ಆ್ಯಪ್ನಗರ

ಥೇಮ್ಸ್‌ ತೀರದಿಂದ 20: ಅನಿವಾಸಿ ಕನ್ನಡಿಗರ ನಿಸ್ವಾರ್ಥ ಸೇವೆಗೆ ಸರ್ಕಾರ ದನಿಯಾಗಬೇಕಿದೆ

ದುರಂತವೇನೆಂದರೆ, NRI Forum ಅಂತಹ ವ್ಯವಸ್ಥೆ ಇಂದು ಯಾವುದೇ ಕಾರ್ಯ ಮಾಡುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಈ ಒಂದು ವಿಷಯದಲ್ಲಿ ಗಂಭೀರವಾಗಿ ಆಲೋಚಿಸಬೇಕಾಗಿದೆ. ಮುಂದಿನ ದಿನಗಳಲ್ಲೂ ಕೂಡ ಕರ್ನಾಟಕದ ಮುಖ್ಯ ಮಂತ್ರಿಗಳು ಯುನೈಟೆಡ್ ಕಿಂಗ್ಡಮ್ ಪ್ರವಾಸ ಬಂದಾಗ ಅಥವಾ ಯಾವುದೇ ಸಚಿವರು ಲಂಡನ್ ಭೇಟಿ ನೀಡಿದಾಗ ನಾವು ಇಲ್ಲಿಯ ಕನ್ನಡ ಸಂಘಗಳು ಜೊತೆಗೂಡಿ, ಕನ್ನಡಿಗರರನ್ನು ಒಂದುಗೂಡಿಸಿ ಸರ್ಕಾರದ ನೀತಿ ನಿಯಮಗಳನ್ನು ಅನಿವಾಸಿ ಕನ್ನಡಿಗರಿಗೆ ತಲುಪಿಸುವ ಕಾರ್ಯಕ್ರಮವನ್ನು ಮುಂದೆಯೂ ಕೂಡ ಅಚ್ಚುಕಟ್ಟಾಗಿ ನಡೆಸಬಹುದು.

Authored byಗಣಪತಿ ಭಟ್\u200c, ಲಂಡನ್\u200c | Vijaya Karnataka Web 30 May 2022, 10:21 am
- ಗಣಪತಿ ಭಟ್, ಲಂಡನ್‌
Vijaya Karnataka Web NRI
ಕಾರ್ಯಕ್ರಮದಲ್ಲಿ ಸಚಿವರಿಗೆ ಸನ್ಮಾನ

2022ರ ಮೇ 27 ರಂದು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರಾರದ ಡಾ. ಅಶ್ವಥ್ ನಾರಾಯಣ ಅವರು ಲಂಡನ್ ನ ಭಾರತೀಯ ವಿದ್ಯಾ ಭವನದಲ್ಲಿ ವಿಶೇಷವಾಗಿ ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಕನ್ನಡ ಸಮುದಾಯದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ್ದು ಐತಿಹಾಸಿಕ ಎನ್ನಬಹುದು. ಏಕೆಂದರೆ ಕಳೆದ ದಶಕಗಳಿಂದ ಹಲವಾರು ಕರ್ನಾಟಕ ಸರಕಾರದ ಸಚಿವರು ಲಂಡನ್ ಭೇಟಿ ನೀಡಿರಬಹುದು ಆದರೆ ಇದೇ ಮೊದಲ ಬಾರಿ. ಕರ್ನಾಟಕ ಸರಕಾರದ ಒಬ್ಬ ಉನ್ನತ ಸಚಿವರು ಕನ್ನಡ ಸಮುದಾಯವನ್ನು ಇಲ್ಲಿಯ ಕನ್ನಡ ಸಂಘಗಳ ಮೂಲಕ ಈ ರೀತಿ ವಿಶೇಷವಾಗಿ ಭೇಟಿ ಮಾಡಿರುವುದು ಐತಿಹಾಸಿಕ ಎಂದು ಭಾವಿಸುತ್ತೇನೆ. ಇದೇ ಸಂದರ್ಭದಲ್ಲಿ ಬಿಲಿಯನೇರ್ ಮತ್ತು ನಮ್ಮ ಹೆಮ್ಮೆಯ ಕನ್ನಡಿಗ, ಜಿರೋಧ ಎಂಬ ಕಂಪನಿಯ ಉಪಸಂಸ್ಥಾಪಕ ನಿಖಿಲ್ ಕಾಮತ್ ಅವರೂ ಸಹ ಮುಖ್ಯ ಅಥಿತಿಯಾಗಿ ಬಂದಿರುವುದು ಅತ್ಯಂತ ವಿಶೇಷವಾಗಿತ್ತು.

ಡಾ. ಅಶ್ವಥ್ ನಾರಾಯಣ್ ಅವರು ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿ, ದೇಶೀಯ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವಲ್ಲಿ ಇಂದು ಬೆಂಗಳೂರು ಮತ್ತು ಕರ್ನಾಟಕ ಅಗ್ರಸ್ಥಾನದಲ್ಲಿದೆ ಎಂದು ಒತ್ತಿ ಹೇಳಿದರು. ಬೆಂಗಳೂರು ಇಂದು ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸುವ ಕೇಂದ್ರವಾಗಿದೆ ಎಂದು ಪುನರುಚ್ಚರಿಸಿದರು. ಕರ್ನಾಟಕ ಇಂದು 'ವಿಶ್ವದ ಅತ್ಯುತ್ತಮ' ರಾಜ್ಯವಾಗಲಿ ಎಂಬ ದೃಷ್ಟಿಯನ್ನಿಟ್ಟುಕೊಂಡು ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರವು ಆಡಳಿತವನ್ನು ಇನ್ನಷ್ಟು ಸುಲಭಗೊಳಿಸಲು ಮತ್ತು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿವರಿಸಿದರು. ನಿಖಿಲ್ ಕಾಮತ್ ಅವರು ಕನ್ನಡ ಜನರ ಮುಗ್ಥತೆ ಮತ್ತು ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆಯ ಅಭಿಪ್ರಾಯವನ್ನು ಎಲ್ಲರೊಂದಿಗೆ ಹಂಚಿಕೊಂಡು, ಇಂದು ಬೆಂಗಳೂರಿನಂತಹ ನಗರ ಮುಂದುವರೆಯಲು ಈ ಒಂದು ಮುಗ್ಥತೆ ಕಾರಣವಾಗಿದೆ ಎಂದರು. ಇಂತಹ ವಾತಾವರಣ ಹೀಗಯೇ ಮುಂದುವರಿಯಲಿ, ವಿದೇಶಕ್ಕೆ ತೆರಳಿರುವ ಕನ್ನಡಿಗರು ತಮ್ಮ ಕೌಶಲ್ಯದೊಂದಿಗೆ ಮರಳಿ ಸ್ವದೇಶಕ್ಕೆ ಬರುವಂತಾಗಲಿ ಎಂದು ಆಶಿಸಿದರು.

ಥೇಮ್ಸ್‌ ತೀರದಿಂದ 12- ಯುಕೆಯಲ್ಲಿ ಯುಗಾದಿ ಹಬ್ಬದ ಸೊಗಡು ಪಸರಿಸಿದ ಕನ್ನಡಿಗರು
ಯುನೈಟೆಡ್ ಕಿಂಗ್ಡಮ್‌ ನಲ್ಲಿ ಬಹುತೇಕ ಕನ್ನಡಿಗರು ಐಟಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕುವೆಂಪು ಅವರ ಕವಿವಾಣಿಯನ್ನು ಅನುಸರಿಸಿ ಕನ್ನಡ ಬಳಗ ಯುಕೆ ಮತ್ತು ಕನ್ನಡಿಗರುಯುಕೆ ಕಳೆದ 40 ವರ್ಷಗಳಿಂದ ಹಾಗೂ ಕಳೆದ 17 ಹರ್ಷದಿಂದ ನಿರಂತರವಾಗಿ ಆಂಗ್ಲನಾಡಿನಲ್ಲಿ ಕನ್ನಡ ಭಾಷೆ, ನುಡಿ, ಸಂಸ್ಕೃತಿಯನ್ನು ಪಸರಿಸುತ್ತಾ ಬಂದಿದೆ ಎಂಬುದು ಹೆಮ್ಮೆಯ ವಿಚಾರ. ಆದರೆ ನಮ್ಮ ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಲಂಡನ್ ಅಥವಾ ಯುಕೆಯ ಯಾವುದೇ ಪ್ರದೇಶಗಳಿಗೆ ಬಂದಾಗ ಈ ಕನ್ನಡ ಸಂಘಗಳ ಜೊತೆಗೂಡಿ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದರೆ ಅದರ ಪ್ರಭಾವವು ಇಲ್ಲಿಯ ಅನಿವಾಸಿ ಕನ್ನಡಿಗರಲ್ಲಿ ಹಾಗೂ ಕರ್ನಾಟಕದಲ್ಲಿರುವ ನಮ್ಮ ಬಂಧು ಬಾಂಧವರಲ್ಲಿ ಧನಾತ್ಮಕ ಕಂಪನವನ್ನು ಮೂಡಿಸುವದರಲ್ಲಿ ಯಾವುದೇ ಅನುಮಾನವಿಲ್ಲ.

ಅಮೇರಿಕದಲ್ಲಿ ಅಕ್ಕಾ ಹಾಗೂ ನಾವಿಕ ವಿಶ್ವ ಖ್ಯಾತಿ ಹೊಂದಿ ಇಂದು ಕರ್ನಾಟಕ ಸರ್ಕಾರಕ್ಕೆ ಚಿರಪರಿಚಿತವಾಗಿದ್ದರೂ, ಯುಕೆ ಕನ್ನಡಿಗರು ಇಂದು ಎಲೆ ಮರೆಯ ಕಾಯಿಯಂತೆ ನಿರಂತರ ಕನ್ನಡ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದನ್ನು ನಮ್ಮ ಕರ್ನಾಟಕ ಸರ್ಕಾರ ಗಮನಿಸಬೇಕಾಗಿದೆ. ಹಾಗೆಯೇ ಇಲ್ಲಿಯ ಕನ್ನಡ ಸಂಘಗಳು ಕೇವಲ ಕನ್ನಡ ಭಾಷೆ, ಸಂಸ್ಕೃತಿ ಯನ್ನು ಪ್ರಚಾರ ಮಾಡುವುದು ಒಂದೇ ಅಲ್ಲ, ಮಾಹಿತಿ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ಸರ್ಕಾರರ ನೀತಿ ರಚನೆ ವಿಷಯ ಬಂದಾಗ, ಅನಿವಾಸಿ ಕನ್ನಡಿಗರನ್ನು ಒಂದುಗೂಡಿಸಿ ಕರ್ನಾಟಕ ಸರ್ಕಾರದ ಜೊತೆ ಕೈ ಜೋಡಿಸಿ ಪರಸ್ಪರ ವಿಚಾರ ವಿನಿಮಯ ಮಾಡುವುದು ಇಂದಿನ ವೇಗವಾಗಿ ಚಲಿಸುವ ಇಂಟರ್ನೆಟ್ ಪ್ರಪಂಚದಲ್ಲಿ ಅನಿವಾರ್ಯವಾಗಿದೆ.

ಥೇಮ್ಸ್‌ ತೀರದಿಂದ 9- ರಷ್ಯಾ ಉಕ್ರೇನ್‌ ಕದನ: ಯುನೈಟೆಡ್‌ ಕಿಂಗ್ಡಮ್‌ಗೆ ಮಹಾ ಆರ್ಥಿಕ ಹಿಂಜರಿತದ ಭೀತಿ?
ಉದಾಹರಣೆಗೆ ಇಲ್ಲಿಯ ಕನ್ನಡ ಸಂಘಗಳು ನಿರಂತವಾಗಿ ನಡೆಸಿಕೊಂಡು ಬರುತ್ತಿರುವ ಚಾರಿಟಿ ಕಾರ್ಯಕ್ರಮಗಳಾಗಲಿ, ಕನ್ನಡ ಕಲಿ ಕಾರ್ಯಕ್ರಮಗಳಾಗಲಿ ಅಥವಾ ಇಲ್ಲಿಯ ಕರ್ನಾಟಕ ಮೂಲದ ವಾಣಿಜ್ಯೋದ್ಯಮಿಗಳ ಬಗ್ಗೆ ಕರ್ನಾಟಕ ಸರ್ಕಾರದ ಹಲವಾರು ಇಲಾಖೆಗಳಿಗೆ ಮಾಹಿತಿಯೇ ಇಲ್ಲ. ಹೀಗಾಗಿ ಇಲ್ಲಿಯ ಕನ್ನಡ ಸಂಸ್ಥೆಗಳ ಮೂಲಕ, ಇಲ್ಲಿರುವ ಅನಿವಾಸಿ ಕನ್ನಡಿಗರೊಂದಿಗೆ ಕರ್ನಾಟಕ ಸರ್ಕಾರ ನೇರ ಮತ್ತು ನಿರಂತರ ಸೇತುವೆ ನಿರ್ಮಾಣ ಮಾಡಿದರೆ ಅದು ಫಲದಾಯಕ ಎಂಬುದಲ್ಲಿ ಸಂದೇಹವೇ ಇಲ್ಲ. ಮೊನ್ನೆ ಶುಕ್ರವಾರ ನಡೆದ ಡಾ. ಅಶ್ವಥ್ ನಾರಾಯಣ ಅವರ ಕಾರ್ಯಕ್ರಮ ಆ ಒಂದು ಸೇತುವೆಗೆ ಬುನಾದಿ ಎನ್ನಬಹುದು.

ಒಂದೆಡೆ ಕನ್ನಡಿಗರುಯುಕೆಯಂತಹ ಸಂಸ್ಥೆಯು ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರೆ, ಇನ್ನೊಂದೆಡೆ ಬೆಂಗಳೂರಿನಲ್ಲಿರುವ ಬ್ರಿಟನ್ ನ ರಾಯಭಾರಿ ಕಚೇರಿಗಳ ಜೊತೆ ಕೂಡ ಅಷ್ಟೇ ನಿಕಟವಾಗಿ ಹಲವಾರು ಮಾಹಿತಿಗಳನ್ನು ಇಲ್ಲಿಯ ಕನ್ನಡಿಗರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಕಳೆದ ಒಂದು ವರ್ಷಗಳಿಂದ ಬ್ರಿಟನ್ ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಅತಿ ಹೆಚ್ಚಳ ಕಂಡಿರುವದಲ್ಲದೆ, ಕೇಂಬ್ರಿಜ್ ಅಂತಹ ಪ್ರತಿಷ್ಠಿತ ವಿಶ್ವ ವಿದ್ಯಾಲಯದಲ್ಲಿ ಈಗಾಗಲೇ ಕನ್ನಡ ಸೊಸೈಟಿ ಪ್ರಾರಂಭವಾಗಿದೆ. ಇವೆಲ್ಲವನ್ನೂ ಗಮನಿಸಿದರಾಗ NRI Forum ಅಂತಹ ವ್ಯವಸ್ಥೆಗೆ ಮುಂದಿನ ದಿನಗಳಲ್ಲಿ ಇಲ್ಲಿಯ ಕನ್ನಡ ಸಂಘಟನೆಗಳ ಜೊತೆ ಅತ್ಯಂತ ಪ್ರಭಾವಶಾಲಿಯಾಗಿ ಕಾರ್ಯ ಮಾಡುವ ಅವಕಾಶವಿದೆ ಎಂಬುದು ನನ್ನ ಅಭಿಪ್ರಾಯ.

ಥೇಮ್ಸ್‌ ತೀರದಿಂದ 7: ಯುಕೆಯಲ್ಲಿ ಎಂಥ ಮನೆಗಳಿವೆ ಗೊತ್ತಾ? ಅವುಗಳ ವಿಶಿಷ್ಟವೂ ರೋಚಕ ಕಹಾನಿ!
ಆದರೆ ದುರಂತವೇನೆಂದರೆ, NRI Forum ಅಂತಹ ವ್ಯವಸ್ಥೆ ಇಂದು ಯಾವುದೇ ಕಾರ್ಯ ಮಾಡುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಈ ಒಂದು ವಿಷಯದಲ್ಲಿ ಗಂಭೀರವಾಗಿ ಆಲೋಚಿಸಬೇಕಾಗಿದೆ. ಮುಂದಿನ ದಿನಗಳಲ್ಲೂ ಕೂಡ ಕರ್ನಾಟಕದ ಮುಖ್ಯ ಮಂತ್ರಿಗಳು ಯುನೈಟೆಡ್ ಕಿಂಗ್ಡಮ್ ಪ್ರವಾಸ ಬಂದಾಗ ಅಥವಾ ಯಾವುದೇ ಸಚಿವರು ಲಂಡನ್ ಭೇಟಿ ನೀಡಿದಾಗ ನಾವು ಇಲ್ಲಿಯ ಕನ್ನಡ ಸಂಘಗಳು ಜೊತೆಗೂಡಿ, ಕನ್ನಡಿಗರರನ್ನು ಒಂದುಗೂಡಿಸಿ ಸರ್ಕಾರದ ನೀತಿ ನಿಯಮಗಳನ್ನು ಅನಿವಾಸಿ ಕನ್ನಡಿಗರಿಗೆ ತಲುಪಿಸುವ ಕಾರ್ಯಕ್ರಮವನ್ನು ಮುಂದೆಯೂ ಕೂಡ ಅಚ್ಚುಕಟ್ಟಾಗಿ ನಡೆಸಬಹುದು.

ಈಗಾಗಲೇ ಕರ್ನಾಟಕದ ಮುಖ್ಯ ಮಂತ್ರಿಗಳು ದಾವೋಸ್ ಭೇಟಿ ನೀಡಿ ಅನೇಕ MOU ಗಳನ್ನು ಘೋಷಿಸಿ, ಹಲವಾರು ಪ್ರಮುಖ ಉದ್ಯಮಿಗಳ ಜೊತೆ Invest Karnataka ಪರಿಕಲ್ಪನೆಯನ್ನು ಬಲಪಡಿಸಿದ್ದಾರೆ. ಇವೆಲ್ಲ ವಿಷಯಗಳು ನಿಜವಾಗಿಯೂ ಅನಿವಾಸಿ ಕನ್ನಡಿಗರಿಗೆ ಹೆಮ್ಮೆ ತರುವ ಸಂಗತಿಯಾಗಿದೆ. ಹಾಗೆಯೆ ನಮ್ಮ ಕರ್ನಾಟಕ ಒಂದು ಮಾದರಿ ರಾಜ್ಯವಾಗಲಿ ಎಂಬುದು ತಾಯ್ನಾಡಿನಿಂದ ವಿದೇಶಕ್ಕೆ ಬಂದಿರುವ ಪ್ರತಿಯೊಬ್ಬನ ಕನಸಾಗಿರುವದರಿಂದ ಮುಂದಿನ ದಿನಗಳಲ್ಲಿ ನಿಖಿಲ್ ಕಾಮತ ಅವರಂತಹ ಪ್ರಮುಖ ಉದ್ಯಮ ವ್ಯಕ್ತಿಗಳೊಂದಿಗೆ ಮತ್ತು ಸರ್ಕಾರರ ಪ್ರತಿನಿಧಿಗಳೊಂದಿಗೆ ಅನಿವಾಸಿ ಕನ್ನಡ ಸಂಘಗಳ ಸದಸ್ಯರ ಪರಸ್ಪರ ವಿಚಾರ ವಿನಿಮಯ ಮತ್ತು ತೊಡಗಿಸಿಕೊಳ್ಳುವಿಕೆ ಮುಖ್ಯವಾದುದ್ದು ಎಂಬುದು ನನ್ನ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ