ಆ್ಯಪ್ನಗರ

ಮೂರ್ಛೆ ಹೋದ ಗಂಡ

ಟೀಚರ್‌ ಒಬ್ಬರಿಗೆ ದೂರದ ಊರಿಗೆ ವರ್ಗಾವಣೆಯಾಗುತ್ತೆ ಆಕೆ ಆ ಊರಿಗೆ ತಲುಪಿದ ಮೇಲೆ ಗಂಡನಿಗೆ ಮೆಸೇಜ್‌ ಕಳಿಸ್ತಾಳೆ...

Vijaya Karnataka Web 29 Jul 2017, 5:30 am

ಟೀಚರ್‌ ಒಬ್ಬರಿಗೆ ದೂರದ ಊರಿಗೆ ವರ್ಗಾವಣೆಯಾಗುತ್ತೆ.

ಆಕೆ ಆ ಊರಿಗೆ ತಲುಪಿದ ಮೇಲೆ ಗಂಡನಿಗೆ ಮೆಸೇಜ್‌ ಕಳಿಸ್ತಾಳೆ.

ಆ ಮೆಸೇಜ್‌ ಆಗತಾನೆ ತನ್ನ ಸತ್ತು ಹೋದ ಹೆಂಡತಿಯನ್ನು ಮಣ್ಣು ಮಾಡಿ ಬಂದವನಿಗೆ ಹೋಗುತ್ತದೆ. ತನಗೆ ಬಂದ ಮೆಸೇಜ್‌ ಓದಿ ಆತ ಮೂರ್ಛೆ ಹೋಗುತ್ತಾನೆ.

ಆ ಮೆಸೇಜ್‌ನಲ್ಲಿ ಏನಿತ್ತು ಅಂದ್ರೆ, 'ರೀ ನಾನು ಇಲ್ಲಿಗೆ ಕ್ಷೇಮವಾಗಿ ತಲುಪಿದ್ದೇನೆ. ಇಲ್ಲಿ ಟವರ್‌ ಸರಿಯಾಗಿ ಸಿಗುತ್ತಿಲ್ಲ. ಅದಕ್ಕೆ ಫೋನ್‌ ಮಾಡಲಿಲ್ಲ. ಬೇಜಾರು ಮಾಡ್ಕೋಬೇಡಿ. ಇನ್ನು ಮೂರ್‌ ನಾಕ್‌ ದಿನದಲ್ಲೇ ನಿಮ್ಮನ್ನ ಕರಿಸ್ಕೋತೀನಿ'

ಇಲೆಕ್ಟ್ರಿಕಲ್ಸ್‌ ಅಂಗಡಿಯವನೊಬ್ಬ ತನ್ನ ಅಂಗಡಿಯ ಎದುರು ಹೀಗೆ ಒಂದು ಬೋರ್ಡ್‌ ಹಾಕಿಕೊಂಡಿದ್ದ.

'ಕನ್ನಡದಲ್ಲೇ ವ್ಯವಹರಿಸಿ'

ಗುಂಡ:ಒಂದು ಅಗೋಚರ ಕಿರಣ ವರ್ಣ ಸ್ಪೂರ್ಣ ದೊಂದಿ ಕೊಡಿ...

ಅಂಗಡಿಯವ (ಕಕ್ಕಾಬಿಕ್ಕಿಯಾಗಿ):ಹಾಗೆಂದರೇನು?

ಗುಂಡ:ಹ್ಹ ಹ್ಹ ಹ್ಹ ಗೊತ್ತಾಗಿಲ್ವಾ? ಒಂದು ಟ್ಯೂಬ್‌ ಲೈಟ್‌ ಕೊಡಿ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ