- ಜೆ.ಕೆ.ಜೈನ್, ಮೂಡುಬಿದಿರೆ
ಈಗಿನ ಕಾಲದಲ್ಲಿ'ರಾಜ ನಿವಾಸ' ಎಂದರೆ ಮಂತ್ರಿ ಮಾಗಧರ ಮನೆಗಳು. ಈ ರಾಜನಿವಾಸಗಳು ರಾಜಕೀಯ ನಿವಾಸಗಳೂ ಹೌದು. ಈಗ ಅರಮನೆಯನ್ನು ಯಾರೂ ಕಟ್ಟಿಸುತ್ತಿಲ್ಲ. ಕಾರಣ ರಾಜರ ದರ್ಬಾರು ಎಂಬುದು ಭೂತಕಾಲದ ವಿಚಾರವಾಗಿದೆ. ಈಗ ಏನಿದ್ದರೂ ಅದನ್ನು ಮೀರಿಸುವ ಅಥವಾ ಸಣ್ಣಪುಟ್ಟ ಮನೆಗಳ ನಿರ್ಮಾಣ ಮಾತ್ರ. ಆದರೆ ಈಗಿನ ರಾಜರು ಎಂದರೆ ನಮಗೆ ಕೈಮುಗಿದು ಮತ ಪಡೆದು ಶಾಸಕರು ಮಂತ್ರಿಗಳಾಗಿ, ಆ ಮೇಲೆ ನಮ್ಮಿಂದ ಕೈಮುಗಿಸಿಕೊಳ್ಳುವವರು. ಇವರಿಗೆ ಬೇಕಾದ ಅರ್ಹತೆ ಎಂದರೆ ಮತ ಪಡೆಯುವ ಚಾಕಚಕ್ಯತೆ ಮಾತ್ರ. ಬೇರೆ ಯಾವ ಅರ್ಹತೆಯೂ ಗೌಣ.
ಅದೇನೇ ಇರಲಿ, ಒಬ್ಬ ಯಶಸ್ವಿ ಆಡಳಿತಗಾರನಾಗಬೇಕಾದರೆ ಅವನು ವಾಸಿಸುವ ಮನೆ ಬಹಳ ಪ್ರಭಾವವನ್ನು ಬೀರುತ್ತದೆ. ಶಾಸಕಾಂಗ ಆಡಳಿತಾಂಗ ಮತ್ತ ನ್ಯಾಯಾಂಗ ಇವುಗಳ ಮುಖ್ಯಸ್ಥರು ವಾಸಿಸುವ ಮನೆಗಳಿಗೆ ವಾಸ್ತು ಶಾಸ್ತ್ರದಲ್ಲಿಕೆಲವು ನೀತಿ, ನಿಯಮಗಳನ್ನು ಹೇಳಲಾಗಿದೆ. ಮೊದಲನೆಯದಾಗಿ ಇವರು ವಾಸಿಸುವ ಮನೆ ವಿಶಾಲವಾಗಿ, ಚೌಕಾಕಾರವಾಗಿರಬೇಕು. ಮುಖ್ಯದ್ವಾರದ ಅಳತೆಯು ಹಿರಿದಾಗಿದ್ದು, ಕಟ್ಟಡದ ಮಧ್ಯ ಭಾಗದಲ್ಲಿರಬೇಕು. ಮನೆ ಪೂರ್ವ ಮುಖವಾಗಿಯೇ ನಿರ್ಮಿಸಬೇಕು. ಸಿಂಹದ್ವಾರವು ಯಾವುದೇ ಕಾರಣಕ್ಕೆ ಬದಿಯಲ್ಲಿರಬಾರದು. ಸಾಮಾನ್ಯ ಪ್ರಜೆಗಳ ಅಥವಾ ಸಂಸಾರಸ್ಥರ ಮನೆಯ ಬಾಗಿಲು ಯಾವುದೇ ದಿಕ್ಕಿನ ಉಚ್ಛ ಭಾಗದಲ್ಲಿಬದಿಯಲ್ಲಿರಬೇಕು. ರಾಜ ನಿವಾಸದ ಎದುರು ಬಿದಿ ಅಂದರೆ ಪೂರ್ವ ದಿಕ್ಕಿನಲ್ಲಿಮತ್ತು ಉತ್ತರ ದಿಕ್ಕಿನಲ್ಲಿಯಾವುದೇ ವಾಹನಗಳನ್ನು ನಿಲ್ಲಿಸಬಾರದು. ಅವುಗಳನ್ನು ಪಶ್ಚಿಮ ಮತ್ತು ದಕ್ಷಿಣದಲ್ಲಿನಿಲ್ಲಿಸಬೇಕು. ಹೀಗೆ ಹೊರಗಿನ ಮತ್ತು ಒಳಗಿನ ವ್ಯವಸ್ಥೆಗಳನ್ನು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಅಳವಡಿಸಿಕೊಂಡರೆ, ಆಳುವವರ ಮಾತಿಗೊಂದು ಬೆಲೆ, ಸ್ಥಾನಕ್ಕೆ ನೆಲೆ ಖಂಡಿತ ಸಿಗುವುದು. ಇಂಥ ಸೌಧಗಳಲ್ಲಿವಾಸಿಸುವ ಆಡಳಿತಗಾರರು ದಕ್ಷರೂ ಪ್ರಸಿದ್ಧರೂ ಆಗುವುದರಲ್ಲಿಯಾವುದೇ ಸಂಶಯವಿಲ್ಲ.
ಸಂದೇಹ ಪರಿಹಾರ
ಶಶಿಕಲಾ, ಸೇಡಂ
- ಒರಳು ಕಲ್ಲುಮತ್ತು ಬೀಸುವ ಕಲ್ಲುಮನೆಯ ಯಾವ ದಿಕ್ಕಿನಲ್ಲಿಡಬೇಕು?
- ಅಡಿಗೆ ಮನೆಯ ಪಶ್ಚಿಮ ಅಥವಾ ದಕ್ಷಿಣದಲ್ಲಿಡಿ. ಮನೆಯ ಇತರ ಭಾಗದಲ್ಲಿಇಡುವುದಾದರೂ ಈ ದಿಕ್ಕುಗಳನ್ನು ಅನುಸರಿಸಿ.
ಕಿರಣ್, ಬಳ್ಳಾರಿ
- ಮನೆಯ ಹಿಂದೆ ಬಿಲ್ವ ವೃಕ್ಷ ಇದೆ. ಅದರ ಕೊಂಬೆಗಳು ಮನೆಯ ಮೇಲೆ ಚಾಚಿವೆ. ಇದರಿಂದ ಏನಾದರೂ ತೊಂದರೆ ಇದೆಯೆ?
- ಯಾವುದೇ ಮರದ ಕೊಂಬೆಗಳು ಮನೆಯ ಮೇಲೆ ಚಾಚಬಾರದು. ಹಾಗಾಗಿ ಮಾಡಿನ ಮೇಲೆ ಬಂದಿರುವ ಕೊಂಬೆಗಳು ಕಡಿದು, ಎಲೆಗಳನ್ನು ಯಾವುದಾದರೂ ಶಿವನ ದೇವಾಲಯಕ್ಕೆ ಕೊಡಿ.
ಲಲಿತಾ, ತುಮಕೂರು
- ನನ್ನ ಮಗ ರೌಡಿಸಂ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಈಗ ಹೊರಗೆ ಬಂದಿದ್ದಾನೆ. ಅವನು ಶಾಶ್ವತವಾಗಿ ರೌಡಿಸಂ ಬಿಡಲು ಪರಿಹಾರ ತಿಳಿಸಿ ಗುರುಗಳೆ.
- ಪೂರ್ವ ಜನ್ಮದ ಕರ್ಮಫಲದಿಂದ ಹೀಗೆಲ್ಲಆಗುತ್ತದೆ. ಈ ಪೂರ್ವ ಜನ್ಮದ ಪುಣ್ಯ, ಗುರು ಹಿರಿಯ ಅನುಗ್ರಹ ಕೊಡುವ ದಿಕ್ಕು ನೈಋುತ್ಯ. ಇದು ನೆಲವನ್ನು ನಿರ್ದೇಶಿಸುತ್ತದೆ. ಇನ್ನು ಗಂಡು ಮಕ್ಕಳ ಅದೃಷ್ಟ ದುರಾದೃಷ್ಟ ನಿರ್ಧರಿಸುವ ದಿಕ್ಕು ಈಶಾನ್ಯ. ಇದು ಜಲವನ್ನು ಪ್ರತಿನಿಧಿಸುತ್ತದೆ. ಈ ನೆಲ, ಜಲದ ಹೊಂದಾಣಿಕೆ ನಿಮ್ಮ ಮನೆಯಲ್ಲಿಇಲ್ಲ. ಪ್ರಬಲ ವಾಸ್ತು ದೋಷ ಇರಬೇಕು. ಅದನ್ನು ಸರಿಪಡಿಸಿಕೊಂಡರೆ ಮಗ ಸರಿಯಾದಾನು.
ಶ್ಯಾಮಸುಂದರ್, ತುಮಕೂರು
- ನನ್ನ ರಾಶಿ ಮೀನ. ನಾನು ಕಟ್ಟುವ ಮನೆಗೆ ಮುಖ್ಯದ್ವಾರ ಯಾವ ದಿಕ್ಕಿನಲ್ಲಿಡಬೇಕು?
- ನಮ್ಮ ರಾಶಿ ಮುಖ್ಯವಲ್ಲ. ನಿಮ್ಮ ನಿವೇಶನಕ್ಕೆ ಯಾವ ದಿಕ್ಕಿನಲ್ಲಿರಾಜ ರಸ್ತೆ ಇದೆಯೋ ಆ ದಿಕ್ಕಿನಲ್ಲಿಮುಖ್ಯ ಬಾಗಿಲಿಡಿ.
ಬಸವರಾಜ ಮಾಲಿಪಾಟೀಲ್
- ನಾನು ವೃತ್ತಿಯಲ್ಲಿಗ್ರಂಥಪಾಲಕ ನನ್ನ ಕಚೇರಿಯಲ್ಲಿನಾನು ಕುಳಿತು ಕೊಳ್ಳಲು ಯಾವ ದಿಕ್ಕಿನಲ್ಲಿಆಸನ ವ್ಯವಸ್ಥೆ ಮಾಡಿಕೊಳ್ಳಬೇಕು?
- ಕಚೇರಿಯ ನೈಋುತ್ಯ ಮೂಲೆಯಲ್ಲಿಉತ್ತರಕ್ಕೆ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಿಕೊಳ್ಳಿ. ಪಶ್ಚಿಮದಲ್ಲಿಪೂರ್ವ ಮುಖಮಾಡಿ ಅಥವಾ ದಕ್ಷಿಣದಲ್ಲಿಉತ್ತರ ಮುಖ ಮಾಡಿ ಕುಳಿತುಕೊಳ್ಳಬಹುದು.
ಈಗಿನ ಕಾಲದಲ್ಲಿ'ರಾಜ ನಿವಾಸ' ಎಂದರೆ ಮಂತ್ರಿ ಮಾಗಧರ ಮನೆಗಳು. ಈ ರಾಜನಿವಾಸಗಳು ರಾಜಕೀಯ ನಿವಾಸಗಳೂ ಹೌದು. ಈಗ ಅರಮನೆಯನ್ನು ಯಾರೂ ಕಟ್ಟಿಸುತ್ತಿಲ್ಲ. ಕಾರಣ ರಾಜರ ದರ್ಬಾರು ಎಂಬುದು ಭೂತಕಾಲದ ವಿಚಾರವಾಗಿದೆ. ಈಗ ಏನಿದ್ದರೂ ಅದನ್ನು ಮೀರಿಸುವ ಅಥವಾ ಸಣ್ಣಪುಟ್ಟ ಮನೆಗಳ ನಿರ್ಮಾಣ ಮಾತ್ರ. ಆದರೆ ಈಗಿನ ರಾಜರು ಎಂದರೆ ನಮಗೆ ಕೈಮುಗಿದು ಮತ ಪಡೆದು ಶಾಸಕರು ಮಂತ್ರಿಗಳಾಗಿ, ಆ ಮೇಲೆ ನಮ್ಮಿಂದ ಕೈಮುಗಿಸಿಕೊಳ್ಳುವವರು. ಇವರಿಗೆ ಬೇಕಾದ ಅರ್ಹತೆ ಎಂದರೆ ಮತ ಪಡೆಯುವ ಚಾಕಚಕ್ಯತೆ ಮಾತ್ರ. ಬೇರೆ ಯಾವ ಅರ್ಹತೆಯೂ ಗೌಣ.
ಅದೇನೇ ಇರಲಿ, ಒಬ್ಬ ಯಶಸ್ವಿ ಆಡಳಿತಗಾರನಾಗಬೇಕಾದರೆ ಅವನು ವಾಸಿಸುವ ಮನೆ ಬಹಳ ಪ್ರಭಾವವನ್ನು ಬೀರುತ್ತದೆ. ಶಾಸಕಾಂಗ ಆಡಳಿತಾಂಗ ಮತ್ತ ನ್ಯಾಯಾಂಗ ಇವುಗಳ ಮುಖ್ಯಸ್ಥರು ವಾಸಿಸುವ ಮನೆಗಳಿಗೆ ವಾಸ್ತು ಶಾಸ್ತ್ರದಲ್ಲಿಕೆಲವು ನೀತಿ, ನಿಯಮಗಳನ್ನು ಹೇಳಲಾಗಿದೆ. ಮೊದಲನೆಯದಾಗಿ ಇವರು ವಾಸಿಸುವ ಮನೆ ವಿಶಾಲವಾಗಿ, ಚೌಕಾಕಾರವಾಗಿರಬೇಕು. ಮುಖ್ಯದ್ವಾರದ ಅಳತೆಯು ಹಿರಿದಾಗಿದ್ದು, ಕಟ್ಟಡದ ಮಧ್ಯ ಭಾಗದಲ್ಲಿರಬೇಕು. ಮನೆ ಪೂರ್ವ ಮುಖವಾಗಿಯೇ ನಿರ್ಮಿಸಬೇಕು. ಸಿಂಹದ್ವಾರವು ಯಾವುದೇ ಕಾರಣಕ್ಕೆ ಬದಿಯಲ್ಲಿರಬಾರದು. ಸಾಮಾನ್ಯ ಪ್ರಜೆಗಳ ಅಥವಾ ಸಂಸಾರಸ್ಥರ ಮನೆಯ ಬಾಗಿಲು ಯಾವುದೇ ದಿಕ್ಕಿನ ಉಚ್ಛ ಭಾಗದಲ್ಲಿಬದಿಯಲ್ಲಿರಬೇಕು. ರಾಜ ನಿವಾಸದ ಎದುರು ಬಿದಿ ಅಂದರೆ ಪೂರ್ವ ದಿಕ್ಕಿನಲ್ಲಿಮತ್ತು ಉತ್ತರ ದಿಕ್ಕಿನಲ್ಲಿಯಾವುದೇ ವಾಹನಗಳನ್ನು ನಿಲ್ಲಿಸಬಾರದು. ಅವುಗಳನ್ನು ಪಶ್ಚಿಮ ಮತ್ತು ದಕ್ಷಿಣದಲ್ಲಿನಿಲ್ಲಿಸಬೇಕು. ಹೀಗೆ ಹೊರಗಿನ ಮತ್ತು ಒಳಗಿನ ವ್ಯವಸ್ಥೆಗಳನ್ನು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಅಳವಡಿಸಿಕೊಂಡರೆ, ಆಳುವವರ ಮಾತಿಗೊಂದು ಬೆಲೆ, ಸ್ಥಾನಕ್ಕೆ ನೆಲೆ ಖಂಡಿತ ಸಿಗುವುದು. ಇಂಥ ಸೌಧಗಳಲ್ಲಿವಾಸಿಸುವ ಆಡಳಿತಗಾರರು ದಕ್ಷರೂ ಪ್ರಸಿದ್ಧರೂ ಆಗುವುದರಲ್ಲಿಯಾವುದೇ ಸಂಶಯವಿಲ್ಲ.
ಸಂದೇಹ ಪರಿಹಾರ
ಶಶಿಕಲಾ, ಸೇಡಂ
- ಒರಳು ಕಲ್ಲುಮತ್ತು ಬೀಸುವ ಕಲ್ಲುಮನೆಯ ಯಾವ ದಿಕ್ಕಿನಲ್ಲಿಡಬೇಕು?
- ಅಡಿಗೆ ಮನೆಯ ಪಶ್ಚಿಮ ಅಥವಾ ದಕ್ಷಿಣದಲ್ಲಿಡಿ. ಮನೆಯ ಇತರ ಭಾಗದಲ್ಲಿಇಡುವುದಾದರೂ ಈ ದಿಕ್ಕುಗಳನ್ನು ಅನುಸರಿಸಿ.
ಕಿರಣ್, ಬಳ್ಳಾರಿ
- ಮನೆಯ ಹಿಂದೆ ಬಿಲ್ವ ವೃಕ್ಷ ಇದೆ. ಅದರ ಕೊಂಬೆಗಳು ಮನೆಯ ಮೇಲೆ ಚಾಚಿವೆ. ಇದರಿಂದ ಏನಾದರೂ ತೊಂದರೆ ಇದೆಯೆ?
- ಯಾವುದೇ ಮರದ ಕೊಂಬೆಗಳು ಮನೆಯ ಮೇಲೆ ಚಾಚಬಾರದು. ಹಾಗಾಗಿ ಮಾಡಿನ ಮೇಲೆ ಬಂದಿರುವ ಕೊಂಬೆಗಳು ಕಡಿದು, ಎಲೆಗಳನ್ನು ಯಾವುದಾದರೂ ಶಿವನ ದೇವಾಲಯಕ್ಕೆ ಕೊಡಿ.
ಲಲಿತಾ, ತುಮಕೂರು
- ನನ್ನ ಮಗ ರೌಡಿಸಂ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಈಗ ಹೊರಗೆ ಬಂದಿದ್ದಾನೆ. ಅವನು ಶಾಶ್ವತವಾಗಿ ರೌಡಿಸಂ ಬಿಡಲು ಪರಿಹಾರ ತಿಳಿಸಿ ಗುರುಗಳೆ.
- ಪೂರ್ವ ಜನ್ಮದ ಕರ್ಮಫಲದಿಂದ ಹೀಗೆಲ್ಲಆಗುತ್ತದೆ. ಈ ಪೂರ್ವ ಜನ್ಮದ ಪುಣ್ಯ, ಗುರು ಹಿರಿಯ ಅನುಗ್ರಹ ಕೊಡುವ ದಿಕ್ಕು ನೈಋುತ್ಯ. ಇದು ನೆಲವನ್ನು ನಿರ್ದೇಶಿಸುತ್ತದೆ. ಇನ್ನು ಗಂಡು ಮಕ್ಕಳ ಅದೃಷ್ಟ ದುರಾದೃಷ್ಟ ನಿರ್ಧರಿಸುವ ದಿಕ್ಕು ಈಶಾನ್ಯ. ಇದು ಜಲವನ್ನು ಪ್ರತಿನಿಧಿಸುತ್ತದೆ. ಈ ನೆಲ, ಜಲದ ಹೊಂದಾಣಿಕೆ ನಿಮ್ಮ ಮನೆಯಲ್ಲಿಇಲ್ಲ. ಪ್ರಬಲ ವಾಸ್ತು ದೋಷ ಇರಬೇಕು. ಅದನ್ನು ಸರಿಪಡಿಸಿಕೊಂಡರೆ ಮಗ ಸರಿಯಾದಾನು.
ಶ್ಯಾಮಸುಂದರ್, ತುಮಕೂರು
- ನನ್ನ ರಾಶಿ ಮೀನ. ನಾನು ಕಟ್ಟುವ ಮನೆಗೆ ಮುಖ್ಯದ್ವಾರ ಯಾವ ದಿಕ್ಕಿನಲ್ಲಿಡಬೇಕು?
- ನಮ್ಮ ರಾಶಿ ಮುಖ್ಯವಲ್ಲ. ನಿಮ್ಮ ನಿವೇಶನಕ್ಕೆ ಯಾವ ದಿಕ್ಕಿನಲ್ಲಿರಾಜ ರಸ್ತೆ ಇದೆಯೋ ಆ ದಿಕ್ಕಿನಲ್ಲಿಮುಖ್ಯ ಬಾಗಿಲಿಡಿ.
ಬಸವರಾಜ ಮಾಲಿಪಾಟೀಲ್
- ನಾನು ವೃತ್ತಿಯಲ್ಲಿಗ್ರಂಥಪಾಲಕ ನನ್ನ ಕಚೇರಿಯಲ್ಲಿನಾನು ಕುಳಿತು ಕೊಳ್ಳಲು ಯಾವ ದಿಕ್ಕಿನಲ್ಲಿಆಸನ ವ್ಯವಸ್ಥೆ ಮಾಡಿಕೊಳ್ಳಬೇಕು?
- ಕಚೇರಿಯ ನೈಋುತ್ಯ ಮೂಲೆಯಲ್ಲಿಉತ್ತರಕ್ಕೆ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಿಕೊಳ್ಳಿ. ಪಶ್ಚಿಮದಲ್ಲಿಪೂರ್ವ ಮುಖಮಾಡಿ ಅಥವಾ ದಕ್ಷಿಣದಲ್ಲಿಉತ್ತರ ಮುಖ ಮಾಡಿ ಕುಳಿತುಕೊಳ್ಳಬಹುದು.