ರಾಘವೇಂದ್ರ ಭಟ್
ಬೆಂಗಳೂರು: ಅತಂತ್ರ ಸ್ಥಿತಿಯ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ಹೊಂದಾಣಿಕೆ ರಾಜಕಾರಣಕ್ಕೆ ಅಣಿಯಾಗಿದ್ದ ಜೆಡಿಎಸ್ ನಾಯಕರಿಗೆ ಆಘಾತ
ವಾಗುವ ಫಲಿತಾಂಶವನ್ನು ಉಪಚುನಾವಣೆ ನಡೆದ ಕ್ಷೇತ್ರದ ಮತದಾರ ನೀಡಿದ್ದು, ಹಳೆ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ ಎಂಬ ಲೆಕ್ಕಾಚಾರ ಎರಡನೇ ಬಾರಿಗೆ ಛಿದ್ರವಾಗಿದೆ.
ಬಿಜೆಪಿ ಬೆಂಬಲದೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಸುಮಲತಾ ಅಂಬರೀಶ್ ಗೆದ್ದ ನಂತರವೂ ಎಚ್ಚೆತ್ತುಕೊಳ್ಳದ ಜೆಡಿಎಸ್ಗೆ ಕೆ.ಆರ್.ಪೇಟೆ ಕ್ಷೇತ್ರದ ಸೋಲು ಮರೆಯಲಾಗದ ಪಾಠ. ಒಕ್ಕಲಿಗ ಸಮುದಾಯ ಪ್ರಬಲವಾಗಿದ್ದ ಹಳೆ ಮೈಸೂರು ಭಾಗದ ಏಳು ಕ್ಷೇತ್ರಗಳು ಸೇರಿದಂತೆ ಜೆಡಿಎಸ್ನ ಸರಾಸರಿ ಮತ ಗಳಿಕೆ ಪ್ರಮಾಣ ಶೇ. 11.92ಕ್ಕೆ ಕುಸಿದಿದೆ.
ಒಂದೆಡೆ ಉತ್ತರ ಕರ್ನಾಟಕ ಭಾಗದಲ್ಲಿಲಿಂಗಾಯತ ಸಮುದಾಯ ಇನ್ನಷ್ಟು ಗಟ್ಟಿಯಾಗಿ ಯಡಿಯೂರಪ್ಪ ಬೆನ್ನಿಗೆ ನಿಂತರೆ, ಕುಮಾರಸ್ವಾಮಿಯವರ 'ಕಣ್ಣೀರಿಗೂ' ಕರಗದ ಒಕ್ಕಲಿಗ ಸಮುದಾಯ ಪರ್ಯಾಯ ನಾಯಕತ್ವದ ಅಪೇಕ್ಷೆ ವ್ಯಕ್ತಪಡಿಸಿದೆ. ಹಳೆ ಮೈಸೂರು ಭಾಗದ ಜನರ ಸಹಜ ಆಯ್ಕೆ ಜೆಡಿಎಸ್ ಎಂಬುದು ಶಾಶ್ವತ ಸತ್ಯವಲ್ಲಎಂಬ ಸಂದೇಶ ಈ ಫಲಿತಾಂಶದಿಂದ ರವಾನೆಯಾಗಿದ್ದು, ದಳಪತಿಗಳ ಆತ್ಮಾವಲೋಕನಕ್ಕೆ ಇದು ಸಕಾಲ.
ಅಧಿಕಾರ ಕಳೆದುಕೊಂಡ ದಿನದಿಂದಲೂ ಎಚ್.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆಯತ್ತ ಗಮನ ನೀಡಲೇ ಇಲ್ಲ. ಶಾಸಕರ ಜತೆಗೆ ಪಕ್ಷದ ಮೇಲ್ಮನೆ ಸದಸ್ಯರು ನಾಯಕತ್ವದ ಬಗ್ಗೆ ಅಪಸ್ವರ ತೆಗೆದಾಗಲೂ ಅದನ್ನು ಸರಿಪಡಿಸುವ ವ್ಯವಧಾನ ತೋರಲಿಲ್ಲ. ಬದಲಾಗಿ 'ಶಾಸಕರಿಗೆ ಬಂದ ರೋಗ ಯಾವುದೆಂದು ಹೇಳಿದರೆ ಔಷಧ ನೀಡಬಹುದು ' ಎಂದು ಅಸಡ್ಡೆ ತೋರಿದರು. ಅಭ್ಯರ್ಥಿ ಆಯ್ಕೆ ವಿಚಾರದಲ್ಲೂಇದೇ ತಪ್ಪು ಮಾಡಿದರು. ಒಕ್ಕಲಿಗರೇ ಹೆಚ್ಚಿರುವ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿಲಿಂಗಾಯತ ಸಮುದಾಯಕ್ಕೆ ಸೇರಿದ ಗಿರೀಶ್ ನಾಶಿಗೆ ಟಿಕೆಟ್ ನೀಡಿದರು. ರಾಣೆಬೆನ್ನೂರಿನಲ್ಲಿಮಠಾಧೀಶರಿಗೆ ಟಿಕೆಟ್ ನೀಡಿ ಅನಗತ್ಯ ವಿವಾದ ಮೈಮೇಲೆ ಎಳೆದುಕೊಂಡರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಂದನೆಗೆ ನೀಡಿದಷ್ಟು ಸಮಯವನ್ನಾದರೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮೀಸಲಿಟ್ಟಿದ್ದರೆ, ತಂತ್ರಗಾರಿಕೆ ರೂಪಿಸಲು ವಿನಿಯೋಗಿಸಿದ್ದರೆ ಪಕ್ಷ 'ಶೂನ್ಯ ಸಂಪಾದನೆ' ಮಾಡುತ್ತಿರಲಿಲ್ಲಎಂಬ ನೇರ ಆರೋಪಕ್ಕೆ ಕುಮಾರಸ್ವಾಮಿ ಉತ್ತರಿಸಲೇಬೇಕಿದೆ.
ಇಡಿ ಉಪಚುನಾವಣೆ ಅಖಾಡದಲ್ಲಿಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಳಿ ವಯಸ್ಸಿನಲ್ಲೂಪಕ್ಷವನ್ನು ಉಳಿಸಿಕೊಳ್ಳುತ್ತೇನೆ. ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲಎಂಬ ಆಶಾವಾದ ಪ್ರದರ್ಶಿಸಿದರು. ಆದರೆ ಕುಮಾರಸ್ವಾಮಿ ಅಡಿಗಡಿಗೂ ನಿರಾಶಾ ಮನೋಭಾವ ತೋರಿದರು. ಮಾತಿನಲ್ಲಿವ್ಯಕ್ತಪಡಿಸುವ 'ದಾರ್ಶನಿಕತೆ' ಕೃತಿಯಲ್ಲಿಮಾಯವಾಗುತ್ತಿತ್ತು. ಟೀಕೆಗಳು ಸದಭಿರುಚಿಯ ಎಲ್ಲೆದಾಟಲಾರಂಭಿಸಿತು. ಒಟ್ಟಾರೆ ರಾಜಕೀಯ ವಾತಾವರಣದಲ್ಲಿಕುಮಾರಸ್ವಾಮಿ 'ನೆಗೆಟಿವಿಟಿ' ಬಿತ್ತುತ್ತಿದ್ದಾರೆ ಎಂಬ ಆತಂಕವನ್ನು ಆಪ್ತ ವಲಯವೇ ವ್ಯಕ್ತಪಡಿಸಲಾರಂಭಿಸಿತು. ಪಕ್ಷದ ಸಾರಥಿಯೇ ಆತ್ಮವಿಶ್ವಾಸ ಕಳೆದುಕೊಂಡಾಗ ಕಾಲಾಳುಗಳು ಯುದ್ಧದಲ್ಲಿಅಬ್ಬರಿಸಲು ಸಾಧ್ಯವೇ?
ಹೀಗಾಗಿ ಜೆಡಿಎಸ್ನ ಭದ್ರಕೋಟೆ ಎನಿಸಿದ್ದ ಹುಣಸೂರು, ಕೆ.ಆರ್.ಪೇಟೆ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಚಿಕ್ಕಬಳ್ಳಾಪುರದಂಥ ಕಡೆಗಳಲ್ಲಿಮತದಾರ ಕೇಸರಿ ಪಾಳಯದತ್ತ ವಾಲಿದ್ದಾನೆ. ಇದು ಭವಿಷ್ಯದಲ್ಲಿಪಕ್ಷಕ್ಕೆ ಭಾರಿ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಭವಿಷ್ಯಕ್ಕಾಗಿ ಅನ್ಯ ಪಕ್ಷಗಳತ್ತ ದೃಷ್ಟಿ ಇಟ್ಟಿರುವ ಜೆಡಿಎಸ್ ಶಾಸಕರು ಪ್ರತಿಫಲಾಪೇಕ್ಷೆ ಇಲ್ಲದೇ ಸಾಮೂಹಿಕ 'ಗುಳೆ' ಹೋಗುವುದಕ್ಕೂ ಕುಮಾರಸ್ವಾಮಿಯವರ ಹತಾಶ ಧೋರಣೆ ಎಡೆ ಮಾಡಿಕೊಡಬಹುದು. ಹಳೆ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿಖಾತೆ ತೆರೆಯುವುದಕ್ಕೆ ಪರದಾಡುತ್ತಿದ್ದ ಬಿಜೆಪಿಗೆ ಜೆಡಿಎಸ್ ನಾಯಕರೇ ಅಭ್ಯರ್ಥಿ ಸಮೇತ ಮತದಾರರನ್ನು ಬಳುವಳಿಯಾಗಿ ಕೊಡುವುದಕ್ಕೆ ಈ ಫಲಿತಾಂಶ ಅವಕಾಶ ಸೃಷ್ಟಿಸಬಹುದೆಂಬ ಮಾತುಗಳು ಕೇಳಿ ಬರುತ್ತಿದೆ.
ಪ್ರಾದೇಶಿಕ ಪಕ್ಷಗಳ ಅಂತ್ಯ ಅಸಾಧ್ಯ ಎಂಬ ವಾದ ಜೀವಂತ ಇಡುವುದಕ್ಕಾದರೂ ಜಾತ್ಯತೀತ ಜನತಾ ದಳವನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಈಗ ಸೃಷ್ಟಿಯಾಗಿದೆ. ಇದಕ್ಕಾಗಿ ತಮ್ಮನ್ನು ಆವರಿಸಿರುವ ಹತಾಶೆ ಹಾಗೂ ದ್ವೇಷ ಭಾವನೆಯಿಂದ ಹೊರ ಬಂದು ಹೊಸ ನಾಯಕತ್ವದ ಸೃಷ್ಟಿಗೆ ಕುಮಾರಸ್ವಾಮಿ ಅಣಿಯಾಗಬೇಕಿದೆ. ಇಲ್ಲವಾದರೆ ಪಕ್ಷದ ಭವಿಷ್ಯ ಮಸುಕು ಎಂಬ ಸಂದೇಶ ಉಪಚುನಾವಣೆ ಫಲಿತಾಂಶದಿಂದ ರವಾನೆಯಾಗಿದೆ.
ಬೆಂಗಳೂರು: ಅತಂತ್ರ ಸ್ಥಿತಿಯ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ಹೊಂದಾಣಿಕೆ ರಾಜಕಾರಣಕ್ಕೆ ಅಣಿಯಾಗಿದ್ದ ಜೆಡಿಎಸ್ ನಾಯಕರಿಗೆ ಆಘಾತ
ವಾಗುವ ಫಲಿತಾಂಶವನ್ನು ಉಪಚುನಾವಣೆ ನಡೆದ ಕ್ಷೇತ್ರದ ಮತದಾರ ನೀಡಿದ್ದು, ಹಳೆ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ ಎಂಬ ಲೆಕ್ಕಾಚಾರ ಎರಡನೇ ಬಾರಿಗೆ ಛಿದ್ರವಾಗಿದೆ.
ಬಿಜೆಪಿ ಬೆಂಬಲದೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಸುಮಲತಾ ಅಂಬರೀಶ್ ಗೆದ್ದ ನಂತರವೂ ಎಚ್ಚೆತ್ತುಕೊಳ್ಳದ ಜೆಡಿಎಸ್ಗೆ ಕೆ.ಆರ್.ಪೇಟೆ ಕ್ಷೇತ್ರದ ಸೋಲು ಮರೆಯಲಾಗದ ಪಾಠ. ಒಕ್ಕಲಿಗ ಸಮುದಾಯ ಪ್ರಬಲವಾಗಿದ್ದ ಹಳೆ ಮೈಸೂರು ಭಾಗದ ಏಳು ಕ್ಷೇತ್ರಗಳು ಸೇರಿದಂತೆ ಜೆಡಿಎಸ್ನ ಸರಾಸರಿ ಮತ ಗಳಿಕೆ ಪ್ರಮಾಣ ಶೇ. 11.92ಕ್ಕೆ ಕುಸಿದಿದೆ.
ಒಂದೆಡೆ ಉತ್ತರ ಕರ್ನಾಟಕ ಭಾಗದಲ್ಲಿಲಿಂಗಾಯತ ಸಮುದಾಯ ಇನ್ನಷ್ಟು ಗಟ್ಟಿಯಾಗಿ ಯಡಿಯೂರಪ್ಪ ಬೆನ್ನಿಗೆ ನಿಂತರೆ, ಕುಮಾರಸ್ವಾಮಿಯವರ 'ಕಣ್ಣೀರಿಗೂ' ಕರಗದ ಒಕ್ಕಲಿಗ ಸಮುದಾಯ ಪರ್ಯಾಯ ನಾಯಕತ್ವದ ಅಪೇಕ್ಷೆ ವ್ಯಕ್ತಪಡಿಸಿದೆ. ಹಳೆ ಮೈಸೂರು ಭಾಗದ ಜನರ ಸಹಜ ಆಯ್ಕೆ ಜೆಡಿಎಸ್ ಎಂಬುದು ಶಾಶ್ವತ ಸತ್ಯವಲ್ಲಎಂಬ ಸಂದೇಶ ಈ ಫಲಿತಾಂಶದಿಂದ ರವಾನೆಯಾಗಿದ್ದು, ದಳಪತಿಗಳ ಆತ್ಮಾವಲೋಕನಕ್ಕೆ ಇದು ಸಕಾಲ.
ಅಧಿಕಾರ ಕಳೆದುಕೊಂಡ ದಿನದಿಂದಲೂ ಎಚ್.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆಯತ್ತ ಗಮನ ನೀಡಲೇ ಇಲ್ಲ. ಶಾಸಕರ ಜತೆಗೆ ಪಕ್ಷದ ಮೇಲ್ಮನೆ ಸದಸ್ಯರು ನಾಯಕತ್ವದ ಬಗ್ಗೆ ಅಪಸ್ವರ ತೆಗೆದಾಗಲೂ ಅದನ್ನು ಸರಿಪಡಿಸುವ ವ್ಯವಧಾನ ತೋರಲಿಲ್ಲ. ಬದಲಾಗಿ 'ಶಾಸಕರಿಗೆ ಬಂದ ರೋಗ ಯಾವುದೆಂದು ಹೇಳಿದರೆ ಔಷಧ ನೀಡಬಹುದು ' ಎಂದು ಅಸಡ್ಡೆ ತೋರಿದರು. ಅಭ್ಯರ್ಥಿ ಆಯ್ಕೆ ವಿಚಾರದಲ್ಲೂಇದೇ ತಪ್ಪು ಮಾಡಿದರು. ಒಕ್ಕಲಿಗರೇ ಹೆಚ್ಚಿರುವ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿಲಿಂಗಾಯತ ಸಮುದಾಯಕ್ಕೆ ಸೇರಿದ ಗಿರೀಶ್ ನಾಶಿಗೆ ಟಿಕೆಟ್ ನೀಡಿದರು. ರಾಣೆಬೆನ್ನೂರಿನಲ್ಲಿಮಠಾಧೀಶರಿಗೆ ಟಿಕೆಟ್ ನೀಡಿ ಅನಗತ್ಯ ವಿವಾದ ಮೈಮೇಲೆ ಎಳೆದುಕೊಂಡರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಂದನೆಗೆ ನೀಡಿದಷ್ಟು ಸಮಯವನ್ನಾದರೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮೀಸಲಿಟ್ಟಿದ್ದರೆ, ತಂತ್ರಗಾರಿಕೆ ರೂಪಿಸಲು ವಿನಿಯೋಗಿಸಿದ್ದರೆ ಪಕ್ಷ 'ಶೂನ್ಯ ಸಂಪಾದನೆ' ಮಾಡುತ್ತಿರಲಿಲ್ಲಎಂಬ ನೇರ ಆರೋಪಕ್ಕೆ ಕುಮಾರಸ್ವಾಮಿ ಉತ್ತರಿಸಲೇಬೇಕಿದೆ.
ಇಡಿ ಉಪಚುನಾವಣೆ ಅಖಾಡದಲ್ಲಿಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಳಿ ವಯಸ್ಸಿನಲ್ಲೂಪಕ್ಷವನ್ನು ಉಳಿಸಿಕೊಳ್ಳುತ್ತೇನೆ. ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲಎಂಬ ಆಶಾವಾದ ಪ್ರದರ್ಶಿಸಿದರು. ಆದರೆ ಕುಮಾರಸ್ವಾಮಿ ಅಡಿಗಡಿಗೂ ನಿರಾಶಾ ಮನೋಭಾವ ತೋರಿದರು. ಮಾತಿನಲ್ಲಿವ್ಯಕ್ತಪಡಿಸುವ 'ದಾರ್ಶನಿಕತೆ' ಕೃತಿಯಲ್ಲಿಮಾಯವಾಗುತ್ತಿತ್ತು. ಟೀಕೆಗಳು ಸದಭಿರುಚಿಯ ಎಲ್ಲೆದಾಟಲಾರಂಭಿಸಿತು. ಒಟ್ಟಾರೆ ರಾಜಕೀಯ ವಾತಾವರಣದಲ್ಲಿಕುಮಾರಸ್ವಾಮಿ 'ನೆಗೆಟಿವಿಟಿ' ಬಿತ್ತುತ್ತಿದ್ದಾರೆ ಎಂಬ ಆತಂಕವನ್ನು ಆಪ್ತ ವಲಯವೇ ವ್ಯಕ್ತಪಡಿಸಲಾರಂಭಿಸಿತು. ಪಕ್ಷದ ಸಾರಥಿಯೇ ಆತ್ಮವಿಶ್ವಾಸ ಕಳೆದುಕೊಂಡಾಗ ಕಾಲಾಳುಗಳು ಯುದ್ಧದಲ್ಲಿಅಬ್ಬರಿಸಲು ಸಾಧ್ಯವೇ?
ಹೀಗಾಗಿ ಜೆಡಿಎಸ್ನ ಭದ್ರಕೋಟೆ ಎನಿಸಿದ್ದ ಹುಣಸೂರು, ಕೆ.ಆರ್.ಪೇಟೆ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಚಿಕ್ಕಬಳ್ಳಾಪುರದಂಥ ಕಡೆಗಳಲ್ಲಿಮತದಾರ ಕೇಸರಿ ಪಾಳಯದತ್ತ ವಾಲಿದ್ದಾನೆ. ಇದು ಭವಿಷ್ಯದಲ್ಲಿಪಕ್ಷಕ್ಕೆ ಭಾರಿ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಭವಿಷ್ಯಕ್ಕಾಗಿ ಅನ್ಯ ಪಕ್ಷಗಳತ್ತ ದೃಷ್ಟಿ ಇಟ್ಟಿರುವ ಜೆಡಿಎಸ್ ಶಾಸಕರು ಪ್ರತಿಫಲಾಪೇಕ್ಷೆ ಇಲ್ಲದೇ ಸಾಮೂಹಿಕ 'ಗುಳೆ' ಹೋಗುವುದಕ್ಕೂ ಕುಮಾರಸ್ವಾಮಿಯವರ ಹತಾಶ ಧೋರಣೆ ಎಡೆ ಮಾಡಿಕೊಡಬಹುದು. ಹಳೆ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿಖಾತೆ ತೆರೆಯುವುದಕ್ಕೆ ಪರದಾಡುತ್ತಿದ್ದ ಬಿಜೆಪಿಗೆ ಜೆಡಿಎಸ್ ನಾಯಕರೇ ಅಭ್ಯರ್ಥಿ ಸಮೇತ ಮತದಾರರನ್ನು ಬಳುವಳಿಯಾಗಿ ಕೊಡುವುದಕ್ಕೆ ಈ ಫಲಿತಾಂಶ ಅವಕಾಶ ಸೃಷ್ಟಿಸಬಹುದೆಂಬ ಮಾತುಗಳು ಕೇಳಿ ಬರುತ್ತಿದೆ.
ಪ್ರಾದೇಶಿಕ ಪಕ್ಷಗಳ ಅಂತ್ಯ ಅಸಾಧ್ಯ ಎಂಬ ವಾದ ಜೀವಂತ ಇಡುವುದಕ್ಕಾದರೂ ಜಾತ್ಯತೀತ ಜನತಾ ದಳವನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಈಗ ಸೃಷ್ಟಿಯಾಗಿದೆ. ಇದಕ್ಕಾಗಿ ತಮ್ಮನ್ನು ಆವರಿಸಿರುವ ಹತಾಶೆ ಹಾಗೂ ದ್ವೇಷ ಭಾವನೆಯಿಂದ ಹೊರ ಬಂದು ಹೊಸ ನಾಯಕತ್ವದ ಸೃಷ್ಟಿಗೆ ಕುಮಾರಸ್ವಾಮಿ ಅಣಿಯಾಗಬೇಕಿದೆ. ಇಲ್ಲವಾದರೆ ಪಕ್ಷದ ಭವಿಷ್ಯ ಮಸುಕು ಎಂಬ ಸಂದೇಶ ಉಪಚುನಾವಣೆ ಫಲಿತಾಂಶದಿಂದ ರವಾನೆಯಾಗಿದೆ.