ ಕಾಂತಿಲಾಲ್ನನ್ನು ಅದೇ ದಿನ ಮುಂಬಯಿಯ ಮನೆಯಲ್ಲಿ ಹಿಡಿದು ಹಾಕಿದರು.
ಮಾವ ಕೊಟ್ಟ ಐಡಿಯಾ!
ತಾನೇಕೆ ಈ ಡ್ರಗ್ಸ್ ವ್ಯವಹಾರಕ್ಕೆ ಬಂದೆ ಎನ್ನುವುದನ್ನು ಎನ್ಡಿಪಿಎಸ್ ಕಾಯಿದೆಯಡಿ ದಾಖಲಿಸಿಕೊಂಡ ಹೇಳಿಕೆಯಲ್ಲಿಸ್ಪಷ್ಟಪಡಿಸಿದ್ದಾನೆ. ''ನಾನು ಅಮರಾವತಿಯಲ್ಲಿರುವ ವಿನೀತ್ ಆಗ್ರ್ಯಾನಿಕ್ಸ್ ಕಂಪನಿಯ ಆಡಳಿತ ನಿರ್ದೇಶಕ. 1986ರಲ್ಲಿಅಸಿಟೋಕ್ಸಿ-ಆಕ್ಸಿ-ಫೆನ್ ಬುಟಜೋನ್ ಎಂಬ ರಾಸಾಯನಿಕ ಉತ್ಪಾದನೆಗೆ ಲೈಸೆನ್ಸ್ ಪಡೆದಿದ್ದೆ. ಆದರೆ, ಅದು ಅಷ್ಟೊಂದು ಯಶಸ್ವಿಯಾಗಲಿಲ್ಲ. ಏನಾದರೂ ಹೆಚ್ಚುವರಿ ಆದಾಯದ ದಾರಿ ಬೇಕೆಂದು ಮಾವ ಕಮಲ್ ಕಿಶೋರ್ ರಾಥಿ ಅವರನ್ನು ವಿಚಾರಿಸಿದೆ. ಮುಂಬಯಿ ನಿವಾಸಿಯಾಗಿರುವ ಕಮಲ್ ಕಿಶೋರ್ ರಾಯಗಢ ಜಿಲ್ಲೆಯ ತಲೋಜಾದಲ್ಲಿಪ್ರಗತಿ ಕೆಮಿಕಲ್ಸ್ ಎಂಬ ಕಂಪನಿ ನಡೆಸುತ್ತಿದ್ದಾರೆ. ಅವರು ಕಾಲಿಯಾನಿಂದ ಕಚ್ಚಾ ವಸ್ತುಗಳನ್ನು ಪಡೆದು ಮೆಥಾಕ್ವಲೋನ್ ಪೌಡರ್ ತಯಾರಿಸುವಂತೆ ಸೂಚಿಸಿದರು,'' ಎಂದು ವಿವರಿಸಿದ.
ಕಾಲಿಯಾ ಫುಡ್ ಇನ್ಸ್ಪೆಕ್ಟರ್!
ಅಂದಹಾಗೆ ಇವರೆಲ್ಲರೂ ಕೈ ಎತ್ತಿ ತೋರಿಸುತ್ತಿರುವ ರಮೇಶ್ ಕುಮಾರ್ ಅಗರ್ವಾಲ್ ಅಲಿಯಾಸ್ ಕಾಲಿಯಾ ಯಾರು ಗೊತ್ತಾ? ಅವನೊಬ್ಬ ಮಾಜಿ ಆಹಾರ ಮತ್ತು ಔಷಧ ಪರಿವೀಕ್ಷಕ, ಫುಡ್ ಎಂಡ್ ಡ್ರಗ್ಸ್ ಇನ್ ಸ್ಪೆಕ್ಟರ್. ಔಷಧ ಕಲಬೆರಕೆಗಳನ್ನು ಪತ್ತೆ ಹಚ್ಚಬೇಕಾಗಿದ್ದ ಆತನೇ ಮಾದಕ ದ್ರವ್ಯ ಸಾಗಾಟ ಮತ್ತು ಮಾಂಡ್ರೆಕ್ಸ್ ಮಾತ್ರೆ ತಯಾರಿಕೆಯಲ್ಲಿತೊಡಗಿಕೊಂಡಿದ್ದ.
ಅವನಿಗೆ ಮ್ಯಾಂಡ್ರೆಕ್ಸ್ ಮಾತ್ರೆ ತಯಾರಿಕೆ ಮತ್ತು ಮೆಥಾಕ್ವಲೋನ್ ಪೌಡರ್ ತಯಾರಿಸುವ ತಾಂತ್ರಿಕ ಪರಿಣತಿಯನ್ನು ಕೊಟ್ಟಿದ್ದು ರಾಸಾಯನಿಕ ತಜ್ಞನಾಗಿರುವ ಕಮಲ್ ಕಿಶೋರ್!
ಅಂತಿಮವಾಗಿ ಪ್ರಶಾಂತ್ ರಾಥಿ, ಕಮಲ್ ಕಿಶೋರ್ ರಾಥಿ, ಕಾಂತಿಲಾಲ್ ಜೋಗಾನಿ, ರಮೇಶ್ ಕುಮಾರ್ ಕಾಲಿಯಾನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದರು. ಮುಂದೆ ವಿಚಾರಣೆ ನಡೆದು ಪ್ರಶಾಂತ್ ರಾಥಿ, ಕಮಲ್ ಕಿಶೋರ್ ರಾಥಿ, ಕಾಂತಿಲಾಲ್ ಜೋಗಾನಿ, ರಮೇಶ್ ಕುಮಾರ್ ಕಾಲಿಯಾಗೆ ಶಿಕ್ಷೆ ಆಯಿತು. ಉಳಿದವರನ್ನು ಬಿಡುಗಡೆ ಮಾಡಲಾಯಿತು. ಶಿಕ್ಷೆಯ ವಿರುದ್ಧ ಮಾಡಿದ ಮೇಲ್ಮನವಿಗಳೆಲ್ಲಬಿದ್ದು ಹೋದವು.
ಈ ಪ್ರಕರಣ ಒಂದು ಹೈಪೊ›ಫೈಲ್ ಕೇಸ್ ಎಂದು ದಾಖಲಾಯಿತು. ಇದಕ್ಕೆ ಕಾರಣ, ಸಾಮಾನ್ಯವಾಗಿ ಅವಿದ್ಯಾವಂತರು, ಉದ್ಯೋಗ ಸಿಗದವರು ಡ್ರಗ್ಸ್ ದಂಧೆ ಸೇರುತ್ತಾರೆ ಎಂಬ ನಂಬಿಕೆ. ಆ ನಂಬಿಕೆಯನ್ನು ಈ ಪ್ರಕರಣ ಬುಡಮೇಲು ಮಾಡಿತ್ತು. ಮೊದಲೇ ಹೇಳಿದಂತೆ ಕಮಲ್ ಕಿಶೋರ್ ರಾಥಿ ಒಬ್ಬ ಕೆಮಿಕಲ್ ಎಕ್ಸ್ಪರ್ಟ್. ರಮೇಶ್ ಕಾಲಿಯಾ ಸರಕಾರಿ ಫುಡ್ ಕಂಟ್ರೋಲರ್ ಆಗಿದ್ದು ಡ್ರಗ್ ಟ್ರಾಫಿಕಿಂಗ್ ಕೇಸ್ನಲ್ಲಿಸಿಕ್ಕಿಬಿದ್ದು ಅಮಾನತು ಆದವನು.
ಬೆಂಗಳೂರಿನಲ್ಲಿಎಂಜಿನಿಯರಿಂಗ್
ಇನ್ನೊಬ್ಬ ಪ್ರಶಾಂತ್ ರಾಥಿ ಅಗರ್ಭ ಶ್ರೀಮಂತರ ಮನೆಯ ಹುಡುಗ. ಬೆಂಗಳೂರಿನ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ನಲ್ಲಿಎಂಜಿನಿಯರಿಂಗ್ ಪದವಿ ಪಡೆದವನು. ಅವನ ತಂದೆ ಅಮರಾವತಿಯಲ್ಲಿಜನಪ್ರಿಯ ವೈದ್ಯ. ಡಾಕ್ಟರ್ ಠಾಕೂರ್ ದಾಸ್ ರಾಥಿ. ಅಮರಾವತಿ ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿಅವರು ನಂಬರ್ ಒನ್ ಮಕ್ಕಳ ತಜ್ಞರಾಗಿದ್ದರು. ಪ್ರಶಾಂತ್ ರಾಥಿಯ ಅಣ್ಣ ಮತ್ತು ಅತ್ತಿಗೆ ಇಬ್ಬರೂ ಪ್ರಖ್ಯಾತ ವೈದ್ಯರು. ಅಕ್ಕನನ್ನು ಮದುವೆ ಮಾಡಿಕೊಟ್ಟಿದ್ದು ಹೈಕೋರ್ಟ್ ನ್ಯಾಯಾಧೀಶರೊಬ್ಬರ ಪುತ್ರನಿಗೆ. ಸ್ವತಃ ಪ್ರಶಾಂತ್ ರಾಥಿ ಮದುವೆಯಾಗಿದ್ದು ಕೂಡಾ ಅಹಮದ್ ನಗರದ ಒಬ್ಬ ಪ್ರಖ್ಯಾತ ಜವಳಿ ವ್ಯಾಪಾರಿಯ ಮಗಳನ್ನು.
ಡಾ. ಠಾಕೂರ್ ದಾಸ್ ರಾಥಿ ಅವರು 1986ರಲ್ಲಿಮಗನಿಗೆ 10 ಲಕ್ಷ ರೂ. ಕೊಟ್ಟು ವಿನೀತ್ ಆಗ್ರ್ಯಾನಿಕ್ಸ್ ಸ್ಥಾಪಿಸಲು ವ್ಯವಸ್ಥೆ ಮಾಡಿದ್ದರು. ಜತೆಗೆ ವಿಸ್ತಾರವಾದ ಕಿತ್ತಳೆ ತೋಟ. ಆದರೆ, ಮಾವನಿಂದ ದಿಕ್ಕು ತಪ್ಪಿದ ಪ್ರಶಾಂತ್ ರಾಥಿ ಮನೆಯ ಮರ್ಯಾದೆಯನ್ನೂ ಕಳೆದುಹಾಕಿದ!
ನಿರೂಪಣೆ: ಎ.ಕೃಷ್ಣಭಟ್