ಆ್ಯಪ್ನಗರ

ಆಯೋಧ್ಯೆ ರಾಮಜನ್ಮಭೂಮಿ ವಿವಾದ ನಡೆದು ಬಂದ ಹಾದಿಯಿದು

ಕಳೆದ ವರ್ಷ ಮಸೀದಿ ಪ್ರಾರ್ಥನಾ ಸ್ಥಳವಾಗಿದ್ದು, ಇಸ್ಲಾಂನ ಅವಿಭಾಜ್ಯ ಭಾಗವಲ್ಲ ಎಂದು ಸುಪ್ರೀಂಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠ ಅಭಿಮತ ವ್ಯಕ್ತ ಪಡಿಸಿತ್ತು. ಮತ್ತೆ ಇದೀಗ ಅಯೋಧ್ಯೆ ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲು ಸಮಿತಿ ರಚಿಸಿ, 8 ವಾರಗಳ ಕಾಲಾವಕಾಶ ನೀಡಿದೆ.

Vijaya Karnataka Web 9 Mar 2019, 12:04 pm
1525ರಲ್ಲಿ ಮೊಘಲ್‌ ದೊರೆ ಬಾಬರ್‌ ಭಾರತದ ಮೇಲೆ ದಾಳಿ ಮಾಡಿ ಉತ್ತರ ಭಾರತವನ್ನು ತನ್ನ ಅಧೀನಕ್ಕೆ ಪಡೆದುಕೊಂಡಿದ್ದ. ಬಾಬರ್‌ನ ಜನರಲ್‌ ಮೀರ್‌ ಬಾಖಿ 1528ರಲ್ಲಿ ಅಯೋಧ್ಯೆಗೆ ಆಗಮಿಸಿ, ಅಲ್ಲಿದ್ದ ರಾಮ ದೇಗುಲವನ್ನು ನಾಶಪಡಿಸಿ, ಬಾಬರಿ ಮಸೀದಿಯನ್ನು ನಿರ್ಮಿಸಿದ ಎಂದು ಬ್ರಿಟಿಷ್‌ ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಈ ಕಾರಣದಿಂದಲೇ ಅಯೋಧ್ಯೆ- ರಾಮಜನ್ಮಭೂಮಿ ವಿವಾದ ಹುಟ್ಟಿಕೊಂಡಿತ್ತು.
Vijaya Karnataka Web Babri Masjib


1949
ವಿವಾದಿತ ಕಟ್ಟಡದ ಒಳಗೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ. ಬಳಿಕ ಇಲ್ಲಿ ಮುಸ್ಲಿಮರ ಪ್ರಾರ್ಥನಾವಿಧಿಗಳು ನಡೆಯಲಿಲ್ಲ. ಕೋರ್ಟ್‌ ಮೆಟ್ಟಿಲೇರಿದ ಅಯೋಧ್ಯೆಯ ವಿವಾದ. ನಮಾಜ್‌ ನಡೆಯದಿರುವುದಿಂದ ಇದು ಮಸೀದಿಯಲ್ಲ ಎಂದು ಕೋರ್ಟ್‌ ಸಾರಿತು.

1950
ರಾಮ ಜನ್ಮಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಗೋಪಾಲ್‌ ಸಿಂಗ್‌ ವಿಶಾರದ ಮತ್ತು ಮಹಾಂತ ಪರಮಹಂಸ ರಾಮಚಂದ್ರದಾಸ್‌ ಅವರಿಂದ ಫೈಜಾಬಾದ್‌ ಕೋರ್ಟ್‌ಗೆ ಅರ್ಜಿ. ಪೂಜೆಗೆ ಅವಕಾಶ ಕಲ್ಪಿಸಲಾಯಿತಾದರೂ ಒಳಗಿನ ಅಂಗಣಕ್ಕೆ ಮಾತ್ರ ಪ್ರವೇಶ ನೀಡಲಿಲ್ಲ.

1959
ನಿರ್ಮೋಹಿ ಅಖಾಡ ಮೂರನೇ ಪಾರ್ಟಿಯಾಗಿ ಅರ್ಜಿ ದಾಖಲಿಸಿ, ವಿವಾದಿತ ಪ್ರದೇಶವನ್ನು ತಮ್ಮ ವಶಕ್ಕೆ ನೀಡಬೇಕು ಮತ್ತು ರಾಮಜನ್ಮಭೂಮಿ ಪೋಷಕರೆಂದು ಗುರುತಿಸಬೇಕು ಎಂದು ಕೇಳಿಕೊಂಡಿತು.

1984
ರಾಮಜನ್ಮಭೂಮಿ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಸಮಿತಿಯನ್ನು ರಚಿಸಿಕೊಂಡವು. ಆಗ ದೇಗುಲ ನಿರ್ಮಾಣ ಚಳವಳಿ ಆರಂಭವಾಯಿತು. ಈ ಚಳವಳಿಯ ನಾಯಕತ್ವ ಬಿಜೆಪಿಯ ನಾಯಕ ಎಲ್‌.ಕೆ.ಆಡ್ವಾಣಿಗೆ.

1990
ಸೆಪ್ಟೆಂಬರ್‌ನಲ್ಲಿ ಆಡ್ವಾಣಿ ರಥಯಾತ್ರೆ ಆರಂಭ.

1989
ಬಾಬರಿ ಮಸೀದಿ ಪಕ್ಕದಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ವಿಎಚ್‌ಪಿ ಶಂಕು ಸ್ಥಾಪನೆ.

1992
ಡಿಸೆಂಬರ್‌ 6ರಂದು ಕರಸೇವಕರು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದರು. ತನಿಖೆಗೆ ನ್ಯಾ. ಎಂ.ಎಸ್‌. ಲಿಬರ್ಹಾನ್‌ ನೇತೃತ್ವದಲ್ಲಿ ಡಿಸೆಂಬರ್‌ 16ರಂದು ಸಮಿತಿ.

2002
ಹೈಕೋರ್ಟ್‌ಭಾರತೀಯ ಪುರಾತತ್ವ ಇಲಾಖೆಗೆ ಆದೇಶ ನೀಡಿ,ವಿವಾದಿತ ಸ್ಥಳದಲ್ಲಿ ಮಂದಿರ ಇತ್ತೇ ಎಂಬ ಅಧ್ಯಯನಕ್ಕೆ ಸೂಚನೆ. ಹೈಕೋರ್ಟ್‌ನಿಂದ ವಿಚಾರಣೆ ಆರಂಭ.

2003
ವಿವಾದಿತ ಸ್ಥಳದಲ್ಲಿ ಮಂದಿರ ಇರುವ ಬಗ್ಗೆ ಕುರುಹುಗಳು ದೊರೆತಿರುವುದಾಗಿ ಅಲ್ಲಿ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಕೋರ್ಟ್‌ಗೆ ವರದಿ.

2009
ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಲಿಬರ್ಹಾನ್‌ ಆಯೋಗ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಿತು. ಈ ವರದಿಯಲ್ಲಿ ಬಿಜೆಪಿಯ ಪ್ರಮುಖ ನಾಯಕರ ವಿರುದ್ಧ ಆರೋಪವಿತ್ತು.

2010
ಅಲಹಾಬಾದ್‌ಹೈಕೋರ್ಟ್‌ನ ಐತಿಹಾಸಿಕ ತೀರ್ಪಿನಲ್ಲಿ ವಿವಾದಿತ ಪ್ರದೇಶವನ್ನು ಮೂರು ಭಾಗಗಳಾಗಿ ವಿಭಜಿಸಿತು. ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಲಿಬರ್ಹಾನ್‌ಆಯೋಗ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಿತು.

2011
ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ.

2015
ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಶಿಲೆ ಸಂಗ್ರಹ ಮಾಡುವ ಬಗ್ಗೆ ವಿಎಚ್‌ಪಿ ಘೋಷಣೆ ಮಾಡಿತು.

2017
  • ಮಾರ್ಚ್‌: 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡ್ವಾಣಿ ವಿರುದ್ಧದ ಆರೋಪಗಳನ್ನು ಕೈಬಿಡಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿತು. ಅಲ್ಲದೆ ಈ ಪ್ರಕರಣವನ್ನು ಮರುಪರಿಶೀಲಿಸುವುದಾಗಿ ಹೇಳಿತು.
  • 21, ಮಾರ್ಚ್‌: ಇದು ಸೂಕ್ಷ್ಮ ವಿಷಯವಾಗಿದ್ದು ಕೋರ್ಟ್‌ ಹೊರಗಡೆ ವಿವಾದವನ್ನು ಬಗೆಹರಿಸಿ ಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಹೇಳಿತು.
  • 5, ಡಿಸೆಂಬರ್‌: ಸುಪ್ರೀಂ ಕೋರ್ಟ್‌ನಿಂದ ಅಂತಿಮ ವಿಚಾರಣೆ ಆರಂಭ.

2018
  • 27, ಸೆಪ್ಟೆಂಬರ್‌: ಮಸೀದಿ ಪ್ರಾರ್ಥನಾ ಸ್ಥಳವಾಗಿದ್ದು, ಇಸ್ಲಾಂನ ಅವಿಭಾಜ್ಯ ಭಾಗವಲ್ಲ ಎಂದು ಸುಪ್ರೀಂಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠ ಅಭಿಮತ.
  • 19, ಅಕ್ಟೋಬರ್‌: ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮನವಿಗಳ ವಿಚಾರಣೆಯನ್ನು 2019ರ ಜನವರಿ ತಿಂಗಳಿಗೆ ಮುಂದೂಡಿದ ಸುಪ್ರೀಂ ಕೋರ್ಟ್‌. ಸುಗ್ರೀವಾಜ್ಞೆ ಮೂಲಕ ಮಂದಿರ ನಿರ್ಮಾಣಕ್ಕೆ ಹೆಚ್ಚಿದ ಒತ್ತಡ.
2019
ಮಾರ್ಚ್‌ 8: ಅಯೋಧ್ಯೆ ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲು ಸಮಿತಿ ರಚನೆ. 8 ವಾರಗಳ ಕಾಲಾವಕಾಶ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ